Posts

Showing posts from April, 2022

(ಲೇಖನ -52)ಅಪ್ಪಾ...... ನೀನು ಹಾಕಿರುವ ಬಟ್ಟೆ ನನ್ನ ಗೌರವಕ್ಕೆ ಧಕ್ಕೆ ತರುತ್ತದೆ, ನೀನು ನನ್ನ ಜೊತೆಯಲ್ಲಿರಬೇಡ, ನಿನಗಾಗಿ ಅನಾಥಶ್ರಮವಿದೆ

Image
ಅಪ್ಪಾ...... ನೀನು ಹಾಕಿರುವ ಬಟ್ಟೆ ನನ್ನ ಗೌರವಕ್ಕೆ ಧಕ್ಕೆ ತರುತ್ತದೆ, ನೀನು ನನ್ನ ಜೊತೆಯಲ್ಲಿರಬೇಡ, ನಿನಗಾಗಿ ಅನಾಥಶ್ರಮವಿದೆ.ಹೌದು ಈ ಮಾತು ಕೇಳಿದಾಗ ಹೃದಯ ದಂಗಾಗುತ್ತದೆ, ಮನಸು ಕುಗ್ಗಿಬಿಡುತ್ತದೆ, ಮಕ್ಕಳೇ ಬೇಡವೆನಿಸುತ್ತದೆ. ಈ ಲೋಕದಲ್ಲಿ ಇಂತಹ ಘಟನೆಗಳನ್ನು ಅದೆಷ್ಟು  ತಂದೆಯಂದಿರು ಅನುಭವಿಸುತ್ತಿದ್ದಾರೆ ಅಲ್ಲವೇ!           ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ, ತಾನು ತಿನ್ನದೆ ತನ್ನ ಮಕ್ಕಳಿಗಾಗಿ, ಸಂಸಾರಕ್ಕಾಗಿ ಜೀವನ ಮಾಡುವ ಜೀವ ಎಂದರೆ ಅಪ್ಪ, ಅಪ್ಪನೆಂದರೆ ಶಕ್ತಿ, ಅಪ್ಪನೆಂದರೆ ಹುಮ್ಮಸ್ಸು, ಅಪ್ಪನೆಂದರೆ ಧೈರ್ಯ, ಅಪ್ಪನೆಂದರೆ ಮೌಲ್ಯ, ಅಪ್ಪನೆಂದರೆ ಪ್ರಪಂಚ, ಅಪ್ಪನೆಂದರೆ ಸರ್ವಸ್ವ. ಹುಟ್ಟಿರುವ ಮಕ್ಕಳಿಗೆ ಅಪ್ಪನಿಲ್ಲದೇ ಇದ್ದರೆ ಅವರ ಜೀವನ ಒಂದಲ್ಲ ಒಂದು ರೀತಿಯಲ್ಲಿ ಬಹಳಷ್ಟು ಕಷ್ಟಪಟ್ಟು ಬದುಕಿರುತ್ತಾರೆ. ಅಪ್ಪನಿದ್ದರೆ ಏನೆಲ್ಲಾ ಮಾಡುತಿದ್ದೆ ಎಂಬ ಕನಸನ್ನು ಕಾಣುತ್ತ ತನ್ನ ಕಣ್ಣಲ್ಲಿ ನೀರು ಸುರಿಸುವ ಮಕ್ಕಳನ್ನು ನಾವುಗಳು ನೋಡಿರಬಹುದು. ಹಾಗೆಯೇ ಮಕ್ಕಳು ದೊಡ್ಡವರಾದ ಮೇಲೆ ಅಪ್ಪನ ಮೇಲೆ ಎಗರಾಡಿ ಅಪ್ಪನ ಕಣ್ಣಲ್ಲಿ ನೀರು ಬರುವಂತೆ ಮಾಡುವ ಮಕ್ಕಳು.         ಅಪ್ಪಾಜಿ ನನಗೆ, ಸೈಕಲ್ ಬೇಕು, ಅಪ್ಪಾಜಿ ನನಗೆ ಕಾರು ಬೇಕು, ನನಗೆ ಆಟವಾಡುವ ವಸ್ತುಗಳು ಬೇಕು, ನನಗೆ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗು, ಹೆಗಲ ಮೇಲೆ ಕುಳ್ಳಿರಿಸು, ಅಪ್ಪ ನನ್ನ ಜೊತೆ ಆಟವಾಡು ಇಂತಹ ಅನೇಕ ಬೇಕುಗಳಿಗೆ ಆಯ್ತು ಮಗೂ ಎನ್

(ಲೇಖನ -51)ನಿನ್ನ ಪ್ರೀತಿಸುವೆ ಸುಗುಣ, ಎನ್ನ ಬಾಳಿನೊಳು ನಿನ್ನ ಆಗಮನ ಎಂದೆಂದಿಗೂ ಕಾಪಾಡುತ್ತಿದೆ ಸುಗುಣ

Image
ನಿನ್ನ ಪ್ರೀತಿಸುವೆ ಸುಗುಣ, ಎನ್ನ ಬಾಳಿನೊಳು ನಿನ್ನ ಆಗಮನ ಎಂದೆಂದಿಗೂ ಕಾಪಾಡುತ್ತಿದೆ ಸುಗುಣ. ಯಾರೇನು ಹೇಳಿದರೂ ನನ್ನಲಿ ಸೇರಿಕೊಂಡಿರುವ ಸುಗುಣ ಕೆಲವೊಮ್ಮೆ ನನ್ನನ್ನು ಕಾಪಾಡಿಕೊಳ್ಳಲು ಶ್ರಮಿಸುತಿದ್ದರೂ ಮತ್ತೆ ಮತ್ತೆ ಬಂದು ಸಂತಸದ ದಾರಿ ತೋರಿಸಲು ಶ್ರಮಿಸುತ್ತಿರುವೆ ನೀ ಸುಗುಣ. ದುರ್ಗುಣ ಬಂದೆರಗಿದರೂ ಸುಗುಣ ಮೇಲೆದ್ದು ನಿಲ್ಲುತ್ತ , ಪ್ರಪಂಚದ ಬಣ್ಣ ಬಣ್ಣದ ಜನರೊಂದಿಗೆ ಸೇರಿ ಬದುಕಲು ನೀನೇ ಕಾರಣ ಸುಗುಣ. ಆಸೆಗಳ ಬೆನ್ನಟ್ಟುವ ಪರಿಪಾಠ, ದುರಾಸೆಗೆ ಒಳಗಾಗಿ ಅನ್ಯರಿಗೆ ತೊಂದರೆಕೊಡದೆ ಬದುಕುವ ರೀತಿ ನೀತಿಯನ್ನು ನೀನು ಕಲಿಸಿಕೊಟ್ಟಿರುವೆ ನನ್ನ ಅಂತರಾಳದ ಸುಗುಣ.        ನಿನ್ನ ಗೆಳೆಯ, ಗೆಳತಿಯ ಕಣ್ಣಂಚಲಿ ನೀರ ಹನಿ ನೋಡಿ ಮರುಗಲು ನೀನೇ ಕಾರಣ, ಅವರಿವರ ಸಮಸ್ಯೆಗಳ ಬೆನ್ನಹತ್ತಿ ಕೈ ಹಿಡಿದು ಸಹಕರಿಸಲು ಪ್ರೇರಣೆ ನೀನೇ ಸುಗುಣ. ಎನ್ನ ಮನಸು, ಹೃದಯ ನೋವಲಿ ಮುಳುಗಿಹೋಗಿದ್ದರೂ ಅದನೆಲ್ಲವ ಮೀರಿ ಜೊತೆಯಾಗಿ ಬಂದು ನಿಲ್ಲುವ ನನ್ನೊಳಗಿನ ಸುಗುಣ, ಕೋಪಗೊಂಡಾಗ ಆಡಿದ ಮಾತನ್ನೆಲ್ಲ ಮರೆತು ಮತ್ತೆ ಮಾತನಾಡಲು ಸಹಕರಿಸಿ, ಧೈರ್ಯವಾಗಿರಲು ಹೇಳುವ ನನ್ನ ಅಂತರಾಳದ ಸುಗುಣ. ಮೋಸ ಹೋದಾಗ, ಹೀಯಾಳಿಕೆಗೆ ಗುರಿಯಾದಾಗ, ಗೌರವಕ್ಕೆ ಧಕ್ಕೆಯಾದಾಗ ಮತ್ತೆ ಮತ್ತೆ ನನ್ನನ್ನು ಸರಿದಾರಿಗೆ ತರುವ ನೀನು, ನಿನ್ನನ್ನು ಹೇಗೆ ಕೊಂಡಾಡಲಿ ಹೇಳು.?       ದುರ್ಗುಣ  ಹೊಂದಿರುವ ಜನರೊಂದಿಗೆ ನಿನ್ನ ಬಾಳು ಕಷ್ಟವಾದರೂ, ನನ್ನ ಹೆಜ್ಜೆಯನು ಮುಂದಿಟ್ಟು ನಡೆಯಲು ಕಾರಣ ನೀನ

ಅಲ್ಲಲ್ಲಿ ಹುಡುಕುತಿರುವೆ(ಕವನ -150)

ಅಲ್ಲಲ್ಲಿ ಹುಡುಕುತಿರುವೆ ಕಣ್ಣಿಗೆ ಕಾಣದ ದೇವರ ಎಲ್ಲೆಲ್ಲೂ ನಮಿಸುತ್ತಿರುವೆ ಕಾಣೋಕೆ ಸಿಗದ ದೇವರ, ಶಿಲೆಯಾಗಿ ನೆಲೆಯಾಗಿ ಅಳಿಯದೇ ಸ್ಥಿರವಾಗಿ ಕಾಣಸಿಗುವ ರೂಪದಲಿ ಬೇಡುತಿರುವೆ ವರ ಗತಿನೀನೆ ಈಶ್ವರ ಜೊತೆಯಾಗಿರೆಂದಿಗೂ ಎನ್ನ ಭಕ್ತಿ ನಿನಗೆ ಸ್ಥಿರ, ನಿನ್ನ ನಂಬದವರ ಬಳಿ ನನ್ನ ಬಿನ್ನಹವೇಕೆ? ನೀ ಬರೀ ಕಲ್ಲೆಂದು ದೂಷಿಸುವವರ ಬಳಿ ಎನ್ನ ಒಯ್ಯುವಿಯೇಕೆ ಹಣ್ಣಾಗಿ ಹೋಗೋ ಜೀವಕೆ ಹೊನ್ನ ಸಿರಿ ಏತಕೆ ಎನ್ನ ನಿನ್ನೊಳಾಗಿಸು ಶಿವನೇ             ✍️ಮಾಧವ ನಾಯ್ಕ್ ಅಂಜಾರು 🌹

ಬೆಂಬಲ(ಕವನ -146)

ಬೆಂಬಲ ****** ಕೊಡುವರು ಬೆಂಬಲ ಮಾಡುವ ಸತ್ಕಾರ್ಯಕೆ ಆದ್ರೆ ಲಬಿಸೊಲ್ಲ ಸಂಬಳ, ಅತಿಬುದ್ದಿವಂತರು ಕೊಡಬಹುದು ಬೆಂಬಲ ಮಾಡೋ ದುಷ್ಟಕೆಲ್ಸಕೆ ಗಳಿಸುತ್ತಿರಬಹುದು ಗಿಂಬಳ ,  ನಿಸ್ವಾರ್ಥ ಸೇವೆಯ ಬದುಕು ಆಗೋದಿಲ್ಲ ಬಿರುಕು ಸ್ವಾರ್ಥಸೇವೆಯ ಜನರ ಜೀವನವೇ ಒಡಕು ಮಾಡುವದೇ ಕೆಡುಕು, ದೇವ ಮಾನವರಿದ್ದರೂ ಹೊಡೆಯುವರು ದಿನಕೂ,         ✍️ಮಾಧವ ಅಂಜಾರು 🌹

ಬಿಂದು(ಕವನ -144)

ಹಣೆಯಲೊಂದು ಸಿಂಧೂರ ಬಿಂದು ಹುಣ್ಣಿಮೆಯ ಚಂದಿರ ನಿನ ಮೊಗವಿಂದು ಕಣ್ಣಲ್ಲಿ ಕಾಣೋ ನೂರಾರು ಬಯಕೆ ಮುಗ್ದತೆಯ ಮುನ್ನುಡಿ ಇದೆ ನಿನ್ನ ಜೊತೆಗೆ ಬಾ ಎನ್ನ ಸನಿಹಕೆ ತೋರು ನೀ ನಗೆ ಸಿಹಿ ಮಾತಾಡುತಲೇ ಮುತ್ತು ಕೊಡು ಬಗೆ, ಮೂಡಿದೆ ಮನದಲಿ ಸಾವಿರಾರು ಆಸೆ ದೂರವೇಕೆ ನಿಂತಿರುವೆ ನಿನಗಾಗಿ ಕಾದಿರುವೆ ಹೃದಯದ ಮಾತನು ಕೇಳೋ ಬಯಕೆಯೆನಗೆ ಮನಸಿನ ಪ್ರೀತಿಯನು ಹಂಚಿಬಿಡುವೆ ನಿನಗೆ ಗೆಳತಿಯೇ ಬಾ ಬೇಗ ನಿನ ದಾರಿಗೆ ಮಲ್ಲಿಗೆ ✍️ಮಾಧವ ನಾಯ್ಕ್ ಅಂಜಾರು 🌹

ಸಜ್ಜನರಿರುವರು(ಕವನ -145)

ಸಜ್ಜನರಿರುವರು ಅಲ್ಲಲ್ಲಿ ನಿಸ್ವಾರ್ಥ ಸೇವೆಯ ಮಾಡುತಿರುವರು ನಗುಮೊಗದಲಿ , ಜಾತಿ ಮರೆತು ಧರ್ಮ ಅರಿತು ಎಲ್ಲರೊಳು ಬೆರೆತು, ಸಜ್ಜನಿಕೆಯ ಜನ ಗೆಲುವ ಕಾಣುವರು ಅವರ ಜೀವನದಲಿ ಇನ್ನಷ್ಟು ಹುಟ್ಟಿಬರಲಿ ಈ ಜಗದಲಿ ನಾ ಅಜ್ಜನಾಗುವ ಮೊದಲು ತವಕ ಅವರೊಂದಿಗಿರಲು ✍️ಮಾಧವ ನಾಯ್ಕ್ ಅಂಜಾರು 🌹

ದಣಿವು(ಕವನ -143)

ದಣಿವು ತಿಳಿಯದು ಮನವು ಕೇಳದು ಹೃದಯ ಬಡಿತವೇ ಜ್ಞಾಪಿಸುತಿದೆ ಒಂದು ಕವನವಿಲ್ಲದೆ ಈ ಜೀವ ವಿಶ್ರಮಿಸದು, ಹಸಿವು ತಿಳಿಯದು ಏದುಸಿರು ಬಿಡುತಲೇ ಹೊಸ ಜೀವನ ಕವನ ಬರೆಯುವಾಸೆ ಎಂದೂ ನಿಲ್ಲದು ಎನ್ನ ಪ್ರಪಂಚವಿದು ✍️ಮಾಧವ ಅಂಜಾರು 🌹

ಸಹಾಯಕ್ಕಿರದವರು(ಕವನ -142)

ಬಿದ್ದಾಗ ಸಹಾಯಕ್ಕಿರದವರು ಎದ್ದಾಗ ಬೆನ್ನುತಟ್ಟುವರು ಬಿದ್ದಾಗ ಸಹಾಯಕ್ಕಿರುವವರು ಸದ್ದಿಲ್ಲದೇ ರಕ್ಷೆ ಕೊಡುವರು ಸಹಾಯದ ಅರಿವಿರದವರು ಉಪಕಾರಕ್ಕೆ ಇರರು ಪರೋಪಕಾರದ ಜನರು ಸುಖವಾಗಿ ಜೀವಿಸುವರು ! ✍️ಮಾಧವ ಅಂಜಾರು 🌹div dir="ltr" style="text-align: left;" trbidi="on">

ಕಪ್ಪು ಗೋಡೆಲಿ(ಕವನ -141)

