ಪಟ್ಟಕ್ಕಾಗಿ ಬದುಕಲ್ಲ (ಕವನ -115)


ಪಟ್ಟಕ್ಕಾಗಿ ಬದುಕಲ್ಲ
***************
ಅಂಗಳಗುಡಿಸಿ ಸುಸ್ತಾದವ
ಮಂಗಳನುಡಿಯುತ್ತಲೂ
ಧಣಿವಾಗತೊಡಗಿದ
ತಿಂಗಳ ಭವಿಷ್ಯ ಹೇಳುತಿದ್ದವ
ಬೆಳದಿಂಗಳ ಬೆಳಕಿಗೂ
ಬೆವರತೊಡಗಿದ, 
ಕಾಸಿದ್ದರೇನೇ ಜೀವನವೆಂದವ
ಬಿಡಿಗಾಸು ಬಿಡದೆ ಉಸಿರ ಬಿಟ್ಟ
ಹೆಸರಿದ್ದರೇನೇ ಗೌರವವೆಂದವ
ಹೆಸರಿನ  ಹುಡುಕಾಟದಲಿ
ತನ್ನ ಹೇಸರನ್ನೂ ಹೇಳದಷ್ಟು
ಮೌನವಾಗಿ ಬಿಟ್ಟ !
ಪಟ್ಟಕ್ಕಾಗಿ ಬದುಕಲ್ಲ
ಕೆಟ್ಟವನಾಗಿ ಇರೋದಲ್ಲ,
ಸುಟ್ಟು ಬಿಡೋ ಮನುಜನ
ಅಟ್ಟ ಹತ್ತಿಸಿಬಿಟ್ಟರೂ
ಬೇಕು ಬೇಕೆಂಬ ಹಠದಲಿ
ಇದ್ದುದನ್ನೆಲ್ಲಾ  ಕಳೆದುಬಿಟ್ಟ !
✍️ಮಾಧವ ನಾಯ್ಕ್ ಅಂಜಾರು🌹
   






Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