ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ ಆರಂಭಕ್ಕೆ ಕಾರಣಕರ್ತರಾಗಿರುವ , ಬಾವಿಕಟ್ಟೆ ಪದ್ಮನಾಭ ನಾಯ್ಕ ಮತ್ತು ಅಂಜಾರು ಮಠದ ದಿ ll ಲಕ್ಷೀ ನಾರಾಯಣ ಭಟ್. ಇಂದಿನ ಪೀಳಿಗೆಗೆ ತಿಳಿಯದೇ ಇರುವ ವಿಷಯ ಮತ್ತು ಸವಿ ನೆನಪುಗಳ ಪುಟಗಳು. ಸುಮಾರು 45 ವರುಷದ ಹಿಂದೆ ಆರಂಭಗೊಂಡ ಭಜನಾ ಮಂಡಳಿಯ ಮುಖ್ಯ ಕಾರಣಕರ್ತ ಅಂಜಾರು ಬಾವಿಕಟ್ಟೆ ಶ್ರೀ ಪದ್ಮನಾಭ ನಾಯ್ಕ ಯಾನೆ ನಂಗಣ್ಣ, ತಮ್ಮ ಯವ್ವನದ ದಿನಗಳಲ್ಲಿ ಬಹಳಷ್ಟು ಕನಸುಗಳನ್ನು ಕಂಡಿರುವ ಮತ್ತು ಸ್ವ ಉದ್ಯೋಗ ಮಾಡುತ್ತಲೆ ಬಿಡುವಿನ ಸಮಯದಲ್ಲಿ ಶ್ರೀಯುತ ಲಕ್ಷೀ ನಾರಾಯಣ ಭಟ್ ಇವರೊಂದಿಗೆ ಬಹಳಷ್ಟು ಬಾಂಧವ್ಯದಿಂದ ಕೂಡಿ ಬೆಳೆದಿರುವ ಶ್ರೀ ಪದ್ಮನಾಭ ನಾಯ್ಕ ಎಳೆಯ ವಯಸ್ಸಿನಲ್ಲಿ ಹಾಲಿನ ಡೈರಿಯನ್ನು ಮನೆಯಲ್ಲಿಯೇ ಆರಂಭಿಸಿ ಮಣಿಪಾಲದ ವರೆಗೂ ಸೈಕಲನ್ನು ತುಳಿದುಕೊಂಡು ಹೋಗಿ ಬರುತಿದ್ದ ಆ ಕಾಲ. ಬಹಳಷ್ಟು ಕಾಡು ದಾರಿ ಸರಿಯಾದ ರಸ್ತೆ ಸಂಪರ್ಕ ಗಳು ಇಲ್ಲದೇ ಇದ್ದರೂ ಸುಮಾರು 7 -8 ಹಾಲಿನ ಕ್ಯಾನ್ ತುಂಬಿಸ್ಕೊಂಡು ಮಣಿಪಾಲಕ್ಕೆ ಹಾಲು ಸರಬರಾಜು ಮಾಡುತ್ತಾ ಎಲ್ಲರ ಪ್ರೀತಿ ಪಾತ್ರರಾಗಿದ್ದರು ಮತ್ತು ಬಹಳಷ್ಟು ಹೆಸರುವಾಸಿಯಾಗಿದ್ದರು . ಪದ್ಮನಾಭ ಎಂದರೆ ಎಲ್ಲರಿಗೂ ಪರಿಚಯಸ್ತರಾಗಿ ಹಾಲು ಕೊಟ್ಟು ಹಿಂತಿರುಗಿ ಬರುವಾಗ ಭಟ್ಟರು ಮತ್ತು ಪದ್ಮನಾಭ ಇವರ ಸಂಭಾಷಣೆಯಲ್ಲಿ, ಆಗಲೇ ಪದ್ಮನಾಭರು ಯಕ್ಷಗಾನ ಹಾಡುಗಾರಿಕೆ, ಭಜನಾ ಹಾಡುಗಳನ್ನು ಹಾಡುತ್ತ ತನ್ನನ್ನು ತಾನೇ ಮರೆಯುತ್ತಿದ್ದರು. ಭಜನಾ ಹಾಡಿನಲ್ಲಿ ಬಹಳಷ್...
