ದಣಿವು ತಿಳಿಯದು
ಮನವು ಕೇಳದು
ಹೃದಯ ಬಡಿತವೇ
ಜ್ಞಾಪಿಸುತಿದೆ
ಒಂದು ಕವನವಿಲ್ಲದೆ
ಈ ಜೀವ ವಿಶ್ರಮಿಸದು,
ಹಸಿವು ತಿಳಿಯದು
ಏದುಸಿರು ಬಿಡುತಲೇ
ಹೊಸ ಜೀವನ ಕವನ
ಬರೆಯುವಾಸೆ
ಎಂದೂ ನಿಲ್ಲದು
ಎನ್ನ ಪ್ರಪಂಚವಿದು
✍️ಮಾಧವ ಅಂಜಾರು 🌹
✍️Madhav. K. Anjar ನನ್ನ ಹೃದಯ ಹಗುರಗೊಳಿಸಲಷ್ಟೇ..... ನೋವನ್ನು ಮರೆಸಿ ನನ್ನನ್ನು ನಾನು ಉಳಿಸುತ್ತ ಮಗುವಿನ ಅಗಲುವಿಕೆಯ ಸಾಂತ್ವನ ಬಿಟ್ಟು ಮತ್ತೇನು ಸಾಧ್ಯ ಭಗವಂತ 🙏🏿ಕ್ಷಮಿಸು. (ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ! ನೀವೆಲ್ಲರೂ ಕ್ಷೇಮವಾಗಿರಿ, ದೇವರು ನನ್ನನ್ನು ಬಹಳವಾಗಿ ಇಷ್ಟಪಟ್ಟ ನನಗೆ ಆತನ ಪಾದ ಸೇರಲು ಅವಕಾಶ ಕೊಡಿ.... ನಾನೆಲ್ಲಿದ್ದರೂ ನಿಮ್ಮೊಳಗಿರುವೆ, ಬೇಸರ ಬೇಡ, ನನ್ನ ಅಪ್ಪ ಅಮ್ಮನ ಹೃದಯದಲ್ಲಿ ಹಾಯಾಗಿರುವೆ, ಅವರು ತಂದು ಕೊಟ್ಟ ಪ್ರತೀ ಉಡುಗೊರೆ, ಎಲ್ಲವೂ ನನಗೆ ತುಂಬಾ ಖುಷಿ ಕೊಟ್ಟಿದೆ, ಆದರೇನು ಮಾಡಲಿ ದೇವರು ಸುಮಾರು ತಿಂಗಳ ಹಿಂದೆಯೇ ಬರಹೇಳುತಿದ್ದ, ಬರಲಾರೆ ಎಂದು ಹೇಳಿದರೂ ಕೇಳಲಿಲ್ಲ ಕರೆದುಬಿಟ್ಟ. ಆ ಪುಟ್ಟ ಹೆಜ್ಜೆಗಳನ್ನೀಡುತ್ತ, ಅಂಗಳದಲ್ಲಿ ಅಣ್ಣ ತಮ್ಮ ತಂಗಿಯ ಜೊತೆಯಾಗಿ ಕಣ್ಣಮುಚ್ಚಾಲೆ, ಆಡಿದ ನೆನಪುಗಳು, ಅಪ್ಪ ಅಮ್ಮ ಗೆಳೆಯ ಗೆಳತಿಯರೊಂದಿಗೆ ಆಟವಾಡಿ ಸುಸ್ತಾಗಿ ರಾತ್ರಿ ಕನಸಲ್ಲೂ ನನ್ನ ಪ್ರೀತಿಯ ಎಲ್ಲರನ್ನು ನೋಡುತಿದ್ದೆ, ನಿಮ್ಮೆಲರ ನಗು ಆಶೀರ್ವಾದ ಚಿಕ್ಕ ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿಯಿತು. ನಾನೇನು ತೊಂದರೆ ಮಾಡಿದ್ದರೂ ಕ್ಷಮಿಸಿ...... ನನಗೆ ಕೊನೆಯ ಕ್ಷಣದಲ್ಲಿ ನೋವನ್ನು ತಡೆಯುವ ಶಕ್ತಿ ಆ
✍️Madhav. K. Anjar (ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ. ಅಂತರಾಷ್ಟ್ರೀಯ ಮಟ್ಟದಲ್ಲಿ ದನಿಯಾಗತೊಡಗಿದ ಸೌಜನ್ಯ ಪರ ನ್ಯಾಯ ಹೋರಾಟ. ಈ ಹಿಂದಿನ ಲೇಖನದಂತೆ ಕಲೆಯೊಂದು ಶಕ್ತಿ, ವಿವಿಧ ಕಲೆ ವಿವಿಧ ರೂಪದಲ್ಲಿ ಜನರನ್ನು ತಲುಪುತ್ತದೆ ಮತ್ತು ಜನರನ್ನು ರಂಜಿಸಿ, ಉತ್ತಮವಾದ ಸಂದೇಶವನ್ನು ಮನಸ್ಸಿಗೆ ಮುಟ್ಟುವಂತೆ ಮಾಡುತ್ತದೆ. ಒಂದು ಸುಂದರವಾದ ಕುಟುಂಬದಲ್ಲಿನ ಪ್ರೀತಿ, ಪ್ರೇಮ ಮತ್ತು ಮೊಬೈಲ್ ಬಳಕೆಯೊಂದಿಗೆ ಭಗ್ನ ಪ್ರೇಮಿಯ ಬಲೆಯಲ್ಲಿ ಸಿಕ್ಕಿ ಒಂದು ದುರಂತ ಅಂತ್ಯ ಕಂಡ ಹೆಣ್ಣು. ಹೌದು ಇದೆಷ್ಟೋ ಮನೆಯಲ್ಲಿ ನಡೆಯುವ ಘಟನೆಗಳು, ಕೆಲವೊಂದು ಪ್ರೇಮ ಪ್ರಕರಣಗಳು ಸುಖ ಅಂತ್ಯ ಕಂಡರೂ, ಹಲವಾರು ಪ್ರೇಮ ಪ್ರಕರಣಗಳು ದುರಂತ ಅಂತ್ಯ ಕಂಡಿರೋ ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಿದೆ. ಪ್ರೀತಿಯ ಅಣ್ಣನ ಒಂದು ಮೊಬೈಲ್ ಕೊಡುಗೆ ತಂಗಿಯ ಜೀವನದಲ್ಲಿ ಬದಲಾವಣೆ, ಓದು ಬರಹ ಬದಿಗಿಟ್ಟು ಅಪರಿಚಿತನ ಪ್ರೇಮದ ಬಲೆಗೆ ಸಿಕ್ಕಿ ಕೊನೆಗೆ ಪ್ರೇಮಿಯಿಂದ ಮತ್ತು ಅವನ ಸ್ನೇಹಿತರಿಂದ ಅತ್ಯಾಚಾರ ಮತ್ತು ಹತ್ಯೆಯಾದ ಮುಗ್ದ
(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವರು ಕನಸಾಗಿ ತೆಗೆದುಕೊಂಡರೆ ಇನ್ನು ಕೆಲವರು ಹವ್ಯಾಸವಾಗಿ ತೆಗೆದುಕೊಂಡು ಬರ ಬರುತ್ತಾ ಬಹಳಷ್ಟು ಎತ್ತರಕ್ಕೆ ಬೆಳೆದು ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ. ಒಂದು ಕಡೆಯಲ್ಲಿ ಆತ್ಮ ತೃಪ್ತಿ,ಒಂದು ಕಡೆಯಲ್ಲಿ ಸಾಧನೆಯ ಮೆಟ್ಟಿಲು ಹತ್ತುವ ಖುಷಿ. ಇವೆರಡನ್ನು ಗಳಿಸಲು ಪ್ರತಿಯೊಬ್ಬ ಕಲಾಸಕ್ತಿಯ ವ್ಯಕ್ತಿ ತನ್ನ ಸಮಯವನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ ಅನ್ನುವುದನ್ನು ಯೋಚಿಸಲು ಸಾಧ್ಯವಿಲ್ಲ. ನಿಮಗೆ ಸಮಯ ಎಲ್ಲಿ ಸಿಗುತ್ತದೆ? ನೀವು ಇದನ್ನೆಲ್ಲಾ ಹೇಗೆ ಮಾಡುತ್ತೀರಿ ಎಂದು ಕೇಳುವ ಕೆಲವು ಜನರು ಪ್ರತ್ಯಕ್ಷ ಮತ್ತು ಪ್ರೋತ್ಸಾಹ ಕೊಟ್ಟು ಕಲೆಯನ್ನು ಮತ್ತು ಕಲಾಗಾರರನ್ನು ಬೆಳೆಸುತ್ತಾರೆ ಮತ್ತು ಉಳಿಸುತ್ತಾರೆ. ಕುವೈಟ್ ಎಂಬ ಮರುಭೂಮಿಯಲ್ಲಿ, ಕೇವಲ ಕೆಲವೇ ಪಟ್ಟಣ, ಅದರೊಳಗೆ ಹುದುಗಿರುವ ಕಲೆಗಾಗಾರರು, ಹಲವಾರು ಸಂಘಟನೆಗಳು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಡುವ ಖುಷಿ ಬಹಳಷ್ಟು ಇದೆ. ಕಥೆ, ನಿರೂಪಣೆ, ಬರಹ, ನೃತ್ಯ, ನಟನೆ, ಚಿತ್ರ, ಇಂತಹ ಅನೇಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ನೆಮ್ಮದಿಗೆ ಕಾರಣರಾಗುವ ಈ ಪ್ರತೀ ಕಲಾವಿದರಿಗೆ ನಾವು ತಲೆ
Comments
Post a Comment