Posts

Showing posts from 2021

ಸಿರಿವಂತ (ಕವನ -1)

ತಾನು ನೋವಲಿದ್ದು  ಇನ್ನೊಬ್ಬರ ನೋವಲಿ  ಭಾಗಿಯಾಗುವವನು ಗುಣವಂತ! ತಾನು ಸುಖವಾಗಿದ್ದು ಜೊತೆಯಾಗಿರುವವರ ಸಂತೋಷ ಬಯಸುವವನು ಹೃದಯವಂತ! ತಾನು ನಗುನಗುತ ಇನ್ನೊಬ್ಬರ ಮೊಗದಲಿ ನಗು ಬಯಸುವವನು ನಿಜವಾದ ಸಿರಿವಂತ!            - ಮಾಧವ ನಾಯ್ಕ್ ಅಂಜಾರು  ತಾನು ಕೋಪಗೊಂಡು

ಸದ್ದು ಬೇಡ (ಕವನ 4)

ಸದ್ದು ಮಾಡಬೇಡ ******†****** ಹಾರಾಡು ಹಕ್ಕಿಯಂತೆ ಹೋರಾಡು ಹುಲಿಯಂತೆ ಜೀವಿಸುತಿರು ರಾಜನಂತೆ ಏನೇ ಬರಲಿ ಏನೇ ಇರಲಿ ಘರ್ಜಿಸುತಿರು ಸಿಂಹದಂತೆ ನಿನಗ್ಯಾರು ಸಮರಿಲ್ಲ ಈ ಲೋಕಕೆ ಮಿತಿಯಿಲ್ಲ ಹಾಯಾಗಿ ಬದುಕುತಿರು ಬಿರುಗಾಳಿಗೂ ಅಲುಗಾಡದಿರು  ಗದರಿಕೆಗೆ ಬೆದರದಿರು ನಾಳೆಎಂಬುದ ಅರಿತವರಿಲ್ಲ ಗೆದ್ದು ಬಿದ್ದವರೂ ಉಳಿಯಲಿಲ್ಲ ಸದ್ದು ಮಾಡುವ ಕೊಡವಾಗದೆ ತುಂಬಿದ ಹೃದಯದ ಮನುಜ ನೀನಾಗಿರು!      - ಮಾಧವ ಅಂಜಾರು 

ಲಂಚ ಕೊಡು (ಕವನ 5)

ಪಿಂಚಣಿ ಬೇಕೇ ಲಂಚ ಕೊಡು ದಾಖಲೆ ಬೇಕೇ ಲಂಚ ಕೊಡು ಮನೆ ಕಟ್ಟಬೇಕೇ ಲಂಚ ಕೊಡು ಸಾಲ ಬೇಕೇ ಲಂಚ ಕೊಡು ಜನನ ಪತ್ರ ಬೇಕೇ ಲಂಚ ಕೊಡು ಮರಣ ಪತ್ರ ಬೇಕೇ ಲಂಚ ಕೊಡು ನ್ಯಾಯ ಬೇಕೇ ಲಂಚಕೊಡು ಅನ್ಯಾಯ ಮಾಡಬೇಕೆ ಲಂಚ ಕೊಡು ಪಂಚಾಯತ್ ಹೋದರೆ ಲಂಚ ತಾಲೂಕ ಹೋದರೆ ಲಂಚ ಜಿಲ್ಲೆಗೆ ಹೋದರೆ ಲಂಚ ರಾಜ್ಯಕೆ ಹೋದರೂ ಲಂಚ ಸರ್ಕಾರಿ ಸವಲತ್ತಿಗೆ ಲಂಚ ಯೋಜನೆ ಬೇಕೇ ಲಂಚ ಕೊಡು ಬಾವಿ ಬೇಕೇ ಲಂಚ ಕೊಡು ಕೆರೆ ಬೇಕೇ ಲಂಚ ಕೊಡು ಮಂಚ ಬೇಕೇ ಲಂಚ ಕೊಡು ಗಾಳಿ ಬೇಕೇ ಲಂಚ ಕೊಡು ಚಿಕಿತ್ಸೆ ಬೇಕೇ ಲಂಚ ಕೊಡು ಸತ್ತ ಹೆಣ ಬೇಕೇ ಲಂಚ ಕೊಡು ದುಡ್ಡಿಲ್ಲವೇ ನೀ ಸುಮ್ಮನಿದ್ದುಬಿಡು            ✍️ಮಾಧವ ಅಂಜಾರು 😔

ಆಪತ್ತಿಗೂ ಇರಲಾರ (ಕವನ 6)

ತನ್ನ ಬೆನ್ನು ತಟ್ಟಿಕೊಳ್ಳುವವ ಇನ್ನೊಬ್ಬರ ಬೆನ್ನು ತಟ್ಟಲಾರ ಅನ್ಯರಿಗೆ ನೋವುಣಿಸುವವ ಹಸಿವೆಂದರೆ ನೀಗಿಸಲಾರ, ಹುಸಿ ಮಾತನಾಡುವವ ಸಹಾಯವಂತೂ ಮಾಡಲಾರ ದಿನಾ ನಶೆಯಲ್ಲಿರುವವನು ನಾಳೆಯ ದಿನಕೆ ಯೋಚಿಸಲಾರ, ತನ್ನ ಸಂಪತ್ತು ತೋರಿಸುವವ ಆಪತ್ತಿಗೂ ಇರಲಾರ ಬಾಹ್ಯ ಸೌಂದರ್ಯ ಹೊಗಳುವವ ಅಂತರಾಳ ಕರುಣೆ ತಿಳಿಯಲಾರ ಅಧಿಕಾರದಾಸೆ ಹೊಂದಿರುವವ ಸಜ್ಜನಿಕೆಯ ಪಾಠ ಕಲಿಯಲಾರ ವಿದ್ಯಾವಂತನೆಂದು ಹೇಳಿಕೊಳ್ಳುವವ ವಿದ್ಯೆಯ ಅರ್ಥ ಅರಿಯಲಾರ,                   ✍️ಮಾಧವ ಅಂಜಾರು 🙏🌹

