ಅಪ್ಪನಾಗಿಹೆ (ಕವನ -113)

ಅಪ್ಪನಾಗಿಹೆ
****************
ಅಪ್ಪ, ನಾ ಅಪ್ಪನಾಗಿಹೆ
ಅಪ್ಪ ನಿನ್ನ ಚರಣದಿ ತಲೆಬಾಗುವೆ
ನಿನ್ನ ಸ್ನೇಹದ ಪರಿ ಇನ್ನೊಂದು ಸ್ನೇಹವಿಲ್ಲ
ನಿನ್ನ ಪ್ರೀತಿಯ ಸಿರಿ ಎನ್ನ ಜೀವಕೆ ಗರಿ, 
ನನ್ನ ಗೆಳೆಯನು ನೀನು ನಿನ್ನ ನಗುವೇ ಜೇನು
ಅಪ್ಪನಾಗಿಹ ನಾನು, ಅರಿವಾಗುತಿದೆ ಅಪ್ಪನೆಂದರೇನು !;

ಅಂದು ನಿನ್ನ ಪಾದದಲಿ
ಪಾದರಕ್ಷೆಯು  ಕಾಣಸಿಗಲಿಲ್ಲ  '
ಬಿಸಿಲ ಬೇಗೆಗೆ ನಡೆದ ನೋವ ಅರಿಯಲಿಲ್ಲ
ಬೆಂದು ಬಸವಳಿದ ನಿನ್ನ,  ಕಷ್ಟವನರಿಯಲಿಲ್ಲ
ಕಂದನಾಗಿದ್ದ ಎನಗೆ ಏನೂ ತಿಳಿಯಲಿಲ್ಲ
ಆದರಿಂದು ನಾ ಅಪ್ಪನಾಗಿಹೆ,
ನಿನ್ನ ತ್ಯಾಗ ತಿಳಿದು ಕಂಗಳು ತುಂಬಿತಲ್ಲ !;

ಕರುಳಕುಡಿಯ ಜನುಮದಾತ
ಹಸಿದ ಹೊಟ್ಟೇಲಿ ನಗುವ ಕಂಡಿಹೆ
ನೋವ ಮರೆಮಾಚಲು ಹಾಡು ಹಾಡಿಹೆ
ನಿನ್ನ ತುಳಿದ ಜನರ,  ನಾನಿಂದು  ಕಾಣುತಿಹೆ
ಮಣ್ಣು ತಿಂದು ಹುಚ್ಚರಾದರು
ನಿನ್ನ ಹಿಂಸಿಸಿದ  ಪ್ರತಿ ಜನರು
ದಿನ ದಿನವೂ ನಾಶವಾಗುತಿಹರು !;

ಸತ್ಯ ಧರ್ಮ ನಿನ್ನ ವಾದ
ಸತ್ಯಬಿಟ್ಟು ಇಲ್ಲ ಬೇಧ
ಅಸತ್ಯನಡೆಗೆ ಮಾಡುತಿಹೆ ವಿರೋಧ
ನಿತ್ಯ ನಿನ್ನ ಒಂದೇ ವಾದ
ಸತ್ಯ ಮಾತ್ರ ಜಯಿಸಬೇಕು
ಅಧರ್ಮ ದಾರಿ ಅಳಿಸಬೇಕು !
ಇಂದೆನಗೆ ಅರಿವಾಗುತಿದೆ 
ನನ್ನಪ್ಪನೆಂದರೆ ದೇವರೇ, ಸುಳ್ಳಲ್ಲ  !;
ಅವರಿಗೆ ಸರಿ ಸಾಟಿ ಯಾರೂ ಇಲ್ಲ,

ಅಪ್ಪ ನಿನ್ನ ಕಣ್ಣೀರ ಹನಿಗೆ
ಅಪ್ಪ ನಿನ್ನ ದುಡಿಮೆಯ ಬೆವರಿಗೆ
ದೈವವೊಂದೇ ಸಾಕ್ಷಿ ಯಾಗಿದೆ
ಪ್ರತಿದಿನದ ನೋವ ಕ್ಷಣಗಳು
ಕಣ್ಣಮುಂದೆ ಹಾಯುತಿದೆ
ಕಳೆದು ಹೋದ ಘಟನೆಗಳ
ನೆನೆದು ನೆನೆದು ಕೊರಗುತಿಹೆ
ಅಪ್ಪ ನಿನ್ನ ಜವಾಬ್ದಾರಿಯ
ಅಪ್ಪನಾಗಿ ಅರಿತುಕೊಂಡೆ !;

ಎಂದಿಗೂ ನೀ ಜೊತೆಯಲಿರು
ಎನ್ನ ಹೃದಯಗೂಡಲಿರು
ಅಪ್ಪ ನಾನಿರುವೆ ಹೇಳುತಿರು
ಆತ್ಮಸ್ಥೈರ್ಯ ತುಂಬುತಿರು
ನಿನಗೆ  ದೇವರು ಹಾರೈಸಲಿ
ನಿನ್ನ ಆಸೆ ಪೂರೈಸಲಿ
ನಿನ್ನ ಮಗನಾಗಿ ಎನಗೆ
ಪಾದ ಸೇವೆಭಾಗ್ಯ ಸಿಗಲಿ !, ;
      ✍️ಮಾಧವ ಅಂಜಾರು 🌹

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