ಸಂತೋಷ (ಕವನ -94)

ಸಂತೋಷ 
********
ಎನ್ನ ನಂಬಿದವಗೆ 
ಅನ್ನವ ಕೊಡು 
ಎನ್ನ ತುಳಿದವಗೆ 
ಹೊನ್ನನು ಕೊಡು 
ನಿನ್ನ ನಂಬಿರುವೆನಗೆ 
ಪಾದದ ಧೂಳನು ಕೊಡು 
ದೇವನೇ ಎನ್ನ ಬಾಯಾರಿಕೆಗೆ 
ನಿನ್ನ ಕಾಲನು ತೊಳೆದ 
ನೀರನು ಕೊಡು 

ದಿವ್ಯ ದೃಷ್ಟಿ ಬೇಡವೆನಗೆ 
ಇರುವ ದೃಷ್ಟಿಯು ಸಾಕೆನಗೆ 
ಕಣ್ಣು ಮುಚ್ಚಿಸು ಎನ್ನ 
ಲೋಕದ ಲೋಪ 
ತೋರಿಸಲೇ ಬೇಡವೆನಗೆ 
ಈ ಜನುಮ ಸಾಕೆನಗೆ 
ಕರೆದುಬಿಡು ನಿನ್ನ ಬಳಿಗೆ 
ಇಲ್ಲವೆಂದಾದರೆ 
ನನ್ನೆದೆಗೂಡಲಿ ಬಂದು ನೆಲೆ 

ಬದುಕಲಾರೆ ನಿನ್ನ ಬಿಟ್ಟು 
ನಗಲಾರೆನು ನಿನ್ನ ಹೊರತು 
ಉಸಿರಾಡಲಾರೆನು 
ನಡೆದಾಡಲಾರೆನು ದೇವ
ಕಣ್ಣೀರ  ಅಭಿಷೇಕ ನಿನಗೆ 
ನಿನ್ನ ಸಂತೋಷವೇ 
ತೃಪ್ತಿ ನೀಡಲೆನಗೆ 
ಎಲ್ಲಿದ್ದರೂ ನೀ ಬಂದು 
ಮುಕ್ತಿಯನು ಕೊಡು ಎನಗೆ 
✍️ಮಾಧವ ನಾಯ್ಕ್ ಅಂಜಾರು 🌹

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.