ಕಪ್ಪು ಗೋಡೆಲಿ ಬಿಳಿ ಚುಕ್ಕೆಯನಿಟ್ಟರೆ ಎದ್ದುಕಾಣೋದು ನಿಜ ಬಿಳಿಗೋಡೆಲಿ ಕಪ್ಪು ಚುಕ್ಕೆಯನಿಟ್ಟರೆ ಎದ್ದುಕಾಣೋದು ಸಹಜ, ಕಪ್ಪು ಬಿಳಿ ಬಣ್ಣವನು ಬೆರೆಸಿದಾಗ ಕಪ್ಪು , ಬಿಳಿ ಬಣ್ಣವ ನುಂಗೋದು ನಿಜ ಕಪ್ಪು ಗೋಡೆಯಾದರೂ ಬಿಳಿ ಗೋಡೆಯಾದರೂ ಬರೆವ ಕವನಗಳು ಸ್ಪಷ್ಟವಾಗಿ ಕಾಣೋದು ನಿಜ ✍️ಮಾಧವ ಅಂಜಾರು 🌹div dir="ltr" style="text-align: left;" trbidi="on">

ಸವಿ ನೆನಪು(ಕವನ -140)

ಓದಿದ ಪಾಠವು ಮರೆತೋಯ್ತು ಬರೆದಿರೋ ದಿನಚರಿ ಕಳೆದೋಯ್ತು ಸವಿ ಸವಿ ನೆನಪು ಉಳಿದೋಯ್ತು  ಜೀವನ ಕವನವಾಗಿ ಬೆಳೆದಾಯ್ತು, ಅಪ್ಪನ ಮಾತು ನಿಜವಾಯ್ತು ಅಮ್ಮನ ಆರೈಕೆ ಕಣ್ಣ ತುಂಬಿಸಿತು ಬದುಕಿನ ಪುಟಗಳು ಬರಿದಾಯ್ತು ಹಾಕುತಿರೋ ಹೆಜ್ಜೆಯು ಭಾರವಾಯ್ತು ! ✍️ಮಾಧವ ಅಂಜಾರು 🌹

ಜೀವನ ಸಂತೆ(ಕವನ -139)

ಜೀವನ ಸಂತೆ ********** ಬದುಕ ಸಂತೆಯಲಿ ನನಗ್ಯಾಕೆ ಚಿಂತೆ ಇಂದಿಗೋ ನಾಳೆಗೋ ಖಚಿತದ ಚಿತೆ ಉಸಿರಿರುವ ತನಕ ನವ ಕೋಟಿ ಕಥೆ ಜೀವನಕ್ಕಿಲ್ಲ ಅರ್ಥ ಇಲ್ಲದಿರೆ ವ್ಯಥೆ, ನಂಬಿರೋ ದೇವರ ಹಾರೈಕೆಯು ಸಾಕೆನಗೆ ಎನ ಪುಟ್ಟ ಹೃದಯದ ಪ್ರೀತಿ ಮಾತು ಸವಿಯೆನಗೆ ನೊಂದರೂ, ನಕ್ಕರೂ ಈ ಜೀವನ ಸಂತೆ ಗಿಜಿಗುಡುವ ಗೂಡಂತೆ ನನಗ್ಯಾಕೆ ಚಿಂತೆ ✍️ಮಾಧವ ಅಂಜಾರು 🌹

ಸಮಾಜದ(ಕವನ -138)

ಜಾಗರೂಕರಾಗಿ ನಡೆದರೂ ಒಮ್ಮೊಮ್ಮೆ ಹೆಜ್ಜೆ ತಪ್ಪಿ ಗಲೀಜನ್ನು ತುಳಿಯೋದು ಕಾಲನ್ನು ತೊಳೆಯೋದು ಮೂಗನ್ನು ಮುಚ್ಚೋದು ನಿಜ, ಈ ಸಮಾಜದ ನಡುವಲಿ ಸಜ್ಜನರು ಅಳಿಯೋದು ಅಧರ್ಮ ಮೆರೆಯೋದು ಬಡವನ ತುಳಿಯೋದು ನಡೆಯುತ್ತಿರುವುದು ನಿಜ, ✍️ಮಾಧವ ಅಂಜಾರು 🌹

ನನ್ನ ಬಗ್ಗೆ(ಕವನ -136)

ನನ್ನ ಬಗ್ಗೆ ಹೇಳಬೇಕೆಂದಿದ್ದರೆ ನಾನಿಮ್ಮ ಜೊತೆಯಲ್ಲಿರುವಾಗಲೇ  ಹೇಳಿಬಿಡಿ, ನನ್ನನಿಷ್ಟು ಬಯ್ಯಬೇಕಿಂದಿದ್ದರೆ ನಾ ನಿಮ್ಮ ಬಳಿಯಿರುವಾಗಲೇ ಬೈದುಬಿಡಿ, ನನ್ನನೊಂದಷ್ಟು ಹೊಗಳಬೇಕಿದ್ದರೆ ನಿಮ್ಮ ಜೊತೆಯಲ್ಲಿರದಂತೆ ನೋಡಿಕೊಳ್ಳಿ ನನ್ನನ್ನು ದ್ವೇಷಿಸಬೇಕಿದ್ದರೆ ನಿಮ್ಮ ಉದ್ದೇಶವೇನೆಂದು ಅರಿತುಕೊಳ್ಳಿ ✍️ಮಾಧವ ಅಂಜಾರು 🌹

ನಾಳಿನ(ಕವನ -132)

ನಾಳಿನ ಬಾಳಿಗೆ ಇಂದು ನುಂಗೋರು ನಗೆ ನಾಳೆ ಕಾಣದೆ ಹೋದರೆ ಕಂಡ ಕನಸೆಲ್ಲ ಹೊಗೆ ಇನ್ನಾದರೂ ಇರಲಿ ಮುಖದಲಿ ಸ್ವಲ್ಪ ನಗೆ ನಾಳೆ ಇಲ್ಲವಾದರೆ ಜೀವವೇ ಹೊಗೆ,  ನಾಳಿನ ಪಾಲಿಗೆ ಇಂದು ನಾಟಕ ಬಗೆ ಬಗೆ ನೊಂದು ಬದುಕುತಿದ್ದರೆ ಮಾಯವಾಗೋದು ನಗೆ ಬಂದದ್ದು ಬರಲಿ ನಗುವಂತೂ ಇರಲಿ ನಾಳೆ ಕಾಣೋ ಜೀವಕೆ ಹೃದಯ ಮಿಡಿಯುತಿರಲಿ           ✍️ಮಾಧವ ಅಂಜಾರು 🌹

ಜೀವ ವೀಣೆ (ಕವನ -135)

ತಂತಿ ನುಡಿಸೋಕೆ ತಿಳಿಯದೆನಗೆ ಈ ಜೀವನ ಸಂತೆಲಿ ಡಂಗುರ ಸಾರೋಕೆ ಬರದು, ನನ್ನಲಿರೋ  ಪ್ರೇಮವ ನಟಿಸಿ ತೋರಿಸಲೂ ಬರದು ಪೊಳ್ಳು ಭರವಸೆ ಇರದು ನನ್ನ ಪ್ರೇಯಸಿ ನೀನು ನಿನ್ನಬಿಟ್ಟು ಈ ಜೀವವಿರದು,  ಜೀವ ವೀಣೆ ನುಡಿಸೇನು ಪ್ರಾಣವನ್ನೇ ಕೊಡುವೆನು ನಿಂತ ನೀರಾಗದೆ,  ಎಂದೂ ಹರಿವ ನದಿಯಂತಿರುವೆನು ಮೋಡದಿ  ಮಂಕಾಗದಿರು ನೀ ಈ   ಬಡಜೀವದುಸಿರು ಎನ ಹೆಸರ ಹೇಳುತಲೆ ನನ್ನುಸಿರು ಕಾಪಾಡುತಿರು,          ✍️ಮಾಧವ ಅಂಜಾರು 🌹   

ನನಸು(ಕವನ -131)

ಕನಸು - ನನಸು ********** ಭಾವನೆಗಳೊಂದಾದರೆ ಜೀವನವು ಸುಗಮ ದ್ವೇಷಗಳು ಅತಿಯಾದರೆ ದೇಹಗಳು ನಿರ್ಣಾಮ ಮನಸುಗಳು ಹತ್ತಿರವಾದರೆ ಕನಸುಗಳು ನನಸು ಹೃದಯಗಳೊಂದಾದರೆ ಹಸನಾಗೋದು ಬದುಕು,  ಬದುಕಿನಲಿ ಕರುಣೆಯಿರಲಿ ಸ್ನೇಹದಲಿ ಸತ್ಯವಿರಲಿ ಸಹಾಯದಲಿ ಪ್ರೀತಿಯಿರಲಿ ಕೋಪದಲಿ ಹಿಡಿತವಿರಲಿ ಲೋಪವು  ಸರಿಯಾಗಲಿ ಲೋಕಕೆ ಒಳಿತಾಗಲಿ ಅಧರ್ಮ ಅಳಿದು ಧರ್ಮ ಮೆರೆಯಲಿ        ✍️ಮಾಧವ ಅಂಜಾರು🌹

ಬಾಂಧವ್ಯ(ಕವನ -130)

ಸಹಾಯ ಮನೋಭಾವ ಒಬ್ಬೊಬ್ಬರಲ್ಲಿ ಒಂದೊಂದು ತರಹ ಹೆಸರು ಮಾಡೋಕೆ ಕೆಲವರದಾಗಿದ್ದರೆ ಉಸಿರು ಉಳಿಸೋಕೆ ಹಲವರದ್ದು ಹೆಸರ ಹೇಳದೆ ಸಹಾಯ ಮಾಡುವವರಿದ್ದರೆ ಯಾರೆಂದು ಹೇಳದೆಯೂ ಉಪಕರಿಸುವವರಿದ್ದಾರೆ,  ಏನಿದ್ದರೂ ಸಹಾಯವೇ ಬಿದ್ದವನ ಕೈ ಹಿಡಿಯೋದು ಹಲವರಿದ್ದಾರೆ ಅಂದರೆ ಸಹಾಯ ಮಾಡಿದವನಿಗೂ ನೋಡುವವ ಮೇಲೊಬ್ಬನಿದ್ದಾನೆ ಸಹಾಯ ಒಳಿತಿಗಾಗಿರಲಿ ಆರೈಕೆ ಸ್ಪಷ್ಟವಾಗಿರಲಿ ನಂಬಿದ ದೈವ ದೇವರು ನಿಮ್ಮನ್ನು ಹರಸಲಿ ಧರ್ಮವನ್ನು ರಕ್ಷಿಸಲಿ ಬಾಂಧವ್ಯ ಗಟ್ಟಿಯಾಗಿರಲಿ      ✍️ಮಾಧವ ಅಂಜಾರು 🌹

ಒಂದೆರಡು ಬೈಗುಳ(ಕವನ -129)

ಬೆನ್ನಹಿಂದೆ ತೆಗಳುವವರಿಗಿಂತ ಕಣ್ಣಮುಂದೆ ಮುನಿಯುವವರು ಲೇಸು ತೆಗಳಿಕೆ ವಿವಿಧವಿರಬಹುದು ನಾನು ಕೇಳಿರೋದಿಲ್ಲ ಅಂತಿಂತು ನಮಗೆ ಅರ್ಥವಾಗೋದಿಲ್ಲ ಅವರ ಚಟಕ್ಕೂ ಲಗಾಮಿರೋದಿಲ್ಲ, ಒಂದೆರಡು ಬೈಗುಳ ಎನ್ನನಿನಿತು ನೋಯಿಸಬಹುದು ಕೇಳಿದ ಮಾತುಗಳೆಲ್ಲ ಇನ್ನೊಂದು ಸಲ ವಿಮರ್ಶಿಸಬಹುದು ತಪ್ಪೆಂದು ತಿಳಿದರೆ ತಿದ್ದಿಕೊಳ್ಳಬಹುದು ಇಲ್ಲದಿದ್ದರೆ ಒಂದಷ್ಟು ದೂರ ಸರಿಯಬಹುದು !      ✍️ಮಾಧವ ಅಂಜಾರು 🌹

ಶಿಕ್ಷೆ ಕೊಡಬೇಡಿ (ಕವನ -128)

ಭವಿಷ್ಯವನ್ನು ಕೆಡಿಸುವವರ ಭವಿಷ್ಯವನ್ನು ನುಡಿಯುವವರ ಹತ್ತಿರ ಸುಳಿಯಬೇಡಿ ಭವಿಷ್ಯ ನಿರ್ಮಿಸುವವರ ಭವಿಷ್ಯ ಬೆಳೆಸುವವರ ಸಂಘವಂತೂ ಬಿಡಬೇಡಿ,  ಮಾಡೋ ವೃತ್ತಿಯಲ್ಲಿ ಮಾಡೋ ಸಹಾಯದಲ್ಲಿ ಮೋಸವನಂತೂ  ಮಾಡಬೇಡಿ ಹಿರಿಯ ವ್ಯಕ್ತಿಗಳಿಗೆ ವೃದ್ಧ ತಂದೆತಾಯಿಗೆ ಶಿಕ್ಷೆಯಂತೂ ನೀಡಬೇಡಿ         ✍️ಮಾಧವ ಅಂಜಾರು 🌹

ಮತ್ತೆ ಹುಟ್ಟಿಬರುವರು (ಕವನ -127)

ಒಬ್ಬನ ಉಳಿವಿಗಾಗಿ ಇಬ್ಬರು ಸೇರುವವರಿದ್ದರೆ ಒಬ್ಬನ ಅಳಿವಿಗಾಗಿ ಹತ್ತುಜನ ಸೇರುವವರಿದ್ದಾರೆ ! ಒಬ್ಬರ  ಉಸಿರಿಗಾಗಿ ಶ್ರಮಿಸುವವರಿದ್ದರೆ ಮತ್ತೊಬ್ಬರ ಉಸಿರನಿಲ್ಲಿಸಲು ಕಾಯುತ್ತಿರುವವರಿದ್ದಾರೆ ! ಉಳಿವಿಗಾಗಿ ಕೂಡುವವರು ಉಸಿರಿಗಾಗಿ ಸೇರುವವರು ಜೀವಬಿಟ್ಟರೂ ನಮ್ಮೊಳಗಿರುವರು ಮತ್ತೆ ಮತ್ತೆ ಹುಟ್ಟಿಬರುವರು !          ✍️ಮಾಧವ ಅಂಜಾರು🌹         

ನಿಮ್ಮ ಹೃದಯ (ಕವನ -126)

ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಪಡುವವರಿದ್ದಾರೆಂದರೆ ಮಾಡುತ್ತಿರುವ ಕೆಲಸ ಸರಿಯಾಗಿದೆಂದರ್ಥ, ನಿಮ್ಮನ್ನು ನೋಡಿ ಖುಷಿಪಡುವವರಿದ್ದಾರೆ ಅಂದರೆ ನೀವು ಅವರ ಹೃದಯ ತಲುಪಿದ್ದಿರೆಂದರ್ಥ,  ನೀವೇನು ಮಾಡಿದರು ಒಪ್ಪಿಕೊಳ್ಳೋದಿಲ್ಲವೆಂದರೆ ಅವರ ಮನಸೇ ಕಲ್ಮಷವೆಂದರ್ಥ,          ✍️ಮಾಧವ ನಾಯ್ಕ್ ಅಂಜಾರು

ಆಗರವೇ ನೀನು (ಕವನ -125)

ಆಗರವೇ ನೀನು *****-****** ನೀನೆಂದು ನನಗೆ ಗೊತ್ತು ನಾನೇನೆಂದು ನಿನಗೆ ಗೊತ್ತು ನಿನ್ನಲಿರುವ ಪ್ರೀತಿ ಆಗಿರಲೆನ್ನ  ಸಂಪತ್ತು ನನ್ನಲಿರುವ ಪ್ರೀತಿ ನಿನಗಾಗಿರಲಿ ಸ್ವತ್ತು, ಎನ್ನ ಮನದಾಸೆ ಹಲವು ನಿನ್ನೊಲವ ಗೀತೆ ಹೂವು ನೀ ನಿನ್ನ ಜೊತೆಗಿರಲು ಜೀವನ ಸವಿ ಜೇನು ಇಂದು ಜೊತೆಯಾಗಿ ನಾಳೆಯು  ಹಿತವಾಗಿ ಸಾಗುತಿರಲಿ ನಮ್ಮ ಬದುಕು, ಗೆಳೆಯನಾಗಿ ನೀನು ಗೆಳತಿಯಾಗಿಯೂ ನೀನು ಅಮ್ಮನಾಗಿಯೂ ನೀನು ಎಲ್ಲಾ ಸಂಭಂದಗಳ ಆಗರವೇ ನೀನು ನನ್ನ ನಿನ್ನ ಬಾಂಧವ್ಯ ಚಿರವಾಗಿರಲಲ್ಲ್ವೇನು !

