ದಣಿವು ತಿಳಿಯದು
ಮನವು ಕೇಳದು
ಹೃದಯ ಬಡಿತವೇ
ಜ್ಞಾಪಿಸುತಿದೆ
ಒಂದು ಕವನವಿಲ್ಲದೆ
ಈ ಜೀವ ವಿಶ್ರಮಿಸದು,
ಹಸಿವು ತಿಳಿಯದು
ಏದುಸಿರು ಬಿಡುತಲೇ
ಹೊಸ ಜೀವನ ಕವನ
ಬರೆಯುವಾಸೆ
ಎಂದೂ ನಿಲ್ಲದು
ಎನ್ನ ಪ್ರಪಂಚವಿದು
✍️ಮಾಧವ ಅಂಜಾರು 🌹
ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ ಆರಂಭಕ್ಕೆ ಕಾರಣಕರ್ತರಾಗಿರುವ , ಬಾವಿಕಟ್ಟೆ ಪದ್ಮನಾಭ ನಾಯ್ಕ ಮತ್ತು ಅಂಜಾರು ಮಠದ ದಿ ll ಲಕ್ಷೀ ನಾರಾಯಣ ಭಟ್. ಇಂದಿನ ಪೀಳಿಗೆಗೆ ತಿಳಿಯದೇ ಇರುವ ವಿಷಯ ಮತ್ತು ಸವಿ ನೆನಪುಗಳ ಪುಟಗಳು. ಸುಮಾರು 45 ವರುಷದ ಹಿಂದೆ ಆರಂಭಗೊಂಡ ಭಜನಾ ಮಂಡಳಿಯ ಮುಖ್ಯ ಕಾರಣಕರ್ತ ಅಂಜಾರು ಬಾವಿಕಟ್ಟೆ ಶ್ರೀ ಪದ್ಮನಾಭ ನಾಯ್ಕ ಯಾನೆ ನಂಗಣ್ಣ, ತಮ್ಮ ಯವ್ವನದ ದಿನಗಳಲ್ಲಿ ಬಹಳಷ್ಟು ಕನಸುಗಳನ್ನು ಕಂಡಿರುವ ಮತ್ತು ಸ್ವ ಉದ್ಯೋಗ ಮಾಡುತ್ತಲೆ ಬಿಡುವಿನ ಸಮಯದಲ್ಲಿ ಶ್ರೀಯುತ ಲಕ್ಷೀ ನಾರಾಯಣ ಭಟ್ ಇವರೊಂದಿಗೆ ಬಹಳಷ್ಟು ಬಾಂಧವ್ಯದಿಂದ ಕೂಡಿ ಬೆಳೆದಿರುವ ಶ್ರೀ ಪದ್ಮನಾಭ ನಾಯ್ಕ ಎಳೆಯ ವಯಸ್ಸಿನಲ್ಲಿ ಹಾಲಿನ ಡೈರಿಯನ್ನು ಮನೆಯಲ್ಲಿಯೇ ಆರಂಭಿಸಿ ಮಣಿಪಾಲದ ವರೆಗೂ ಸೈಕಲನ್ನು ತುಳಿದುಕೊಂಡು ಹೋಗಿ ಬರುತಿದ್ದ ಆ ಕಾಲ. ಬಹಳಷ್ಟು ಕಾಡು ದಾರಿ ಸರಿಯಾದ ರಸ್ತೆ ಸಂಪರ್ಕ ಗಳು ಇಲ್ಲದೇ ಇದ್ದರೂ ಸುಮಾರು 7 -8 ಹಾಲಿನ ಕ್ಯಾನ್ ತುಂಬಿಸ್ಕೊಂಡು ಮಣಿಪಾಲಕ್ಕೆ ಹಾಲು ಸರಬರಾಜು ಮಾಡುತ್ತಾ ಎಲ್ಲರ ಪ್ರೀತಿ ಪಾತ್ರರಾಗಿದ್ದರು ಮತ್ತು ಬಹಳಷ್ಟು ಹೆಸರುವಾಸಿಯಾಗಿದ್ದರು . ಪದ್ಮನಾಭ ಎಂದರೆ ಎಲ್ಲರಿಗೂ ಪರಿಚಯಸ್ತರಾಗಿ ಹಾಲು ಕೊಟ್ಟು ಹಿಂತಿರುಗಿ ಬರುವಾಗ ಭಟ್ಟರು ಮತ್ತು ಪದ್ಮನಾಭ ಇವರ ಸಂಭಾಷಣೆಯಲ್ಲಿ, ಆಗಲೇ ಪದ್ಮನಾಭರು ಯಕ್ಷಗಾನ ಹಾಡುಗಾರಿಕೆ, ಭಜನಾ ಹಾಡುಗಳನ್ನು ಹಾಡುತ್ತ ತನ್ನನ್ನು ತಾನೇ ಮರೆಯುತ್ತಿದ್ದರು. ಭಜನಾ ಹಾಡಿನಲ್ಲಿ ಬಹಳಷ್...
