Posts

Showing posts from 2020

ನಮ್ಮದಾಗಲಿ ಸೌಭಾಗ್ಯ (ಕವನ -40)

ಅಂತೂ ಬಂತು ಹೊಸವರುಷ ಕಳೆದು ಹೋದ ದಿನಗಳ ನೆನೆಸಿದರಂತು  ಈ ವರುಷ ಬದುಕಿದ್ದೆ ಒಂದು ಭಾಗ್ಯ ಸಾವಿರಾರು ಸಾವು, ನೋವು ದುರ್ಘಟನೆಗಳ ಸರಮಾಲೆ ನಮ್ಮದಾಯ್ತು ದೌರ್ಭಾಗ್ಯ ನಮ್ಮದಾಗಲಿ ಸೌಭಾಗ್ಯ ಹರುಷ ತರಲಿ ದಿನನಿತ್ಯ ಹೊಸವರುಷ ನಮ್ಮೆಲ್ಲರ ಭಾಗ್ಯ ಮನ್ನಿಸೆನ್ನ ತಪ್ಪುಗಳ ಲಾಲಿಸೆನ್ನ ಸಿಹಿ ಮಾತುಗಳ ಎನ್ನ ಕಣ್ಣಾಗು ನೀ ಮುಂದಿನ ದಿನಗಳಲಿ ನಿಮಗೂ ನಿಮ್ಮವರಿಗೂ ಹೊಸ ವರುಷದ ಶುಭಾಶಯಗಳು ಪ್ರೀತಿಯೊಂದಿಗೆ               ✍️ಮಾಧವ ನಾಯ್ಕ್ ಅಂಜಾರು 🌷

ನಿನಗಾಗಿ ಕವನ (ಕವನ -41)

ನಿನ್ನ ನಗುವಿಗೆ ನೀನೆ ಕಾರಣ ನಿನ್ನ ನಗುವೇ ನಿನಗೆ ಭೂಷಣ   ನಗಬೇಕಾದರೆ ಬೇಕು ಕಾರಣ ನಗು ನಗುತಾ ಸಾಗಲಿ ಜೀವನ ನಿನ್ನ ನಗುವಲಿ ನನ್ನ ಚಾರಣ ನಿನ್ನ ಮೊಗದಲಿ ಸಾವಿರ ಗುಣ ನಿನ್ನೊಂದಿಗೆ ಇರುವ ಕಾರಣ ಎನ್ನ ಬದುಕು ಹಸಿರು ತೋರಣ ನಿನಗಾಗಿಯೇ ನನ್ನ ಈ ಪ್ರಾಣ ಸಣ್ಣ ಸಣ್ಣ ಜಗಳ ಬಣ್ಣ ಹೊನ್ನಂತೆ ನಿನ್ನ ಈ ಕವನ ಬೆಳಗುತಲಿರಲಿ ಜೀವನ ಕವನ       ✍️ಮಾಧವ ನಾಯ್ಕ್ ಅಂಜಾರು 🌷          

ತಿಳುವಳಿಕೆ (ಕವನ -42)

ಸಂಸ್ಕಾರ ಇಲ್ಲದವಳು ಹಸೆಮಣೆ ಏರಬಾರದು ಜವಾಬ್ದಾರಿ ಇಲ್ಲದವರು ಸಂಸಾರ ಮಾಡಬಾರದು ಸಹನೆ ಇಲ್ಲದವಳು ಮಕ್ಕಳನ್ನು ಹೇರಬಾರದು ಪ್ರೀತಿಯೇ ಇಲ್ಲದವನು ಗಂಡನಾಗಿ ಇರಬಾರದು ನ್ಯಾಯ ಅರಿಯದವನು ನ್ಯಾಯವಾದಿ ಆಗಬಾರದು ಸತ್ಯವಿಮರ್ಶೆ ತಿಳಿಯದವನು  ನ್ಯಾಯಾಧೀಶ ಆಗಬಾರದು       ✍️ಮಾಧವ ನಾಯ್ಕ್ ಅಂಜಾರು 🌷

ಆಸೆಗಳು (ಕವನ -43)

ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾಬಿಟ್ಟಿ ಬಿಟ್ಟು ಹೋಗದು ಇಷ್ಟಪಟ್ಟು ಮಾಡುವ ದುಡಿಮೆ ಕಷ್ಟವೆಂದು ಅನಿಸಿಕೊಳ್ಳದು ಬೆಟ್ಟದಂತಿರುವ ಆಸೆಗಳಿಗೆ ಸಂಪಾದನೆ ಸಾಕಾಗದು ಕೆಟ್ಟದಾಗಿ ಮಾಡಿದ ಸಂಪಾದನೆ ಹೆಚ್ಚು ಹೊತ್ತು ನಿಲ್ಲದು ಬಿಟ್ಟಿಯಾಗಿ ಸಿಗುವ  ಹಣ ಎಷ್ಟಿದ್ದರೂ ಸಾಕಾಗದು ಸಿಟ್ಟುಗೊಂಡು ಗಳಿಸಿದ ಹಣ ಚಟ್ಟ ಏರಿಸದಿರದು!    ✍️ಮಾಧವ ನಾಯ್ಕ್ ಅಂಜಾರು 🌷

ನನ್ನ ಪ್ರಪಂಚ ನೀನು (ಕವನ -44)

ನಿನ್ನ ಕಣ್ಣ ನೋಟಕೆ ಹೃದಯ ಬಡಿತ ಏರಿಕೆ ಸಣ್ಣ ಹೆಜ್ಜೆಯನಿಡುತ ನಡೆವ ನಿನ್ನ ಸೌಂದರ್ಯವೇ ಶೀಲಾ ಬಾಲಿಕೆ, ಮೈ ಮುಚ್ಚುವ ಸೀರೆಯುಡುತ  ರಂಗು ರಂಗಿನ ಬಳೆ ತೊಟ್ಟು ಹಣೆಗೊಂದು ತಿಲಕವಿಟ್ಟು ಮಲ್ಲಿಗೆ ಮುಡಿದ ಜಡೆಯೊಂದಿಗೆ ಕಾಲ್ಗೆಜ್ಜೆ ಸದ್ದಿನೊಳು ಓಡಾಡುವ ಪರಿ ಕಾಣುತ ಮೈ ಮರೆತು ಸ್ತಬ್ದನಾದೆ, ನನಗೊಲಿದ ಲಕ್ಷ್ಮಿ ನೀನು ನಿನ್ನಲಿರೋ ಶಕ್ತಿಯೇನು ಕ್ಷಣ ಕ್ಷಣಕೂ ನೀ ನುಡಿವ ಮಾತುಗಳೇ ಸವಿ ಜೇನು ನಿನಗಾಗಿ ಎದ್ದೇಳುವ ಪ್ರೀತಿಯ ನಲ್ಲ  ನಾನು ನನ್ನ ಪ್ರಪಂಚವೇ ನೀನು        ✍️ಮಾಧವ ಅಂಜಾರು 🌷

ನಾಚಿಕೆ ತರದಿರಲಿ (ಕವನ -45)

ನಾನಾಡುವ ಮಾತು ನಿನಗೆ ನೋಯಿಸದಿರಲಿ ನಾ ಕೇಳುವ ಪ್ರಶ್ನೆ ನಿನಗೆ ಕಹಿಯಾಗದಿರಲಿ ನಾನುಡುವ ಬಟ್ಟೆ ನಿನಗೆ ಕೀಳಾಗದಿರಲಿ ನಾ ಹಾಕುವ  ಪಾದರಕ್ಷೆ  ನಿನಗೆ ನಾಚಿಕೆ ತರದಿರಲಿ ನಾನಿರುವ ಮನೆ ಅಂತಸ್ತಿಗೆ ಧಕ್ಕೆ ತರದಿರಲಿ  ನಾನಿರುವ ಮಣ್ಣು ಕಳೆಗುಂದದಿರಲಿ ನಾನಿರುವ ಊರು ನಿನಗೆ ದೂರವಾಗದಿರಲಿ ನನ್ನಲಿರೋ ಮನ ನಿನ್ನ ಜೊತೆ ಬಿಡದಿರಲಿ       ✍️ಮಾಧವ ಅಂಜಾರು 🌷

ನಿಮ್ಮ ಜುಟ್ಟು (ಕವನ -46)

ಯಾರೇನೇ ಹೇಳಿದರೂ ಯಾರೇನೇ ಮಾಡಿದರೂ ನಿಮ್ಮ ಸದ್ಗುಣಗಳನು ಬದಲಿಸಬೇಡಿ, ಯಾರೇನೇ ಹೀಯಾಳಿಸಿದರೂ ಯಾರೇನೇ ಮುನಿದರೂ ನಿಮ್ಮ ಜುಟ್ಟನು ಮಾತ್ರ ಅವರ ಕೈಲಿ ಕೊಡಬೇಡಿ ಯಾರಾದರು ಪ್ರೀತಿಸಿದರೆ ಯಾರಾದರೂ ಗೌರವಿಸಿದರೆ ನಿಮ್ಮ ಪ್ರತಿಕ್ರಿಯೆ ಮಾತ್ರ ಸರಿಯಾಗಿ ಇದ್ದಿರಲಿ         ✍️ಮಾಧವ ಅಂಜಾರು 🌷

ಸುಳ್ಳುಗಾರ (ಕವನ -47)

ನಾನು ಸತ್ಯವನ್ನೇ ಹೇಳುತ್ತೇನೆ ಎಂದು ಹೇಳುತಿದ್ದ  ಕಳ್ಳ ತನ್ನ ಸಂಗಡಿಗರೆಲ್ಲರೂ ಸತ್ಯವಂತರೆಂದು ಸುಳ್ಳುಬಿಟ್ಟ, ನಾನು ದೇವರಂತೆ ಎಂದು ಹೇಳುತಿದ್ದ ಸುಳ್ಳ ದೇವರೇ ಇಲ್ಲವೆಂದು ರಾಕ್ಷಸರಂತೆ ನಡೆದುಬಿಟ್ಟ  ನಾನು ನಿಮ್ಮವನೆಂದು  ಹೇಳುತಿದ್ದ ಸುಳ್ಳುಗಾರ ಪ್ರಪಂಚವೇ ಸುಳ್ಳೆಂದು ವಾದಿಸಿ ಮಣ್ಣಾಗಿಬಿಟ್ಟ          ✍️ಮಾಧವ ಅಂಜಾರು 🌷

ಹುಲುಮನುಜ (ಕವನ -48)

ಸಾಕಿ ಸಲಹುವವನಿರುವಾಗ  ನನಗ್ಯಾಕೆ ಚಿಂತೆ ಸಂತೆಯಲ್ಲಿರೋ  ಜೀವಕೆ ಸದ್ದು ಗದ್ದಲದ ಗೋಜಿಲ್ಲ ಯಾರೇನು ಹೇಳಿದರೂ ಬೆಲೆ ನಿರ್ಧಾರವಾಗಿರದು ಹುಲುಮನುಜ ನಾನು ಸಾಗಲಿ ದಿನಗಳ ಕಂತೆ , ಉಸಿರು ಕೊಟ್ಟವನಿರುವಾಗ ಇಲ್ಲ ಕತ್ತು ಹಿಡಿಯುವವರ ಚಿಂತೆ ಮತ್ತು ಬಂದಿರುವ ಹುಳ ಮನುಜನ ನಡುವೆ ಜೀವನದ ಸಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುವ ಬದುಕ ಬಂಡಿಗಿರದಿರಲಿ ವ್ಯಥೆ          ✍️ಮಾಧವ ಅಂಜಾರು 🌷

ನಿನ್ನ ಜೊತೆ (ಕವನ -49)

ನಿನ್ನವರ್ಯಾರೆಂದು ತಿಳಿಯಬೇಕಿದ್ದರೆ ಬದುಕಿನ ಕಷ್ಟಕಾಲವನ್ನು ನೆನಪಿಸಿಕೊಳ್ಳು  ನಿನ್ನೊಳಿತನ್ನು ಬಯಸುವವರ ತಿಳಿಯಬೇಕಿದ್ದರೆ  ಅವರೊಂದಿಗಿದ್ದು ಅರಿತುಕೊಳ್ಳು! ನಿನ್ನ ಹೊಗಳುವವರೆಲ್ಲರೂ ಕೈ ಹಿಡಿಯುವವರಲ್ಲ ನಿನ್ನ ಜೊತೆಗಿರುವ ಎಲ್ಲರೂ ಕೆಟ್ಟವರೂ ಅಲ್ಲ ಸ್ಪಷ್ಟ ನಡತೆಯ ಗುಣ ನಿನ್ನೊಳಗಿದ್ದರೆ ಯಾರ ಭಯವು ಕಾಡೋದಿಲ್ಲ!       ✍️ಮಾಧವ ಅಂಜಾರು 🙏🌷

ಬಯಕೆ (ಕವನ -50)

ಪ್ರೀತಿ ಬಯಸುವವನು ನಯವಿನಯತೆ ತೋರುತ್ತಾನೆ ನಗು ಬಯಸುವವನು ನಗುಮುಖ ತೋರಿಸುತ್ತಾನೆ  ದ್ವೇಷ ಹೆಚ್ಚಾಗಿರುವವನು  ದ್ವೇಷದ ಜೀವನ ಸಾಗಿಸುತ್ತಾನೆ  ಅಸೂಯೆತುಂಬಿರೋನು  ಊರೆಲ್ಲ ಅಸೂಯೆ ತುಂಬುತ್ತಾನೆ ಮಾತು ತಿಳಿದವನು ಸಿಹಿ ಮಾತನ್ನಾಡುತ್ತಾನೆ ಏನನ್ನೂ ಬಯಸದವನು ಮನಬಂದಂತೆ ಇರುತ್ತಾನೆ         ✍️ಮಾಧವ ಅಂಜಾರು 🌷

ಭಯವಿಲ್ಲ (ಕವನ -51)