ಕ್ಷಣ ಸಾಕು ನಿನಗೆ (ಕವನ -7)

ಪೆದ್ದನಿಗೆ, ನಿ ಪೆದ್ದ ಹೇಳಬೇಡ ಹುಚ್ಚನಿಗೆ ನೀ ಹುಚ್ಚನೆಂದು ಹೇಳಲು  ಹೋಗಬೇಡ ಕಳ್ಳನಿಗೆ ನೀ ಕಳ್ಳನೆಂದು ಸುಳ್ಳನಿಗೆ ನೀ ಸುಳ್ಳುಗಾರನೆಂದು ಹೇಳಿ ಕೆಡಬೇಡ! ಇರುವುದೆಲ್ಲವ ಹೇಳಿ ಅವರ ಸಾಲಿಗೆ ನೀ ಸೇರಬೇಡ, ಮೂಕನ  ಹೀಯಾಳಿಸಬೇಡ ರೋಗಿಗೆ ಶಪಿಸಲೂ ಬೇಡ ಯೋಗಿಯ ಜೊತೆ ಬಿಡಬೇಡ ರಾಗಿ ತಿಂದು ಬದುಕುವವನ ನಿಂದಿಸಿ ನೀ ಕೆಡಬೇಡ ಎಲ್ಲಾ ಉಳ್ಳವನೆಂದು ಬೀಗಬೇಡ ಒಂದು ಕ್ಷಣ ಸಾಕು ನಿನಗೆ ಉಸಿರು ಉಳಿಸಲಾಗದು ಕೊನೆಗೆ!           -✍️ಮಾಧವ ಅಂಜಾರು 🌷

ಚೆಂದುಳ್ಳಿ ನೀನು (ಕವನ -8)

ಚೆಂದದ ಚೆಂದುಳ್ಳಿ ನೀನು ಅಂದದ ಮಿಂಚುಳ್ಳಿ ನೀನು ಬಿಂಕದ ಹೆಜ್ಜೆಯ  ಹಾಕುತ  ಎನ್ನ ಹೃದಯ ಸೇರಿದೆ ನೀನು ಹೂಬಳ್ಳಿ  ನಿನಗಾಗಿ ನಾನು ಎನ್ನ ಸುತ್ತಿ  ಮಲಗು ನೀನು  ಸುಗಂಧ ಪರಿಮಳವೇ ನೀನು ಮಕರಂದ ಹೀರೋ ದುಂಬಿ ನಾನು ಹಾಯಾಗಿ ಜೊತೆಗಿರು ನೀನು ನಿನ್ನ ಕಾಯುತ್ತಾ ಕೂರುವೆ ನಾನು ಪ್ರೀತಿಯ ಜೀವ ನೀನು ನಿನಗಾಗಿ ಉಸಿರಾಡುತಲಿರುವೆನು             ✍️ಮಾಧವ ಅಂಜಾರು 🌷