ಬದುಕೊಂದು ಹೋರಾಟವೇ ಆದರೆ ಇದರ ನಡುವೆ ನಮ್ಮ ಜೀವನದಲ್ಲಿ ಹಲವು ಸಂಧರ್ಭಗಳು ನ್ಯಾಯಕ್ಕಾಗಿ ಹೋರಾಟ, ಜೀವನಕ್ಕಾಗಿ ಹೋರಾಟ, ಯಶಸ್ಸಿಗಾಗಿ ಹೋರಾಟ ಮತ್ತು ಕೆಲವರು ಹೋರಾಡುವವರನ್ನು ಧಮನಿಸಲು ಮಾಡುವ ಕಪಟ ಹೋರಾಟಗಳು ನಡೆಯುತ್ತಿರುತ್ತವೆ. ಬ್ರಿಟಿಷರು ನಮ್ಮ ದೇಶವನ್ನು ಆಳುತಿದ್ದ ಸಂಧರ್ಭದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ತಮ್ಮ ಜೀವನವನ್ನು/ ಜೀವವನ್ನು ಮುಡಿಪಾಗಿಸಿ ಇಂದಿಗೂ ನಾವೆಲ್ಲರೂ ಅವರನ್ನು ಸ್ಮರಿಸುತ್ತ ಸ್ವಾತಂತ್ರ್ಯ ಆಚರಿಸುತ್ತೇವೆ, ಸಿಹಿ ತಿಂಡಿ ಹಂಚುತ್ತೇವೆ, ಒಂದಷ್ಟು ಭಾಷಣಗಳನ್ನು ಮಾಡುತ್ತೇವೆ, ಆದರೂ ಹೋರಾಟ ಮಾಡಿ ಮಡಿದ ಜನರನ್ನು ಬಿಡದೆ ಕೀಳು ರಾಜಕೀಯ ಕೂಡ ಮಾಡುತ್ತಿರುತ್ತೇವೆ. ಮತ್ತು ಪ್ರಸ್ತುತ ಸ್ಥಿತಿಗೆ ಅನುಸಾರವಾಗಿ ಬಾಯಿಗೆ ಬಂದ ಹಾಗೆ ಮಾತನಾಡುವ ಅನೇಕ ನಾಯಕರುಗಳನ್ನು ನಾವು ನೋಡುತ್ತಲೇ ಇದ್ದೇವೆ. ಹೋರಾಟದ ಹಾದಿಯಲ್ಲಿ ಒಂದಷ್ಟು ಜನರು ತನ್ನ ಜೇಬು ತುಂಬಿಸಿಕೊಳ್ಳಲು ಪ್ರಯತ್ನಿಸುತ್ತ ಕಣ್ಣೆದುರು ಸತ್ಯ ಕಾಣುತಿದ್ದರೂ ಸುಳ್ಳನ್ನು ಸೃಷ್ಟಿಮಾಡಿ ಹೋರಾಟದ ಚಿತ್ರಣವನ್ನು ಬದಲಿಸಲು ಪ್ರಯತ್ನಪಡುತ್ತಾರೆ. ಇಲ್ಲಿ ಅವರ ಸ್ವಾರ್ಥ, ಕೆಟ್ಟ ವರ್ತನೆ, ಅಹಂಕಾರ, ದಬ್ಬಾಳಿಕೆ, ಗೂಂಡಾಗಿರಿ, ಶೋಷಣೆ, ಗದರಿಸುವಿಕೆಯ ಅಂಶಗಳು ಮೇಲೆದ್ದು ಕಾಣುತ್ತವೆ. ಸಾಮಾನ್ಯವಾಗಿ, ಸುಳ್ಳನ್ನು ಶೋಷಣೆಯನ್ನು ಗದರಿಕೆ, ಮತ್ತು ಅನೇಕ ಮಾನಸಿಕ ಹಿ...