ನಾನು ಮರೆಯಾದಾಗ ಯಾರು  ಅಳುತ್ತಾರೆ ಅನ್ನೋದು ಎನಗೆ ತಿಳಿಯುವುದಿಲ್ಲ  ನಾನು ಬದುಕಿದ್ದಾಗ ಜೊತೆಯಲ್ಲಿ ಇರುವವರನ್ನು  ನಾ ಮರೆಯೋದಿಲ್ಲ ನಗುವಾಗ ಎನ್ನ ಜೊತೆ ಸೇರುವವರ ಬಗ್ಗೆ ಚಿಂತೆಯಿಲ್ಲ ನೊಂದಾಗ ಜೊತೆಯಿಲ್ಲದವರ ಕುರಿತು ಬೇಸರವೂ ಇಲ್ಲ ಏಕಾಂಗಿಯಾಗಿ  ಬಂದಮೇಲೆ ಒಬ್ಬನೇ ಹೋಗಲು ಭಯವಿಲ್ಲ         ✍️ಮಾಧವ ಅಂಜಾರು 🌷

ಉಡುಗೊರೆ (ಕವನ -52)

ದೇವರು ಬರೆದ ಸಂಖ್ಯೆಯನು ಬದಲಿಸಲಾಗದು  ತಂದೆ ತಾಯಿಯ ಪಾಠವನು ಮರೆಯಲಾಗದು  ಗೆಳತಿ ಕೊಟ್ಟ ಉಡುಗೊರೆ ಕಳೆದು ಹೋಗದು ಹೆಂಡತಿ ಕೊಟ್ಟ ಮುತ್ತನು ಹೇಳಿಕೊಳ್ಳಲಾಗದು ಗೆಳೆಯನ ಜೊತೆಯ ಹಾಸ್ಯ ಮುಗಿಸಲಾಗದು ಚೆಂದುಳ್ಳಿ ಹುಡುಗಿಯ ನಗುವ ಮರೆತವನಿರನು!     ✍️ಮಾಧವ ಅಂಜಾರು 🌷

ದೇವ ರಚಿತಾ (ಕವನ -54)

ದೇವ ರಚಿತಾ ಈ ಭುವಿಗೆ ನಿನ್ನ ಆಗಮನ ಸುಲಲಿತ ಆ ನಿನ್ನ  ಮೊಗದ ಸೊಬಗಿಗೆ ನಾನಾದೆನು ವಿಚಲಿತ ಪ್ರತಿ ಕ್ಷಣಕೂ ಕಣ್ಣೆದುರಿಗೆ ಬರುವ ನಿನ್ನ ಮುಗುಳುನಗೆ ಮರೆಮಾಚಿತು ನನ್ನೆಲ್ಲ ಚಿಂತೆಗಳ ಸರಮಾಲೆ ಬಾನಂಗಳದ ಮಲ್ಲಿಗೆ ಎನ ಜೀವದ ಸಂಪಿಗೆ ಎಂದಿಗೂ ಜೊತೆಗಿರು ಪರಿಮಳದ ಕಾಡ ಸಂಪಿಗೆ      ✍️ಮಾಧವ ಅಂಜಾರು 🌷

ಮರೆಯಬೇಡ (ಕವನ -55)

ಬದುಕಿರುವಾಗ ಸಾಯಬೇಕೆಂದು ಶಪಿಸಿಕೊಳ್ಳಬೇಡ ಸಾವು ಬಂದಾಗ ಬದುಕಲೆನಿಸಿದರೂ ಬದುಕಲಾಗದು! ಆರೋಗ್ಯವಿರುವಾಗ ಇದ್ದವರಿಗೆಲ್ಲ ತೊಂದರೆ ಮಾಡಬೇಡ  ಅನಾರೋಗ್ಯ ಬಿದ್ದಾಗ ಮಾಡಿದ ಪಾಪ ಜೊತೆಗಿರುವುದು ಮರೆಯಬೇಡ! ಸಂತಸವಿರುವಾಗ ಕೆಟ್ಟ ಘಟನೆಗಳ ನೆನೆದು ಚಿಂತಿಸಬೇಡ ಬೇಸರವಾದಾಗ ಸಂತಸದ ಕ್ಷಣಗಳನು ನೆನೆಯಲು ಮರೆಯಬೇಡ!       ✍️ಮಾಧವ ಅಂಜಾರು 🌷

ಜೀವನ (ಕವನ -56)

ಓಡು ಕುದುರೆಯಂತೆ  ಹಾಡು ಕೋಗಿಲೆಯಂತೆ ಮಾತನಾಡು ಗಿಳಿಯಂತೆ ಹೋರಾಡು ಸೈನಿಕನಂತೆ ಓದು ಜ್ಞಾನಕ್ಕಾಗಿ ಬದುಕು ಪ್ರೀತಿಗಾಗಿ ನಗು ಸಂತೋಷಕ್ಕಾಗಿ ಜೀವಿಸು ಮಾನವನಾಗಿ             ✍️ಮಾಧವ ಅಂಜಾರು 🌷

ಸಿಹಿಮುತ್ತು (ಕವನ -57)

ಸಮುದ್ರದಾಳದ ಮುತ್ತು ನೀನು ಎನ್ನ ಬಾಳಿನುಸಿರೆ ನೀನು ನೀನಿಲ್ಲದೆ,ನಾನಿದ್ದರೆ ಎನ್ನ ಜೀವದ ಪಾಡೇನು! ಬಾನಂಗಳದ ಮಿಂಚು ನೀನು ಮೋಡಗಳ ಮಿಲನದ ಮಳೆಹನಿಯು ನೀನು ಧರೆಗಿಳಿದ ಸಮಯ ಹರುಷವೇನು! ಹೂದೋಟದ ನಡುವೆ  ಕಂಗೊಳಿಸುವ ಗುಲಾಬಿ ನೀನು ನಿನಗಾಗಿ ಬಂದಿರೋ ದುಂಬಿ ನಾನು ಸಿಹಿಮುತ್ತ ಕೊಟ್ಟು ಬಿಡುವೆಯೇನು?          ✍️ಮಾಧವ ಅಂಜಾರು 🌷       

ಚುನಾವಣೆ ಬವಣೆ (ಕವನ -58)

ಚುನಾವಣೆಗಳಲ್ಲಿ ವೇಷ ಕಟ್ಟಿಕೊಳ್ಳಬೇಡಿ ದ್ವೇಷ ಮಾಡಿಕೊಳ್ಳಬೇಡಿ ನಾಶವಾಗಲು ಹೋಗಬೇಡಿ ರಾಜಕೀಯವೆಂದರೆ ಹೊಡೆದಾಟವಲ್ಲ ಜಾತಿ ಧರ್ಮಗಳ ಪೈಪೋಟಿ ಅಲ್ಲವೇ ಅಲ್ಲ ಪಕ್ಷಗಳ ಮುಖಂಡರು ಕಾಸು ಮಾಡಲು ಇಳಿಯಬೇಡಿ ನಿಷ್ಠಾವಂತ ಮುಖಂಡರನ್ನು ನೋಡಿ ಆರಿಸಿಕೊಳ್ಳಿ        ✍️ಮಾಧವ ಅಂಜಾರು 🌷

ಕನಸಿನ ರಾಣಿ (ಕವನ -60)

ಮಾಯಾಜಿಂಕೆ ನೀನು ಆಗೊಮ್ಮೆ ಈಗೊಮ್ಮೆ ಕಣ್ಣೆದುರಿಗೆ ಬಂದು ಓಡಾಡುತ್ತಿರುವೆ ಏನು? ಮೀನಾಕ್ಷಿಯೇ ನೀನು ಕಣ್ಣ ಮಿಟುಕಿಸುವ ನೋಟ ಸಾರಿ ಹೇಳುತಿದೆನಗೆ ಸೌಂದರ್ಯದ ಅರ್ಥವೇನು? ಹಂಸವೇ ನೀನು ನಿನ್ನ ಹೆಜ್ಜೆಯ ಗೆಜ್ಜೆನಾದಕೆ ಸರಿಸಾಟಿ ಕಾಣೆನು ಎನ್ನ ಕನಸಿನ ರಾಣಿ ನೀನು         ✍️ಮಾಧವ ಅಂಜಾರು 🌷

ಸಕ್ಕರೆ ಸಿಗಲಿ (ಕವನ -62)

ಎನ್ನ ಹೊಗಳುವವರಿಗೆ  ಸಕ್ಕರೆ  ಸಿಗಲಿ  ಎನ್ನ ತೆಗಳುವವರಿಗೆ ಮಿಕ್ಕ ಸಕ್ಕರೆ ಸಿಗಲಿ ಹೊಗಳುತ್ತ ಇರುವವರಿಗೆ ನೆಮ್ಮದಿಯಿರಲಿ ತೆಗಳುತ್ತಿರುವವರಿಗೆ ಅಸೌಖ್ಯ ತಟ್ಟದಿರಲಿ ಹೊಗಳುವವರು ತೆಗಳುವವರು ನನ್ನ ಜೊತೆಯಲಿರಲಿ ಅವರಿಲ್ಲದ್ದರೆ ಜೀವನ ಖಾಲಿ             ✍️ಮಾಧವ ಅಂಜಾರು 🌷

ಆಳ್ವಿಕೆ (ಕವನ -61)

ಸೃಷ್ಟಿಯಕುರಿತು ಎಳ್ಳಷ್ಟೂ ಅರಿಯದ ನಾವು ಬ್ರಹ್ಮಾಂಡ ಆಳುವಂತೆ ನಡೆದುಕೊಳ್ಳುತ್ತೇವೆ! ನಾಳೆಯಬಗ್ಗೆ ಏನೆಂದು ತಿಳಿಯದ ನಾವು ಪ್ರಪಂಚ ಹಿಡಿದುಕೊಂಡಂತೆ  ನಟನೆಮಾಡುತ್ತೇವೆ! ಮಾನವ ಜನ್ಮ ಶ್ರೇಷ್ಠವೆನ್ನುವ ನಾವು ಮನುಷತ್ವ ಮರೆತು ಜೀವನ ಮಾಡುತ್ತಿದ್ದೇವೆ?      ✍️ ಮಾಧವ ಅಂಜಾರು 🌷   

ಮಲ್ಲಿಗೆ ಕವನ -63)

ಆ ಹಂಸ ನಡುಗೆ ಪ್ರೀತಿಯ ಮುಗುಳ್ನಗೆ ನೀ ಹಾಕುವ ಹೆಜ್ಜೆಗೆ ಹೃದಯ ಹಾಡಿತು ಮೆಲ್ಲಗೆ ಕಣ್ಣ ನೋಟದ ಬಗೆ ಬಿಚ್ಚುಮನಸಿನ ನಾಚಿಕೆ ಸದ್ದಿಲ್ಲದೇ ಬಂದುಸೇರಿದೆ ಬಯಕೆಗಳು ಬಗೆ ಬಗೆ ಚಂದಿರನ ಮೊಗ ನಿನಗೆ ಸೂರ್ಯನ ಹೊಳಪು ಹೇಗೆ ಬಂದು ಬಿಡೆಯ ಮಲ್ಲಿಗೆ ಚೆಲುವೆ ನೀ ಎನ್ನ ಸಂಪಿಗೆ       ✍️ಮಾಧವ ಅಂಜಾರು 🌷

ವರ್ತನೆ (ಕವನ -64)

ವರ್ತನೆ ಸರಿಯಿರದಿದ್ದರೆ ಯಾವ ಸ್ಥಾನವಿದ್ದರೇನು? ನರ್ತನ ಅರಿಯದಿದ್ದರೆ ತಾಳದ ಅಗತ್ಯವೇನು? ಜವಾಬ್ದಾರಿ ತಿಳಿಯದಿದ್ದರೆ ಬದುಕಿಗೆ ಅರ್ಥವೇನು ? ಅಹಂಕಾರ ತುಂಬಿದ್ದರೆ ಕನಸಿಗೆ ಅರ್ಥವೇನು? ಮಾತು ಅರಿಯದಿದ್ದರೆ ವಿದ್ಯೆಯ ಬೆಲೆಯೇನು? ಸರಿತಪ್ಪು ತಿಳಿಯದಿದ್ದರೆ ಮಾನವಜನ್ಮ ಬೇಕೇನು?     ✍️ಮಾಧವ ಅಂಜಾರು 🌷

ಚಿಂತೆ ಚಿಂತೆ (ಕವನ -65)

ಮದುವೆಯಾದವರು ಯಾಕಪ್ಪ ಮದುವೆಯಾದೆ ಅಂತ ಗುಣುಗಬೇಡಿ ಮದುವೆಯಾಗದವರು ಮದುವೆಯಾಗಲಿಲ್ಲ ಎಂದು ಚಿಂತಿಸಬೇಡಿ! ಮಕ್ಕಳಾಗದವರು ಮಕ್ಕಲಿಲ್ಲ ಎಂಬ ಚಿಂತೆಯಲಿ ಮುಳುಗಬೇಡಿ ಮಕ್ಕಳಿದ್ದವರು ಹೆಣ್ಣು ಗಂಡೆಂದು ಆಯ್ಕೆಗೆ ತೊಡಗಬೇಡಿ ಕೈಹಿಡಿದವರು ಬಿಟ್ಟುಬಿಟ್ಟರೆಂದು ದಿನಾ ಮರುಗಬೇಡಿ! ನಿಮ್ಮ ಒಳ್ಳೆತನವ ಮತ್ತವರಿಗೆ ಮಾರಿಬಿಡಬೇಡಿ ಸತ್ಯವಂತನಾಗಿ ಬದುಕಲು ಹಿಂಜರಿಯಬೇಡಿ ನಮ್ಮನ್ನು ಕಾಯುವವನೊಬ್ಬ ಇದ್ದಾನೆ ಮರೆಯಬೇಡಿ!           ✍️ಮಾಧವ ಅಂಜಾರು 🙏

ಗೋಡೆ (ಕವನ -66)