(ಲೇಖನ -25)ಬಾನೆತ್ತರದಲ್ಲಿ ಕಂಡ ಸ್ಮಶಾನ

Image
 ಬಾನೆತ್ತರದಲ್ಲಿ ಕಂಡ ಸ್ಮಶಾನ ಪ್ರತಿಯೊಂದು ಜೀವಿಯೂ ಹುಟ್ಟಿದಾಗ ಸಾವೆಂಬ ಬುತ್ತಿಯನ್ನು ಕಟ್ಟಿಕೊಂಡು ಬಂದಿರುತ್ತದೆ. ಆ ಸಾವಿನ ಬುತ್ತಿಯನ್ನು ಯಮರಾಜ ಯಾವಾಗ ತೆರೆದು ಬಿಡುವನು ಎಂಬುದು ಯಾರಿಗೂ ಹೇಳಿರೋದಿಲ್ಲ.   ಸಹಜವಾಗಿ ಎಂದಿನಂತೆ ಮನೆಯಲ್ಲಿನ ಕೆಲಸ ಕಾರ್ಯಗಳನ್ನು ಮುಗಿಸಿ ಕಛೇರಿಗೆ ಹೊರಟ ನಾನು ಸಮಯಕ್ಕಿಂತ ಹತ್ತು ನಿಮಿಷಗಳ ಕಾಲ ಮೊದಲೇ ತಲುಪಿದ್ದೆ. ತಾಂತ್ರಿಕ ಸಂಬಂದಿಸಿದ ಕೆಲಸಗಳು ವಿವಿಧ ಸರಕಾರಿ ಕಛೇರಿ ಮತ್ತು ಖಾಸಗಿ ಸಂಸ್ಥೆ ಗಳಿಗೆ ಹೋಗಿ ಮಾಡಿ ಬರಬೇಕಾದ ಅನಿವಾರ್ಯತೆ. ಅಂದು ಬುಧವಾರ ಕುವೈಟ್ ಎಂಬ ಮಾಯಾನಗರ ಅದರ ಹೃದಯ ಭಾಗದಲ್ಲಿ ಬಾನೆತ್ತರದ ಕಟ್ಟಡಗಳು ಅದರ ಸುತ್ತ ಸುಂದರ ಸುವ್ಯವಸ್ಥಿತ ರಸ್ತೆಗಳು, ಸಾವಿರಾರು ಜನರ ಓಡಾಟ ಪ್ರಪಂಚದಲ್ಲಿ ತಯಾರಾಗುವ ಎಲ್ಲಾ ತರಹದ ಕಾರುಗಳು ಶಬ್ದ ಮಾಲಿನ್ಯ ವಿಲ್ಲದೆ ಓಡಾಟ ಮಾಡುತ್ತಿರುತ್ತದೆ . ಅದರೊಳಗೆ ಸಾಮಾನ್ಯ ಜನರಿಂದ ಸೇರಿ ಪ್ರಭಾವಿ ಜನರು ಜೀವನಕ್ಕಾಗಿ, ಸಂತೋಷಕ್ಕಾಗಿ, ಪರಿಶ್ರಮ, ಚಿಂತೆ ದುಮ್ಮಾನಗಳೊಂದಿಗೆ ದಿನವನ್ನು ಕಳೆಯುತ್ತಿರುತ್ತಾರೆ.         ಸಮಯ ಬೆಳಗ್ಗಿನ 8 ಗಂಟೆ 50 ನಿಮಿಷ  ಎಂಬತ್ತು ಮಹಡಿಯ ಬೃಹದಾಕಾರದ ಗಗನಚುಂಬಿ ಕಟ್ಟಡ, ಕೆಲಸನಿಮಿತ್ತ 78ನೇ  ಮಹಡಿ ಗೆ ನನ್ನ ಪಯಣ, ಆ ದಿನಕ್ಕಿಂತ ಮೊದಲು ಅದೆಷ್ಟೋ ಬಾರಿ ಅಲ್ಲಿಗೆ ಹೋಗಿದ್ದೆ ಆದರೆ ಈ ಬರವಣಿಗೆ ಮೂಡಿ ಬರಲು ನಾನು ಆ ದಿನ ಕಂಡ ದೃಶ್ಯ ಕಾರಣವಾಯಿತು. ಕಟ್ಟಡದ ಹೊರ ಆವರಣ ಪಾರದರ್ಶಕ ಗಾಜು ಮೇಲೆ ಹೋದಾಗ ಆಕಾಶದಲ್ಲಿ ಇರುವ ಅನು

ಜಾಣರಲ್ಲ (ಕವನ -9)

ಮುಂದಿನ ಸಾಲಲಿ ಕುಳಿತಿರೋರೆಲ್ಲ ಜಾಣರಲ್ಲ ಹಿಂದಿನ ಸಾಲಲಿ ಕೂರುವವರೆಲ್ಲ ದಡ್ಡರೂ ಅಲ್ಲ ಬಣ್ಣ ಬಣ್ಣದ ಉಡುಗೆ ತೊಡುವವರೆಲ್ಲ  ಸಿರಿವಂತರಲ್ಲ ಕಣ್ಣಿಗೆ ಕಂಡರೂ ಕಾಣದಂತಿರುವವರು ಕುರುಡರಲ್ಲ ಬುದ್ಧಿಮಾತು ಹೇಳುವವರೆಲ್ಲ ಸತ್ಯವಂತರಲ್ಲ ಸಿಟ್ಟಲ್ಲಿ ಮಾತಾಡುವವರೆಲ್ಲ ಕೆಟ್ಟವರೂ  ಅಲ್ಲ ನಿನ್ನೊಳಗಿನ ಗುಟ್ಟು ಶಿವನೇ ಬಲ್ಲ ದೇವನ ಕಣ್ಣುತಪ್ಪಿಸೋಕೆ ಸಾಧ್ಯವಂತೂ ಇಲ್ಲ     ✍️ಮಾಧವ ಅಂಜಾರು 🌷

ಬಾಳು -ಗೋಳು (ಕವನ -10)

ಬಾಳು - ಗೋಳು *********** ಮೂರು ದಿನದ ಬಾಳು ಮಾಡೋರಿರುವರು ಗೋಳು ದಿನ, ವಾರ, ತಿಂಗಳು ಹರಿಹಾಯ್ವರು  ಹಗಲಿರುಳು, ಒಂದೊತ್ತಿನ ಊಟಕೂ ಕನ್ನ ಹಾಕೋ ಜನಕೂ ಅವರಲಿರೋ ದುಷ್ಟಚಟಕೂ ಕಷ್ಟ ನಷ್ಟವು  ಸಮಾಜಕೂ, ಅಸತ್ಯ ಕೂಡಿದ ಜನರು ಅಲ್ಲಲ್ಲಿ ತುಂಬುತಿಹರು ಸತ್ಯ ಕಾಯೋ ಹಲವರು ನಶಿಸಿ ಹೋಗುತಿಹರು, ✍️ಮಾಧವ ನಾಯ್ಕ್ ಅಂಜಾರು 🌹

ದೇವರೇ ಕಣ್ಣ ತೆರೆ (ಕವನ -12)