(ಲೇಖನ -122) ಭೂ - ಕೈಲಾಸ, ಕಲಾ ವೈಭವ - ಕುವೈತ್ ಕನ್ನಡ ಕೂಟದಿಂದ ಆಯೋಜಿಸಲ್ಪಟ್ಟ ದಾಸೋತ್ಸವ ಶೇಕಡಾ ನೂರರಷ್ಟು ಮನ ತಣಿಸಿತು, ಕಲಾ ಮಾತೆಯರು , ಕಲಾಗಾರರು ರೋಮಾಂಚನಗೊಳಿಸಿದ ದೃಶ್ಯಗಳ ಹಿಂದೆ ಸದ್ದಿಲ್ಲದೇ ಶ್ರಮವಹಿಸಿದ "ಶ್ರೀ ಸತೀಶ್ ಆಚಾರ್ಯ "ಇವರ ನಿರ್ದೇಶನ ಪ್ರೇಕ್ಷಕವರ್ಗದ ಹುಬ್ಬೆರಿಸಿತ್ತು, ಭೂ ಕೈಲಾಸದ ಪ್ರತಿಯೊಂದು ಭಾಗ ಚಪ್ಪಾಳೆಯೊಂದಿಗೆ ಮುಂದುವರಿಯುತಿತ್ತು. ಆರಂಭದಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಚಿಣ್ಣರಿಂದ ಹಿರಿಯರವರೆಗೂ ಬಹಳಷ್ಟು ಸ್ಪಷ್ಟ ಮತ್ತು ಸಂತಸದ ವಾತಾವರಣದಿಂದ ಕೂಡಿತ್ತು. ರಾಮಾಯಣ, ಮಹಾಭಾರತದ ತುಣುಕುಗಳೊಂದಿಗೆ,ಭಕ್ತಿ ಮತ್ತು ರಸದೌತಣದ ಹಬ್ಬ ಕುವೈಟ್ ಕನ್ನಡ ಕೂಟದ ಮೆರುಗನ್ನು ಇನ್ನಷ್ಟು ಹೆಚ್ಚುಗೊಳಿಸಿತ್ತು. ಬಣ್ಣ ಬಣ್ಣದ ಉಡುಗೆ ತೊಡುಗೆ, ಪರಸ್ಪರರ ನಗು ಮುಖದ ಸಂಧರ್ಭಗಳೊಂದಿಗೆ ಕಾರ್ಯಕ್ರಮ ತೆರೆಕಂಡಿತು. ಇಲ್ಲಿ ಆಡಳಿತ ಮಂಡಳಿ, ಸರ್ವ ಸದಸ್ಯರ ನಿಸ್ವಾರ್ಥ ಸೇವೆ ಕನ್ನಡ ಕೂಟದ ಗೌರವ ದ್ವಿಗುಣಗೊಳಿಸುತ್ತಲೇ ಇದೆ. ಪ್ರತಿಯೊಬ್ಬರಲ್ಲೂ ಕಲೆಎಂಬುದಿದೆ ಹಾಗಾಗಿ ಪ್ರತೀ ಸದಸ್ಯರು ಮತ್ತು ಅವರ ಮಕ್ಕಳೂ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿ ಕಲೆಯನ್ನು ಉಳಿಸಿ ಬೆಳೆಸಲು ಸಹಾಯವಾಗುತ್ತಿದ್ದಾರೆ. ಭಜನೆ, ನಿರೂಪಣೆ, ಸಾತ್ವಿಕ ಆಹಾರ ಎಲ್ಲವೂ ಅಚ್ಚುಕಟ್ಟಾಗಿ ನಡೆದು ಕೂಟದ ಶಿಸ್ತನ್ನು ತೋರಿಸುತಿತ್ತು. ಬಾಲ್ಯದ ಸಮಯದಲ್ಲಿ...
Comments
Post a Comment