ಬಿಳಿಯಾದ ಕೂದಲಿಗೆ ಬಣ್ಣ ಹಚ್ಚೋರು ನಾವು ಬಿಳಿಯಾಗಿರೋ ಮನಸಿಗೆ ಮಸಿಬಳಿಯೋರು ನಾವು ಕೊಳೆಯಾದ ಗೋಡೆಗೆ  ಸುಣ್ಣ ಬಳಿಯೋರು ನಾವು ಹಳೆಯದಾದ ಕಟ್ಟಡಕೆ  ಬಣ್ಣ ಹಾಕೋರು ನಾವು ನೋವಾಗಿರೋ ಮನಸಿಗೆ ಬರೆ ಎಳೆಯೋರು ನಾವು ದಣಿದಿರೋ ಜೀವಕೆ ತುಳಿಯೋರು ನಾವು ನಿಜವಾದ ಮಾನವೀಯತೆ ಮರೆತವರು ನಾವು ಮನುಜನ ಸ್ಥಾನಕೆ ಕಲ್ಮಶವೇ ನಾವು?       ✍️ಮಾಧವ ಅಂಜಾರು 🌷

ಮುಗಿಯದಷ್ಟು (ಕವನ -67)

  ಮನುಷ್ಯನ ಆಯಸ್ಸು ಕಡಿಮೆಯಾಗುತಿದ್ದಂತೆ ಆಸೆಗಳು ಸಾವಿರಾರು ವರುಷ ಬದುಕುವಂತೆ ಮುಗಿಯದಷ್ಟು! ಮನುಷ್ಯನ ಪ್ರೀತಿ ಕಡಿಮೆಯಾಗುತಿದ್ದಂತೆ ಪಾಪಗಳು ಸಾವಿರಾರು ವರುಷ ಕಳೆದರೂ ಮುಗಿಯದಷ್ಟು!    ✍️ಮಾಧವ ಅಂಜಾರು 🌷

ಪ್ರೋತ್ಸಾಹ (ಕವನ -68)

ಮೊತ್ತೊಬ್ಬರ ಬಗ್ಗೆ ಹೇಳುವುದಾದರೆ ಒಳ್ಳೆಯ ಗುಣಮಾತ್ರ ಹೇಳಿ ಮತ್ತೊಬ್ಬರ ಬಗ್ಗೆ ತೆಗಳುವುದಾದರೆ ನಿಮ್ಮ ಮನಸೊಳಗೆ ವಿಮರ್ಶಿಸಿಕೊಳ್ಳಿ! ನಿಮಗೊಬ್ಬರು ಕೆಟ್ಟದನ್ನು ಮಾಡಿದ್ದರೆ ಅವರಷ್ಟಕ್ಕೆ ಬಿಟ್ಟುಬಿಡಿ ಒಳಿತನ್ನು ಮಾಡಿದ್ದರೆ ಅವರೊಂದಿಗೆ ಇದ್ದುಬಿಡಿ ತೆಗಳುವವನಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಬೆನ್ನು ತಟ್ಟಿ ಪ್ರೋತ್ಸಾಹಿಸುವವನ ಮರೆಯಲೇಬೇಡಿ!       ✍️ಮಾಧವ ಅಂಜಾರು 🌷

ದಾನ ಮಾಡಿ (ಕವನ -69)

  ದಾನ ಮಾಡಿ ********** ಹಲ್ಲಿರುವಾಗ ನಕ್ಕುಬಿಡಿ ಹಲ್ಲಿಲ್ಲದಾಗ ಚಿಂತೆಬಿಡಿ ಹಲ್ಲಿರುವಾಗ ತಿನ್ನಲಿಚ್ಚಿಸಿದನು ಆವಾಗಲೇ ತಿಂದುಬಿಡಿ ಕೈಯಲಿ  ಬಲವಿರುವಾಗ ದಾನಗಳನು ಮಾಡಿಬಿಡಿ ಬಾಯಿ ತೊದಲುವ ಮುನ್ನ ಒಳಿತನ್ನಾದರೂ ಮಾತಾಡಿ ಪ್ರೀತಿಯಿದ್ದರೆ ತೋರಿಸಿಬಿಡಿ ಸಿಟ್ಟಿದ್ದರೆ ಹೇಳಿಬಿಡಿ ಏನೂ ಇಲ್ಲದಿದ್ದರೂ ಸಂಸ್ಕಾರ ಉಳಿಸಿಬಿಡಿ         ✍️ಮಾಧವ ಅಂಜಾರು 🌷

ವಿಚಾರ (ಕವನ -70)

  ವಿಚಾರ ****** ಬದುಕಿರುವಾಗ ಹೇಗಿದ್ದೀಯ? ಎಂದು ಕೇಳದವರು ಸತ್ತಾಗ ಹೇಗೆ ಸತ್ತ ಎಂದು ಕೇಳಿಬಿಟ್ಟರು! ಹಸಿವಾದಾಗ ಊಟ ಮಾಡಿದಿಯಾ ಎಂದು ಕೇಳದವರು ಊಟ ಮಾಡಿದಾಗ ಊಟವಾಯಿತ? ಎಂದು ಕೇಳಿಬಿಟ್ಟರು! ಹಣವಿಲ್ಲದಾಗ ಹಣ ಬೇಕಾ ಎಂದು ಕೇಳದವರು ಹಣಗಳಿಸಿದಾಗ ಹೆಣವಾಗುವವರೆಗೆ ಕಾಯ್ದುಬಿಟ್ಟರು!              ✍️ಮಾಧವ ಅಂಜಾರು 🌷

ಮಾತು (ಕವನ -71)

  ಮಾತು ***** ಮುತ್ತಿನಂತಹ  ಮಾತು ಹೆಚ್ಚುಮಾಡಿದಾಗ ಮುತ್ತಿನ ಹೊಳಪು ಮುಖದಲಿ, ಸುತ್ತಿ ಬಳಸುವ ಮಾತು ಅತಿಯಾದಾಗ ಕತ್ತಲೆ ಜಗತ್ತು ಸುತ್ತಲಲಿ, ಮಿತ ಮಾತು ಹಿತ ನೀಡುವುದು ಸಹಜ ಅತಿಮಾತು ಮತಿ ಕೆಡಿಸುವುದು ನಿಜ ಹೆಚ್ಚಾಗಿ ಬೇಡ ಮನುಜ ಮಾತು ತಪ್ಪಬೇಡ ಪ್ರತಿನಿಮಿಷ        ✍️ಮಾಧವ ಅಂಜಾರು 🌷

ಭಾಗ್ಯ (ಕವನ -72)

  ಭಾಗ್ಯ ***** ನೀನೆನ್ನ ಗೆಳೆಯನಾಗಿದ್ದರೆ ಅದೆನ್ನ ಭಾಗ್ಯ ನೀನೆನ್ನ ಗೆಳತಿಯಾಗಿದ್ದರೆ ಅದೂ ಎನ್ನ ಸೌಭಾಗ್ಯ, ನೀ ಎನ್ನ ಪ್ರೀತಿಸುತಿದ್ದರೆ ಅದೆನ್ನ ಭಾಗ್ಯ ನೀ ಎನ್ನ ದ್ವೇಷಿಸುತಿದ್ದರೆ ಅದೆನ್ನ ದೌರ್ಭಾಗ್ಯ, ನೀನೆನ್ನ ರಕ್ಷಕನಾಗಿದ್ದರೆ ಅದೂ ದೊಡ್ಡ ಭಾಗ್ಯ ನೀನೆನ್ನ ಪ್ರೇಕ್ಷಕನಾಗಿದ್ದರೆ ನಾ ಪಡೆದ ಭಾಗ್ಯ        ✍️ಮಾಧವ ಅಂಜಾರು 🌷

ಭೂಷಣ (ಕವನ -73)

  ಭೂಷಣ ****** ಎನ್ನ ನೆಮ್ಮದಿ ಕಳೆಯುವವರ ನೆಮ್ಮದಿ ಕೆಡಿಸಲಾರೆ ಎನ್ನ ನಗು ನಿಲ್ಲಿಸುವವರ ನಗು ನಿಲ್ಲಿಸಲಾರೆ! ಎನ್ನ ಬೆಳೆಸಿ ಉಳಿಸಿದವರ ಎಂದಿಗೂ ಮರೆಯಲಾರೆ ಎನ್ನ ನಂಬಿ ಇರುವವರ ಎಂದೆಂದೂ ಬಿಡಲಾರೆ! ಎನ್ನತನವು ಎನಗೆ ಭೂಷಣ ಎನ್ನ ತಂದೆ ತಾಯಿಯ ಪ್ರೀತಿ ಉಳಿಸುತಲಿದೆನ್ನ ಪ್ರಾಣ ನನ್ನೊಂದಿಗೆ ಇರಲಿ ದೇವ ಗುಣ!     ✍️ಮಾಧವ ಅಂಜಾರು 🙏

ಪರದೇಶದ ತುತ್ತು (ಲೇಖನ - 47)

 ಪರದೇಶದ ತುತ್ತು ***************  ನಾವಂದುಕೊಂಡಂತೆ ಪ್ರಪಂಚವಿಲ್ಲ, ಜೀವನ ಬೇವು ಬೆಲ್ಲ ಇವೆಲ್ಲ ಹೇಳುವುದಕ್ಕೆ ಕೇಳುವುದಕ್ಕೆ ಬಹಳ ಸುಲಭವಾಗಿದ್ದರೂ ಕೂಡ ಈ ಮಾತು  ಅದೆಷ್ಟು ಒಳಾರ್ಥವನ್ನು ಹೊಂದಿರುತ್ತದೆ. ಜೀವನ ಸಾಗಿಸಲು ಹುಟ್ಟಿದಂದಿನಿಂದ ಪ್ರಯತ್ನ ಪ್ರಯತ್ನ ಪ್ರಯತ್ನ, ಕೆಲವರು ಹುಟ್ಟುವಾಗಲೇ ಬಡತನ ಹೊಂದಿದ್ದರೆ ಕೆಲವರು ಹುಟ್ಟಿದಾಗಲೇ ಐಶ್ವರ್ಯವನ್ನು ಹೊಂದಿರುತ್ತಾರೆ. ಐಶ್ವರ್ಯ ಇದ್ದರೂ ಇರದಿದ್ದರೂ ದುಡಿಮೆ ಅನ್ನೋದು ಪ್ರತಿಯೊಂದು ಮಾನವನ ಕರ್ತವ್ಯ. ದುಡ್ಡಿರುವ ಮನುಷ್ಯ ದುಡಿಯದಿದ್ದರೆ ಅವನ ಗೌರವವನ್ನು ಅವನೇ ಕಳೆದುಕೊಳ್ಳುತ್ತಾನೆ, ಬಡತನದಲ್ಲಿರುವ ಮನುಷ್ಯ ದುಡಿಯದಿದ್ದರೆ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಜಾಸ್ತಿಯಾಗಿರುತ್ತದೆ.  ಕೆಲವೊಂದು ವಿಷಯಗಳು ಸತತ ಪ್ರಯತ್ನ ಗುರಿಯೊಂದಿಗೆ ನಡೆದು  ಬಿಟ್ಟರೆ,  ಇನ್ನು ಕೆಲವು ವಿಷಯಗಳು ನಮಗರಿವಿಲ್ಲದಂತೆಯೇ ಬಂದುಬಿಡುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನವನ್ನು ಮಾಡುತ್ತಿದ್ದರೆ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಯಶಸ್ಸು ಸಿಗದಿದ್ದರೂ ಜೀವನ ಮುಗಿಸುವಲ್ಲಿ ಸಶಕ್ತರಾಗುತ್ತೇವೆ. ಪರದೇಶ ಪಯಣ ದುಡಿಮೆಗಾಗಿ ಮಾಡಿದ್ದರೆ,  ಇಷ್ಟವಿದ್ದು ಇಷ್ಟವಿಲ್ಲದೆ ನಡೆದ ಪಯಣ ವಾಗಿರಬಹುದು. ಹೊರ ದೇಶವೆಂದರೆ ಅನ್ನಕೊಡುವ ದೇಶವಾದರೂ ಗಳಿಸುವ ಅನ್ನಕ್ಕಾಗಿ  ಪರಿತಪಿಸುವ ಪರಿ ಅದೆಷ್ಟು ಕಷ್ಟ ನೋವುಗಳನ್ನು ಹೊಂದಿರುತ್ತದೆ. ನೋಡುವವರ ಕಣ್ಣಿಗೆ ಹೊರ ದೇಶವೆಂದು ಅದ್ದೂರಿಯಾಗಿ ಕಂಡರು ಕಡಲಾಚೆ

ಹಸಿವು (ಕವನ -74)

ಹಸಿವು ****** ಹಣವಿಲ್ಲದಾಗ ಸಿರಿವಂತನ ಜೊತೆಗೆ ಹೋಗಬೇಡಿ ಹಸಿವಾದಾಗ ಸಿರಿವಂತನ ಮನೆಲಿ ಊಟ ಕೇಳಬೇಡಿ ಹಣದ ಹಸಿವು ಸಿರಿವಂತರಿಗೆ ಜಾಸ್ತಿ ಮರೆಯಬೇಡಿ ಗುಣದ ಹಸಿವು ಬಡವನಿಗೆ ಜಾಸ್ತಿ ತಿಳಿದುಬಿಡಿ ಹೃದಯವಂತರು ಸಿರಿವಂತನಾದರೆ ಕೈ ಮುಗಿದುಬಿಡಿ ಶ್ರಮಜೀವಿಯೊಬ್ಬ ಸಿರಿವಂತನಾದರೆ ಗುಟ್ಟು ತಿಳಿದುಬಿಡಿ     ✍️ಮಾಧವ ಅಂಜಾರು 🙏🌷

ಅವಕಾಶ (ಕವನ -75)