ಕಣ್ಣ ತೆರೆ ದೇವರೇ ************ ನೀನ್ಯಾಕೆ ಕಲ್ಲಾಗಿರುವೆ ಎನ್ನ ಅಳಲು ಕೇಳಬಾರದೆಂದೇ? ನೀನ್ಯಾಕೆ ಮೌನವಾಗಿರುವೆ ಎನ್ನ ಪ್ರಾರ್ಥನೆಗೆ ಅರ್ಥವಿಲ್ಲವೆಂದೇ? ನೀನ್ಯಾಕೆ ಮರೆಯಾಗಿರುವೆ ನಿನ್ನ ಕಂಡರೆ ಬಿಡಲಾರೆನೆಂದೇ? ನೊಂದು ಬಸವಳಿದೆ ಅಂದು,  ಇಂದೂ ಭುವಿಯಲಿ ನಡೆಯೋ ಅನಾಚರವ ಕಂಡು ನಿಲ್ಲುತ್ತಿಲ್ಲ ಅಲ್ಪವೂ ಭಯವಿಲ್ಲ ಸ್ವಲ್ಪವೂ ನಿನ್ನ ನಂಬಿದೆನಗೆ ದಿನವೆಲ್ಲಾ  ಯಾಕೀ ನೋವು? ನೀನಿದ್ದರೆ ಕಣ್ಣತೆರೆ ನೀನಿದ್ದರೆ ಮೌನತೊರೆ ನೀನಿದ್ದರೆ ದೇವರೇ ಎನಗೊಳಿತು ಬರೆ ಆಲಿಸೆನ್ನ ಪ್ರೀತಿಯ ಕರೆ ಇಲ್ಲವೆಂದಾದರೆನ್ನ ನಿನ್ನ ಬಳಿ ಬೇಗ ಕರೆ 😢 ✍️ಮಾಧವ ನಾಯ್ಕ್ ಅಂಜಾರು 🌹

ಪಾಪದ ಕೊಡ (ಕವನ -11)

ಪಾಪದ ಕೊಡ ********** ಜೀವನದಿ ನಿರಂತರ ಕಷ್ಟಗಳೇ ಎದುರಿಗಿದ್ದಲ್ಲಿ ಕಷ್ಟವೇನೆಂದು ನಮಗೆ ಪೂರ್ತಿ ತಿಳಿದಿರುತ್ತದೆ, ಕಷ್ಟದಲಿ ಜೀವನವೇ ಬೇಡವೆನಿಸಿದಾಗ ಕಷ್ಟವನು ಸರಿಸಿನಿಲ್ಲುವ ಶಕ್ತಿ ನಮಗೆ ಸಿಗುತ್ತದೆ,  ದುಷ್ಟರಿಂದ ಕಷ್ಟವಾದರೆ ಅವರ ಪಾಪದಕೊಡ ತುಂಬುತ್ತಿದ್ದಾರೆಂಬ ಸತ್ಯ, ಮತ್ತೇನಾದರೂ ಕಷ್ಟವಿದ್ದರೆ ಇನ್ನೊಬ್ಬರ ನೋವ ಅನುಭವಿಸುತ್ತೇವೆಂಬ ಸತ್ಯ, ದೂರವಾಗಲಿ ಕಷ್ಟ ಈಡೇರಲಿ ನಮ್ಮಿಷ್ಟ. ✍️ಮಾಧವ ಅಂಜಾರು🌹🙏

ಕನ್ನಡ ಶಾಲೆ (ಕವನ -13)

ಕನ್ನಡ ಶಾಲೆ ******** ಒಂದು ಚೀಲ ಒಂದು ಕೊಡೆ ಒಂದು ಜೊತೆ ಬಟ್ಟೆಯು ಸಾಕಿತ್ತು ಕನ್ನಡ ಶಾಲೆಗೆ ಒಂದು ಶಾಲೆಗೆ ಒಬ್ಬ ಮೇಸ್ಟ್ರು ಒಂದು ಊರಿಗೆ ನಾಲ್ಕು ಮೇಸ್ಟ್ರು ಸಾಕಿತ್ತು ಕನ್ನಡ ಶಾಲೆಗೆ ಒಂದು  ಮೈಲಿ ನಡೆದುಕೊಂಡು ಹಣ್ಣು ಹಂಪಲು ತಿಂದುಕೊಂಡು ಹೋಗುತಿದ್ದೆ ಕನ್ನಡ ಶಾಲೆಗೆ ಶಾಲೆ ಬಿಡುತ ರಾಷ್ಟ್ರಗೀತೆ ಆರಂಭದಲಿ ನಾಡ ಗೀತೆ ಕಲಿಯುತಿದ್ದೆ ಕನ್ನಡ ಶಾಲೆಯಲಿ ತಂದೆ ತಾಯಿ ದೇವರೆನುತ ದಿನಚರಿಯ ಬರೆದುಕೊಂಡು ಹೋಗುತಿದ್ದೆ ಕನ್ನಡ ಶಾಲೆಗೆ ನೂಲು ಸುತ್ತಿದ ಚೆಂಡಿನಲಿ ಲಗೋರಿ ಆಟವಾಡುತಲಿ ಕುಟ್ಟಿ ದೊಣ್ಣೆಯ ಆಟವು ನಡೆಯುತಿತ್ತು ಶಾಲೆಯಲಿ ಕೊಕ್ಕೋ ಆಟ ಮರಕೋತಿಯಾಟವಾಡುತ ಆಲದ ಮರದ ಜೋಕಾಲಿ ದಾಟುತ್ತಿದ್ದೆ  ಮುಳ್ಳ ಬೇಲಿ ತುಂಬಿ ತುಳುಕುವ ಕೆರೆಯಲಿ ಮುಳುಗಿ ತೆಗೆದ ಹೂ ಕಮಲ ತಂದು ಮಾಲೆ ಮಾಡುತಲಿ ತೊಡುತ  ಕಲಿತೆ ಶಾಲೇಲಿ ಆದರಿಂದು ಬೀಗ ಬೀಳುತಿದೆ ಕನ್ನಡ ಶಾಲೆಯಲಿ ಹಂಚು ಹಳೆಯಾಗುತಿದೆ ಪ್ರತಿ ಕನ್ನಡ ಶಾಲೆಯಲಿ ಮಕ್ಕಳಿಲ್ಲದ ಶಾಲೇಲಿ ಕಾಯುತಿವೆ ಹಳೆ ಬೆಂಚು ಬೀಳುತಿದೆ ಕಪ್ಪು ಗೋಡೆ ಆವರಿಸುತಿದೆ ಬಳ್ಳಿ ಗಿಡಗಳು ✍️ಮಾಧವ ನಾಯ್ಕ್ ಅಂಜಾರು😔