ಹಾಡೋಣ ಜೊತೆಗೆ (ಕವನ -123)

ಹಾಡೋಣ ಜೊತೆಗೆ ************** ನಾನೇನ ಹೇಳಲಿ ನಾನೇನ ನುಡಿಯಲಿ ನಿನ್ನ ನೋಡಿದೊಡನೆ ನಗುಮೊಗವ  ಸವಿಯುತ ಮಗುವಾಗಿ ಬಿಟ್ಟೆನು ನನ್ನ ನಾನೇ ಮರೆತೆನು,  ಬಯಕೆ ಎನ್ನ ಮನದಲಿ ನಿನ್ನ ಜೊತೆಗೂಡಿ ಕಣ್ಣಾಮುಚ್ಚಾಲೆಯಾಡಿ ಹುಡುಕಿ ಓಡಾಡುವ ಸಮಯಕೆ ಕಾಯುತಿರುವೆ ಬಾರೆ ನಿನ್ನ ಕಾಲ್ಗೆಜ್ಜೆ ಸದ್ದನು ಕಿವಿಯೊಳಗೆ ಝಲ್ಲೆನ್ನಲು ಮೈ ಜುಮ್ಮೆನ್ನುತ್ತಿದೆ ಬೇಗನೆ  ಬಾ ಚೆಲುವೆ,  ನಿನ್ನೊಲವ ಗೀತೆಗೆ ನನ್ನೊಲವ ಪದಗಳು ಇಂಪಾದ ಸ್ವರದಲಿ ಹಾಡೋಣ ಜೊತೆಗೆ ಹಾಡಿ ಹಾಡಿ ಮನವ ಮುದಗೊಳಿಸೋಕೆ ✍️ಮಾಧವ ನಾಯ್ಕ್ ಅಂಜಾರು 🌹

ಗುದ್ದಾಟ ಬೇಡ (ಕವನ -121)

ಗುದ್ದಾಟ ಬೇಡ *********** ಪೆದ್ದರೊಂದಿಗೆ ಸೇರಿ ಪೆದ್ದರಂತೆ ಮಾಡಬೇಡ ಯುದ್ಧಮಾಡುವುದಿದ್ದರೆ ಗುದ್ದಾಟ ಮಾಡಬೇಡ ನ್ಯಾಯಯುತ ಯುದ್ಧ ಗೆದ್ದರೂ,  ಗೆಲ್ಲದಿದ್ದರೂ ಅನ್ಯಾಯದ ಯುದ್ಧಕೆ ಕೈಯಂತೂ ಹಾಕಬೇಡ !    ✍️ಮಾಧವ ನಾಯ್ಕ್ ಅಂಜಾರು 🌹

ತಮಾಷೆ ಇರಲಿ (ಕವನ -120)

ತಮಾಷೆ ಇರಲಿ *********** ಹೆಂಡತಿ ದಪ್ಪಗಿದ್ದರೆ ಗಂಡ ಚನ್ನಾಗಿಯೇ ಪೋಷಿಸುತ್ತಿದ್ದಾನೆ ಎಂದರ್ಥ,  ಗಂಡ ತೆಳ್ಳಗೆ ಇದ್ದಾನೆಂದರೆ ಚೆನ್ನಾಗಿ ಪಾತ್ರೆಗಳನು ತೊಳೆಯುತಿದ್ದಾನೆ ಎಂದರ್ಥ, ಗಂಡ ಹೆಂಡತಿ ಇಬ್ಬರೂ ತೆಳ್ಳಗಿದ್ದಾರೆಂದರೆ ಸರಿಯಾಗಿ ಊಟವೇ ಮಾಡುತ್ತಿಲ್ಲ ಎಂದರ್ಥ ಇಬ್ಬರೂ ದಪ್ಪಗಿದ್ದಾರೆ ಅಂದರೆ ಊಟಬಲ್ಲವರೆಂದರ್ಥ ! ಈ ಮೇಲಿನ ಕಾರಣಗಳು ಕೆಲವರಿಗೆ ಮಾತ್ರವೆಂದರ್ಥ ಓದಿ ತಲೆಬಿಸಿ ಮಾಡಿ ಕೋಪಿಸ್ಕೊಳ್ಬೇಡಿ ವ್ಯರ್ಥ ಬರೆವ  ಬರವಣಿಗೆಗೆ ತಮಾಷೆ ಇರಲೆಂದರ್ಥ ! ✍️ಮಾಧವ ನಾಯ್ಕ್ ಅಂಜಾರು 🌹

ಬಂಗಾರದ ಮನುಷ್ಯ (ಕವನ -118)

ಹೌದು, ಇನ್ನೂ ಇದ್ದಾರೆ ಈಗಲೂ ಇದ್ದಾರೆ ಬಂಗಾರದ ಮನುಷ್ಯರು ಅವರ ಮನಸ್ಸು ಮಾತ್ರ ಬಂಗಾರವಲ್ಲ ಅವರ ಮಾತು ಮಾತ್ರ ಬಂಗಾರವಲ್ಲ ಅವರ ಜೀವನಶೈಲಿ ಪುಟ್ಟ ಹೃದಯ ಪ್ರತಿ ಹೆಜ್ಜೆಯನಿಟ್ಟರೂ ಬಂಗಾರ, ಮನ ಸಿಂಗಾರ, ಇರಬೇಕು ಅಂಥವರು ಹುಟ್ಟಬೇಕು ಅಂತವರು ಬಾಳಿ ಬದುಕಬೇಕು ಬಂಗಾರದಂಥವರು ಮತ್ತವರ ಬದುಕು ಬಂಗಾರ ಮಾಡುವವರು ಜಯಿಸಬೇಕು ಅಂತವರೇ ಕಣ್ಣಿಗೆ ಕಂಡ ಬಂಗಾರದ ಮನುಷ್ಯರು ಇರಲಿ ನನ್ನ ಸುತ್ತಮುತ್ತಲು, ✍️ಮಾಧವ ಅಂಜಾರು 🌹

ಮಣ್ಣಾಗೋ ಜೀವ (ಕವನ -116)

ಮಣ್ಣಾಗೋ ಜೀವ ************* ಏನಿದ್ದರೇನು ಫಲ ಬದುಕಿ ಬಾಳಿದರೆ ಸಾಕೆನ್ನೋ ಹಂಬಲ, ರಾಶಿ ದುಡ್ಡಿನ ಕಂತೆಯ ಎನಗಿಲ್ಲ  ಚಿಂತೆ ಮಣ್ಣಾಗೋ ಜೀವಕೆ ಹೊನ್ನ ಕವಚವೇಕೆ?   ಪಡೆದುದೆಲ್ಲ ಕಳೆದು ಉಳಿಸಿದೆಲ್ಲ ತೊಳೆದು ನಶಿಸಿ ಹೋಗುವ ಪರಿ  ಕಾಣಸಿಗುವಾಗಲೇ ನರರು ಬದಲಾಗರು ಸ್ಥಿರವೆಂದು ನಂಬಿದವಗೆ ಜೀವನ ಮೌಲ್ಯ ತಿಳಿಯದು! ✍️ಮಾಧವ ನಾಯ್ಕ್ ಅಂಜಾರು🌹

ಪಟ್ಟಕ್ಕಾಗಿ ಬದುಕಲ್ಲ (ಕವನ -115)

ಪಟ್ಟಕ್ಕಾಗಿ ಬದುಕಲ್ಲ *************** ಅಂಗಳಗುಡಿಸಿ ಸುಸ್ತಾದವ ಮಂಗಳನುಡಿಯುತ್ತಲೂ ಧಣಿವಾಗತೊಡಗಿದ ತಿಂಗಳ ಭವಿಷ್ಯ ಹೇಳುತಿದ್ದವ ಬೆಳದಿಂಗಳ ಬೆಳಕಿಗೂ ಬೆವರತೊಡಗಿದ,  ಕಾಸಿದ್ದರೇನೇ ಜೀವನವೆಂದವ ಬಿಡಿಗಾಸು ಬಿಡದೆ ಉಸಿರ ಬಿಟ್ಟ ಹೆಸರಿದ್ದರೇನೇ ಗೌರವವೆಂದವ ಹೆಸರಿನ  ಹುಡುಕಾಟದಲಿ ತನ್ನ ಹೇಸರನ್ನೂ ಹೇಳದಷ್ಟು ಮೌನವಾಗಿ ಬಿಟ್ಟ ! ಪಟ್ಟಕ್ಕಾಗಿ ಬದುಕಲ್ಲ ಕೆಟ್ಟವನಾಗಿ ಇರೋದಲ್ಲ, ಸುಟ್ಟು ಬಿಡೋ ಮನುಜನ ಅಟ್ಟ ಹತ್ತಿಸಿಬಿಟ್ಟರೂ ಬೇಕು ಬೇಕೆಂಬ ಹಠದಲಿ ಇದ್ದುದನ್ನೆಲ್ಲಾ  ಕಳೆದುಬಿಟ್ಟ ! ✍️ಮಾಧವ ನಾಯ್ಕ್ ಅಂಜಾರು🌹    

ಅಪ್ಪನಾಗಿಹೆ (ಕವನ -113)

ಅಪ್ಪನಾಗಿಹೆ **************** ಅಪ್ಪ, ನಾ ಅಪ್ಪನಾಗಿಹೆ ಅಪ್ಪ ನಿನ್ನ ಚರಣದಿ ತಲೆಬಾಗುವೆ ನಿನ್ನ ಸ್ನೇಹದ ಪರಿ ಇನ್ನೊಂದು ಸ್ನೇಹವಿಲ್ಲ ನಿನ್ನ ಪ್ರೀತಿಯ ಸಿರಿ ಎನ್ನ ಜೀವಕೆ ಗರಿ,  ನನ್ನ ಗೆಳೆಯನು ನೀನು ನಿನ್ನ ನಗುವೇ ಜೇನು ಅಪ್ಪನಾಗಿಹ ನಾನು, ಅರಿವಾಗುತಿದೆ ಅಪ್ಪನೆಂದರೇನು !; ಅಂದು ನಿನ್ನ ಪಾದದಲಿ ಪಾದರಕ್ಷೆಯು  ಕಾಣಸಿಗಲಿಲ್ಲ  ' ಬಿಸಿಲ ಬೇಗೆಗೆ ನಡೆದ ನೋವ ಅರಿಯಲಿಲ್ಲ ಬೆಂದು ಬಸವಳಿದ ನಿನ್ನ,  ಕಷ್ಟವನರಿಯಲಿಲ್ಲ ಕಂದನಾಗಿದ್ದ ಎನಗೆ ಏನೂ ತಿಳಿಯಲಿಲ್ಲ ಆದರಿಂದು ನಾ ಅಪ್ಪನಾಗಿಹೆ, ನಿನ್ನ ತ್ಯಾಗ ತಿಳಿದು ಕಂಗಳು ತುಂಬಿತಲ್ಲ !; ಕರುಳಕುಡಿಯ ಜನುಮದಾತ ಹಸಿದ ಹೊಟ್ಟೇಲಿ ನಗುವ ಕಂಡಿಹೆ ನೋವ ಮರೆಮಾಚಲು ಹಾಡು ಹಾಡಿಹೆ ನಿನ್ನ ತುಳಿದ ಜನರ,  ನಾನಿಂದು  ಕಾಣುತಿಹೆ ಮಣ್ಣು ತಿಂದು ಹುಚ್ಚರಾದರು ನಿನ್ನ ಹಿಂಸಿಸಿದ  ಪ್ರತಿ ಜನರು ದಿನ ದಿನವೂ ನಾಶವಾಗುತಿಹರು !; ಸತ್ಯ ಧರ್ಮ ನಿನ್ನ ವಾದ ಸತ್ಯಬಿಟ್ಟು ಇಲ್ಲ ಬೇಧ ಅಸತ್ಯನಡೆಗೆ ಮಾಡುತಿಹೆ ವಿರೋಧ ನಿತ್ಯ ನಿನ್ನ ಒಂದೇ ವಾದ ಸತ್ಯ ಮಾತ್ರ ಜಯಿಸಬೇಕು ಅಧರ್ಮ ದಾರಿ ಅಳಿಸಬೇಕು ! ಇಂದೆನಗೆ ಅರಿವಾಗುತಿದೆ  ನನ್ನಪ್ಪನೆಂದರೆ ದೇವರೇ, ಸುಳ್ಳಲ್ಲ  !; ಅವರಿಗೆ ಸರಿ ಸಾಟಿ ಯಾರೂ ಇಲ್ಲ, ಅಪ್ಪ ನಿನ್ನ ಕಣ್ಣೀರ ಹನಿಗೆ ಅಪ್ಪ ನಿನ್ನ ದುಡಿಮೆಯ ಬೆವರಿಗೆ ದೈವವೊಂದೇ ಸಾಕ್ಷಿ ಯಾಗಿದೆ ಪ್ರತಿದಿನದ ನೋವ ಕ್ಷಣಗಳು ಕಣ್ಣಮುಂದೆ ಹಾಯುತಿದೆ ಕಳೆದು ಹೋದ ಘಟನೆಗಳ

ಬದುಕು ನಶ್ವರ (ಕವನ -112)

ಬದುಕು ನಶ್ವರ ********** ಅತಿಹೆಚ್ಚು ಮೆಚ್ಚುಗೆ ಚುಚ್ಚಬಹುದು ಕೊನೆಗೆ ಅತಿಹೆಚ್ಚು ಬೆಚ್ಚಗೆ ಬೆವರಿಳಿಸಬಹುದು ಜೋಕೆ ಮೆಚ್ಚಿಸಲು ಹೋಗಿ ಜಾರಿ ಬೀಳಬೇಡಿ ಬಿಸಿಮಾಡಲು ಹೋಗಿ ಕೈ ಸುಟ್ಟುಕೊಳ್ಳಬೇಡಿ,  ಬದುಕಿದು ನಶ್ವರ ನೋಡುತಿಹ ಈಶ್ವರ ಕೈ ಮುಗಿದು ಹೇಳಿ ಹರ ಹರ ತಲೆಬಾಗಿ ಬೇಡಿ ವರ ಬರದಿರಲಿ ಜ್ವರ ನಾಲ್ಕು ದಿನದ ಬಾಳ್ವೆ ಸುಖವಾಗಿರಲಿ ಈಶ್ವರ ನಿನ್ನ ಮಹಿಮೆ ಅಗೋಚರ !   ✍️ಮಾಧವ ನಾಯ್ಕ್ ಅಂಜಾರು 🌹         ( ಎಂ. ಎನ್. ಎ )