  ಅವಕಾಶ ******* ನಕ್ಕು ನಗಿಸಲು ಅವಕಾಶ ಸಿಕ್ಕರೆ ಇಂದೇ ಮಾಡಿಬಿಡಿ ನಾಳೆ ಎಂಬುದ ಯಾರು ಬಲ್ಲರು? ಕನಸು ಕಾಣಲು ಆರಂಭಿಸಿದ್ದರೆ ನನಸಾಗಿಸಲು ಪ್ರಯತ್ನಪಡಿ ನಾಳೆ ಎಂಬುದ ಯಾರು ಬಲ್ಲರು? ಒಳಿತು ಮಾಡಲು ಹಂಬಲವಿದ್ದರೆ ಈಗಲೇ ಮಾಡಿಬಿಡಿ ನಾಳೆ ಎಂಬುದನು ಯಾರು ಬಲ್ಲರು? ಪ್ರೀತಿ ವಾತ್ಸಲ್ಯವ ತೋರಬೇಕಿದ್ದರೆ ತೋರಿಸಿಬಿಡಿ ನಾಳೆ ಎಂಬುದ ಯಾರು ಬಲ್ಲರು?        ✍️ಮಾಧವ ಅಂಜಾರು 🙏🌷

ಉಸಿರು (ಕವನ -77)

  ಉಸಿರು ****** ನನ್ನುಸಿರಿದ್ದರೆ ಸಾಕು, ಎನ್ನ ತುತ್ತನು ನಾನೇ ಎತ್ತಿ ತಿನ್ನುವತನಕ ನನ್ನುಸಿರಿದ್ದರೆ ಸಾಕು ಎನ್ನ ಕಾಲಲಿ ಬಲವಿದ್ದು ನಡೆವ ತನಕ ನನ್ನುಸಿರಿದ್ದರೆ ಸಾಕು ತಿಂದುಳಿದ ಬಟ್ಟಲನು ನಾನೇ ತೊಳೆದಿಡುವತನಕ ನನ್ನುಸಿರಿದ್ದರೆ ಸಾಕು ಉಟ್ಟ ತೊಡುಗೆಯ ತೊಳೆದು ಉಡುವತನಕ ನನ್ನುಸಿದ್ದರೆ ಸಾಕು ಎನ್ನ ನಂಬಿ ಬದುಕಿರುವ ಸಂಬಂಧಗಳು ಇರುವತನಕ ನನ್ನುಸಿರಿದ್ದರೆ ಸಾಕು ಎನ್ನ ಮನಸಿನ ನೋವ ಸಹಿಸಿಕೊಳ್ಳುವತನಕ ನನ್ನುಸಿರಿದ್ದರೆ ಸಾಕು ನಿಮ್ಮೆಲ್ಲರ ಪ್ರೀತಿ ಎನ್ನ ಜೊತೆ ಇರುವತನಕ ನನ್ನುಸಿರಿದ್ದರೆ ಸಾಕು ಎನ್ನ ಮೊಗದಲಿ ನಗುವಿರುವತನಕ    ✍️ಮಾಧವ ಅಂಜಾರು 🙏🌷

ಸಾಧನೆ (ಕವನ -76)

  ಸಾಧನೆ ****** ನಿಮ್ಮ ಸಾಧನೆ ಸಮಾಜ ಗುರುತಿಸಿಕೊಳ್ಳಲೆಂದು ಸಾಧಿಸಲು ಶ್ರಮಿಸಬೇಡಿ ನಿಮ್ಮ ಸಾಧನೆ ಸಮಾಜ ಗುರುತಿಸಲಿಲ್ಲವೆಂದು ಸಾಧನೆಯ ನಿಲ್ಲಿಸಬೇಡಿ, ಪ್ರತಿಯೊಬ್ಬರ ಸಾಧನೆ ಮೌಲ್ಯಗಳನ್ನು ಹೊಂದಿರುತ್ತದೆ ಅವರವರ ಶಕ್ತಿಗೆ ತಕ್ಕಂತೆ ಮಾಡಿರಬಹುದು ಸಾಧನೆ ಅವರವರ ಯುಕ್ತಿಗೆ ತಕ್ಕಂತೆ ಮಾಡಬಹುದು ಸಾಧನೆ ಬಡವನಾಗಿದ್ದರೆ ದಿನದ ಅನ್ನವನು ಗಳಿಸೋದು ಬಹುದೊಡ್ಡ ಸಾಧನೆ ಅಮಾಯಕನಾಗಿದ್ದರೆ ಇಂದಿನ ಸಮಾಜದಲ್ಲಿ ಬದುಕಿ ತೋರಿಸೋದೇ ಸಾಧನೆ         ✍️ಮಾಧವ ಅಂಜಾರು 🙏

ಬಾಂಧವ್ಯ (ಕವನ -78)

  ಬಾಂಧವ್ಯ  ********* ಕಳೆದು ಹೋದ ವಸ್ತು ಮತ್ತೆ ಸಿಕ್ಕಾಗ ಅದೆಷ್ಟು ಸಂತೋಷ ಕಳೆದು ಹೋದ ಜೀವ ಬರದೇ ಹೋದಾಗ ಅದೆಷ್ಟು ದುಃಖ, ಕಳೆದು ಹೋದ ಬಾಂಧವ್ಯ ಮತ್ತೆ ಪುಟಿದಾಗ ಅದೆಷ್ಟು ಸಂತೋಷ ಕಳೆದು ಹೋದ ವಿಶ್ವಾಸ ಮತ್ತೆ ಹುಟ್ಟುವಾಗ ಅದೆಷ್ಟು ಸಂಕೋಚ, ವಸ್ತು ಕಳೆದುಹೋಗುವ ಮುನ್ನ ಪ್ರೀತಿಯಿಂದ ಇಟ್ಟುಕೊಳ್ಳಿ ಮತ್ತೆ ಸಿಗಬಹುದು ಜೀವ ಕಳೆದುಹೋಗುವ  ಮುನ್ನ ಪ್ರೀತಿಯಿಂದ ಬಾಳಿ ಮತ್ತೆ ಸಿಗಲಾರದು!   ✍️ಮಾಧವ ಅಂಜಾರು 🙏

ಮಾರಿ (ಕವನ -80)

  ಮಾರಿ ***** ಹೆಣ್ಣೊಂದು ಕಲಿತರೆ ಶಾಲೆಯನ್ನು ತೆರೆದಂತೆ ಕಲಿತ ಹೆಣ್ಣು ಗಂಡು ಮದ್ಯಪಾನ ಕಲಿತರೆ ಹೊಸ ಬಾರು ತೆರೆದಂತೆ, ನಾರಿ ಮುನಿದರೆ ಮಾರಿ ನಾರಿ ಒಲಿದರೆ ಜಯಭೇರಿ ನಾರಿ ನಲಿದರೆ ದುಬಾರಿ ನಾರಿ ನಕ್ಕರೆ ಸುಖ ಸಂಸಾರಿ ನಾರಿ ಸರಿದರೆ ಬಡ ವ್ಯಾಪಾರಿ        ✍️ಮಾಧವ ಅಂಜಾರು 🙏

ಜೊತೆಯಲಿ (ಕವನ -81)

  ಜೊತೆಯಲಿ ******* ಸಾಧ್ಯವಿದ್ದರೆ ಜೊತೆಯಲ್ಲಿರುವವರ ಮುಖದಲ್ಲಿ ನಗು ಬರಿಸಿ ಸಾಧ್ಯವಿದ್ದರೆ ಜೊತೆಯಲ್ಲಿರುವವರ ಕಷ್ಟದಲ್ಲಿ ಭಾಗಿಯಾಗಿ ಸಾಧ್ಯವಿದ್ದರೆ ಜೊತೆಯಲ್ಲಿ ಇರುವವರ ಮನಸು ಅರ್ಥಮಾಡಿಕೊಳ್ಳಿ ಸಾಧ್ಯವಿದ್ದರೆ ಜೊತೆಯಲ್ಲಿ ಇರುವವರ ಕೈ ಹಿಡಿದು ನಡೆಸಿ ಸಾಧ್ಯವಿದ್ದರೆ ಜೊತೆಯಲ್ಲಿ ಇರುವವರ ತಪ್ಪನು ತಿದ್ದಿಬಿಡಿ ಸಾಧ್ಯವಿದ್ದರೆ ಜೊತೆಯಲ್ಲಿ ಇರುವವರ ದ್ವೇಷ ಮರೆಸಿಬಿಡಿ       ✍️ಮಾಧವ ಅಂಜಾರು 🙏

ನವರಾತ್ರಿ (ಕವನ -82)

  ನವರಾತ್ರಿ ******* ನವದಿನದ ನವರಾತ್ರಿಯಲಿ ನವದುರ್ಗೆಯು ಹಾರೈಸಲಿ ನವ ಕನಸಿನ ನವ ಆಸೆಗಳ ನವದುರ್ಗೆಯು  ಆಲಿಸಲಿ ನವ ಹೂವಲಿ ನವ ಫಲದಲಿ ನವದುರ್ಗೆಯ ಪೂಜಿಪೆ ನಲಿದಾಡುತ ಭಕ್ತಿಯಿಂದ ನವ ದುರ್ಗೆಗೆ ಕರಮುಗಿವೆ ನವ ಬಣ್ಣದಲಿ ನವ ರತ್ನದಲಿ ನವಬಗೆಯಲಿ ಸಿಂಗರಿಸಿ ನವದುರ್ಗೆಯ ಚರಣಕೆರಗಿ ನವದಿನದ ಶುಭಕೋರುವೆ        ✍️ಮಾಧವ ಅಂಜಾರು 🌷

ಸ್ಪಂದನ (ಕವನ -83)

  ಸ್ಪಂದನ ******* ಇನ್ನೊಬ್ಬರ ನೋವಿಗೆ ಸ್ಪಂದಿಸುವ ಹೃದಯ ನಿಮ್ಮಲ್ಲಿದ್ದರೆ ನೋವನ್ನು ಸಹಿಸಿಕೊಳ್ಳಲು ಕೂಡ ನಿಮ್ಮ ಹೃದಯ ತಯಾರಿಯಲ್ಲಿರುತ್ತದೆ, ಇನ್ನೊಬ್ಬರ ಪ್ರೀತಿಗೆ ಸ್ಪಂದಿಸುವ ಮನಸ್ಸು ನಿಮ್ಮಲ್ಲಿದ್ದರೆ ಪ್ರೀತಿಯ ಅರ್ಥವೇನೆಂದು ತಿಳಿಸುವ ಶಕ್ತಿ ನಿಮ್ಮಲ್ಲಿರುತ್ತದೆ ಇನ್ನೊಬ್ಬರ ಅವನತಿಗೆ ಕಾಯುವ ಮನಸ್ಥಿತಿ ನಿಮ್ಮಲ್ಲಿದ್ದರೆ ಅವನತಿ ನಿಮ್ಮದೇ ಬಾಗಿಲಲ್ಲಿ ಕಾಯುತ್ತಿರುತ್ತದೆ ಒಂದಲ್ಲ ಒಂದು ದಿನ ಸತ್ಯ ಗೆಲ್ಲುತ್ತದೆ               ✍️ಮಾಧವ ಅಂಜಾರು 🌷 .

ದೇವರಿಲ್ಲ (ಕವನ -84)

  ದೇವರಿಲ್ಲ ******** ದೇವರನ್ನೇ ನಂಬದಿದ್ದವ ಕಷ್ಟ ಬಂದಾಗ  ಕೈಮುಗಿದ ದೇವರನ್ನೇ ದೂರುತ್ತಿದ್ದವ ನೋವನುಭವಿಸುವಾಗ ದೇವರನ್ನು ಕರೆದ ದೇವನೊಬ್ಬನೇ  ಅನ್ನುತಿದ್ದವ ಕಷ್ಟ ಸುಖದಲೂ ನೆನೆದ ನಾನೇ  ದೇವರು ಅನ್ನುತಿದ್ದವ ದೇವಾ  ದೇವನೆನುತ ಜೀವವನೇ ತೊರೆದ ದೇವರ ಹೆಸರಲಿ ಹಣಮಾಡುತಿದ್ದವ ಐಶ್ವರ್ಯ ಗಳಿಸಿ ಮೆರೆದ ದೇವನೊಬ್ಬ ನೋಡುತಲಿರುವ ತಿಳಿದೂ ತಿಳಿಯದಂತೆ ನಡೆದ ಕೊನೆಗಾಲಕೆ ಪಾಪವನ್ನೆಲ್ಲ ನೆನೆದು ಕೊರಗಿ ಕೊರಗಿ ದೇವರನ್ನೇ ನೆನೆದ        ✍️ಮಾಧವ ಅಂಜಾರು 🌷

ಸಾಮರ್ಥ್ಯ (ಕವನ -85)

  ಸಾಮರ್ಥ್ಯ ******* ಕತ್ತೆಯನ್ನೂ ಗೌರವಿಸಬೇಕು ಭಾರಹೊತ್ತು ನಡೆಯುದನು ಕಂಡು ಕುದುರೆಯನ್ನ ಮೆಚ್ಚಿದರೆ ಸಾಲದು ಹುಲಿಯನ್ನೂ ಹೊಗಳಿದರೆ ಸಾಲದು ಇಲಿಯನ್ನೂ ಗಮನಿಸಲೇ ಬೇಕು ಜೀವಿಯ ಸಾಮರ್ಥ್ಯ ಅಳೆಯಬಾರದು, ಹುಚ್ಚನನ್ನೂ ಹೀಗಳೆಯಬಾರದು ಸಿರಿವಂತನನ್ನೂ ಹಿಂಬಾಲಿಸಬಾರದು ಬಡವ ಬಲ್ಲಿದನ ಹಿಂಸಿಸಬಾರದು ಇಂದು ಇರುವ ಸಾಮರ್ಥ್ಯವೆಲ್ಲ ಶಾಶ್ವತವಲ್ಲ ಎಂಬುದ ಮರೆಯಬಾರದು ಮನುಜಗೆ ವಿಕೃತಿ ಅತಿಯಾಗಿರಬಾರದು            ✍️ಮಾಧವ ನಾಯ್ಕ್ ಅಂಜಾರು 🌹

ದೊಡ್ಮನೆ (ಕವನ -86)