ಮಾತನು ಕೇಳು (ಕವನ -14)

ಮಾತನು ಕೇಳು        *********** ತಾಳು ಮನವೇ ತಾಳು ಚಿಂತ್ಯಾಕೆ,  ನೀ ಹೇಳು ಆಡಿದ ಮಾತನು ಕೇಳು ನೋಡಿದ ಘಟನೆಯ ಸಾಲು ಸರಿಸಿ ನೀ  ಎದ್ದೇಳು!,  ಹಾಡು ಹೃದಯ ಹಾಡು ನಿನ್ನ ಕೆಲಸವ ಮಾಡು ಸೋಲಿಸುವರ ನೋಡು ತೀರಿಸಬೇಡ ಸೇಡು ಜಯಕ್ಕಾಗಿ ಹೋರಾಡು ! ಸಹಿಸು ಜೀವವೇ ಸಹಿಸು ಸಿಗುವ ನೋವ ಸಹಿಸು ಖುಷಿಯ ಕ್ಷಣ ನಮಿಸು ಪ್ರೀತಿ ಬಾಂಧವ್ಯ ಬೆಳೆಸು ಒಳ್ಳೆತನವ ಉಳಿಸು !    ✍️ಮಾಧವ ಅಂಜಾರು 🌹

ರೈತನೇ ಬೆನ್ನೆಲುಬು (ಕವನ -16)

ರೈತನೇ ಬೆನ್ನೆಲುಬು ************* ಬೆಳಗಿನ ತಿಂಡಿ ಗಂಜಿ ಊಟ ಸೂರ್ಯ ಉದಯಿಸುತ್ತಿದ್ದಂತೆ ಕರೆಯುತಿದ್ದ ಹಾಲು, ಹಕ್ಕಿಗಳ ಚಿಲಿಪಿಲಿ ಮುದ ನೀಡುತಿತ್ತು ದಿನಾಲೂ ಹುಂಜನ  ಕೂಗು ಕೇಳಿದ ಮಾತ್ರಕೆ ಕೋಳಿ ಮರಿಗಳ ಚಿಲಿಪಿಲಿ ಕೂಗು ಗೂಡಲಿ ಹೊರಗೆ ಓಡುತ ಸಾಗುತ ತೋಟದ ಕೀಟಗಳೆ ಕೋಳಿಗೆ ಊಟ ಅಂಗಳದಿ ಕರುವು ಅಂಬಾ ಎನುತಲೇ ಬಿಚ್ಚಿದ ಹಗ್ಗವ ಎಳೆದಾಡುತಲೇ ಸೇರಿತು ತಾಯಿಯ ಕೆಚ್ಚಲು ಗುದ್ದಲು ಪ್ರೀತಿಯ ಸವರಿಕೆ ನೆತ್ತಿಯ ಮೇಲೆ ಸಂತೋಷದಿ ಕರುವು ಕುಡಿಯಿತು ಹಾಲು ಕತ್ತಿಯ ಹರಿತಕೆ ಬೋರ್ಗಲ್ಲ ಹುಡಿಯು ಮರದ ದಿಂಬಿನ ಮೇಲೆ ಉಜ್ಜುತ್ತಾ ಮಾರುದ್ದದ ಹಗ್ಗವ ಸುತ್ತಿದ ಅಪ್ಪ ಮೈತುಂಬ ಬೆವರೊಂದಿಗೆ ಬರುತ್ತಲೇ ತಲೆಯಲಿ ಹುಲ್ಲಿನ ಮೇವು ಕೋಣಗಳ ಮುದ್ದಾಡುತಾ ಹಾಕಿದ ಮೇವು ಗಬ ಗಬ ತಿನ್ನುತಾ ನೋಡಿದ "ಕಾಳ " ತಂದೆಯ ಮೊಗದಲಿ ಅದೆಷ್ಟು ಆನಂದ ಇನ್ನಷ್ಟು ಹೊಟ್ಟೆಗೆ ತಿಂದನು "ಬೊಲ್ಲ " ಅಮ್ಮನ ಕೂಗು ಎಲ್ಲಿರುವಿರಿ ಮಕ್ಕಳೇ? ತಡವಾಯ್ತು ಎನಗೆ ಗದ್ದೆಗೆ ನಡೆಯಲು ನೇಜಿಯ ಎಳೆದು ಹಾಕಬೇಕೆನುತ ಓಡಿ ಓಡಿ ನಡೆದು ಬಂದಳು ಮೈಗೆ ಕೆಸರನು ಹೊತ್ತು ಮೊಸರಿನ ಗಂಜಿ ಬಟ್ಟಲು ತುಂಬ ತೆಗೆದರು ಭರಣಿಯ  ಉಪ್ಪಿನಕಾಯಿ ಹಪ್ಪಳ ಸೆಂಡಿಗೆ ಚಟ ಪಟ ಅಗಿಯುತ ಮಾವಿನ ಕಾಯಿಯ ರಸವನು ಸವಿಯುತ ದಿನವನು ದೂಡುವ ರೈತನ ಅಳಲು ಕೇಳಲು ಯಾರಿಲ್ಲ ಅವನ ನೋವು ಪೇಪರು ಟಿವಿ ಯಲಿ ದಿನವೂ ಕಾವು ರೈತರೇ ಬೆನ್ನೆಲುಬು ಅವನಿಗಿಲ