ಬಂಟಾಯನ 2025 ಬಂಟೆರೆನ ಆಯನ = ಬಂಟಾಯನ, ಇದರ ಕನ್ನಡ ಅರ್ಥ ಬಂಟರ ಜಾತ್ರೆ, ತಾರೀಕು 21-11-2025 ರಂದು, ಕುವೈಟ್ ಅಬ್ಬಾಸಿಯದಲ್ಲಿ ಬಹಳ ಅದ್ಧುರಿಯಾಗಿ ನಡೆದ ಬಂಟಾಯನ ಹೊಸ ಮೆರುಗನ್ನು ಪಡೆದುಕೊಂಡಿತು. ಹೌದು, ಕುವೈಟ್ ನಲ್ಲಿ ಹಲವಾರು ಸಂಘಟನೆಗಳಂತೆ ಭಂಟರ ಕೂಟವೂ ಒಂದು, ತನ್ನ ಸಮಾಜದ ಏಳಿಗೆಗೆ ತನ್ನದೇ ಶೈಲಿಯಲ್ಲಿ ಪ್ರೋತ್ಸಾಹ, ಗೌರವ, ವೇದಿಕೆ ಶೃಷ್ಟಿ ಮಾಡಿ ಸಮಾಜದಲ್ಲಿ ಇನ್ನಷ್ಟು ಹೊಸ ಮುಖವನ್ನು ಪರಿಚಯ ಮಾಡುತ್ತ, ಬಂಟರ ಅಡಿಪಾಯವನ್ನು ಗಟ್ಟಿಗೊಳಿಸಿ ಇನ್ನುಳಿದವರಿಗೂ ಮಾದರಿಯಾಗಿ ಇರುತ್ತಿರುವುದು ಇತಿಹಾಸದಿಂದಲೇ ತಿಳಿದಿರುತ್ತೇವೆ. ಅದರಂತೆ ನಿನ್ನೆ ನಡೆದ ಬಂಟಾಯನ ಬಹಳಷ್ಟು ಅಚ್ಚುಕಟ್ಟಾಗಿ ನಡೆಯಿತು ಎಲ್ಲಾ ಪ್ರೇಕ್ಷಕರ ಮನಸೆಳೆಯಿತು, ಹೌದು ನಾವು ಬಂಟರು ಯಾವುದಕ್ಕೂ ಕಮ್ಮಿ ಇಲ್ಲ ಬಯಸಿದರೆ ಕನಸನ್ನು ನನಸು ಮಾಡುತ್ತೇವೆ ಎಂಬ ಸೂಚನೆಯನ್ನು ನೀಡಿದಂತಾಗಿದೆ. ಸಾಮಾನ್ಯವಾಗಿ ಕುವೈತ್ ನ ಹೆಚ್ಚಿನ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಳಗಿರುವ ಬಂಟರು, ತನ್ನ ಸಮಾಜದ ಹೆಗ್ಗಳಿಕೆಯನ್ನು ಹೆಚ್ಚಿಸಲು ಪ್ರತ್ಯೇಕ ವೇದಿಕೆಯನ್ನು ಮಾಡಿ, ಸಮಾಜ ಬಾಂಧವರನ್ನು ಕರೆದು ಗೌರವ ನೀಡಿ ಸನ್ಮಾನ ಮಾಡಿ ಮುಂದಿನ ಪೀಳಿಗೆಗೂ ಮಾದರಿಯಾಗುತ್ತಿದ್ದಾರೆ. ಇಲ್ಲಿ ಎರಡು ವರುಷದ ಮಗುವಿನಿಂದ ಹಿಡಿದು ಹಿರಿಯ ವಯಸ್ಕರವರೆಗೂ ವೇದಿಕೆಯಲ್ಲಿ ತನ್ನ ಚಾಕಚಕ್ಯತೆಯನ್ನು ತೋರಿಸಿ ನೆರೆದವರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ...