ದೊಡ್ಮನೆ  ******* ಪಕ್ಕದ ಮನೆಯವರು ದೊಡ್ಡ ಮನೆ ಕಟ್ಟಿದರೆಂದು ಸಡ್ಡು ಹೊಡೆದು ಸಾಲಮಾಡಿ ಅದಕ್ಕಿಂತ ದೊಡ್ಡ ಮನೆ ಕಟ್ಟಲು ಅಣಿಯಾಗಬೇಡಿ, ಪಕ್ಕದ ಮನೆಯವರು ದೊಡ್ಡ ಕಾರು ತೆಗೆದುಕೊಂಡರೆಂದು ಸಂಪೂರ್ಣ ಸಾಲಮಾಡಿ ಹೊಸ ಕಾರನ್ನು ಖರೀದಿ ಮಾಡಲು ಅಣಿಯಾಗಲೇಬೇಡಿ ಸುತ್ತಮುತ್ತಲಿನ ಜನ ನಿಮ್ಮ ಪರಿಸ್ಥಿತಿ ನೋಡಿ ನಗುತ್ತಾರೆಂದು ಶೋಕಿ ಜೀವನಕ್ಕೆ ಕೈ ಹಾಕಬೇಡಿ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಇನ್ಯಾವುದೂ ಇಲ್ಲವೆಂದು ತಿಳಿಯದೆ ಇರಬೇಡಿ         ✍️ಮಾಧವ ನಾಯ್ಕ್ ಅಂಜಾರು 🌹

ಲಗಾಮು (ಕವನ -87)

 ಲಗಾಮು  ****** ದಾರವಿಲ್ಲದ ಗಾಳಿಪಟ  ಎಷ್ಟು ಮೇಲೆ ಹಾರಾಡಿದರೂ  ಗಾಳಿಯ ರಭಸಕೆ ದಿಕ್ಕು ದೆಸೆಯಿಲ್ಲದೆ  ನೆಲ ಕಚ್ಚುವುದು ಖಂಡಿತ  ಲಗಾಮಿಲ್ಲದ ಕುದುರೆ  ಎಷ್ಟು ಓಡಾಡಿದರೂ  ಲಕ್ಷ್ಯವಿಲ್ಲದ ಜಾಗಕೆ ಓಡುತ  ಧೂಳೆಬ್ಬಿಸುವುದು ಸಹಜ  ಅಂಕುಶವಿಲ್ಲದ ಆನೆ  ಎಷ್ಟು ಬಲಶಾಲಿಯಾದರೂ  ಮದವೇರಿದ ಹುಚ್ಚಾಟದಲಿ  ಸಿಕ್ಕಿದ್ದನ್ನು ನಾಶಪಡಿಸುವುದು  ನಿಜ  ಹಿಡಿತವಿಲ್ಲದ ಜೀವಕೆ  ವಿದ್ಯೆಯಿದ್ದರೂ, ಶಕ್ತಿಯಿದ್ದರೂ  ಐಶ್ವರ್ಯವಿದ್ದರೂ,  ಕ್ಷಣಮಾತ್ರಕೆ ಮುಗಿಯೋದು ನಿಜ          ✍️ಮಾಧವ ನಾಯ್ಕ್ ಅಂಜಾರು 🌹

ಭರವಸೆ (ಕವನ -88)

 ಭರವಸೆ ******* ಬದುಕಿದರೆ ಇನ್ನು ಕೇವಲ  ನಾಲ್ಕುದಿನವೆಂದೇ ಬದುಕಬೇಕು ಐದನೆಯ ದಿನ ಸಿಕ್ಕಿದರೆ ಮತ್ತೆ 4 ದಿನವೆಂದೇ ಬದುಕಬೇಕು  ಜೀವನದಲ್ಲಿ ಆಸೆಗಳು ಇರಬೇಕು  ನಾಲ್ಕು ದಿನ ಬದುಕು ನಡೆಸುವೆ ನೆಂಬ  ಭರವಸೆಯಲ್ಲಿ ಜೀವನ ಸಾಗಿಸಬೇಕು  ದುರಾಸೆಗೆ ಸಿಕ್ಕಿಬೀಳದಂತೆ ಇರಬೇಕು  ಬದುಕಿದರೆ ಮೂರು ದಿನವೆಂದೇ ಬದುಕಬೇಕು  ನಾಲ್ಕನೆಯ ದಿನ ಸಾಯುತ್ತೇನೆಂದು ತಿಳಿದಾಕ್ಷಣ  ಮತ್ತೆ ಹುಟ್ಟಿ ಬರುವೆನೆಂಬ ಧೈರ್ಯದಲಿ  ಇರುವ ಮೂರು ದಿನ ನಗುತ್ತಾ ಇರಬೇಕು        ✍️ ಮಾಧವ ನಾಯ್ಕ್ ಅಂಜಾರು🙏🌹

ದುಃಖ (ಕವನ -89)

 ದುಃಖ  ***** ಒಂದಲ್ಲ ಒಂದು ದಿನ ಪ್ರತಿಜೀವಿಗೂ ಸಾವು ಬಂದೇ ಬರುತ್ತದೆ ಬದುಕು ಕೊನೆಗೊಳ್ಳುವ ತನಕ ಸಂತೋಷ, ನೋವು ಇದ್ದೇ ಇರುತ್ತದೆ  ಮನುಷ್ಯನ ಸಾವು-ನೋವು  ಸಂಬಂಧ, ಸಮಾಜ, ಗೆಳೆಯ-ಗೆಳತಿಯರಿಗೆ  ದುಃಖವನ್ನು ತಂದುಬಿಡುತ್ತದೆ  ಸತ್ಕಾರ್ಯ ಮಾತ್ರ ಉಳಿದುಬಿಡುತ್ತದೆ  ಎಷ್ಟೇ ಗಳಿಸಿದರು, ಉಳಿಸಿದರೂ   ಇಂದಲ್ಲ ನಾಳೆ ಸಾವು ಬಂದೇ ಬರುತ್ತದೆ  ಸುತ್ತಲಿನ ಸಮಾಜಕ್ಕಾಗಿ ಮಾಡುವ  ಒಳಿತು ಮಾತ್ರ ಇದ್ದುಬಿಡುತ್ತದೆ        ✍️ ಮಾಧವ ನಾಯ್ಕ್ ಅಂಜಾರು 🌹

(ಲೇಖನ -26)ಮದುವೆಯ ನಂತರ -ಗಂಡಾಂತರ

Image
ಮದುವೆಯಾದ ನಂತರ ಪಾಲಿಸಬೇಕಾದ ಮುಖ್ಯ ವಿಷಯಗಳು  ಮದುವೆ ಎಂದರೆ ಏಕಾಂತ ಜೀವನದಿಂದ  ಪ್ರಬುದ್ಧತೆಗೆ ಬಂದು  ಜವಾಬ್ದಾರಿಯೊಂದಿಗೆ  ಒಂದು ಹೆಣ್ಣನ್ನು- ಗಂಡ ನ್ನು ವರಿಸಿಕೊಂಡು  ಸಂಸಾರ ನಡೆಸಲು  ಅಣಿಯಾಗುವುದು,  ಅವಿವಾಹಿತ ಅಥವಾ  ಅವಿವಾಹಿತೆಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ಮನಸುಗಳನ್ನು , ಹೃದಯಗಳನ್ನು ಏರಿಳಿತ ಬರದಂತೆ ನೋಡಿಕೊಂಡು ಉಸಿರಿರುವ ತನಕ ಜೊತೆಯಾಗಿ ಬಾಳುವ ರೀತಿ ರಿವಾಜು.   ಇಂದಿನ ದಿನಗಳಲ್ಲಿ ಮದುವೆ ಅನ್ನೋದು ಪೈಪೋಟಿ ನಡೆಸಿ ಆಚರಿಸುವ ಕಾರ್ಯಕ್ರಮವಾಗಿ ಮಾರ್ಪಡುತ್ತಿದೆ. ಮದುವೆಯ ನಿಜವಾದ ಅರ್ಥಗಳನ್ನೇ ಅರಿಯದೆ ಕೇವಲ ಮೋಜಿಗಾಗಿ ಮದುವೆ ಎಂಬ ಅರ್ಥದಲ್ಲಿ ಅದ್ದೂರಿಯಾಗಿ ಮದುವೆಗಳು ನಡೆದು ಕೇವಲ ಒಂದು ವರುಷ - ಎರಡು ವರುಷಗಳ ಒಳಗೆ ಮತ್ತು ಅದಕ್ಕಿಂತಲೂ ಕಡಿಮೆ ದಿನಗಳಲ್ಲಿ ವಿಚ್ಛೇದನೆ ಹಾದಿ ಹಿಡಿದು ಒಂಟಿಜೀವನ ಅಥವಾ ಮರುಮದುವೆಯ ಕಡೆ ಹೋಗಿ ಸಂಪೂರ್ಣ ಜೀವನವನ್ನು ನಾಶಪಡಿಸಿಕೊಳ್ಳುತ್ತಾರೆ.   ಮದುವೆಯ ಮುನ್ನ ಗಂಡು ಮತ್ತು ಹೆಣ್ಣು ಹಲವು ಆಸೆ, ಕನಸುಗಳನ್ನು ಕಾಣುತ್ತಾ ಮದುವೆಯ ನಂತರ ಸಂಗಾತಿಯ ಗುಣಗಳನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗಿ, ಸಣ್ಣ ಸಣ್ಣ ತಪ್ಪುಗಳನ್ನು ತಿದ್ದಿಕೊಳ್ಳದೆ ಒಬ್ಬೊರಿಗೊಬ್ಬರು ಸಂಶಯದ ವಾತಾವರಣ ಸೃಷ್ಟಿಸಿಕೊಂಡು,  ಸಪ್ತಪದಿ ಅನ್ನುವ ಪದದ ಅರ್ಥವನ್ನೇ ತಿಳಿಯದೆ ಹೆಣ್ಣೊಂದು ಬೇಗನೆ ತವರು ಮನೆಗೆ ಹೋಗಿ ತನ್ನ ಗಂಡ ಸರಿಯಿಲ್ಲ,  ಅವನಿಗೆ ಉದ್ಯೋಗವಿಲ್ಲ, ಅವನು ಕುಡಿಯುತ್ತಾನೆ, ಅವನಿಗೆ ಸರಿಯ

(ಲೇಖನ -27)ಕತ್ತಲ -ನೆತ್ತರು

Image
ಕತ್ತಲ  ನೆತ್ತರು  ಜೀವನಪಾಠ ಬರೆದಷ್ಟು ಮುಗಿಯದು  ಓದಿದಷ್ಟೂ ಸಾಲದು ಹೊಸ ಹೊಸ ಅಧ್ಯಾಯಗಳ ಸರಮಾಲೆ ನಮಗೆ ಸಿಗುತ್ತಲೇ ಇರುತ್ತದೆ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದ ಅವಧಿಯಲ್ಲಿ ಪಾಠವನ್ನು ಕಲಿಯುತ್ತಲೇ ಇರುತ್ತಾನೆ , ಹೊಸ ಅನುಭವಗಳನ್ನು ಅನುಭವಿಸುತ್ತ ಇರುತ್ತಾನೆ . ಒಬ್ಬೊಬರು  ಒಂದೊಂದು ಸಮಯಕ್ಕೆ ಮರೆಯಲಾಗದ ಪಾಠ ಕಲಿತರೆ , ಕೆಲವರು ಜೀವನಪೂರ್ತಿ ಇನ್ನೊಬ್ಬರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಾರೆ , ಕೆಲವರು ತಾನೊಬ್ಬನೇ ಶ್ರೇಷ್ಠ ಎಂಬಂತೆ ತನ್ನನ್ನು ತಾನು ತೋರ್ಪಡಿಸುವ ಅಹಂಕಾರವನ್ನು ಹೊಂದಿರುತ್ತಾರೆ . ಅವರವರ ಜೀವನದ ಗುಟ್ಟು ಅವರಿಗೆ ಮಾತ್ರ ಗೊತ್ತಿರುತ್ತದೆ  ಮತ್ತು ಒಳಿತು ಕೆಡುಕಿನ ಕೊಡವನ್ನು ತುಂಬಿಸಿಕೊಳ್ಳುತ್ತಿರುತ್ತಾರೆ .  ನನ್ನ ಅನುಭವ ತಪ್ಪಾಗಿರಲೂಬಹುದು ಆದರೆ ಸಹಜವಾಗಿ ಮನುಜ , ಮಾಹಿತಿ , ಅನುಭವಗಳ ಕೊರತೆಯಿಂದ ತಪ್ಪುಗಳನ್ನು ಮಾಡಬಹುದು ಆದರೆ  ಬುದ್ದಿವಂತನೆಂದು-  ತಿಳಿದು ಮಾಡುವ ತಪ್ಪಿಗೆ ಯಾವ ಮದ್ದು ಕೂಡ ನಾಟುವುದಿಲ್ಲ ಹಾಗೆಯೆ ಅವನತಿ ಹಾದಿ ಹೊಂದದಿರೋದಿಲ್ಲ.  ಮತ್ತು ಮಾಡಿದ ತಪ್ಪುಗಳನ್ನು ಸರಿ ಮಾಡಿ ಮುಂದುವರೆದರೆ ಸ್ವಲ್ಪಮಟ್ಟಿಗೆ ತನ್ನ ಜೀವನವನ್ನು ಮುಂದುವರೆಸಿ ನಡೆಯಲೂಬಹುದು .  ಮೋಸ ,ವಂಚನೆ , ಕೊಲೆ ,ದರೋಡೆ ,ವಿಸ್ವಾಸ ದ್ರೋಹ , ಪಿತೃ ದ್ರೋಹ , ಸಂಬಂಧಗಳ ದ್ರೋಹ ನಮ್ಮ ಸುತ್ತಮುತ್ತಲೂ ಕಾಣುತ್ತಲೇ ಇದ್ದೇವೆ ಆದರೆ ಪ್ರಪಂಚದಲ್ಲಿ ನಡೆಯುವ ಒಂದೊಂದು ಘಟನೆಗಳು ಪಾಠವೆಂದು ತಿಳಿದುಕೊಳ್ಳಲು ಕೂಡ ಕಷ್ಟ. ಯಾವ ಸಮಯ

