ಪ್ರಪಂಚವನರಿಯೋಕೆ

ಪ್ರಪಂಚವನರಿಯೋಕೆ
ಎನ ಜೀವನ ಸಾಲದು
ಪ್ರಪಂಚವನು ತಿದ್ದೋಕೆ
ಎನ ಪ್ರಯತ್ನವು  ಸಾಲದು
ಸತ್ಯಧರ್ಮದ ಬದುಕು
ನಿಲ್ಲಿಸಲಂತೂ ಆಗದು
ಸಾಕಿ ಸಲಹೆನ್ನ ದೇವಾ
ನಿನ್ನ ಬಿಟ್ಟು ಈ ಭುವಿಯ
ಹುಲುಕಡ್ಡಿಯುಅಲುಗಾಡ ದು
ಇಂದಿಗಿರೋ ನೀನು
ಮುಂದಿಗೂ ಇರುವೆ ನೀನು
ಎಂದಿಗೂ ಬರುವ ಕಷ್ಟಕೆ
ಸುರಕ್ಷೆಯ ಪದರವೇ ನೀನು

ಆಗು ಹೋಗುಗಳು ವಿವಿಧ
ನಿನ್ನ ನಂಬಿದ ಜನಕೆ ಸಲಹು
ತುಳಿದು ಬಾಳೋ ಜೀವ
ಅರಿಯದು ಮತ್ತವರ ನೋವ
ಅಳೆದು ತೊಳೆದುಬಿಡು
ಅನ್ಯಾಯದ ಗೂಡನು
ಉಳಿಸಿ ತೋರಿಸಿಬಿಡು
ನ್ಯಾಯದ ಬಾಗಿಲನು
ಜಯವಾಗಲಿ ಜಯವಾಗಲಿ
ಭಕ್ತ ನಿನಗೆ ಕೈಜೋಡಿಸುವೆನು
          ✍️ಮಾಧವ ಅಂಜಾರು 🙏🌹

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.