(ಲೇಖನ -48)ಯಾರಿಗೆ ಬೇಕು ರಾಜಕೀಯ

ಯಾರಿಗೆ ಬೇಕು ರಾಜಕೀಯ ! ರಾಜಕೀಯ ಪ್ರತಿಯೊಬ್ಬರೂ ಮಾಡುತಿದ್ದಾರೆ ? ಹೆಚ್ಚಿನ ಜನರಲ್ಲಿ ರಾಜಕೀಯದ ಚಿತ್ರಣವಿರೋದು ಎರಡು ಪಕ್ಷಗಳ ಅಥವಾ ವಿವಿಧ ಪಕ್ಷಗಳ ವಿರುದ್ಧ ಇರುವ ಆರೋಪ,  ಪ್ರತ್ಯಾರೋಪ,  ಗುದ್ದಾಟ,  ಅಥವಾ ವಿರೋಧಪಕ್ಷ, ಆಡಳಿತ ಪಕ್ಷದಲ್ಲಿ ಏನಾದರು ತಪ್ಪನ್ನು ಹುಡುಕಿ ದೊಡ್ಡ ಮಟ್ಟದ ರಾದ್ದಂತ ಮಾಡುವುದು ಎಂದರ್ಥವಾಗಿದೆ.  ಆದ್ದರಿಂದ ದಿನದಿಂದ ದಿನಕ್ಕೆ "ರಾಜಕೀಯ " ಅನ್ನೋ ಪದಕ್ಕೆ ಹೆದರುವಂತಹ ಸ್ಥಿತಿ ಎದುರಾಗಿದೆ.  ಪ್ರತಿಯೊಂದು ಮನುಷ್ಯನು ಪ್ರಬುದ್ಧನಾದಾಗ  ಯಾವುದೇ  ಕೆಲಸ ಅಥವಾ ದೊಡ್ಡ ಮಟ್ಟದ ಸಂಸ್ಥೆಗಳಲ್ಲಿ ತಮಗೆ ಅರಿವಿಲ್ಲದಂತೆ ರಾಜಕೀಯ ಮಾಡುತ್ತಾರೆ,  ಆದರೆ ಉದ್ದೇಶಗಳು ವಿವಿಧ ರೀತಿಯಲ್ಲಿ ಇರುತ್ತದೆ.  ಕೆಲವರಿಗೆ ತಾನೊಬ್ಬನೇ ಬದುಕಿದರೆ ಸಾಕು,  ಇನ್ನೊಬ್ಬ ನನ್ನಿಂದ ಮೇಲೆ ಬರಬಾರದು,  ಅಥವಾ ಸರ್ವಾಧಿಕಾರಕ್ಕಾಗಿ ಹೋರಾಡುವ ವಿಕೃತರು ಕೂಡ ಇರಬಹುದು ಅದಕ್ಕಾಗಿ ಸಹಕರಿಸುವ ವಿಕೃತರೂ ಸೇರಬಹುದು.  ಇಂದಿನ ದಿನಗಳಲ್ಲಿ ರಾಜಕೀಯದಲ್ಲಿ ಗುಣಮಟ್ಟದ ಕೊರತೆ ಎಲ್ಲೆಂದರಲ್ಲಿ ಇದೆ,  ಗುಣಮಟ್ಟದ ರಾಜಕೀಯ ಮಾಡುವವರು ಅಲ್ಪ ಜನರಿದ್ದರೂ ಅವರ ಗುಣ ಎಲ್ಲರ ಮನವನ್ನು ಗೆಲ್ಲುವಲ್ಲಿ ಸಫಲವಾಗುತ್ತದೆ.  ಸಿದ್ದಾಂತ ಗಳ ಪಾಲನೆ  ಮಾಡುತ್ತಾ ಬರುವ ಅನೇಕ ಪಕ್ಷಗಳು ಸದುದ್ದೇಶದಿಂದ ಕೂಡಿದ್ದರೂ ವಿನಾಕಾರಣ ಕೆಡಿಸುವ ಪ್ರಯತ್ನ ಕೆಲವು ಜನರು ಅಥವಾ ಮುಖಂಡರು ಮಾಡುತ್ತಾರೆ,   ಇದಕ್ಕೆ ಕಾರಣ ಪ್ರಬುದ್ಧ ರಾಜಕಾರಣದ ಕೊರತೆ.  ರಾಜಕೀಯ ದ ಚ

ನಾನವನಲ್ಲ (ಕವನ -109)

ಸಾರಾಯಿ ಕುಡಿಯುವವರೆಲ್ಲಾ ಕೆಟ್ಟವರಂತೂ ಅಲ್ಲ, ಹಾಲು ಕುಡಿಯುವವರೆಲ್ಲರೂ ಒಳ್ಳೆಯವರೇನಲ್ಲ !; ಕದ್ದು ಮುಚ್ಚಿ ಕುಡಿಯುವವರು ಸಜ್ಜನರಂತೂ ಅಲ್ಲ ಕುಡಿದು ಓಲಾಡುವವರೆಲ್ಲರೂ ಅತೀ ಕುಡುಕರಲ್ಲ !; ಕುಡಿದು ಕುಡಿಯೋದಿಲ್ಲ ಅನ್ನೋರು ಸತ್ಯವಂತರಲ್ಲ ಕುಡಿದು ಕುಡಿಸುವವರೆಲ್ಲ ಹಣವಂತರಲ್ಲ !; ಕುಡಿದು ಬರುವವರೆಲ್ಲ ಹೆಜ್ಜೆ ಹಾಕುವರು  ಮೆಲ್ಲ ಕುಡಿದು ಬಿದ್ದರೂ ಕೂಡ ಹೇಳುವರು, ನಾನವನಲ್ಲ !;    ✍️ಮಾಧವ ನಾಯ್ಕ್ ಅಂಜಾರು 🌹

ದೇವರ ಭಯ (ಕವನ -108)

ದೇವರ ಹೆಸರಲಿ ಹಣ ವಸೂಲಿಗರೆಲ್ಲ ಸಿರಿವಂತರಾದರೆ, ದೇವರ ಭಯದಲಿ ಹಣ ಹಾಕಿದವರೆಲ್ಲ ಬಡವರೇ. ಹಣಕ್ಕಾಗಿ ಪ್ರಸಾದ ಹಂಚಿದವರೆಲ್ಲ ಸಿರಿವಂತರಾದರೆ, ಊಟಕ್ಕಿರದೆಯೂ ಹುಂಡಿ ತುಂಬಿದವರೆಲ್ಲ ಬಡವರೇ. ದೇವರ ಭಯ ಇಲ್ಲದಿರುವುದು ಮೋಸಗಾರರಿಗಾದರೆ, ದೇವರ ದಯ ಇರುವುದೂ ಬಡವರಿಗೆ. ✍️ಮಾಧವ ಅಂಜಾರು 🌹

ದೇವರಿಲ್ಲ (ಕವನ -107)

ದೇವರಿಲ್ಲ ******* ಕರುಣೆವಿರದವಗೆ "ರಾಮ" ದೇವನಿಲ್ಲ ಪ್ರೀತಿ ಇರದವಗೆ "ಯೇಸು" ದೇವನಿಲ್ಲ ತಪ್ಪು ಮಾಡುವವಗೆ "ಅಲ್ಲಾಹ್" ಇರೋದಿಲ್ಲ,  ಒಳಿತು, ಕೆಡುಕು ಮಾಡುವ ಮಾನವ ಅಹಂಕಾರವ ಮೆರೆದರೆ ಮರೆಯಲಾಗದ ಶಿಕ್ಷೆ ಕಣ್ಣೆದುರಿಗೆ ಕೊಡುವ ಇರುವಷ್ಟು ದಿನ ಒಳಿತನ್ನೇ ಮಾಡು ಸಾಧ್ಯವಿದ್ದರೆ ಮಾತ್ರ ಸಹಾಯವನು ಮಾಡು ಏನೂ ಇಲ್ಲದಿದ್ದರೆ ಲೋಕ ಕಲ್ಯಾಣಕೆ ಬೇಡು ಮನುಜನಾಗಿರೋಕೆ ಶ್ರಮಪಡು,       ✍️ಮಾಧವ ಅಂಜಾರು 🌹

ಸಂಕೇತ (ಕವನ -106)

ಸಂಕೇತ ****** ನಿಮಗೊಬ್ಬರು  ಗೌರವಿಸುತ್ತಾರೆಂದರೆ ಅದವರ ಸದ್ಗುಣ ಸಂಕೇತ, ನಿಮಗೊಬ್ಬರು ಕರೆದು ಮಾತಾಡುತ್ತಾರೆಂದರೆ ಅಕ್ಕರೆಯ ಸಂಕೇತ, ನಿಮಗೊಬ್ಬರು ಪ್ರತಿ ಮಾತಿಗೂ ನಗಿಸುತ್ತಾರೆಂದರೆ ಅವರಲ್ಲಿರೋ ಪ್ರೀತಿ ಸಂಕೇತ, ಕೆಲವರು  ಬುದ್ಧಿಗಾಗಿ ಬಯ್ಯುತ್ತಾರೆಂದರೆ ಪ್ರೀತಿ ಹೆಚ್ಚಿರೋ ಸಂಕೇತ, ಕೆಲವರು ಬೆನ್ನಹಿಂದೆ ಮಾತಾಡುತ್ತಾರೆಂದರೆ ಮಗ್ಗುಲಲ್ಲಿ ಕತ್ತಿ ಇರುವ ಸಂಕೇತ, ಒಬ್ಬೊಬ್ಬರು ಕುಹಕ ನಗು ನಗುತ್ತಿರುತ್ತಾರೆಂದರೆ ಕಲ್ಮಶ ಮನಸಿನ ಸಂಕೇತ, ✍️ಮಾಧವ ಅಂಜಾರು🙏🌹

ನನ್ನುಸಿರು (ಕವನ -105)

ನನ್ನುಸಿರು ******* ಹಸಿರಿದ್ದರೆ ಉಸಿರು ಉಸಿರಿದ್ದರೆ ಹೆಸರು ಮರಗಿಡಗಳ ಉಳಿಸಿ ಬೆಳೆಸಿ ಹಾಯಾಗಿ ನೀನಿರು ಪ್ರ ಮನೆಯೊಳು ಪ್ರತಿ  ಮನದೊಳು ಇರಲೊಂದು ಧ್ಯೇಯ ಸಸಿ ನೆಡುತ ಪೋಷಿಸುತ ಕಾಪಾಡುವೆ ಈ ಭುವಿಯ ನಾನಿದ್ದರೂ ಇಲ್ಲದಿದ್ದರೂ ಕೊಡು ಬಿಸಿಲಿಗೆ ನೆರಳು ಗಿಡ ಬೆಳೆದು ಮರವಾಗಿ ಕಾಪಾಡು ನನ್ನುಸಿರು ಉಳಿಸು ನನ್ನ ಹೆಸರೂ, ✍️ಮಾಧವ ನಾಯ್ಕ್ ಅಂಜಾರು 🌹

ರಾಜ ರಾಣಿ (ಕವನ -104)

ರಾಜ -ರಾಣಿ ********** ನೋಡುತ ನಿನ್ನ ನೋಡುತ್ತಲೇ ಇರಬೇಕೆಂಬ ಆಸೆ ಹಾಡುತ ಗೀತೆ ಹಾಡುತ್ತಲೇ ನಿನ್ನ ಜೊತೆಯಲಿರೋ ಆಸೆ ಮುಸ್ಸಂಜೆ ರವಿ ಜಾರುತ್ತಲೇ ಜೊತೆಯಾಗಿ ಹಾರುವಾಸೆ, ಹೃದಯ ಕದ್ದ ಗೆಳತಿ ನೀನು ನಿನ ಮಾತೆಲ್ಲ ಸವಿಜೇನು ನಿನ ನಗುವಿಗೆ ಸೋತ ಪ್ರಿಯಕರ ನಾನು ನಿನ್ನಲಿರೋ ಒಳಗುಟ್ಟೇನು ನನ್ನನು ನಾನೆ ಮರೆತುಬಿಟ್ಟೇನು ಗುಲಾಬಿ ತೋಟದಲಿರೋ ಚೆಂಗುಲಾಬಿ ನೀನು ಎನ್ನ ಕನಸಲಿರೋ ರಾಣಿಯು ನೀನು ರಾಜನಾಗುವೆ ನಾನು ಎನ್ನ  ಬಳಿಬಂದಿರು  ನೀನು  ✍️ಮಾಧವ ನಾಯ್ಕ್ ಅಂಜಾರು 🌹

ಜಗದೀಶ್ವರ (ಭಕ್ತಿ -04)

ಜಗದೀಶ್ವರ ******** ಮನ್ನಿಸೆನ್ನ ಜಗದೀಶ್ವರ ನಾ ನಿನ್ನ ಬಿಟ್ಟಿರಲಾರೆ ಮಣ್ಣಾಗೋ ಈ ಜೀವಕೆ ಯಾಕಿನ್ನೂ ಆಸೆ ಆಕಾಂಕ್ಷೆ ಹೊನ್ನು ಮಾಡೆನ್ನ ಮನ ನಾನಿನ್ನ ಮರೆಯಲಾರೆ, ತನ್ನಾಸೆಯ  ಬಿಟ್ಟಿದ್ದರೂ ಬಿಗಿದು ಹಿಡಿದಿವೆ ಬಂಧ ನಾನಿಂದು ಬೇಡುತಿಹೆ ನೀನಾಗು ಎನ್ನ ಆನಂದ ಒಂದು ಬಿನ್ನಹ ನಿನ್ನಲಿ ಮರೆಯಬೇಡ ನಾ ನಿನ್ನ ಕಂದ, ಕೋಟಿ ಕೋಟಿ ಭಕ್ತರು ಬೇಕು ಬೇಡಗಳ ಹೊಣೆ ನಿನ್ನಮೇಲೆ ಹಾಕಿಹರು ಎಲ್ಲರಿಚ್ಛೆಯನು ಈಡೇರಿಸಲು ಹಗಲು ರಾತ್ರಿ ಬೇಡುತಿಹರು ಸತತ ನಿನ್ನ ಕಾಡುತಿಹರು ನಿನ್ನ ನೋವ ಕ್ಷಣದಲಿ ನಾ ನಿನ್ನ ಜೊತೆ ಬಯಸುವೆ ನಿನ್ನ ಆನಂದ ಕ್ಷಣದಲೂ ನಿನ್ನ ಪಾದ ಸೇವೆ ಬಯಸುವೆ ಬಂದು ನೆಲೆಸೆನ್ನ ಹೃದಯದಿ ನಾ ನಿನ್ನ ಹಾದಿ ಕಾಯುತಿರುವೆ ✍️ಮಾಧವ ನಾಯ್ಕ್ ಅಂಜಾರು 🙏

ಅಟ್ಟ ಸೋರಿತು (ಕವನ -103)

ಅಟ್ಟ ಸೋರಿತು  ********************** ಉಟ್ಟ ತೊಡುಗೆಗೆ ರಂಧ್ರವಾದರೂ ಬದುಕುತಿದ್ದೆ ಆನಂದದಿ ಉಟ್ಟ ತೊಡುಗೆಗೆ ದೂಳು ಮೆತ್ತಿದ್ದರೂ ಓಡಾಡುತಿದ್ದೆ ಆರಾಮಾಗಿ ತಟ್ಟೆ ಬಟ್ಟಲು ನಜ್ಜುಗುಜ್ಜಾಗಿದ್ದರೂ ಗಂಜಿ ಕುಡಿಯುತ್ತಿದ್ದೆ ಖುಷಿಲಿ ಅಟ್ಟ ಸೋರಿ ನೀರು ಬಿದ್ದರೂ ಮಲಗುತ್ತಿದ್ದೆ ಸುಖದಲಿ ಗಾಳಿ ಮಳೆಗೆ ಛತ್ರಿ ಇಲ್ಲದಿದ್ದರೂ ಕುಣಿದು ನೆನೆಯುತಿದ್ದೆ ಊರಲಿ ಹಸಿದ ಹೊಟ್ಟೆಗೆ ಅನ್ನವಿಲ್ಲದೆಯೂ ತಿನ್ನುತಿದ್ದೆ ಮಾವು ಹುಳಿ ಅಂಗಳದಲಿ ಆಟವಾಡಲು ಹುಡುಕುತ್ತಿದ್ದೆ ಗಾಲಿ ಕೋಲು ಪಕ್ಕದಲಿ ಹರಿಯುವ ನೀರಲಿ ತೇಲಿ ಬಿಡುತ್ತಿದ್ದೆ ಕಾಗದದ ದೋಣಿಯ ಸಿಡಿಲ ಶಬ್ದದ ಆರ್ಭಟದಲಿ ಮಿಂಚನು ನೋಡುತಿದ್ದೆ ಕಿಟಕಿಲಿ ಸೂರ್ಯಮೂಡಿ ಮೇಲೆಬಂದಾಗ ಓಡಿ ಹೋಗುತಿದ್ದೆ ಮಾವಿನ ಮರದಡಿ ಕಾಮನಬಿಲ್ಲಿನ ಕೊನೆಯನು ಕಾಣಲು ನಡೆಯುತ್ತಿದ್ದೆ ಹಲವು ಮೈಲಿ ತೊಡಲಿ ಸಿಕ್ಕಿದ ಮೀನನು ಹಿಡಿದು ತುಂಬಿಸುತ್ತಿದೆ ಬಾಟ್ಲಿಯಲ್ಲಿ ತೆಂಗು ಗರಿಕೆಯ ಕನ್ನಡಕ ಮಾಡಿ ನೋಡುತಿದ್ದೆ ಅಮ್ಮನನು ಬಣ್ಣ ಕಾಗದದ ಗಾಳಿಪಟ ಮಾಡಿ ಕೊಡುತಿದ್ದೆ ತಂಗಿ ಕೈಲಿ ಗಾಳಿ ಮಳೆಗೆ ಬಂದ ತೆಂಗಿನಕಾಯಿಗೆ ಜಿಗಿದು ಬಿಟ್ಟೆ  ನೀರಲಿ ಚಳಿಗೆ ಮೈ ನಡುಗದಂತೆ ಹೊದಿಸಿಕೊಳ್ಳುತಿದ್ದೆ ಕಂಬಳಿಯಲಿ ಮೀನು ಹಿಡಿಯಲು ರಾತ್ರಿ ಪಯಣ ಮಾಡುತಿದ್ದೆ ದೊಂದಿ ದೀಪದಲಿ ಒಂದು ಏಡಿ ಸಿಕ್ಕಿದರೂ ತಂದು ತಿಂದೆ ನೆಕ್ಕುತಲಿ ಎರಡು ಜುಟ್ಟಿನ ಸೈಕಲಲಿ ರಾತ್ರಿ ಪಯಣ ದ