ಕವಿ -ಗಿಣಿ (ಕವನ -91)

  ಕವಿ - ಗಿಣಿ ******** ಗಿಣಿಯು ನೀನೆ ರಾಣಿಯು ನೀನೇ ಕವಿಕಂಡ ಸೌಂದರ್ಯದ ಚೆಂಗುಲಾಬಿ ನೀನೆ,  ರವಿಯಂತೆ ನಾನು ಭುವಿಯಂತೆ ನೀನು ಆಟವಾಡುವ  ತವಕ ಎನ ಮನದಲಿ ನೀನು ಮರೆಯಲ್ಲಿ   ನಿಂತು ಹೃದಯವ ಕೊರೆದರೆ ಸರಿಯಾಗಿ ಸಿಗುವುದೇ ಬಯಸಿದ ಪ್ರೀತಿಯು ಬಳಿಬಂದು ಹಣೆಸವರು ಪಿಸುಗುಟ್ಟು ನನ್ನ ಹೆಸರು ಉಸಿರಲ್ಲಿ ಉಸಿರಾಗಿ ಹೇಳಿಬಿಡು ನೀ ನನ್ನುಸಿರು ✍️ಮಾಧವ ನಾಯ್ಕ್ ಅಂಜಾರು 🙏

(ಲೇಖನ -29)ಸಂಕೋಲೆ ತಕ್ಕಡಿ

Image
  ಸಂಕೋಲೆಯ ತಕ್ಕಡಿ ಸಂಕೋಲೆಯ ತಕ್ಕಡಿ ಸರಿದೂಗಿಸಲು ಸಮಯ ಬೇಕಾಗುತ್ತದೆ,  ತೂಗಿ ಕೊಡುವ ವಸ್ತುಗಳು ನಿಖರವಾಗಿರಬೇಕಾಗಿದ್ದರೆ ತೂಗುವವನು ಜಾಣ್ಮೆಯಿಂದ,  ಸಮಾಧಾನದಿಂದ ಇರಲೇಬೇಕು ಇಲ್ಲವಾದಲ್ಲಿ ತೂಕ ಸರಿಯಾಗುವುದಿಲ್ಲ. ಬೆಲೆಯೂ ಸರಿಯಾಗಿರುವುದಿಲ್ಲ.  ನಮ್ಮ ಜೀವನವು ಕೂಡ  ಒಂದು ತರ ಮನಸುಗಳನ್ನು  ಕೊಂಡು ಕೊಳ್ಳುವಿಕೆ,  ಸರಿದೂಗುವಿಕೆ,  ಜಾಗ್ರತೆಯಿಂದ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲಿ ಇರುತ್ತದೆ.  ಆದರೆ ಇದರಲ್ಲಿ ಪ್ರತಿಯೊಬ್ಬ ಸಂಸಾರದ ಸದಸ್ಯನ ಪಾತ್ರ ಮಹತ್ವ ಪಡೆದಿರುತ್ತದೆ.  ಒಂದು ಸಂಸಾರದಲಿ ಒಬ್ಬ ಕೂಡ ಏರಿಳಿತ ಆದರೂ ಕೂಡ ಎಲ್ಲರೂ ತೊಂದರೆಗೆ ಒಳಗಾಗುವ ಪ್ರಸಂಗಗಳು ನಡೆಯುತ್ತವೆ.  ತೂಗು ತಕ್ಕಡಿಯು ಅಲುಗಾಡುತ್ತಲೇ ಇರುತ್ತದೆ.  ಸಾಮನ್ಯವಾಗಿ,  ನಮ್ಮ ದಿನಚರಿಗಳಲ್ಲಿ ನಡೆಯುವ ಮನಸ್ತಾಪ,  ಕೋಪಗಳಿಗೆ ಸ್ವತಃ ಕಾರಣರಾಗದಂತೆ ನೋಡಿಕೊಂಡು ಸಂಸಾರವನ್ನು ಒಳ್ಳೆಯ ರೀತಿಯಲ್ಲಿ ಕೊಂಡುಹೋಗುವ ಜವಾಬ್ದಾರಿ ಪ್ರತೀ ಸದಸ್ಯನದ್ದು ಆಗಿರುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಇದ್ಯಾವುದೂ ನಡೆಯುತ್ತಿಲ್ಲ,  ನಡೆಯುತ್ತಿದ್ದರೂ ಬಹಳ ವಿರಳ ಸಂಖ್ಯೆಯಲ್ಲಿ ಇವೆ.  ಸಂಸ್ಕಾರದ ಅಡಿಯಲ್ಲಿ ಬದುಕದೆ ಇರುವ ಜೀವ ಸಂಸಾರ ನಡೆಸಲು ಹರಸಾಹಸ ಪಡೆಯಬೇಕಾಗುತ್ತದೆ.  ಒಂದುವೇಳೆ ಸಂಸ್ಕಾರವಿಲ್ಲದೆ ಬದುಕಿದರೂ ಸಂಸಾರ ನಡೆಸುವಲ್ಲಿ ವಿಫಲರಾಗುತ್ತಾರೆ.  ಪ್ರಪಂಚದಲ್ಲಿ ಟೆಕ್ನಾಲಜಿ  ಎಷ್ಟೇ ಮುಂದುವರಿದರೂ   ಸಂಸ್ಕಾರ ಅರಿಯದೆ  ಇರುವ ಸದಸ್ಯನು ಬೂದಿ ಮುಚ್ಚಿದ

(ಲೇಖನ -28)ಭರವಸೆಯ ಬದುಕು

Image
 ಭರವಸೆಯೇ  ಬದುಕು   ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನು ತನಗಾಗಿ ತನ್ನವರಿಗಾಗಿ ಬದುಕನ್ನು ಸಾಗಿಸುತ್ತಾ ಜೀವನದ ಪ್ರತಿಯೊಂದು ಏರಿಳಿತಗಳನ್ನು ಅನುಭವಿಸುತ್ತಾ ತನ್ನ ಜೀವನಕ್ಕೆ ವಿದಾಯ ಹೇಳುತ್ತಾನೆ. ಆದರೆ ಬದುಕಿನ ದಾರಿಯಲ್ಲಿ ನಡೆಯುವ ಪ್ರತಿಯೊಂದು ಸಿಹಿ ಕಹಿ ನೆನಪುಗಳು ಮಾತ್ರ ಜೀವನದ ಪಾಠವಾಗಿ ಉಳಿಯುತ್ತದೆ.  ಹೌದು, ಇನ್ನೊಬ್ಬರಿಗಾಗಿ ಬದುಕುವರು ಬಹಳ ವಿರಳ, ಇನ್ನೊಬ್ಬರಿಗಾಗಿ ಬದುಕಿದವನು ನೋವನ್ನು ಅನುಭವಿಸುವುದು ತುಂಬಾ ಜಾಸ್ತಿನೇ. ಸಂಸಾರದ ಸಾಗರದಲ್ಲಿ ಬಾಂಧವ್ಯಗಳನ್ನು ಉಳಿಸಿಕೊಳ್ಳಲು ಹೆಣಗಾಡುವವನು ತನ್ನ ಆಸೆಗಳನ್ನು ಬದಿಗಿಟ್ಟು ಎಲ್ಲರ ಒಳಿತಿಗಾಗಿ ಶ್ರಮಿಸುವನು. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ನಂಬಿಕಸ್ತ ರೇ ನಮ್ಮನ್ನು ಮೋಸ ಮಾಡುವ ಸಂದರ್ಭಗಳು ನಡೆದುಹೋಗುತ್ತವೆ. ಅತಿ ಹತ್ತಿರದವರೇ ಅಂದರೆ ಮಕ್ಕಳು ಹೆಂಡತಿ, ತಮ್ಮ ಅಣ್ಣ, ಅಕ್ಕ ತಂಗಿ ಎಲ್ಲರೂ ಒಂದೇ ತಾಯಿಯ ಮಡಿಲಲ್ಲಿ ಬೆಳೆದಿದ್ದರೂ ಭಾವನೆಗಳ ಕೊರತೆಯಿಂದ ಅಲ್ಲೋಲಕಲ್ಲೋಲ ವಾಗಿ ಅತಿ ಆಸೆಗೆ ಬಿದ್ದು ಅವನತಿ ಹೊಂದುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾನವೀಯತೆಯ ಕೊರತೆಗಳು ಹೆಚ್ಚಾಗುತ್ತಿರುವುದರಿಂದ ಬಾಂಧವ್ಯಗಳು ಕೂಡ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಎಲ್ಲಿಂದ ಎಲ್ಲಿವರೆಗೆ ಅಂದರೆ ತನ್ನ ಗೆಳೆಯನಿಗೆ ಕಷ್ಟಕಾಲದಲ್ಲಿ ದುಡ್ಡಿನ ಅವಶ್ಯಕತೆ ಇದ್ದಾಗ ನಿಜವಾದ ಗೆಳೆಯನೊಬ್ಬ ಹಿಂದೆ ಮುಂದೆ ನೋಡದೆ ತನ್ನಲ್ಲಿರುವ ಸಹಾಯವನ್ನು ಮನಃಪೂರ್ವಕ

(ಲೇಖನ -30)ನಾ ನಿನ್ನ ನಿಜವಾಗಿ ಪ್ರೀತಿಸುವೆ

Image
ನಾ ನಿನ್ನ ನಿಜವಾಗಿ ಪ್ರೀತಿಸುವೆ ಪ್ರೀತಿ ಪ್ರೇಮವೆಂದರೆ ಸಹಜವಾಗಿ ನಮ್ಮ ಮನಸ್ಸು ನೇರ ಯವ್ವನದ ಕಡೆ ಕೊಂಡು ಹೋಗಬಹುದು, ಆದರೆ ನಿಜವಾದ ಪ್ರೀತಿ ಅಂದರೆ  ಹೃದಯಯಾಂತರಾಳದಲಿ ಇನ್ನೊಬ್ಬರಿಗಾಗಿ ತಾವು ತೋರಿಸುತ್ತಿರುವ ನಯ ವಿನಯತೆ,  ಸಹಕಾರ,  ಗೌರವ.  ಪ್ರೀತಿಯನ್ನು ಒಂದೇ ವಾಕ್ಯದಲ್ಲಿ ಹೇಳಲಾಗದು ಮತ್ತು ವ್ಯಕ್ತಪಡಿಸಲೂ ಆಗದು.   ಅಮ್ಮನ ಪ್ರೀತಿ ತನ್ನ ಮಕ್ಕಳು ಮನೆಯವರ ಮೇಲೆ ಅದೆಷ್ಟು ಇರುತ್ತದೆ,  ಹೆಂಡತಿಯ ಪ್ರೀತಿಯು ಗಂಡನ ಮೇಲೆ ಅತಿಯಾಗಿರುತ್ತದೆ,  ಗಂಡನ ಪ್ರೀತಿಯು ತನ್ನ ಹೆಂಡತಿಯ ಮೇಲೆ ಅದಕ್ಕಿಂತಲೂ ಜಾಸ್ತಿನೇ ಇರುತ್ತದೆ.  ಆದ್ರೆ ವ್ಯಕ್ತ ಪಡಿಸಲು ಕೆಲವರು ಶಕ್ತರಾಗಿದ್ದಾರೆ, ಕೆಲವರಿಗೆ ತಾನು ಪ್ರೀತಿಸುತ್ತಿದ್ದೇನೆ ಎಂದು ಹೇಳುವಷ್ಟು ಕೂಡ ಹೊಳೆಯುವುದಿಲ್ಲ ಮತ್ತು ಕೆಲವರಿಗೆ ಅದಕ್ಕೆ ಬೇಕಾದ ಹಾವಭಾವಗಳನ್ನು ಮಾಡಿ ತೋರಿಸಲು ಬರೋದಿಲ್ಲ. ಪ್ರೀತಿ ಅನ್ನೋದು ಪ್ರತಿಯೊಂದು ಮನುಷ್ಯ ಹಾಗು ಪ್ರಾಣಿಗಳಲ್ಲಿ ಇದೆ,  ಪ್ರೀತಿಯಿಂದ ಸರ್ವ ಜೀವಿಗಳು ಜೀವಿಸುತ್ತವೆ. ನಿಮಗೆ ಗೊತ್ತಿಲ್ಲದೆಯೇ ಪ್ರೀತಿಸುವವರು ಅದೆಷ್ಟು ಜನಗಳು ಇರಬಹುದು.  ತಾಯಿಯೊಬ್ಬಳು ತಾನು ತಿನ್ನದೆ ಮಕ್ಕಳಿಗಾಗಿ ಸಂಸಾರಕ್ಕಾಗಿ  ಶ್ರಮಪಟ್ಟು ಯಾವುದೇ ಕಷ್ಟಗಳನ್ನು ವ್ಯಕ್ತಪಡಿಸದೆ ಇರುವುದು,   ಯಾವತ್ತೂ ಆಶೀರ್ವದಿಸುವುದು,  ಒಬ್ಬಳೇ ಕಣ್ಣೀರು ಹಾಕಿ ಏನಿಲ್ಲ ಮಗು ಅನ್ನೋದು,  ತಂದೆಯೊಬ್ಬ ತನ್ನ ಮಕ್ಕಳಿಗಾಗಿ,  ಮನೆಯ ಅನ್ನಕ್ಕಾಗಿ ಒಂದು ತುತ್ತು ಅನ್ನವ ತಿನ್ನುವಾಗ ಕೂಡ ಮನೆಯ