ಬದುಕೊಂದು ಹೋರಾಟವೇ ಆದರೆ ಇದರ ನಡುವೆ ನಮ್ಮ ಜೀವನದಲ್ಲಿ ಹಲವು ಸಂಧರ್ಭಗಳು ನ್ಯಾಯಕ್ಕಾಗಿ ಹೋರಾಟ, ಜೀವನಕ್ಕಾಗಿ ಹೋರಾಟ, ಯಶಸ್ಸಿಗಾಗಿ ಹೋರಾಟ ಮತ್ತು ಕೆಲವರು ಹೋರಾಡುವವರನ್ನು ಧಮನಿಸಲು ಮಾಡುವ ಕಪಟ ಹೋರಾಟಗಳು ನಡೆಯುತ್ತಿರುತ್ತವೆ. ಬ್ರಿಟಿಷರು ನಮ್ಮ ದೇಶವನ್ನು ಆಳುತಿದ್ದ ಸಂಧರ್ಭದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ತಮ್ಮ ಜೀವನವನ್ನು/ ಜೀವವನ್ನು ಮುಡಿಪಾಗಿಸಿ ಇಂದಿಗೂ ನಾವೆಲ್ಲರೂ ಅವರನ್ನು ಸ್ಮರಿಸುತ್ತ ಸ್ವಾತಂತ್ರ್ಯ ಆಚರಿಸುತ್ತೇವೆ, ಸಿಹಿ ತಿಂಡಿ ಹಂಚುತ್ತೇವೆ, ಒಂದಷ್ಟು ಭಾಷಣಗಳನ್ನು ಮಾಡುತ್ತೇವೆ, ಆದರೂ ಹೋರಾಟ ಮಾಡಿ ಮಡಿದ ಜನರನ್ನು ಬಿಡದೆ ಕೀಳು ರಾಜಕೀಯ ಕೂಡ ಮಾಡುತ್ತಿರುತ್ತೇವೆ. ಮತ್ತು ಪ್ರಸ್ತುತ ಸ್ಥಿತಿಗೆ ಅನುಸಾರವಾಗಿ ಬಾಯಿಗೆ ಬಂದ ಹಾಗೆ ಮಾತನಾಡುವ ಅನೇಕ ನಾಯಕರುಗಳನ್ನು ನಾವು ನೋಡುತ್ತಲೇ ಇದ್ದೇವೆ. ಹೋರಾಟದ ಹಾದಿಯಲ್ಲಿ ಒಂದಷ್ಟು ಜನರು ತನ್ನ ಜೇಬು ತುಂಬಿಸಿಕೊಳ್ಳಲು ಪ್ರಯತ್ನಿಸುತ್ತ ಕಣ್ಣೆದುರು ಸತ್ಯ ಕಾಣುತಿದ್ದರೂ ಸುಳ್ಳನ್ನು ಸೃಷ್ಟಿಮಾಡಿ ಹೋರಾಟದ ಚಿತ್ರಣವನ್ನು ಬದಲಿಸಲು ಪ್ರಯತ್ನಪಡುತ್ತಾರೆ. ಇಲ್ಲಿ ಅವರ ಸ್ವಾರ್ಥ, ಕೆಟ್ಟ ವರ್ತನೆ, ಅಹಂಕಾರ, ದಬ್ಬಾಳಿಕೆ, ಗೂಂಡಾಗಿರಿ, ಶೋಷಣೆ, ಗದರಿಸುವಿಕೆಯ ಅಂಶಗಳು ಮೇಲೆದ್ದು ಕಾಣುತ್ತವೆ. ಸಾಮಾನ್ಯವಾಗಿ, ಸುಳ್ಳನ್ನು ಶೋಷಣೆಯನ್ನು ಗದರಿಕೆ, ಮತ್ತು ಅನೇಕ ಮಾನಸಿಕ ಹಿ...
Comments
Post a Comment