ಮೀನುಗಾರನ ಬವಣೆ (ಕವನ -102)

ಮೀನುಗಾರನ ಬವಣೆ **************** ಭೋರ್ಗರೆವ ಸಮುದ್ರವ ಲೆಕ್ಕಿಸಲಿಲ್ಲ ಕಾಯಕದ ಗುಂಗಲಿ ಜೀವ ಭಯವಿಲ್ಲ ಕಗ್ಗತ್ತಲೆ, ಬೆಳದಿಂಗಳು ಸಮಾನವೇ ಎಲ್ಲಾ ಮೀನುಗಾರನ ನೋವನು ಕೇಳೋರಿಲ್ಲ, ಸಿಕ್ಕಿದ ಮೀನನು ಸುರಿದರು ದಡದಲಿ ಕಿಕ್ಕಿರಿದ ಜನರ ಹಾರಾಟವಿಲ್ಲಿ ರಾಶಿಗೆ ಸಾವಿರಾರು ಬುಟ್ಟಿಗೆ ಸುಮಾರು ಕಷ್ಟದಿ ಸಿಕ್ಕಿದ ಮೀನಿಗೆ ಕೊಟ್ಟರು ಐನೂರರ ಬದಲು ಮುನ್ನೂರು, ಮೀನುಗಾರನ ಮೈತುಂಬ ಘಮ ಘಮ ವಾಸನೆ ಹೇಳುವರು ಕೆಲವರು ಮೀನು ಬಹಳ ವಾಸನೆ ಮೂಗುಮುಚ್ಚುತಲೇ ತೋರ್ಪಡಿಸುವರು ಯಾತನೆ ಆದ್ರೆ ಅರಿತವರಿಲ್ಲ ಮೀನುಗಾರನ ಬವಣೆ, ಸಂಸಾರದ ಹೊಣೆ ಮೀನು ವ್ಯಾಪಾರದ ಬವಣೆ ಎಲ್ಲವೂ ಸೇರಿದಾಗ ದೇವರೇ ಮಾಡು ರಕ್ಷಣೆ ಮೀನು ತಿನ್ನೋರೆಲ್ಲ ಸೇರಿ ಮಾಡಿರೆಲ್ಲರೂ ಪ್ರಾರ್ಥನೆ ಮೀನುಗಾರನ ದೋಣಿ ತುಂಬಿಬರಲಿ ಮೀನಲಿ ಅವನ ಜೀವನ ಜಯಿಸಲಿ

ಕಿರೀಟ (ಕವನ -101)

ಕಿರೀಟ ಹಾಕಿಕೊಳ್ಳಲಲು ಬಯಸುತ್ತಿರುವವರು ಕಿರೀಟಕ್ಕಾಗಿ ಹುಡುಕುವರು ಸಿಗದೇ ಇರುವಾಗ ಕಿರೀಟ ಖರೀದಿಸಿ ತಾನೇ  ಹಾಕಿಕೊಳ್ಳುವರು, ಮತ್ತೊಬ್ಬರಿಗೆ ಕಿರೀಟ  ತೊಡಿಸಲು ಇಚ್ಛಿಸುವವರು ಮನದೊಳಗೆ ಖುಷಿಪಡುವರು ಕೊಟ್ಟ ಕಿರೀಟ ಬೀಳದಿರಲೆಂದು ಆಶಿಸುತ್ತಿರುವರು ಕಿರೀಟ ಗಟ್ಟಿಯಾಗಿ ಕಟ್ಟುವರು, ಕೆಲವರು ಕೊಡುವ ಕಿರೀಟ ಪ್ರೀತಿಯಿಂದ ಇದ್ದಿರಬಹುದು ಕೆಲವರು ತೊಡಿಸುವ ಕಿರೀಟ ನಿಮ್ಮನ್ನು ನಾಚಿಗೆಗೆಡಿಸಬಹುದು ಕಿರೀಟ ಸಿಕ್ಕರೆ ಗೌರವ ಕಿರೀಟ ಬಿದ್ದರೆ ಅಗೌರವ ✍️ಮಾಧವ ನಾಯ್ಕ್ ಅಂಜಾರು 🙏

ಕಹಿ ಸತ್ಯ (ಕವನ 30)

ನಿನ್ನ ಭಕ್ತಿಗೆ ಮಾತ್ರ ದೇವರೊಲಿಯೋದು ಗೊತ್ತಿದ್ದರೂ ಗುಡಿಗಳ ಮುಂದೆ ಹುಂಡಿ, ನಿನ್ನ ಪೂಜೆಗೆ ಮಾತ್ರ ದೇವರೊಲಿಯೋದು  ಪೂಜೆಗೆ ವೇಷ ಭೂಷಣ ಅದರೊಂದಿಗೆ ಧನಕ್ಕಾಗಿ ಹರಿವಾಣ ದೇವರಿಗೆ ಭಕ್ತರೆಲ್ಲ ಸಮಾನ ಊಟಕ್ಕೆ ಕುಳಿತಾಗ ಶ್ರೇಷ್ಠ ಜನರೆಂದು ಹೇಳುವರು ನಿಧಾನ ಕಳ್ಳನೆಂದು ಗೊತ್ತಿದ್ದರೂ ಕಳ್ಳನೇ ಅಲ್ಲವೆಂದು ವಾದಿಸುವ ಕೆಲವು ಕರಿಕೋಟು ಜನ!

ಫೇಸ್ಬುಕ್ನಲ್ಲಿ(ಕವನ 2)

ವಾಟ್ಸಪ್ಪು ಫೇಸ್ಬುಕ್ನಲ್ಲಿ ಒಬ್ಬಬರದು ಒಂದೊಂದು ಕಥೆ ಹಲವರದ್ದು ಪ್ರಸ್ತುತ ಸ್ಥಿತಿ ಕೆಲವರದ್ದು ಅಧೋಗತಿ! ಮುಂಜಾನೆಯಿಂದ ಅರ್ಧ ರಾತ್ರಿಯವೆರೆಗೂ ಸಾವಿರಾರು ಕಥೆ ಹಲವಾರು ವ್ಯಥೆ! ನಗುವಿರದ ಮುಖದಲಿ ಮಗುವಂತಹ ನಗು ಚಿಕ್ಕಾಸ್ಸು ಸಂಪಾದಿಸದಿದ್ದರು ಅದ್ದೂರಿಯ ಹಲವು ಪಟ ಆಗಿಬಿಟ್ಟಿದೆ ಅದೊಂದು ಚಟ! ಎನ್ನ ಸ್ಥಿತಿ ನೋಡಿಲ್ಲವೆಂದು ಹಲವರು ಚಿಂತಿಸಿದರೆ  ನನ್ನ ಕಥೆ ಯಾರೆಲ್ಲ ನೋಡಿದ್ದಾರೆ ಅವರೇನು ಹೇಳಿದ್ದಾರೆ ಎಂಬುವುದು ಕೆಲವರ ಚಿಂತೆ! ಕವಿಯ ಕವನದ ಕಥೆಯಾದರೆ ಪ್ರೇಯಸಿಗೆ ಪ್ರಿಯತಮನ ಕಥೆಯ ಚಿಂತೆ ಹೆಂಡತಿಗೆ, ಗಂಡನ ಸ್ಥಿತಿಯ ಚಿಂತೆ ಗಂಡನಿಗೆ ಹೆಂಡತಿಯ ಕಥೆಯದ್ದೆ ಚಿಂತೆ! ಒಂದಂತೂ ನಿಜ ಬಿಡಿ ಈ ಫೇಸ್ಬುಕ್ ವಾಟ್ಸಪ್ಪು ಕೆಲವರಿಗೆ ಚಿಂತೆ ಬಿಡಿಸಿದರೆ ಕೆಲವರನ್ನು ಚಿತೆ ಹತ್ತಿಸುತ್ತದೆ!             ✍️ಮಾಧವ ನಾಯ್ಕ್ ಅಂಜಾರು.        

(ಲೇಖನ -1)ಓ ನನ್ನ ಹೃದಯವೇ ನೀ ಕಲ್ಲಾಗಬೇಡ, ಚಂಚಲ ಮನಸ್ಸಿನ ಮಿಂಚಿನ ಹೊಡೆತಕ್ಕೆ ಜರ್ಜರಿತಗೊಂಡು ನೋವನ್ನೇ ಸೇವಿಸುತ್ತಾ ನೀ ಕಲ್ಲಾಗಬೇಡ.

Image
 ಓ ನನ್ನ ಹೃದಯವೇ ನೀ ಕಲ್ಲಾಗಬೇಡ, ಚಂಚಲ ಮನಸ್ಸಿನ ಮಿಂಚಿನ ಹೊಡೆತಕ್ಕೆ ಜರ್ಜರಿತಗೊಂಡು ನೋವನ್ನೇ  ಸೇವಿಸುತ್ತಾ ನೀ ಕಲ್ಲಾಗಬೇಡ. ನಿನ್ನ ಕಣ್ಣಲ್ಲಿ  ಪ್ರಪಂಚದ ಎಲ್ಲಾ ದುಃಖ ದುಮ್ಮಾನಗಳನ್ನು ನೋಡುತ್ತಾ ನಿನ್ನ ಹೃದಯ ಬಡಿತ ನಿಲ್ಲಿಸುವಷ್ಟು ಕಲ್ಲಾಗಬೇಡ. ನಿನ್ನ ಆಸೆಗಳು ಈಡೇರಲಿಲ್ಲ, ನಿನ್ನ ಕೇಳುವವರಿಲ್ಲ,  ನಿನ್ನನು ಮಾತನಾಡಿಸುವವರಿಲ್ಲ, ನಿನ್ನನು ಆರೈಕೆ ಮಾಡುವವರು ಇಲ್ಲ, ಈ ಕತ್ತಲು ಜಗತ್ತಿನಲ್ಲಿ ನೀನು ಕಾಣುತ್ತಲೇ ಇಲ್ಲವೆಂಬ ಚಿಂತೆಯಲಿ ಬಿದ್ದು ಕಣ್ಣೀರು ಹಾಕುತ್ತಾ  ನಿಲ್ಲಲಾಗದೆ ಕುಳಿತುಕೊಳ್ಳಲು ಆಗದೆ ವ್ಯಥೆಯ ಬಲೆಗೆ ಸಿಕ್ಕಿಬೀಳಬೇಡ . ನಿನ್ನ ದೂಷಿಸುವರೆ, ನಿನ್ನನು ದ್ವೇಷಿಸುವರೇ, ನಿನ್ನ ಪ್ರತಿಯೊಂದು ಮಾತನ್ನು ತಿರುಚಿ ಬಿಡುವರೇ ಚಿಂತಿಸದಿರು ಧೃತಿಗೆಡದಿರು ನೀನು ನೀನಾಗಿಯೇ ಬದುಕಿ ಮೇಲೆದ್ದು ಬರುವೆನೆಂದು ಅಚಲ ನಿರ್ಧಾರ ಮಾಡಿಕೊಳ್ಳು ಬದಲಾಗಿ ಇನ್ನೇನು ಬೇಕು ನನಗೆ, ಇನ್ನು ಸಾಕು ಎನಗೆ, ಪ್ರಪಂಚವೇ ಸುಳ್ಳು  ಎಂಬ ಪದಗಳಿಗೆ ಮಾರುಹೋಗಿ ಇನ್ನ್ಯಾಕೆ ಕನಸು, ಇನ್ನ್ಯಾಕೆ ಆಸೆಗಳು ಹೇಳುತ್ತಾ ನಿನ್ನ ತಲೆಗೆ ನೀನೇ ಕಲ್ಲನ್ನು ಹಾಕಿಕೊಳ್ಳಬೇಡ.          ಬೇಸರವೇ ಅತ್ತು ಬಿಡು, ಕೋಪವೇ ವಿಶ್ರಾಂತಿ ಪಡೆ, ದ್ವೇಷವೇ, ಸುಮ್ಮನಿರು- ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ, ಈ ಪ್ರಪಂಚದಲ್ಲಿ ಯಾರೂ ದೊಡ್ಡವರಲ್ಲ, ಈ ಪ್ರಪಂಚದಲ್ಲಿ ಯಾರಿಗೆ ಯಾರೂ ಇಲ್ಲ! ನೀನೊಬ್ಬನೇ ಬಂದಿರುವೆ, ನೀನೊಬ್ಬನೇ ಹೋಗಬೇಕಾಗುತ್ತದೆ, ನಿನ್ನ ಜೊತೆಯಲ್ಲಿರುವ ಪ್ರತ

(ಲೇಖನ -2)ನೆಮ್ಮದಿಯ ಜೀವನ ಬೇಕೇ, ಹಾಗಿದ್ದರೆ ಮೊದಲು ನಕಾರಾತ್ಮಕ ಚಿಂತನೆ ಮತ್ತು ನಕಾರಾತ್ಮಕ ಜನರಿಂದ ದೂರವಿರಿ

Image
ನೆಮ್ಮದಿಯ ಜೀವನ ಬೇಕೇ, ಹಾಗಿದ್ದರೆ ಮೊದಲು ನಕಾರಾತ್ಮಕ ಚಿಂತನೆ ಮತ್ತು ನಕಾರಾತ್ಮಕ ಜನರಿಂದ ದೂರವಿರಿ. ಇದು ಇಂದು ನಿನ್ನೆಯ ಮಾತಲ್ಲ, ನಮ್ಮ ಜೀವನದ ಕೊನೆಯವರೆಗೂ ಅನುಭವಕ್ಕೆ ಬರುವ ವಿಚಾರಗಳು, ನೀನೊಂದು ಚಿಂತಿಸಿದರೆ ದೈವವೊಂದು ಬಗೆಯುತ್ತದೆ ಅನ್ನುವ ಬದಲು ನೀನೊಂದು ಚಿಂತಿಸಿದರೆ ನಿನ್ನ ಸುತ್ತಲಿರುವ ನಕಾರಾತ್ಮಕ ಜನರು ಇನ್ನೊಂದು ಬಗೆಯುತ್ತಾರೆ ಎಂದು ಹೇಳಿಕೊಳ್ಳಬಹುದು. ಯಾಕೆಂದರೆ ನೀನೆಷ್ಟು ಪ್ರಾಮಾಣಿಕನಾಗಿದ್ದರೂ,  ಸುತ್ತಲಿನ ಸಮಾಜದಲ್ಲಿ ಒಂದಷ್ಟು ಜನರು  ಮನಸ್ಸಿಗೆ ಹೆಚ್ಚು ಚುಚ್ಚಿ ಮಾತಾಡುವವರು, ಉದ್ದಾರ ಬಯಸದೇ ಇರುವವರು, ನಿನ್ನ ನಗುವನ್ನು,  ಅನ್ನ ಮತ್ತು ಹಾಕಿಕೊಳ್ಳುವ ಬಟ್ಟೇಯನ್ನೂ ಬಯಸದೇ ಇರುವವರು ಅನೇಕ ಮಂದಿ ನೀವು ಖುದ್ದಾಗಿ ನೋಡಿರಲೂಬಹುದು. ಅದಕ್ಕೆ ಸರಿಯಾಗಿ ನಿನ್ನಷ್ಟಕ್ಕೆ ನೀನಿದ್ದರೂ  ಕೆಣಕಿಸಿ ನಿನ್ನಿಂದ ತಪ್ಪುಗಳನ್ನು ಮಾಡಿಸುವ ಜನರು ಕೂಡ ಇರಲುಬಹುದು. ತನ್ನ ವಿಚಾರಧಾರೆಯನ್ನು ಸಮರ್ಥಿಸಿಕೊಂಡು ಒಂದಷ್ಟು ಜನರಲ್ಲಿ  ಸ್ವಂತ ವಿಚಾರದ ಬಗ್ಗೆ ಅಲ್ಲಲ್ಲಿ ಹೇಳಿಕೊಂಡು ತಿರುಗುವ ಜನರನ್ನು ಕಂಡಿರಬಹುದು.             ಇಂತಹ ಮನಸುಳ್ಳ ಜನರೊಂದಿಗೆ ಎಷ್ಟು ಸಾಧ್ಯವೋ ಅಷ್ಟು ದೂರದಿಂದಿರಲು ನಿನ್ನನ್ನು ನೀನು ತಯಾರಿಯಲ್ಲಿಟ್ಟುಕೊಳ್ಳಬೇಕು. ಯಾವ ಕಾಲಕ್ಕೆ ಯಾರು ತನ್ನ ನಿಜವಾದ ಬಣ್ಣವನ್ನು ವ್ಯಕ್ತ ಪಡಿಸುತ್ತಾರೋ ತಿಳಿಯದು. ನೀನ್ಯಾರು ಒಳ್ಳೆಯವರೆಂದು ತಿಳಿದು ಬದುಕಿರುತ್ತಿಯೋ ಅವರೇ  ತಿರುಗಿ ಬೀಳುವ ಸಂಧರ್ಭಗಳು ನೋಡಿರಲುಬ

(ಲೇಖನ -3)ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ಜವಾಬ್ದಾರಿ? ಸಾಮಾಜಿಕ ಜಾಲತಾಣವನ್ನು ಜನರು ಸದುದ್ದೇಶಕ್ಕೆ ಉಪಯೋಗಿಸಿಕೊಳ್ಳಬೇಕು!