ನೀ ಎನ್ನ ದೇವತೆ (ಕವನ -15)

ನೀ ಎನ್ನ ದೇವತೆ ************ ನಾ ನಿನ್ನ ಮರೆಯಲಾರೆ ನೀ ನನ್ನ ಇಷ್ಟಪಟ್ಟರೆ ನಾ ನಿನ್ನ ಶಪಿಸಲಾರೆ ನೀ ಎನಗೆ ಕಷ್ಟ ಕೊಟ್ಟರೆ ನಾ ನಿನ್ನ ಬಿಡಲಾರೆ ನೀ ಎನ್ನ ನಂಬಿದ್ದರೆ ನಾ ನಿನ್ನ ತೊರೆಯಲಾರೆ ನೀ ಎನ್ನ ಬಳಿಯಿದ್ದರೆ, ನಾ ನಿನ್ನ ಕೇಳಲಾರೆ ನೀ ಎನ್ನ ಮನದಲಿದ್ದರೆ ನಾ ನಿನ್ನ ಶಪಿಸಲಾರೆ ನೀ ಎನ್ನ ಮನಗೆದ್ದರೆ ನಾ ನಿನ್ನ ನೋಯಿಸಲಾರೆ ನೀ ಎನ್ನ ನಗಿಸುತಿದ್ದರೆ ನಾ ನಿನ್ನ ತಡೆಯಲಾರೆ ನೀ ನನ್ನ ದೊಷಿಸುತಿದ್ದರೆ ನಾ ನಿನ್ನ ಉಸಿರೇ ನೀ ನನ್ನ ಉಸಿರಾಗಿರು ನಾ ನಿನ್ನ ನಗುವೇ ನೀ ನನ್ನ ಮಗುವಾಗಿರು ನಾ ನಿನ್ನ ಆಸ್ತಿಯೇ ನೀ ಎನ್ನ ಆಸ್ತಿಯಾಗಿರು ನಾ ನಿನ್ನ ದೇವರೇ ನೀ ಎನ್ನ ದೇವತೆಯಾಗಿರು ✍️ಮಾಧವ ನಾಯ್ಕ್ ಅಂಜಾರು 🌹🙏

ಬುದ್ದಿವಂತರು (ಕವನ -17)

ಬುದ್ಧಿವಂತ ********** ಯಾರು ಶಾಶ್ವತರು ಭುವಿಯಲಿ ಏನು ಶಾಶ್ವತವೋ ಬೇಕು ಬೇಡಗಳ ಹುಡುಕಾಟದಲಿ ಇಲ್ಲವಾಯಿತು ನೆಮ್ಮದಿ ಜೀವನದುದ್ದಕ್ಕೂ,  ಯಾರು ಪ್ರಬಲರು ಈ ಜಗದಲಿ ಯಾರು ಬುದ್ದಿವಂತರು ನಾನು ನಾನೆಂಬ ಹಠದಲಿ ಕಳೆದೋಯ್ತು ಬದುಕು ಶೀಘ್ರದಲಿ ಯಾವ ಪ್ರಶಸ್ತಿಯೋ ಸಮಾಜದಲಿ ಯಾಕೆ ಕುಸ್ತಿಯೋ ಗೌರವ ಪಡೆದ  ಮಾತ್ರಕೆ ಸಾರ್ಥಕವೇ ನಮ್ಮ ಬದುಕು? ✍️ಮಾಧವ ನಾಯ್ಕ್ ಅಂಜಾರು 🌹🙏

ಸ್ಪಂದನ (ಕವನ -18)

  ಸ್ಪಂದನ ******* ಇನ್ನೊಬ್ಬರ ನೋವಿಗೆ ಸ್ಪಂದಿಸುವ ಹೃದಯ ನಿಮ್ಮಲ್ಲಿದ್ದರೆ ನೋವನ್ನು ಸಹಿಸಿಕೊಳ್ಳಲು ಕೂಡ ನಿಮ್ಮ ಹೃದಯ ತಯಾರಿಯಲ್ಲಿರುತ್ತದೆ, ಇನ್ನೊಬ್ಬರ ಪ್ರೀತಿಗೆ ಸ್ಪಂದಿಸುವ ಮನಸ್ಸು ನಿಮ್ಮಲ್ಲಿದ್ದರೆ ಪ್ರೀತಿಯ ಅರ್ಥವೇನೆಂದು ತಿಳಿಸುವ ಶಕ್ತಿ ನಿಮ್ಮಲ್ಲಿರುತ್ತದೆ ಇನ್ನೊಬ್ಬರ ಅವನತಿಗೆ ಕಾಯುವ ಮನಸ್ಥಿತಿ ನಿಮ್ಮಲ್ಲಿದ್ದರೆ ಅವನತಿ ನಿಮ್ಮದೇ ಬಾಗಿಲಲ್ಲಿ ಕಾಯುತ್ತಿರುತ್ತದೆ ಒಂದಲ್ಲ ಒಂದು ದಿನ ಸತ್ಯ ಗೆಲ್ಲುತ್ತದೆ               ✍️ಮಾಧವ ಅಂಜಾರು 🌷 .

