ಕಿರೀಟ (ಕವನ -101)


ಕಿರೀಟ ಹಾಕಿಕೊಳ್ಳಲಲು
ಬಯಸುತ್ತಿರುವವರು
ಕಿರೀಟಕ್ಕಾಗಿ ಹುಡುಕುವರು
ಸಿಗದೇ ಇರುವಾಗ
ಕಿರೀಟ ಖರೀದಿಸಿ
ತಾನೇ  ಹಾಕಿಕೊಳ್ಳುವರು,
ಮತ್ತೊಬ್ಬರಿಗೆ ಕಿರೀಟ 
ತೊಡಿಸಲು ಇಚ್ಛಿಸುವವರು
ಮನದೊಳಗೆ ಖುಷಿಪಡುವರು
ಕೊಟ್ಟ ಕಿರೀಟ ಬೀಳದಿರಲೆಂದು
ಆಶಿಸುತ್ತಿರುವರು
ಕಿರೀಟ ಗಟ್ಟಿಯಾಗಿ ಕಟ್ಟುವರು,
ಕೆಲವರು ಕೊಡುವ ಕಿರೀಟ
ಪ್ರೀತಿಯಿಂದ ಇದ್ದಿರಬಹುದು
ಕೆಲವರು ತೊಡಿಸುವ ಕಿರೀಟ
ನಿಮ್ಮನ್ನು ನಾಚಿಗೆಗೆಡಿಸಬಹುದು
ಕಿರೀಟ ಸಿಕ್ಕರೆ ಗೌರವ
ಕಿರೀಟ ಬಿದ್ದರೆ ಅಗೌರವ
✍️ಮಾಧವ ನಾಯ್ಕ್ ಅಂಜಾರು 🙏

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