Image
ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ಜವಾಬ್ದಾರಿ?  ಸಾಮಾಜಿಕ ಜಾಲತಾಣವನ್ನು ಜನರು ಸದುದ್ದೇಶಕ್ಕೆ ಉಪಯೋಗಿಸಿಕೊಳ್ಳಬೇಕು! ತಾಂತ್ರಿಕತೆಯು ಮುಂದುವರಿದಂತೆ  ಅದರ ಒಳಿತು-ಕೆಡುಕು  ಎಲ್ಲವೂ ನಾವು ಹೇಗೆ ಉಪಯೋಗಿಸಿಕೊಳ್ಳುತ್ತಿವೆಯೋ ಅದನ್ನು ಅವಲಂಬಿತವಾಗಿರುತ್ತದೆ. ಇಂದಿನ ದಿನಗಳಲ್ಲಿ ಸಾವಿರಾರು ತರದ  ಮಾಧ್ಯಮಗಳು,ವಿವಿಧ ಸಾಮಾಜಿಕ ಜಾಲತಾಣ ಮತ್ತು ಹತ್ತು ಹಲವಾರು ವಿಷಯಗಳು  ನಮ್ಮ ಕೈಯಲ್ಲಿರುವ  ಮೊಬೈಲ್ನಲ್ಲಿ  ತುಂಬಾ ಸುಲಭವಾಗಿ ಸಿಗುತ್ತದೆ. ಕೆಲವರು  ಇದನ್ನು  ಒಳಿತಿಗಾಗಿ ಉಪಯೋಗಿಸಿದರೆ, ಕೆಲವರು ಕೆಡುಕಿಗೆ ಪ್ರಯೋಗಿಸುತ್ತಾರೆ. ಯಾರೋ ಮಾಡಿದ ತಪ್ಪಿನಿಂದ  ಇನ್ನ್ಯಾರೋ ಶಿಕ್ಷೆಯನ್ನು ಅನುಭವಿಸಿದ  ಸಂದರ್ಭಗಳು ಬಹಳಷ್ಟು ನೀವು ನಿಮ್ಮ ಕಣ್ಣಾರೆ  ನೋಡಿರಲು ಬಹುದು. ಸಾಮಾಜಿಕ ಜಾಲತಾಣದಲ್ಲಿ, ಅವಿವೇಕಿಗಳು ತನ್ನ ವಿಕೃತ ಮನೋಭಾವದಿಂದ, ಸಮಾಜದ ಜನರಿಗೆ ಕೆಡುಕನ್ನು ಮಾಡಿದ ಸಂದರ್ಭಗಳು, ಮಕ್ಕಳು,  ವಯಸ್ಕರು, ವೃದ್ಧರು ಅಥವಾ ಅಮಾಯಕ  ಕುಟುಂಬಗಳನ್ನು ಬಲಿತೆಗೆದುಕೊಂಡಿರುವ ಪ್ರಸಂಗಗಳು  ನಡೆಯುತ್ತಲೇ ಇದೆ.                ಇದಕ್ಕೆಲ್ಲ ಕಾರಣ, ಸಮಾಜದಲ್ಲಿ ಹೆಚ್ಚುತ್ತಿರುವ ಸಮಾಜ ಘಾತುಕರ ಸಂಖ್ಯೆ,  ಹೆಚ್ಚಾಗಿ ತನ್ನ ಮನಸ್ಸಿನೊಳಗೆ  ಕೊಳಕನ್ನು ತುಂಬಿಸಿಕೊಂಡು, ಬೇರೆ ಬೇರೆ ಕಾರಣಗಳಿಂದ ಸಮಾಜದ ಸಾಮಾನ್ಯ ಜನರನ್ನು ಬಲಿ ತೆಗೆದುಕೊಳ್ಳಲು  ಶ್ರಮ ಪಡುತ್ತಿರುತ್ತಾರೆ. ಇಂತಹ ಜನರಿಂದ ಆಗಾಗ ಜನರಿಗೆ ತೊಂದರೆಗಳು ಹೆಚ್ಚಾಗಿ ನಡೆಯುತ್ತಿರುತ್ತದೆ. ತಾನು ಮ

(ಲೇಖನ -4)ಸ್ವಚ್ಛತೆಯ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಮನದಲ್ಲಿ ಮೂಡಬೇಕು, ಸ್ವಚ್ಛತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಕೂಡ

Image
ಸ್ವಚ್ಛತೆಯ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಮನದಲ್ಲಿ ಮೂಡಬೇಕು, ಸ್ವಚ್ಛತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಕೂಡ, ಸ್ವಚ್ಛತಾ ಆಂದೋಲವನ್ನು ಹಮ್ಮಿಕೊಳ್ಳುವ ಕೆಲವು ಸಂಘ ಸಂಘಟನೆಗಳು, ಸಮಾಜಸೇವಕರು, ವಯಕ್ತಿಕ ಆಸಕ್ತಿವುಳ್ಳ  ಕೆಲವು ಜನರು ಆಗಾಗ ಮಾಡುತ್ತಿರುತ್ತಾರೆ. ಆದರೆ ಅದನ್ನು ನೋಡಿ ಪಾಲಿಸುವ ಜನರು ಅತ್ಯಂತ ವಿರಳವಾಗಿದ್ದಾರೆ. ಕೇವಲ ಸಂಘ ಸಂಘಟನೆ, ಅಥವಾ ನಿಯಮಿತ ಜನಗಳು ಮಾತ್ರ  ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿಲ್ಲ. ತಾವು ಉಪಯೋಗಿಸುತ್ತಿರುವ ಅದೆಷ್ಟು ವಸ್ತುಗಳನ್ನು ಬೇಕಾಬಿಟ್ಟಿ ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿಯುಳ್ಳ ಜನರು  ನೀವು ಆಗಾಗ ಎಲ್ಲಾ ಕಡೆನೂ ನೋಡುತ್ತಿರುತ್ತೀರಿ. ಇತ್ತೀಚೆಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವ ಜನರ ಸಂಖ್ಯೆ ಅಲ್ಪ ವೃದ್ಧಿ ಆಗುತ್ತಿದ್ದರೂ, ಅವರುಗಳು ಮಾಡುತ್ತಿರುವ ಕೆಲಸ ಕಾರ್ಯಗಳು  ಅಲ್ಪ ಬದಲಾವಣೆಯಷ್ಟೇ ತರಬಹುದು. ಹಾಗಾಗಿ  ಪ್ರತಿಯೊಬ್ಬರೂ ಎಲ್ಲೇ ಇರಲಿ, ದೇಶ-ವಿದೇಶ, ಊರು ಪರವೂರು ಎನ್ನದೆ, ತನ್ನ ಮನೆ,  ಕೆಲಸ ಮಾಡುವ ಪ್ರದೇಶಗಳಲ್ಲಿ ಉಂಟಾಗುವ ಕಸಗಳನ್ನು ನಿರ್ದಿಷ್ಟ ತೊಟ್ಟಿಯಲ್ಲಿ ಹಾಕುವ ಕಾರ್ಯವನ್ನು ಮಾಡಲೇಬೇಕು. ಇದರಿಂದ ಪ್ರಕೃತಿಯ  ಸೇವೆ, ಪ್ರಕೃತಿಯನ್ನು ಕಾಪಾಡಿದ ಪುಣ್ಯ ನಿಮ್ಮ ಕೈ ಸೇರಬಹುದು.          ಪ್ಲಾಸ್ಟಿಕ್ ಮತ್ತು ಕಾಗದಗಳ  ಬಳಕೆಗೆ ಸರ್ಕಾರ ಸಾಕಷ್ಟು ಕಾನೂನಿನ ತಿದ್ದುಪಡಿ ಮಾಡಿದ್ದರೂ, ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಜನಗಳು  ಕಡಿಮೆಯಾಗ

(ಲೇಖನ -5)ಜೀವನದಲ್ಲಿ ತೃಪ್ತಿಯಿಂದ ಬದುಕುವವರು ಯಾರು? ಜೀವನಪೂರ್ತಿ ಅತೃಪ್ತರಾಗಿ ಇರುವವರು ಯಾರು? ಎಲ್ಲರಿಗಾಗಿ ಬದುಕುವವರು ಯಾರು?

Image
 ಜೀವನದಲ್ಲಿ ತೃಪ್ತಿಯಿಂದ ಬದುಕುವವರು ಯಾರು? ಜೀವನಪೂರ್ತಿ ಅತೃಪ್ತರಾಗಿ ಇರುವವರು ಯಾರು? ಎಲ್ಲರಿಗಾಗಿ ಬದುಕುವವರು ಯಾರು? ಇಂತಹ ಪ್ರಶ್ನೆಗೆ ಉತ್ತರ ಬಹಳ ಸುಲಭವಾಗಿ ಕೊಡಲು ಸಾಧ್ಯವಿಲ್ಲ, ತೃಪ್ತಿ ಅನ್ನುವುದು ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಇರುವುದನ್ನು ಸಂತೋಷದಿಂದ ಒಪ್ಪಿಕೊಂಡು ಬದುಕುವುದು. ನಮ್ಮಲಿರುವ ಪ್ರತೀ ವಸ್ತು, ಹುದ್ದೆ, ಮತ್ತು ನಮ್ಮ ಮೇಲಿರುವ ಪ್ರೀತಿಯನ್ನ ಹೆಮ್ಮೆಯಿಂದ ಒಪ್ಪಿಕೊಳ್ಳುವ ಮನುಷ್ಯರು ಯಾವತ್ತೂ ತೃಪ್ತಿಯಿಂದ ಬದುಕುತ್ತಾರೆ.  ಮನುಜನಾಗಿ ಜನಿಸಿದವರು ಬಹಳಷ್ಟು ವಿರಳ ಜನರು ತೃಪ್ತಿಯಾಗಿದ್ದೇನೆ ಎಂದು ಹೇಳುವುದನ್ನು ನೀವೆಲ್ಲರೂ ಕೇಳಿರುತ್ತಿರಿ. ತೃಪ್ತಿಯಾಗಿದ್ದೇನೆ ಎಂದು ಹೇಳುವವರು ಹೆಚ್ಚಾಗಿ ಆಸೆಗಳ ಹಿಂದೆ ಸುತ್ತಾಡುವುದಿಲ್ಲ.     ಅತೃಪ್ತರು ಆಸೆಗಳ ದಾಸರು, ಅವರು ಯಾವ ಕೆಲಸವನ್ನು ಒಪ್ಪುವುದಿಲ್ಲ, ಹೋಗಳುವುದಿಲ್ಲ, ಮತ್ತವರಿಗಾಗಿ ಬಿಟ್ಟು ಕೊಡುವುದಿಲ್ಲ, ತಾನೊಬ್ಬನೇ ಶ್ರೇಷ್ಠ ಎಂದು ತೋರಿಸುತ್ತಾರೆ, ತಾನೊಬ್ಬನೇ ಸಾಹಸಿ ಎಂದು ಹೇಳಿಕೊಳ್ಳುತ್ತಾರೆ, ತಮ್ಮ ಚಟುವಟಿಕೆಗಳನ್ನು ತೊರ್ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ತನ್ನ ಸುತ್ತಲಿರುವ ಜನರನ್ನು ಓಲೈಸಲು ಹರಸಾಹಸ ಪಡುತ್ತಾ, ತನ್ನ ಸ್ವಂತಿಕೆಗಾಗಿ ತೃಪ್ತಿಯನ್ನು ತೊರ್ಪಡಿಸಿ ಜೀವನಪರ್ಯಂತ ಅತೃಪ್ತರಾಗಿ, ಪಾಲಿಗೆ ಬಂದದ್ದೇ ಪಂಚಾಮೃತವೆಂದು ಜೀವನಪೂರ್ತಿ ಒದ್ದಾಡುತ್ತಾರೆ, ಅತೃಪ್ತರಾಗಿಯೇ ಆಗಲುತ್ತಾರೆ.         ಎಲ್ಲರಿಗಾಗಿ ಬದುಕುವವರು,  ತನಗಿರ

(ಲೇಖನ -6)ನಿನ್ನ ಜೀವನ ನಿನ್ನದೇ ಕರ್ಮಗಳಿಗನುಸಾರವಾಗಿ ಎಂದು ಹೇಳಬಹುದೇ?