ನಿನ್ನ ಬಳಿ ಇರುವಾಗ (ಕವನ 19)

ನಿನ್ನ ಬಳಿ ಬರುವಾಗ *************** ನೀನೆನ್ನ ಹೊಗಳಬೇಡ ನಾ ನಿನ್ನ ಬಳಿಯಿದ್ದಾಗ ನೀನೆನ್ನ ತೆಗಳಬೇಡ ನಾನಿನಿತು ದೂರವಿದ್ದಾಗ ನೀನೆನ್ನ ಶಪಿಸಬೇಡ ಎಂದಾದರು ಕೋಪಗೊಂಡಾಗ, ನೀ ಎನ್ನ ಕೇಳಬೇಡ ಅಪ್ಪ ಅಮ್ಮನ ಜೊತೆಯಲಿರುವಾಗ ನೀ ಎನ್ನ ನೋಡಬೇಡ ಎನ್ನ ಕಣ್ಣು ತುಂಬಿಬಂದಾಗ ನೀ ಎನ್ನ ನೋಯಿಸಬೇಡ ಎನ್ನ ಜೀವನ ಸರಿಯಿಲ್ಲದಾಗ, ನೀ ಎನ್ನ ಕೈ ಬಿಡಬೇಡ ನಾ ನಿನ್ನ ಹಿಡಿಯುವಾಗ ನೀನಂತು ದೂರಸರಿಯಬೇಡ ನಾ ನಿನ್ನ ಬಳಿ ಬರುವಾಗ ನೀನೆನ್ನ ನೆನಪಿಸಬೇಡ ನಾನೆಲ್ಲವ ಬಿಟ್ಟು ಹೋದಾಗ, ✍️ಮಾಧವ ನಾಯ್ಕ್ ಅಂಜಾರು 🌹🙏

ಬೆಳಕಾಗಿ ನಾನಿರುವೆ (ಕವನ -20)

ಹೂವಾಗಿ ಬಂದಿರುವೆ ಎನ ಹೃದಯ ಸೇರಿರುವೆ ಜೋಗುಳವ ಹಾಡುತಲೇ ತಬ್ಬಿನಿನ್ನ ಮುದ್ದಾಡುವೆ ಹೆಜ್ಜೇನ ಸವಿದಂತೆ ತುಟಿಗೊಂದು  ಮುತ್ತಕೊಡುವೆ ಉಸಿರಲ್ಲಿ ಉಸಿರಾಗಿ ಕೊನೆತನಕ ಜೊತೆಗಿರುವೆ ಸಿಹಿಯಾದ ಮಾತೊಂದಿಗೆ  ನಿನಜೊತೆ ಹೆಜ್ಜೆಹಾಕುವೆ ರವಿಯಾಗಿ ನಿನಗಾಗಿ ಬೆಳಕಾಗಿ ನಾನಿರುವೆ ಸವಿಯಾದ ಬದುಕಲಿ ನೀ ನನ್ನ ಚಂದಿರ ನಿನ್ನ ನಗುವ ನೆನೆಯುತ ಬಾಳೆಲ್ಲ ಸುಮಧುರ      ✍️ಮಾಧವ ಅಂಜಾರು 🌷

ತನ್ನುಸಿರ ಅರ್ಥ (ಕವನ -21)

ಬುದ್ದಿ ಹೇಳೋಕೆ ನೀನ್ಯಾರು? ಅನ್ನುವವಗೆ ತಿದ್ದುವುದು ವ್ಯರ್ಥ ತಪ್ಪನ್ನು ಸಮರ್ಥಿಸಿಕೊಳ್ಳುವವಗೆ ನ್ಯಾಯಮಾತು ವ್ಯರ್ಥ ನಾನಿಲ್ಲದೆ ನೀನಿಲ್ಲ ಹೇಳುವವಗೆ ತಿಳಿದಿಲ್ಲ ಜಗದ ಅರ್ಥ ನಿನ್ನಿಂದ ನನಗೇನಾಗಬೇಕು ಅನ್ನುವವಗೆ ಸಹಾಯವೆಲ್ಲ ವ್ಯರ್ಥ ಹಸಿದವಗೆ ಆಹಾರದ ಬದಲು ಇನ್ನುಳಿದೆಲ್ಲವೂ ವ್ಯರ್ಥ ಉಸಿರೆಲ್ಲಾ ನೀನೇ ಹೇಳುವವಗೆ ತಿಳಿದಿಲ್ಲ ತನ್ನುಸಿರ ಅರ್ಥ           ✍️ಮಾಧವ ಅಂಜಾರು 🌷

ಬದುಕೆಂಬ ನೌಕೆ (ಕವನ -22)

ನೀನಾಡಿದ ಮಾತು ಕೊನೆಯದ್ದಾಗಿರಬಹುದು ನೀ ನೋಡಿದ ಜೀವ ಇನ್ನಿಲ್ಲವಾಗಬಹುದು ನೀ ತಿನ್ನಿರೋ ತಿನಸು ಸಿಗದಿರಲೂಬಹುದು, ನಿನ್ನಲಿರೋ ಶಕ್ತಿ ಕ್ಷೀಣವಾಗಬಹುದು ನಿನ್ನಲಿರೋ ಯುಕ್ತಿ ಉಪಯೋಗಕ್ಕಿರದು ನಿನ್ನಾಸ್ತಿಗಳೆಲ್ಲವೂ ಮಣ್ಣಾಗಲೂಬಹುದು, ಸಿಹಿಮಾತು ಉಳಿಯಬಹುದು ಕಹಿಮಾತುಗಳೂ ಉಳಿಯಬಹುದು ಬದುಕೆಂಬ ನೌಕೆಯು ಬಿರುಗಾಳಿಗೆ ಸಿಕ್ಕಿಬೀಳಬಹುದು ದೇವನೊಬ್ಬನ ಸಹಾಯವಿದ್ದರೆ ಎಲ್ಲಾದರೂ ಬದುಕಬಹುದು         ✍️ಮಾಧವ ನಾಯ್ಕ್ ಅಂಜಾರು 🌷