(ಲೇಖನ -31)ಮನಸುಗಳು ಕಿರಿದಾಗುತ್ತಿವೆ -ಹೃದಯಗಳು ಕಲ್ಲಾಗುತ್ತಿವೆ

Image
  ಮನಸುಗಳು ಕಿರಿದಾಗುತ್ತಿವೆ - ಹೃದಯಗಳು ಕಲ್ಲಾಗುತ್ತಿವೆ ಪ್ರೀತಿಗಾಗಿ ಬದುಕುವವರು,  ಸಮಾಜಕ್ಕಾಗಿ ಬದುಕುವವರು,  ಸ್ವಾರ್ಥವಿಲ್ಲದೆ ಬದುಕುವವರು,  ತೊಂದರೆಕೊಡುತ್ತಲೇ  ಬದುಕುವವರು ನಮ್ಮ ಸುತ್ತಮುತ್ತ ಇರಬಹುದು.  ಬದುಕೊಂದು ಸುಂದರ ತೋಟ ಅದರಲ್ಲಿ ಹೂ ಮೂಡಿ ಬರಬೇಕಿದ್ದರೆ ಸುತ್ತಲಿನ  ವಾತಾವರಣ ಚೆನ್ನಾಗಿಯೇ  ಇರಬೇಕು ಅಥವಾ ಆರೈಕೆ ಚೆನ್ನಾಗಿರಬೇಕು,  ಗಿಡಗಳ ಪೋಷಣೆ ಸರಿಯಾಗಿರಬೇಕು. ನಮ್ಮ ಬದುಕು ಕೂಡ ಅದರಂತೆಯೇ ನಾವು ಬೆಳೆದು ಬರುವ ವಾತಾವರಣ,  ಸಮಯ, ಸಂಧರ್ಭ,  ಸೋಲು,  ಗೆಲುವು ಮುಂತಾದವೆಲ್ಲ ಒಬ್ಬ  ಮನುಷ್ಯನ ಉನ್ನತಿಗೆ ಅಥವಾ ಅವನತಿಗೆ ಕಾರಣವಾಗುತ್ತದೆ. ವಿಶಾಲ ಹೃದಯ ನಿಮ್ಮಲ್ಲಿದ್ದರೆ ಅದರ ಕೊಡುಗೆ ನಿಮ್ಮ,  ತಂದೆ ತಾಯಿಯ,  ಗುರು ಹಿರಿಯರ ಆಶೀರ್ವಾದವೇ ಆಗಿರುತ್ತದೆ.  ನೀವು ಎಷ್ಟೇ ಕಷ್ಟದಲ್ಲಿದ್ದರೂ ಬೆರೆತು ಖುಷಿಯಾಗಿ ಜೀವನ ಮಾಡುವ ಬುದ್ದಿ ನಿಮ್ಮಲ್ಲಿದ್ದರೆ ಅದು ನಿಮ್ಮೊಬ್ಬರ ಗುಣವಲ್ಲ,  ನಿಮಗೆ ಹುಟ್ಟಿದಂದಿನಿಂದ ತಂದೆ ತಾಯಿ,  ಬಂಧು ಬಳಗ ನೀಡಿದ ಕೊಡುಗೆಯಾಗಿರುತ್ತದೆ. ಹೌದು ಕೆಲವರಿಗೆ ಅದೆಷ್ಟು ಬುದ್ದಿ ಹೇಳಿದರೂ ಅರ್ಥವೇ ಆಗೋದಿಲ್ಲ,  ಒಬ್ಬ  ಮನುಜ ತನ್ನದೇ ಬುದ್ದಿಯಲ್ಲಿ ಬದುಕುವವರೆಗೂ ತಾನು ಮಾಡಿದ ಕೆಟ್ಟಕೆಲಸ,  ಒಳ್ಳೆಯ ಕೆಲಸಗಳನ್ನು ತುಲನೆ ಮಾಡುವಷ್ಟು ಶಕ್ತಿಯನ್ನು ಸಾಯುವ ವರೆಗೂ ಹೊಂದಿರುವುದಿಲ್ಲ ಅದಕ್ಕೆ ಕಾರಣ ಅವರ ಜೀವನದ ಪ್ರತಿಯೊಂದು ಘಟನೆಗಳು ಅಥವಾ ನೋವುಗಳು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರುವ ಮನ

(ಲೇಖನ -32)ಯಾರೂ ನಮ್ಮ ಆಳುಗಳಲ್ಲ -ಸೇವಕರಲ್ಲ

Image
  ಯಾರೂ ನಮ್ಮ ಆಳುಗಳಲ್ಲ - ಸೇವಕರಲ್ಲ.  ಮಾನವನೊಬ್ಬನೇ ಬೇಧ ಭಾವ,  ಕೀಳರಿಮೆ,  ಮೇಲ್ಜಾತಿ, ಕೀಳು ಜಾತಿ,  ವಿವಿಧ ಧರ್ಮ, ಕಚ್ಚಾಟ, ಮದ ಮತ್ಸರ ಜಾಸ್ತಿನೇ ಬೆಳೆಸಿಕೊಂಡಿದ್ದಾನೆ.  ಹುಟ್ಟಿಬರುವಾಗ ಭುವಿಯ 100% ಜನರು ಒಳ್ಳೆಯವರೆ,  ದುರದೃಷ್ಟ ಹುಟ್ಟಿದ ಮೇಲೆ ಬೆಳೆಸುವ ರೀತಿಗಳು ಮಾನವ ಕುಲಕ್ಕೆ ಕೆಟ್ಟಹೆಸರು ಬರುವಷ್ಟರಮಟ್ಟಿಗೆ ಬೆಳೆದು ಕೊನೆಗೆ ಅರ್ಧ ದಾರಿಯಲ್ಲಿ ಸಾಯುವವರೇ ಜಾಸ್ತಿಯಾಗಿದ್ದಾರೆ.  ನಾವು ಮಾಡುವ ಉದ್ಯೋಗದಲ್ಲಿ,  ಸಂಘ ಸಂಸ್ಥೆ,  ಸಮಾಜದಲ್ಲಿ ಬೇಧ ಭಾವಗಳ ಸರಮಾಲೆ ಜೀವಂತವಾಗಿ ಇದ್ದು ಒಬ್ಬರ ಉನ್ನತಿಯ ಬದಲಾಗಿ ಅಳಿವಿಗಾಗಾಗಿ ಶ್ರಮಿಸುವ ಜನರು ಎಲ್ಲಾ ಕಡೆ ಕಾಣಲು ಸಿಗುತ್ತಾರೆ.  ಇದಕ್ಕೆ ಕಾರಣ ತಾನೊಬ್ಬನೇ ಬದುಕಿದರೆ ಸಾಕು,  ಬೇರೆಯವರು ಏನಾದರೂ ನನಗೆ ಬೇಕಾಗಿಲ್ಲ ಅನ್ನೋ ಮನೋಭಾವನೆ.  ಕೆಲವರಿಗೊಂದು ಪೊಗರು,  ಉನ್ನತ ಹುದ್ದೆ  ಅಥವಾ ಅಧಿಕಾರಕ್ಕೆ ಹೋದಮೇಲೆ ತನ್ನ ಕೆಳ ಹುದ್ದೆಯಲ್ಲಿರೋ ಜನರು ಸೇವಕರು ಅನ್ನೋ ರೀತಿ ನಡೆಯುತ್ತಾರೆ.  ಹೌದು ನೈಜ ಘಟನೆ,  ನಾನೊಂದು ಕಡೆ ಕೆಲಸ ಮಾಡುತಿದ್ದಾಗ ಒಬ್ಬ ಕೂಲಿ ಕೆಲಸಗಾರ, ಪೈಂಟ್,  ಗಾರೆ,  ಇನ್ನಿತರ ಕೆಲಸ ಮಾಡುವವನ ಮುಂದೆ ಸಿವಿಲ್ ಸೂಪರ್ವೈಸರ್ ಒಬ್ಬ ಬಡಪಾಯಿ ಕೆಲಸಗಾರನಿಗೆ ಏರುದನಿಯಿಂದಲೇ ಕೆಲಸವನ್ನು ಕೊಡುತಿದ್ದ,  ಅವನ ಹಾವಬಾವ  ಬಡಪಾಯಿ ಕೆಲಸಗಾರ ಅಡಿಯಾಳಂತೆ ನೋಡಿಕೊಳ್ಳುತ್ತಿದ್ದುದನು ಅರಿತಾಗ.  ರಾಜಸ್ಥಾನದಿಂದ ಕುವೈಟ್ ಮಣ್ಣಲಿ ಬಿಸಿ ಬೇಗೆಯೆ ನಡುವೆ ಅನ್ನಕ್ಕಾಗಿ ಪರಿತಪಿಸು

(ಲೇಖನ -34)ಕುವೈಟ್ ಸಮುದ್ರಕಿನಾರೆಯಲ್ಲಿ -ಪ್ರಕೃತಿ ಪ್ರೀತಿ

Image
 ಕುವೈಟ್ ಸಮುದ್ರಕಿನಾರೆಯಲ್ಲಿ - ಪ್ರಕೃತಿ ಪ್ರೀತಿ  ನಾವು ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕೂತಲ್ಲಿ ನಮ್ಮ ಅನುಕೂಲಕ್ಕಾಗಿ ಮೋಜು ಮಸ್ತಿಗಾಗಿ ತಿಂಡಿ ತಿನಸುಗಳನ್ನು  ಪ್ಲಾಸ್ಟಿಕ್ ಚೀಲ ಅಥವಾ ತಂಪು ಪಾನೀಯಗಳನ್ನು ಒಯ್ಯೋದು ಸಾಮಾನ್ಯವಾಗಿಬಿಟ್ಟಿದೆ.  ಅದೆಷ್ಟೋ ಜನರು ತನ್ನ ಸಂತೋಷದ ಕ್ಷಣಗಳನ್ನು ಅನುಭವಿಸಿ ಹೊತ್ತೊಯ್ದ ಎಲ್ಲಾ ವಸ್ತುಗಳನ್ನು ಕಸದ ತೊಟ್ಟಿಗಳಲ್ಲಿ ಹಾಕದೆ ಸಮುದ್ರ ಕಿನಾರೆಯಲ್ಲಿ ಬಿಸಾಕಿ ಹೋಗುತ್ತಾರೆ.  ಇದರಿಂದ ಪ್ರಕೃತಿ ಮಾಲಿನ್ಯ ಮಾಡುತ್ತಿರುವ ಬುದ್ದಿವಂತರೇ ಜಾಸ್ತಿ.    ಹೌದು ನಾನು  ಕೂಡ ನಮ್ಮ  ಮಕ್ಕಳೊಂದಿಗೆ  ಸೂರ್ಯಾಸ್ತದ ಸಮಯಕ್ಕೆ ತಂಗಾಳಿ ಸವಿಯಲು ಕುವೈಟ್ ಪಟ್ಟಣ ಬದಿಯಲ್ಲಿರೋ ಸಮುದ್ರ ಕಿನಾರೆಗೆ ಹೋಗಿದ್ದೆವು.   ನನ್ನೊಂದಿಗೆ ನನ್ನೆರಡು ಮಕ್ಕಳು,  ಹೆಂಡತಿ ಮತ್ತು  ಬಾರಕೂರಿನ ದಂಪತಿಗಳು ಕೂಡ ಇದ್ದರು.  ಕೊರೊನ ಭಯದಿಂದ ಎಲ್ಲರ ಮುಖದಲ್ಲಿ ಇದ್ದ  ಮಾಸ್ಕ್ ಗಳು ಸಮುದ್ರ ಕಿನಾರೆಯಲ್ಲಿ ನಮ್ಮ ಕಿಸೆಯೊಳಗೆ ಸೇರಿಬಿಟ್ಟಿತು.  ಇನ್ನೇನು ನಮ್ಮ ಚಪ್ಪಲಿಗಳನ್ನು ತೆಗೆದು ನೀರಂಚಲಿ ಆಡುವ ಹೆಜ್ಜೆಯನ್ನಿಡಬೇಕು ಅನ್ನುವಷ್ಟರಲ್ಲಿ ಕುವೈಟ್ ಪ್ರಜೆಯೊಬ್ಬಳು ತನ್ನ ಕೈಯಲ್ಲಿ ಹೊಯ್ಗೆ ಅಂಟಿದ್ದ ಒಂದು ಪ್ಲಾಸ್ಟಿಕ್ ಲೋಟವನ್ನು ಎತ್ತಿ ತೋರಿಸುತ್ತಲೇ,  ಹೇಳಿ ಬಿಟ್ಟರು "  humans are spoiling mother earth " ನಾವೆಲ್ಲರೂ ಸೇರಿ ಈ ಭೂಮಿಯನ್ನು ಸ್ವಚ್ಛ ಸುಂದರವಾಗಿಸಲು ಸಣ್ಣ ಪ್ರಯತ್ನ ಮಾಡಿದರೂ ಸಾಕು ಅಂತ ಹೇಳಿದ

ವಿದ್ಯಾವಂತ (ಕವನ -92)

ವಿದ್ಯಾವಂತ ******** ಓದುಬರಹ ಕಲಿತು ಅವಿದ್ಯಾವಂತನಿಗೆ ಮೋಸಮಾಡುವವಗೆ ವಿದ್ಯಾವಂತನೆಂದು ಹೇಳಲಾಗದು ! ಅವಿದ್ಯಾವಂತನೆದುರಿಗೆ ಉದ್ದುದ್ದ ಬರೆದು ಹೇಳಿಕೊಳ್ಳುವವಗೆ ವಿದ್ಯಾವಂತನೆಂದು ಹೇಳಲಾಗದು ! ದೊಡ್ಡ ಭಾಷಣ ವೇಷಭೂಷಣ ಮಾಡುತ ಅಮಾಯಕರ ತುಳಿಯುವವ ವಿದ್ಯಾವಂತನೆಂದು ಹೇಳಿಕೊಳ್ಳಬಾರದು ! ವಿದ್ಯೆ ಎಂದರೆ ಜೀವನದ ಪ್ರತಿಯೊಂದು ಸಮಯ ಸಂದರ್ಭದಲ್ಲಿ ವಿವೇಕತೆ, ವಿಧೇಯತೆ ತೋರ್ಪಡಿಸುವವರೆಂದು ಮರೆಯಬಾರದು ! ✍️ಮಾಧವ ನಾಯ್ಕ್ ಅಂಜಾರು 🌹