Image
ನಿನ್ನ ಜೀವನ ನಿನ್ನದೇ ಕರ್ಮಗಳಿಗನುಸಾರವಾಗಿ ಎಂದು ಹೇಳಬಹುದೇ? ಹೌದು ಒಮ್ಮೆಮ್ಮೆ ಜೀವನದಲ್ಲಿ ನಡೆಯುವ ವಿಷಯಗಳು ನಾವೇನು ಮಾಡಿರುತ್ತೇವೆಯೊ ಅದನ್ನೇ ಅನುಭವಿಸುತ್ತೇವೆ ಅನಿಸುತ್ತದೆ ಅದು ಕೆಟ್ಟ ವಿಷಯವಾಗಲಿ, ಒಳ್ಳೆ ವಿಚಾರಗಳೆ ಆಗಲಿ. ಇವತ್ತಿನ ಒಂದು ನಿದರ್ಶನ ನಿಮ್ಮಲ್ಲಿ ಹೇಳುವುದಕ್ಕೆ ಇಚ್ಚಿಸುತ್ತೇನೆ. ಮಾಡಿದುಣ್ಣೋ ಮಾರಾಯ ಅಥವಾ ಮಾಡಿದ ಕರ್ಮ ತಿನ್ನುತ್ತಾರೆ ಎಂಬ ಮಾತನ್ನು ಆಗಾಗ ಕೇಳುತ್ತೇವೆ. ನಾನು ಈ ಮುಂಚಿನ ಲೇಖನದಲ್ಲಿ ಪಾಪ - ಪುಣ್ಯ - ಕರ್ಮದ ಬಗ್ಗೆ ಬರೆದಿದ್ದೆ. ಅದು ನನ್ನ ಕರ್ಮವೋ ತಿಳಿಯದು, ಆದರೆ ಇವತ್ತಿನ ವಿಷಯದಲ್ಲಿ ಬರೆಯಲೇಬೇಕೆಂಬ ಮನಸಿನಿಂದ ರಾತ್ರಿ 12.30 ಕ್ಕೆ ಈ ಲೇಖನ ಬರೆಯುತ್ತಿದ್ದೇನೆ.          ದಿನಚರಿಯಂತೆ ಬೆಳಗೆದ್ದು ಕಾಯಕ್ಕಾಗಿ ನನ್ನ ಪಯಣ, ದಾರಿ ಮದ್ಯೆ ನನ್ನ ಮಗಳ ಪಾಸ್ಪೋರ್ಟ್ ಸಂಖ್ಯೆ ಸರಿಯಿಲ್ಲದ ಕಾರಣ ಸರಕಾರಿ ಕಛೇರಿಗೆ ತೆರಳಿದೆ, ಬಹಳಷ್ಟು ವ್ಯವಸ್ಥಿತವಾಗಿರುವ ಸರಕಾರಿ ಕಛೇರಿಗಳು, ಯಾವುದೇ ವ್ಯಕ್ತಿ ಒಳಗೆ ಹೋದಂತೆ ಟೋಕನ್ ಮೆಷಿನ್ ನಲ್ಲಿ ಟೋಕನ್ ತೆಗೆದುಕೊಂಡು ನಮ್ಮ ಕಾಗದ ಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ದಾಖಲೆ ಪರಿಶೀಲಿಸಿ ತನ್ನ ಸಹಿ ಹಾಕಿ ಮುಂದಿನ ಹೆಜ್ಜೆಗೆ ಅನುವು ಮಾಡಿಕೊಡುತ್ತಾರೆ. ಯಾವುದೇ ಅನಗತ್ಯ ಮಾತು, ಅಥವಾ ಸಮಯ ವ್ಯರ್ಥ ಮಾಡದೆ ಬರುವ ಪ್ರತೀ ನಾಗರೀಕರಿಗೆ, (ದೇಶ ವಿದೇಶ ) ತಾರತಮ್ಯವಿಲ್ಲದೆ ಬೇಕಾದ ಕೆಲಸಗಳು ಬೇಗನೆ ಮುಗಿದುಬಿಡುತ್ತದೆ. ಅದಿರಲಿ ಬಹಳಷ್ಟು ಸಂತೋಷ,        ನಾನ

(ಲೇಖನ -7)ಅಪರಿಚಿತನಿಗೆ ಹಾಕಿದ ಅನ್ನದ ಪ್ರತಿಫಲ, ಕೆಲವೊಮ್ಮೆ ನಮ್ಮನ್ನು ಪರೀಕ್ಷಿಸಲು ದೇವರುಗಳು ಬರುತ್ತಾರೆ

Image
 ಅಪರಿಚಿತನಿಗೆ ಹಾಕಿದ ಅನ್ನದ ಪ್ರತಿಫಲ,  ಕೆಲವೊಮ್ಮೆ ನಮ್ಮನ್ನು ಪರೀಕ್ಷಿಸಲು ದೇವರುಗಳು ಬರುತ್ತಾರೆ ಎಂಬುದು ವಾಡಿಕೆ ಮಾತು, ಹೌದು ಇಂತಹ ನಿದರ್ಶನಗಳು ನಿಮ್ಮ ಜೀವನದಲ್ಲಿ ಆಗಿರಬಹುದು. ನಿರ್ದಿಷ್ಟ ಸಮಯಗಳೆನ್ನದೆ ನಿಮ್ಮ ಜೀವನದಲ್ಲಿ ಅದೆಷ್ಟೋಜನರು ಭಿಕ್ಷುಕರು, ಹಿರಿಯ ನಾಗರೀಕರು, ಮಧ್ಯವಯಸ್ಕರು, ಮಕ್ಕಳೆನ್ನದೆ  ಅನ್ನಕ್ಕಾಗಿ ಪರದಾಡುತ್ತಿರುವ ಪ್ರಸಂಗಗಳು ಕಂಡಿರಬಹುದು.       ಅದೊಂದು ದಿನ,  ಕೆಲಸನಿಮಿತ್ತ ಪಟ್ಟಣದ ಕಡೆಗೆ ಪಯಣ, ನನ್ನೊಂದಿಗೆ ನನ್ನ ಗೆಳೆಯ, ಸಾಧಾರಣವಾಗಿ ಊರಲ್ಲಿ ಚಿಕ್ಕ ಪುಟ್ಟ ಹೋಟೆಲು, ಗೂಡಿನಂಗಡಿ ಗೆ ಆಹಾರವನ್ನು ಸೇವಿಸಲು ಹೋಗುವ ಅಭ್ಯಾಸ,  ಚಿಕ್ಕಮಟ್ಟದ ವ್ಯಾಪಾರಿಗಳಿಗೆ ಉಪಕಾರವಾಗಲಿ ಅನ್ನುವ ಉದ್ದೇಶದಿಂದ, ಉಡುಪಿ ಸಮೀಪ ಮದ್ಯಾಹ್ನದ ಸಮಯ ಊಟಕೆಂದು ಹೋಗಿ ಕುಳಿತಾಗ, ನಾವು ಊಟ ಪ್ರಾರಂಭ ಮಾಡುವ ಸಮಯದಲ್ಲಿ ಮುದಿವಯಸ್ಸಿನ ವ್ಯಕ್ತಿಯೊಬ್ಬರು ಊಟಕ್ಕಾಗಿ ಅದೇ ಸ್ಥಳಕ್ಕೆ ಆಗಮಿಸಿದ್ದರು, ಕೈಲಿ ಒಂದು ಕೋಲು, ಹಣ್ಣಾಗಿ ಹೋಗಿರುವ ಕೂದಲು, ಉದ್ದನೆಯ ಗಡ್ಡ, ಹರುಕು ಮುರುಕು ಬಟ್ಟೆ, ಮತ್ತು ಪಂಚೆಯನುಟ್ಟು, ಮಾಲೀಕನಲ್ಲಿ ಊಟಕ್ಕೆ ಎಷ್ಟು ಎಂದು ಕೇಳಿಬಿಟ್ಟರು. ಊಟಕ್ಕೆ 50 ರೂಪಾಯಿ ಅಂದುಬಿಟ್ಟ ಮಾಲಿಕ. ಅದನ್ನು ಕೇಳಿದ ವ್ಯಕ್ತಿ, ತನ್ನ ಕಿಸೆಯಲ್ಲಿ 10 ರೂಪಾಯಿ ನೋಟನ್ನು ಅವರಿಗೆ ಕೊಟ್ಟು,  ನನಗೆ ಅನ್ನ ಸಾರು ಹಾಕು ಸಾಕು ಅನ್ನುತ್ತಾ ಟೇಬಲ್ ಮೇಲೆ ಕುಳಿತರು. ವ್ಯಾಪಾರಿ 10 ರುಪಾಯಿಗೆ ಏನು ಬರುತ್ತೆ ಎಂದು ಹೇಳುವ ಮೊದಲು, ಆ

(ಲೇಖನ -8)ಮೊದಲು ಮಾನವನಾಗು, ಬರೇ ತೋರ್ಪಡಿಕೆಯ ಜೀವನ ಸಲ್ಲದು, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಆಗಬಾರದು

Image
ಮೊದಲು ಮಾನವನಾಗು, ಬರೇ ತೋರ್ಪಡಿಕೆಯ ಜೀವನ ಸಲ್ಲದು, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಆಗಬಾರದು, ಸಹಾಯ ಮಾಡುವುದಿದ್ದರೆ ನಿನ್ನ ಆತ್ಮತೃಪ್ತಿಗಾಗಿ ಮಾಡಿಕೊಳ್ಳು, ಈ ಮಾತನ್ನು ಭಾರತದ ಅನುರಾಗ ಗುಂಪಿನ ಸದಸ್ಯರೊಬ್ಬರ ಮಾತು. ನಿನ್ನ ಜೀವನದಲ್ಲಿ ಮಾಡುತ್ತಿರುವ ಚಿಕ್ಕಪುಟ್ಟ ಸಹಾಯಗಳು ದೊಡ್ಡದಾಗುತ್ತಾ ಹೋಗುತ್ತದೆ, ಅದು ಹಣದ ಮೂಲಕವಾಗಲಿ, ವಿವಿಧ ತರದ ಸಹಾಯದ ಮೂಲಕವಾಗಲಿ, ಏನೇ ಇರಲಿ, ನೀನು ಮಾಡುತ್ತಿರುವ ಸತ್ಕರ್ಮಗಳು  ನಿನ್ನ ಮುಂದಿನ ಜೀವನಕ್ಕೆ ಬೆನ್ನೆಲುಬಾಗಿ ನಿನಗೆ ತಿಳಿಯದಂತೆ ಕಾಪಾಡುತ್ತಿರುತ್ತದೆ.      ಎಲ್ಲರೂ ಜೀವನದಲ್ಲಿ ಸಂಪಾದನೆಯನ್ನು ಮಾಡುತ್ತಾರೆ, ತಾನು ಮಾಡಿದ ಸಂಪಾದನೆಯಲ್ಲಿ  ಒಂದಷ್ಟು ಸಮಾಜಕ್ಕಾಗಿ ಮೀಸಲಿಡುವ ಜನರೂ  ಇದ್ದಾರೆ, ಒಂದಷ್ಟು ಜನರು ಸಮಾಜ ನಮಗೆ ಏನು ಕೊಡುತ್ತದೆ  ಸಮಾಜ ನಮಗೆ ಅಗತ್ಯವಿಲ್ಲ  ಎಂಬಂತೆ ಬದುಕುವವರಿದ್ದಾರೆ, ಧರ್ಮ ಸಂಪ್ರದಾಯ ಎಲ್ಲವೂ ನಮಗೆ ಬೇಕು  ಆದರೆ ಎಲ್ಲವೂ ಇತಿಮಿತಿಯಲ್ಲಿರಬೇಕು. ಯಾವುದೂ ಅತಿರೇಕವಾದರೆ ಸಮಸ್ಯೆಗಳು ತಾನಾಗೆ ಹುಟ್ಟಿಕೊಳ್ಳುತ್ತದೆ. ಸರಾಸರಿ ಶೇಕಡ  20ರಷ್ಟು ಜನಗಳು  ತನ್ನನ್ನು ತಾನು  ಅನ್ಯರ ಸೇವೆಗಾಗಿ  ತೊಡಗಿಸಿಕೊಳ್ಳುತ್ತಾರೆ. ನಿಮ್ಮ ಸುತ್ತಮುತ್ತಲು  ಒಮ್ಮೆ ಕಣ್ಣು ಹಾಯಿಸಿ ನೋಡಿ  ಕೆಲವೇ ಕೆಲವು ಜನರು  ಸದ್ದಿಲ್ಲದೆ, ತನ್ನಿಂದಾಗುವ  ಒಳಿತಿನ ಕೆಲಸವನ್ನು  ಯಾವುದೇ ಅಪೇಕ್ಷೆ ಗಳಿಲ್ಲದೆ ಮಾಡುತ್ತಿರುತ್ತಾರೆ. ಅವರು  ನಿಜವಾದ ಮಾನವಕುಲದ ಆಸ್ತಿಗಳು, ಅಂತವರು  ಅನ್ಯರಿ

(ಲೇಖನ -9)ಸಮಾಜ ಸೇವಕರು ದೇಶದ ಸೈನಿಕರಿದ್ದಂತೆ, ಸಮಾಜದ ಸೇವೆ ಎಂದರೆ ಅಷ್ಟು ಸುಲಭದ ಮಾತಲ್ಲ,

Image
 ಸಮಾಜ ಸೇವಕರು ದೇಶದ ಸೈನಿಕರಿದ್ದಂತೆ, ಸಮಾಜದ ಸೇವೆ ಎಂದರೆ ಅಷ್ಟು ಸುಲಭದ ಮಾತಲ್ಲ, ಯಾವುದೇ ಆಸೆಗೆ ಒಳಗಾಗದೆ ತನ್ನ ಸುತ್ತಮುತ್ತಲಿನ ಜನರ ಆರೈಕೆ, ಸಮಸ್ಯೆಗಳಿಗೆ ಸ್ಪಂದಿಸುತ್ತಾ ತನ್ನ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಡುವ  ಸೈನಿಕರಂತೆ. ಹೌದು ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಸಮಸ್ಯೆಗಳನ್ನೇ ಎದುರಿಸಲು ಸಾಧ್ಯವಿಲ್ಲ, ಅದರ ನಡುವೆ ಸಮಾಜಕ್ಕಾಗಿ ಸೇವೆ ಮಾಡುವ ಮುತ್ತಿನಂತಹ ಮನುಜರ ಬಗ್ಗೆ ಅಲ್ಪವಾದರೂ ಯೋಚಿಸುವ ಜನರೇ ಬಹಳ ವಿರಳ.        ಸಮಾಜ ಸೇವಕರು, ತನ್ನ ಸಮಸ್ಯೆಯನ್ನು ಬದಿಗೊತ್ತಿ ರಾತ್ರಿ ಹಗಲೆನ್ನದೆ ತನ್ನನ್ನು ತಾನು ಮತ್ತವರಿಗಾಗಿ ಜೀವಿಸುವ ಮುತ್ತಿನಂತಹ ಮನುಷ್ಯರು. ಯಾವುದೇ ಸಮಯದಲ್ಲಿ ಸ್ಪಂದಿಸಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡುತ್ತ ಊರಿನ ಪರವೂರಿನ ಯಾವುದೇ ಸಮಸ್ಯೆಗಳಿಗೆ ಎದೆಯೊಡ್ಡಿ ನಿಲ್ಲುವ ಧೀರರು. ನ್ಯಾಯ , ನೀತಿ ರಾಜಕೀಯ, ಬಡವ, ಬಲ್ಲಿದನೆಂಬ ಬೇಧಭಾವಗಳಿಲ್ಲದೆ ದಿನದ ಇಪ್ಪತಾನಾಲ್ಕು ಘಂಟೆಯಲ್ಲೂ ಸ್ಪಂದಿಸಿ ಸಹಕರಿಸಿ ಜೀವನ ಮಾಡುವ ಯೋಗ್ಯ ಮನುಜರು. ಇವರುಗಳು ದೇಶದ, ಮಾನವ ಕುಲದ ನಿಜವಾದ ಆಸ್ತಿಗಳು, ಮಾನವೀಯತೆ, ಕರುಣೆ, ಮನುಷತ್ವ ಅರಿತ ಮನುಜರು.       ಸಮಾಜಸೇವೆಯ ಭಾವನೆ ಸುಮ್ಮನೆ ಬರಲು ಸಾಧ್ಯವಿಲ್ಲ, ಮೊದಲಾಗಿ ತನ್ನ ಮನೆಯಿಂದ ಕಲಿತು ಬಂದಿರುವ ಸಂಸ್ಕಾರವಾಗಿರುತ್ತದೆ, ಅಥವಾ ತನ್ನ ಜೀವನದಲ್ಲಿ ಏನಾದರು ಅವಘಡ ಸಂಭವಿಸಿ ಜೀವನ ಏನೆಂದು ಅರಿತು ಇನ್ನುಳಿದ ದಿನದಲ್ಲಿ ಒಳಿತನ್ನು ಮಾಡಿ ಅಗಲಿಬಿಡಬೇಕು ಅನ್ನುವ ಯೋಚ

(ಲೇಖನ -10) ನಿನ್ನ ಹೆಸರಲೊಂದು ಗಿಡ ಬೆಳೆಸು, ನಿನ್ನ ಹೆಸರಲೊಂದು ಮರವನ್ನುಳಿಸು, ನಾಗರೀಕತೆ ಬೆಳೆದಂತೆ ಪ್ರಾಣಿ ಪಕ್ಷಿ, ಪ್ರಕೃತಿಯನ್ನು ನಾಶಪಡಿಸುತ್ತಿರುವ ನಾವುಗಳು, ನಾಳೆಯ ದಿನವನ್ನು ಬಹಳ ಶೋಚನಿಯ ಸ್ಥಿತಿಗೆ ತಲುಪಿಸುತ್ತಿದ್ದೇವೆ,

