ಬಿಂದು(ಕವನ -144)

ಹಣೆಯಲೊಂದು ಸಿಂಧೂರ ಬಿಂದು ಹುಣ್ಣಿಮೆಯ ಚಂದಿರ ನಿನ ಮೊಗವಿಂದು ಕಣ್ಣಲ್ಲಿ ಕಾಣೋ ನೂರಾರು ಬಯಕೆ ಮುಗ್ದತೆಯ ಮುನ್ನುಡಿ ಇದೆ ನಿನ್ನ ಜೊತೆಗೆ ಬಾ ಎನ್ನ ಸನಿಹಕೆ ತೋರು ನೀ ನಗೆ ಸಿಹಿ ಮಾತಾಡುತಲೇ ಮುತ್ತು ಕೊಡು ಬಗೆ, ಮೂಡಿದೆ ಮನದಲಿ ಸಾವಿರಾರು ಆಸೆ ದೂರವೇಕೆ ನಿಂತಿರುವೆ ನಿನಗಾಗಿ ಕಾದಿರುವೆ ಹೃದಯದ ಮಾತನು ಕೇಳೋ ಬಯಕೆಯೆನಗೆ ಮನಸಿನ ಪ್ರೀತಿಯನು ಹಂಚಿಬಿಡುವೆ ನಿನಗೆ ಗೆಳತಿಯೇ ಬಾ ಬೇಗ ನಿನ ದಾರಿಗೆ ಮಲ್ಲಿಗೆ ✍️ಮಾಧವ ನಾಯ್ಕ್ ಅಂಜಾರು 🌹

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.