ದೇವ ನೀನೊಬ್ಬನೇ (ಕವನ -93)

ದೇವ ನೀನೊಬ್ಬನೇ  ************* ನಿನ್ನ ಅವಮಾನಿಸುವವರು  ಎನ್ನ ಅವಮಾನಿಸುವರು  ಕಣ್ಣಮುಂದೆ ನಟಿಸುವವರು  ಬೆನ್ನಹಿಂದೆ ಹಾರಾಡುವರು  ಉರಿಯುತ್ತಿದ್ದ ದೀಪಕೆ  ತಣ್ಣನೆಯ ನೀರೆರಚಿ  ಮತ್ತೆ ಉರಿಸುವ ಪ್ರಯತ್ನ  ಮಾಡುವ ಮನುಜರು  ನೀನಿದ್ದರೆ ಹೃದಯ ಬಡಿಯಲಿ  ನಾನಿದ್ದರೆ ದಿನವು ನಿನ್ನ ಬಳಿ  ಹೇಳದೆ, ಬೇರೆ  ದಾರಿಯಿಲ್ಲ  ದೇವ ನೀನೊಬ್ಬನೇ ಎನ್ನ ಬಳಿ  ✍️ಮಾಧವ ಅಂಜಾರು 😭

ಸಂತೋಷ (ಕವನ -94)

ಸಂತೋಷ  ******** ಎನ್ನ ನಂಬಿದವಗೆ  ಅನ್ನವ ಕೊಡು  ಎನ್ನ ತುಳಿದವಗೆ  ಹೊನ್ನನು ಕೊಡು  ನಿನ್ನ ನಂಬಿರುವೆನಗೆ  ಪಾದದ ಧೂಳನು ಕೊಡು  ದೇವನೇ ಎನ್ನ ಬಾಯಾರಿಕೆಗೆ  ನಿನ್ನ ಕಾಲನು ತೊಳೆದ  ನೀರನು ಕೊಡು  ದಿವ್ಯ ದೃಷ್ಟಿ ಬೇಡವೆನಗೆ  ಇರುವ ದೃಷ್ಟಿಯು ಸಾಕೆನಗೆ  ಕಣ್ಣು ಮುಚ್ಚಿಸು ಎನ್ನ  ಲೋಕದ ಲೋಪ  ತೋರಿಸಲೇ ಬೇಡವೆನಗೆ  ಈ ಜನುಮ ಸಾಕೆನಗೆ  ಕರೆದುಬಿಡು ನಿನ್ನ ಬಳಿಗೆ  ಇಲ್ಲವೆಂದಾದರೆ  ನನ್ನೆದೆಗೂಡಲಿ ಬಂದು ನೆಲೆ  ಬದುಕಲಾರೆ ನಿನ್ನ ಬಿಟ್ಟು  ನಗಲಾರೆನು ನಿನ್ನ ಹೊರತು  ಉಸಿರಾಡಲಾರೆನು  ನಡೆದಾಡಲಾರೆನು ದೇವ ಕಣ್ಣೀರ  ಅಭಿಷೇಕ ನಿನಗೆ  ನಿನ್ನ ಸಂತೋಷವೇ  ತೃಪ್ತಿ ನೀಡಲೆನಗೆ  ಎಲ್ಲಿದ್ದರೂ ನೀ ಬಂದು  ಮುಕ್ತಿಯನು ಕೊಡು ಎನಗೆ  ✍️ಮಾಧವ ನಾಯ್ಕ್ ಅಂಜಾರು 🌹

ಸಾವಿರ ಕನಸು (ಕವನ -95)

ಸಾವಿರ ಕನಸು ********* ತನ್ನ ಕಂದಮ್ಮ ಬೆಳೆಯುತ್ತಿರುವಾಗ ಸಾವಿರ ಕನಸನು ಹೊತ್ತುನಡೆದ ಪೋಷಕರಿಗೆ ಹೊತ್ತು ಗೊತ್ತಿಲ್ಲದೇ ವೃದ್ದಾಶ್ರಮ ತೋರಿಸಿಬಿಟ್ಟರು ಬೆಳೆದು ನಿಂತ ಮಕ್ಕಳು, ತನ್ನ ನೋವಮರೆತು ಜೀವಕ್ಕಿಂತ ಜಾಸ್ತಿ ಪ್ರೀತಿಸಿದ ಅಮ್ಮನ ಮರೆತು ಒಂದೊತ್ತು ತುತ್ತು ಕೊಡದ ಸ್ಥಿತಿಗೆ ತಲುಪಿಬಿಟ್ಟರು ಪೋಷಕರ ನೋವನರಿಯದ ಬಿಕನಾಶಿ ಮಕ್ಕಳು 😭 ✍️ಮಾಧವ ಅಂಜಾರು 🌹

ಕುರುಡ (ಕವನ -96)

ಕುರುಡ ***** ಆಯ್ಕೆಗಳು ಇಲ್ಲವಾದಾಗ ಆಸೆಗಳು ಇಲ್ಲವಾಗುತ್ತದೆ ಪ್ರೀತಿಯೇ ಇಲ್ಲವಾದಾಗ ಎಲ್ಲವೂ ಮರೆಯಾಗುತ್ತದೆ ಕಣ್ಣಿದ್ದು ಕುರುಡನಾಗಬೇಕು ಹೀಯಾಳಿಸುವವರ ಮುಂದೆ ನನ್ನ ನಾನು ಕಾಯಬೇಕಾದರೆ ಬದುಕಿದ್ದೂ ಸತ್ತಂತಿರಬೇಕು ತಿಳಿದು ಮಾಡುವ ತಪ್ಪಿಗೆ ಬುದ್ದಿಮಾತು ವ್ಯರ್ಥ ಅಳೆದು ಬದುಕುವ ಜನರಿಗೆ ವಿವರಣೆ ಮಾಡೋದು ವ್ಯರ್ಥ    ✍️ಮಾಧವ ಅಂಜಾರು 🌹

ಬದುಕಿದರೆ ಸಾಕು (ಕವನ -98)

ಬದುಕಿದರೆ ಸಾಕು ************* ನಾನು ಬದುಕಿದರೆ  ಸಾಕು ಎನ್ನ ತುತ್ತನು ನಾನೇ ತಿನ್ನುವ ಶಕ್ತಿ ಇರೋತನಕ ನಾನು ಬದುಕಿದರೆ ಸಾಕು ಎನ್ನ ಬಾಯಾರಿಕೆ ನಾನೇ ನೀಗಿಸುವ ತನಕ ನಾನು ಬದುಕಿದರೆ ಸಾಕು ಎನ್ನ ಕಾಲಲಿ ನಾನು ನಡೆಯುವತನಕ ನಾನು ಬದುಕಿದರೆ ಸಾಕು ಎನ್ನ ಮೊಗದಲಿ ಸಂತೋಷವಿರೋತನಕ ನಾನು ಬದುಕಿದರೆ ಸಾಕು ತಂದೆ ತಾಯಿಯ ಆಶೀರ್ವಾದ ಇರೋತನಕ ನಾನು ಬದುಕಿದರೆ ಸಾಕು ಹೆಂಡತಿ ಮಕ್ಕಳ ಪ್ರೀತಿ ಇರೋ ತನಕ,  ನಾನು ಬದುಕಿದರೆ ಸಾಕು ಸಮಾಜಕೆ ಒಳಿತು ಮಾಡೋತನಕ ನಾನು ಇದ್ದರೆ ಸಾಕು ಎನ್ನ ನೋವನು ಅರ್ಥಮಾಡುವ ಜನರಿರೋತನಕ ನಾನು ಉಳಿದರೆ ಸಾಕು ಪಾಪಿಗಳು ಅಳಿಯೋತನಕ ನಾನು ಉಸಿರಾಡಿದರೆ ಸಾಕು ಕಣ್ಣೀರ ಒರೆಸೋರಿರೋತನಕ ನಾನು ಬೆಳೆದರೆ ಸಾಕು ಎನ್ನ ಹಾರೈಸುವ ಸಜ್ಜನಿರೋತನಕ ನಾನು ಬದುಕಿದರೆ ಸಾಕು ದುಡಿದು ತಿಂದು ಬದುಕುವತನಕ ನಾನು ಬದುಕಿದರೆ ಸಾಕು ದೇವನ ಕರುಣೆ ಸದಾ ನನ್ನಲಿರೋತನಕ ✍️ಮಾಧವ ಅಂಜಾರು 🌹🙏

ದೇವರಂತೆ ಇರುವನು (ಕವನ -99)

ದೇವರಂತೆ ಇರುವನು *************** ಸತ್ಯ ಹೇಳುತ್ತಿರುವವರಿಗೆ ಸತ್ಯವನ್ನು ಬಿಟ್ಟು ಸುಳ್ಳು ಹೇಳೋಕೆ ಮುಜುಗರವಾಗುತ್ತದೆ  ಸುಳ್ಳು ಹೇಳುವವರಿಗೆ  ಸತ್ಯವನ್ನು ಬಿಟ್ಟು  ಸುಳ್ಳು ಹೇಳೋದಕ್ಕೆ  ಮುಜುಗರವಿಲ್ಲ  ಕಳ್ಳತನ ಮಾಡುತ್ತಿದ್ದವನಿಗೆ  ಕಳ್ಳತನ ಮಾಡದಿದ್ದರೆ  ಇಂದು ಸಂಪಾದಿಸಿಲ್ಲ  ಅನ್ನೋದು ಬಹಳ ಚಿಂತೆ  ಬಡವ-ಬಲ್ಲಿದ ನಿಗೆ  ಸಹಾಯ ಮಾಡುತ್ತಿದ್ದವ  ಇಂದು ಸಹಾಯ ಮಾಡಲು  ಆಗಲಿಲ್ಲವೆಂದರೆ ಬರೋದಿಲ್ಲ ನಿದ್ದೆ  ಎಲ್ಲರಿಗಾಗಿ ಇರುವವನು  ದೇವರಂತೆ ಇರುವನು  ಸಮಾಜವನ್ನು ಕೆಡಿಸುವವನು  ರಾಕ್ಷಸನಂತೆ ಇರುವನು ✍️ ಮಾಧವ ನಾಯ್ಕ್ ಅಂಜಾರು🙏

ನಿಲ್ಲಬಹುದು ಜೀವನ (ಕವನ -100)

ನಿಲ್ಲಬಹುದು ಜೀವನ *************** ನಾ ಬರೆವ ಕವನ ಅದೆನ್ನ ಜೀವನ ನೀ ಎನ್ನ ಗೆಳತಿಯೋ ನಾ ನಿನ್ನ ಗೆಳೆಯನೋ ಅದೊಂದು ಕ್ಷಣ ನನ್ನಲಿರೋ ಭಾವನೆ ಮೂಡಿ ಬರುತಿದೆ ದಿನಾ ಜೊತೆಯಲಿರು ನೀ ಎನ್ನ ಜೀವನ ಪಾವನ, ನಾ ಬರೆವ ಕವನ ಅದೆನ್ನ ಪ್ರಾಣ ನೀ ಎನ್ನ ಒಡತಿಯೋ ನಾ ನಿನ್ನ ಒಡೆಯನೋ ಅದೊಂದು ಕ್ಷಣ ನನ್ನಲಿರೋ ಕರುಣೆ ಹೊರಹೊಮ್ಮುತಲಿದೆ ದಿನಾ ಹೇಳುತಿರು ನೀ ಬೆಳಗಲಿ  ಜೀವನ, ನಾ ಬರೆವ ಕವನ ಅದು ನಿನ್ನ ಜೀವನ ಓದಿ ಹೇಳುತಿರು ನೀ ಸಂತೋಷದ ಕ್ಷಣ ಹಾಡುತಿರು ನೀ ಇಷ್ಟಬಂದ  ಸ್ವರದಲಿ ಇಂದಿಗೋ ನಾಳೆಗೊ ನಿಲ್ಲಬಹುದು ಜೀವನ ಉಳಿಯಬಹುದೆಂಬ ಆಸೆ ಎನ್ನ ಜೀವನ ಕವನ ✍️ಮಾಧವ ನಾಯ್ಕ್ ಅಂಜಾರು 🌹🙏

ಪ್ರಪಂಚವನರಿಯೋಕೆ

ಪ್ರಪಂಚವನರಿಯೋಕೆ ಎನ ಜೀವನ ಸಾಲದು ಪ್ರಪಂಚವನು ತಿದ್ದೋಕೆ ಎನ ಪ್ರಯತ್ನವು  ಸಾಲದು ಸತ್ಯಧರ್ಮದ ಬದುಕು ನಿಲ್ಲಿಸಲಂತೂ ಆಗದು ಸಾಕಿ ಸಲಹೆನ್ನ ದೇವಾ ನಿನ್ನ ಬಿಟ್ಟು ಈ ಭುವಿಯ ಹುಲುಕಡ್ಡಿಯುಅಲುಗಾಡ ದು ಇಂದಿಗಿರೋ ನೀನು ಮುಂದಿಗೂ ಇರುವೆ ನೀನು ಎಂದಿಗೂ ಬರುವ ಕಷ್ಟಕೆ ಸುರಕ್ಷೆಯ ಪದರವೇ ನೀನು ಆಗು ಹೋಗುಗಳು ವಿವಿಧ ನಿನ್ನ ನಂಬಿದ ಜನಕೆ ಸಲಹು ತುಳಿದು ಬಾಳೋ ಜೀವ ಅರಿಯದು ಮತ್ತವರ ನೋವ ಅಳೆದು ತೊಳೆದುಬಿಡು ಅನ್ಯಾಯದ ಗೂಡನು ಉಳಿಸಿ ತೋರಿಸಿಬಿಡು ನ್ಯಾಯದ ಬಾಗಿಲನು ಜಯವಾಗಲಿ ಜಯವಾಗಲಿ ಭಕ್ತ ನಿನಗೆ ಕೈಜೋಡಿಸುವೆನು           ✍️ಮಾಧವ ಅಂಜಾರು 🙏🌹