Image
ನಿನ್ನ ಹೆಸರಲೊಂದು ಗಿಡ ಬೆಳೆಸು, ನಿನ್ನ ಹೆಸರಲೊಂದು ಮರವನ್ನುಳಿಸು, ನಾಗರೀಕತೆ ಬೆಳೆದಂತೆ ಪ್ರಾಣಿ ಪಕ್ಷಿ, ಪ್ರಕೃತಿಯನ್ನು ನಾಶಪಡಿಸುತ್ತಿರುವ ನಾವುಗಳು, ನಾಳೆಯ ದಿನವನ್ನು ಬಹಳ ಶೋಚನಿಯ ಸ್ಥಿತಿಗೆ ತಲುಪಿಸುತ್ತಿದ್ದೇವೆ,        ಅಭಿವೃದ್ಧಿ ಎನ್ನುವ ಕಾರಣವಿಟ್ಟು, ಸುತ್ತಮುತ್ತಲಿರುವ ಕಾಡು ಪ್ರದೇಶವನ್ನು ಪಟ್ಟಣವಾಗಿ ಮಾರ್ಪಡಿಸಿ, ಶುದ್ಧ ಗಾಳಿ, ನೀರು, ಸ್ವಚ್ಛ ಪರಿಸರದಿಂದ ದಿನದಿಂದ ದಿನಕ್ಕೆ ದೂರವಾಗುತ್ತಿದ್ದೇವೆ. ಹತ್ತು ಹದಿನೈದು ಅಥವಾ ಇಪ್ಪತ್ತು ವರುಷಗಳ ಹಿಂದೆ ಇದ್ದ ನಮ್ಮ ಹಳ್ಳಿ ಪ್ರದೇಶಗಳು ಇಂದಿನ ದಿನಗಳಲ್ಲಿ ಸಂಪೂರ್ಣವಾಗಿ ಪಟ್ಟಣ, ಮಾನವ ವಸತಿ ಪ್ರದೇಶಗಳಿಂದ ಕೂಡಿದ್ದು, ನೀರಿಗೂ ಪರದಾಟ ಮಾಡುವ ಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಯಾರು ಜವಾಬ್ದಾರರು ಅಲ್ಲವೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಬಂದಿದ್ದರೆ, ಅದಕ್ಕೆ ನಾವೆಲ್ಲರೂ ಜವಾಬ್ದಾರರು ಎಂದು ಹೇಳಬಹುದು. ಒಂದು ಮರವನ್ನು ಕಡಿಯುವ ಮೊದಲು ಎರಡು ಗಿಡವನ್ನು ನೆಡುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಿದರೆ ಮುಂದಿನ ದಿನಗಳಲ್ಲಿ ಅಲ್ಪವಾದರೂ ಹಸಿರು ಭೂಮಿಯನ್ನು ಕಾಣಬಹುದು. ತಪ್ಪಿದ್ದಲ್ಲಿ ನೆರೆ, ಭೂಕುಸಿತ, ಮತ್ತಿತರ ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿ ಮನುಜ ಸಂಕುಲವೇ ನಾಶವಾಗುವ ಮಟ್ಟಕ್ಕೆ ತಲುಪುವ ದಿನಗಳು ದೂರವಿಲ್ಲ.          ಅರಣ್ಯ ಇಲಾಖೆ, ರಾಜಕೀಯ ನಾಯಕರು, ಮತ್ತು ಪ್ರತೀ ಭಾರತೀಯ ಪ್ರಜೆ ಪ್ರಕೃತಿಯ ರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು, ಸಾಧ್ಯವಾದಷ್ಟು ಮಟ್ಟಿ

(ಲೇಖನ -12)ಕುರುಡು - ಅನರ್ಥ -ಅನರ್ಹ ಮಾಧ್ಯಮಗಳು, ಸಮಾಜದ ಶಾಂತಿ ಕಾಪಾಡಲು ಸಾಧ್ಯವೇ? ಹೌದು, ತಂತ್ರಜ್ಞಾನ ಮುಂದುವರೆದಂತೆ, ಮಾನವನಿಗೆ ಸಿಗುವ ಸವಲತ್ತುಗಳು ಜಾಸ್ತಿಯಾಗುತ್ತಿದೆ.

Image
ಕುರುಡು - ಅನರ್ಥ -ಅನರ್ಹ ಮಾಧ್ಯಮಗಳು, ಸಮಾಜದ ಶಾಂತಿ ಕಾಪಾಡಲು ಸಾಧ್ಯವೇ? ಹೌದು, ತಂತ್ರಜ್ಞಾನ ಮುಂದುವರೆದಂತೆ, ಮಾನವನಿಗೆ ಸಿಗುವ ಸವಲತ್ತುಗಳು ಜಾಸ್ತಿಯಾಗುತ್ತಿದೆ. ನಿಮಿಷದೊಳಗೆ ಪ್ರಪಂಚದಾದ್ಯಂತ ಸುದ್ದಿಯನ್ನು ಹರಡುವಷ್ಟು ಮಾನವ ನಿರ್ಮಿತ ತಂತ್ರಜ್ಞಾನ ಮುಂದುವರಿದಿದೆ, ನಿಜವಾಗಲೂ ನಮಗೆ ಸಿಗುವ ಎಲ್ಲಾ ಸುದ್ದಿಗಳು ನಿಜಾಂಶ ಹೊಂದಿರುತ್ತದೆಯೇ? ಯಾವ ಸುದ್ದಿ ನಿಜ, ಯಾವುದು ತಪ್ಪು ಅನ್ನುವ ಗೋಜಿಗೆ ಹೋಗದೆ ಮನಸ್ಸಿಗೆ ತೋಚಿದಂತೆ ಹಬ್ಬಿಸುವ ಮಾಧ್ಯಮಗಳು ನಾಯಿ ಕೊಡೆಗಳಂತೆ ಪ್ರಸ್ತುತ ದಿನಗಳಲ್ಲಿ ಜಾಸ್ತಿಯಾಗಿಬಿಟ್ಟಿದೆ. ಹೆಚ್ಚಿನ ಟಿವಿ ಮಾಧ್ಯಮಗಳು ಬಂಡವಾಳ ಶಾಹಿಗಳು ಮತ್ತು ರಾಜಕೀಯ ವ್ಯಕ್ತಿಗಳ ಕಪಿಮುಷ್ಟಿಯಲ್ಲಿದ್ದು, ಕೆಲವರು ತನ್ನತನವನ್ನು ತೋರಿಸಲು ಅವರದ್ದೇ ಆದ ರೀತಿಯಲ್ಲಿ ಸಮಾಜಕ್ಕೆ ತಪ್ಪು ಸಂದೇಶಗಳನ್ನು ರವಾನಿಸಿ ದೇಶ ವಿದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಹವಣಿಸುತಿರುತ್ತಾರೆ, ಇದರಲ್ಲಿ ಸಾಮಾಜಿಕ ಜಾಲತಾಣ ಅತೀ ಮುಖ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ಆಂತರಿಕ ವಿಷಯಗಳಲ್ಲೂ ಬೇಕಾಬಿಟ್ಟಿ ಗೀಚುವ ಅದೆಷ್ಟು ಜನರು ಈಗಲೂ ಜೀವಂತವಾಗಿದ್ದಾರೆ.           ಹೌದು ಪ್ರತಿಯೊಂದು ಸುದ್ದಿಗಳು ಸತ್ಯವನ್ನು ಹೊಂದಿರುವುದಿಲ್ಲ, ಸುದ್ದಿಗಳು ಸುದ್ದಿಯಾಗಿ ಕಳೆದುಹೋಗುತ್ತದೆ, ಸಮಾಜಕ್ಕೊಳಿತು ಮಾಡುವ ಸುದ್ದಿಗಳು ಜನರು ಬೇಗನೆ ಕೇಳುವುದಿಲ್ಲ, ಅದಕ್ಕಾಗಿ ಟಿವಿ ಮಾಧ್ಯಮದ ಕೆಲವು ಜನರು ತನ್ನ ಹೊಟ್ಟೆಪಾಡಿಗಾಗಿ ಸುಳ್ಳು ಸುದ್ದಿಯನ್ನು

(ಲೇಖನ -11)ಕನಸಿನ ದೋಣಿ......

Image
 ಕನಸಿನ ದೋಣಿ.... ಕನಸಿಲ್ಲದ ಬದುಕು ವ್ಯರ್ಥ, ಮನಸಿಲ್ಲದ ಕಾಯಕ ವ್ಯರ್ಥ, ಮನುಜನಾಗಿ ಹುಟ್ಟಿದವನಿಗೆ ಕನಸುಗಳು ಇರಬೇಕು ಮತ್ತು ಅದನ್ನು ಈಡೇರಿಸುವ ಛಲವೂ ಇರಬೇಕು. ಆ ಕನಸು ಈಡೇರಬೇಕಾದರೆ ಹಗಲಿರುಳು ಶ್ರಮ ಇರಲೇಬೇಕು, ಶ್ರಮವಿಲ್ಲದೆ ಸಿಗುವ ಯಾವುದೇ ವಸ್ತುವಿನ ಬೆಲೆ ನಮಗೆ ತಿಳಿದಿರುವುದಿಲ್ಲ. ಮನೆಯಾಗಲಿ, ವಾಹನವಾಗಲಿ, ಐಶ್ವರ್ಯ, ಆಸ್ತಿ, ಗೌರವ, ಸ್ಥಾನ ಮಾನ ಯಾವುದಿದ್ದರೂ ಶ್ರಮಪಡಬೇಕು.       ಕೆಲವರು ತನ್ನ ಕನಸಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದರೆ, ಕೆಲವರು ಕನಸನ್ನು ಬುದ್ದಿವಂತಿಕೆಯಿಂದ ಸಾಕರಗೋಳಿಸುತ್ತಾರೆ. ಕನಸಿಲ್ಲದ ಜನರು ಜೀವನದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ. ನಿಮಗೆ ಏನಾದರು ಮಾಡಬೇಕು ಎಂಬ ಛಲವಿದ್ದರೆ ಅದನ್ನು ಗಳಿಸಲು ಶ್ರಮ ಪಡುತ್ತಲೇ ಇರುತ್ತೀರಿ, ನಿಮಗೆ ತಿಳಿದು ಅಥವಾ ತಿಳಿಯದೆ ಮಾಡುತ್ತ ಇರುತ್ತೀರಿ.      ಪ್ರಪಂಚದಲ್ಲಿ ವಿವಿಧ ಚಿಂತನೆ, ವಿಚಾರ, ಧ್ಯೇಯ ಮತ್ತು ಕನಸುಗಳನ್ನು ಹೊಂದಿರುವ ಮನುಜರಿರುತ್ತಾರೆ ಕೆಲವರ ಧ್ಯೇಯ, ಉದ್ದೇಶ, ಅನ್ಯರನ್ನು ನಾಶಮಾಡಲು ಉಪಯೋಗಿಸಿದರೆ, ಕೆಲವರು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಕೆಲವರು ಸಮಾಜಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ.  ಏನಿದ್ದರೂ ನಿನ್ನ ಕನಸಿನ ದೋಣಿ ದಡಸೇರಲು ನಿನಗೆ ಹಠ ಇರಲೇಬೇಕು, ಎಲ್ಲರೂ ದಡ ತಲುಪಲು ಸಾಧ್ಯವಿಲ್ಲ, ಬದುಕೆಂಬ ನೌಕೆಗೆ ಆಕಸ್ಮಿಕ ಬಿರುಗಾಳಿ ಸಿಕ್ಕಿ ನಲುಗಿ ದಡ ಸೇರದೆ ಮುಳುಗಲು ಬಹುದು, ಆದರೆ ಛಲವೆಂಬ ಬಾಣವನ್ನು ನಾನು ನೀನು ಉಪಯೋಗಿಸ

(ಲೇಖನ -13)ಯಾರಿಗಾದರೂ ಸಹಾಯ ಮಾಡಿದ್ದರೆ, ಇನ್ನೊಬ್ಬರಿಗೆ ತಿಳಿಯಬೇಕಾಗಿಲ್ಲ, ನಿಸ್ವಾರ್ಥವಾಗಿ ಮಾಡು!

Image
ಯಾರಿಗಾದರೂ ಸಹಾಯ ಮಾಡಿದ್ದರೆ, ಇನ್ನೊಬ್ಬರಿಗೆ ತಿಳಿಯಬೇಕಾಗಿಲ್ಲ, ನಿಸ್ವಾರ್ಥವಾಗಿ ಮಾಡು! ನನ್ನ ಆತ್ಮೀಯರೊಬ್ಬರ ಮಾತು, ಮಾತನ್ನಾಡುವುದು ಸುಲಭ ಆಡಿದ ಮಾತನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವವರು ಬಹಳ ವಿರಳ. ಅದೆಷ್ಟು ವರುಷದ ಗೆಳೆತನ, ಯಾವುದೇ ಅತಿಯಾಸೆ, ಅತೀ ಮಾತು, ಇನ್ನೊಬ್ಬರಿಗೆ ಕೇಡನ್ನು ಬಯಸಿರುವ ವ್ಯಕ್ತಿಯಂತೂ ಅಲ್ಲವೇ ಅಲ್ಲ.  ಸರ್ ನಿಮ್ಮಂತಿರುವ ವ್ಯಕ್ತಿ ಸದ್ದು ಮಾಡದೇ ಅದೆಷ್ಟು ಜನರಿಗೆ  ಅಪತ್ಕಾಲದಲ್ಲಿ ಸಹಾಯ ಮಾಡುತ್ತಿರುತ್ತಾರೆ ಅಲ್ಲವೇ, ಅದು ಇನ್ನೊಬರಿಗೆ ಪ್ರೇರಣೆ ಅಲ್ಲವೇ ಅಂದುಬಿಟ್ಟೆ,.. ಅವರ ಪ್ರತಿಯುತ್ತರ ನನ್ನ ಆತ್ಮಕ್ಕೆ ಗೊತ್ತಿದ್ದರೆ ಸಾಕು ಮತ್ತು ಮೇಲೊಬ್ಬ ದೇವನಿದ್ದಾನೆ ಅವನಿಗೆ ನನ್ನ ಲೆಕ್ಕಾಚಾರ ಗೊತ್ತಿರುತ್ತದೆ ಮತ್ಯಾರಿಗೂ ಬೇಕಾಗಿಲ್ಲ ಅವನ ಆಶೀರ್ವಾದ ಇದ್ದರೆ ಸಾಕು ?         ತಿಳಿಯಬೇಕಾದ್ದು ತುಂಬಾನೆ ಇದೆ, ನಿಮ್ಮ ಸುತ್ತಮುತ್ತಲೂ ಇಂತಹ ಜನರು ಇರಬಹುದು, ಇವರೆಲ್ಲರೂ ಸಮುದ್ರದ ಆಳದಲ್ಲಿ ಸಿಗುವ ಮುತ್ತಿನಂತೆ ಬಹಳ ವಿರಳ ಮತ್ತು ಮೌಲ್ಯವುಳ್ಳವರು. ಜೀವನವೆಂದರೆ ಏನೆಂದು ಅರ್ಥ ಮಾಡಿಕೊಂಡಿರುವವರು. ಹೊಗಳಿಕೆ, ಆಡಂಭರ ಬಯಸದೆ, ಸತ್ಯವಂತರಾಗಿ ಬಾಳುವವರು. ಬದುಕಿರುವಷ್ಟು ದಿನ ಆ ದೇವರು ನನ್ನನ್ನು ಕಾಪಾಡುತ್ತಿರಲಿ ಅನ್ನುವ ವಿಶ್ವಾಸದಿಂದ ಬದುಕುವವರು.     ಅಂತವರ ಗೆಳೆತನ ಮಾಡಿಕೊಳ್ಳಿ, ಅವರಂತೆ ಬದುಕಲು ಶ್ರಮಿಸಿ ಇರುವ ದಿನಗಳಲ್ಲಿ ಉಸಿರಲ್ಲಿ ಉಸಿರಾಗಿ ಬಾಳುವ ಜನರೊಂದಿಗೆ ಬೆರೆಯುವ ಪದ್ದತಿಯನ್ನು ಬ