ಬಾಂಧವ್ಯ(ಕವನ -130)


ಸಹಾಯ ಮನೋಭಾವ
ಒಬ್ಬೊಬ್ಬರಲ್ಲಿ
ಒಂದೊಂದು ತರಹ
ಹೆಸರು ಮಾಡೋಕೆ
ಕೆಲವರದಾಗಿದ್ದರೆ
ಉಸಿರು ಉಳಿಸೋಕೆ
ಹಲವರದ್ದು
ಹೆಸರ ಹೇಳದೆ
ಸಹಾಯ ಮಾಡುವವರಿದ್ದರೆ
ಯಾರೆಂದು ಹೇಳದೆಯೂ
ಉಪಕರಿಸುವವರಿದ್ದಾರೆ, 
ಏನಿದ್ದರೂ ಸಹಾಯವೇ
ಬಿದ್ದವನ ಕೈ ಹಿಡಿಯೋದು
ಹಲವರಿದ್ದಾರೆ ಅಂದರೆ
ಸಹಾಯ ಮಾಡಿದವನಿಗೂ
ನೋಡುವವ ಮೇಲೊಬ್ಬನಿದ್ದಾನೆ
ಸಹಾಯ ಒಳಿತಿಗಾಗಿರಲಿ
ಆರೈಕೆ ಸ್ಪಷ್ಟವಾಗಿರಲಿ
ನಂಬಿದ ದೈವ ದೇವರು
ನಿಮ್ಮನ್ನು ಹರಸಲಿ
ಧರ್ಮವನ್ನು ರಕ್ಷಿಸಲಿ
ಬಾಂಧವ್ಯ ಗಟ್ಟಿಯಾಗಿರಲಿ
     ✍️ಮಾಧವ ಅಂಜಾರು 🌹


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.