TPI

Image
 

ನಿನ್ನವರಿಲ್ಲ (ಕವನ 23)

ನಿನ್ನವರು ಯಾರು ಇಲ್ಲ ಇಲ್ಲಿ ನಿನ್ನವರು ಯಾರೂ ಇಲ್ಲ ಬೆಣ್ಣೆಯಂತೆ ಮಾತನ್ನಾಡಿ ಕನ್ನ ಹಾಕೋ ಜನರೇ ಎಲ್ಲಾ ನೊಂದು ನೀನು ಜೀವಿಸುತ್ತಿದ್ದರು ಬಂದು ತುಳಿಯೋ ಜನರೇ ಎಲ್ಲಾ, ಇಲ್ಲಿ ನಿನ್ನವರು ಯಾರೂ ಇಲ್ಲ ಬಂಧುಬಳಗ ಸೋಗಿನಲ್ಲಿ ಬಣ್ಣ ಬಣ್ಣದ ಚಿತ್ರಣವೆಲ್ಲ ಸಮಯ ಕೆಟ್ಟು ಸತ್ತು ಹೋದರೂ  ನಿನ್ನನಿನಿತು ನೆನೆಯೋರಿಲ್ಲ ಮಾಡಿದಕರ್ಮ ಜಾಸ್ತಿಯಾಗಿ ದೇವನಶಿಕ್ಷೆ ಹೇಳುವರೆಲ್ಲ ಇಲ್ಲಿ ನಿನ್ನವರು ಯಾರೂ ಇಲ್ಲ ನ್ಯಾಯನೀತಿ ಪಾಲಿಸೋರಿಲ್ಲ ಸಿರಿವಂತನ ಹಿಂಬಾಲಕರೆಲ್ಲ ಬಡವನೆಂದು ಅರಿತಮೇಲೆ ನಿನ್ನ ಬಳಿ ಸುಳಿಯೋರಿಲ್ಲ ಆಡಂಬರದ ಬದುಕಿಗಾಗಿ ಕಣ್ಣಿದ್ದೂ ಕುರುಡರೇ ಎಲ್ಲಾ ಇಲ್ಲಿ ನಿನ್ನವರು ಯಾರೂ ಇಲ್ಲ     ✍️ಮಾಧವ ನಾಯ್ಕ್ ಅಂಜಾರು🙏

ಈಗಲೇ (ಕವನ 24)

ಇಷ್ಟಪಟ್ಟಿದ್ದರೆ ಈಗಲೇ ವ್ಯಕ್ತಪಡಿಸು ನಾ ಸತ್ತು ಹೋದ ಮೇಲಲ್ಲ ಇಷ್ಟವಿದ್ದರೆ ನೀನೀಗಲೇ ಮಾತಾಡು ನಾ ಬೆಸ್ತು ಬಿದ್ದಾಗವಲ್ಲ ಇಷ್ಟವಿದ್ದರೆ ನೀನೀಗಲೇ ಗೆಳೆತನ ಬೆಳೆಸು ನಾ ದೂರ ಹೋದಾಗ ಅಲ್ಲ ಇಷ್ಟವಿದ್ದರೆ ನೀನೀಗಲೇ ಮಾತಾಡು ನಾ ಮಾತು ನಿಲಿಸಿದಾಗಲ್ಲ ಇಷ್ಟವಿದ್ದರೆ ನೀ ಈಗಲೇ ನಕ್ಕುಬಿಡು ನಾ ಬೇಸರ ಹೊಂದಿದಾಗಲ್ಲ ಇಷ್ಟವಿದ್ದರೆ ನೀ ಜೊತೆಯಲಿರು ನಾ ದೂರ ಹೋದಗಲಲ್ಲ    ✍️ಮಾಧವ ನಾಯ್ಕ್ ಅಂಜಾರು,,🙏

ಇನ್ನೇನು ಬೇಕು (ಕವನ -25)

ಇನ್ನೇನು ಬೇಕು ಜಗದಲಿ ರಕ್ಷಕರು ಭಕ್ಷಕರಾಗಿಹರು ಜನಸೇವಕರು ಕುರುಡರಾದರು  ಸತ್ಯವಾದ ತ್ಯಜಿಸಿರುವರು ನ್ಯಾಯ ಸತ್ತುಹೋಯಿತು  ಇನ್ನೇನು ಬೇಕು ಜಗದಲಿ ಅಧಿಕಾರ ಅಸ್ತ್ರವಾಯಿತು ಬಡವನ  ತುಳಿದಾಯಿತು ಸತ್ಯವನ್ನು ತಿರುಹಿಬಿಟ್ಟರು ಅತ್ಯಾಚಾರ ಮಿತಿಮೀರಿತು ಇನ್ನೇನು ಬೇಕು ಜಗದಲಿ ಅಣ್ಣ ತಮ್ಮನ ಕೊಲ್ಲುತಿಹರು  ಅಪ್ಪ ಮಗಳನ್ನು ಭೋಗಿಸಿದನು ತಮ್ಮ ಅಣ್ಣನ ಕೊಂದನು ಮಕ್ಕಳು ಪೋಷಕರ ತುಳಿದರು ಇನ್ನೇನು ಬೇಕು ಜಗದಲಿ ಮಾಂಗಲ್ಯದ ಅರ್ಥ ಹೋಯಿತು ವಿವಾಹಿತ ವಿಕೃತ ಸುಖ ಬಯಸಿದ ವಯಸ್ಸಿಗೆ ಮೊದಲೇ ಕಾಮ ಕಿರಿಯರನ್ನು ವಿವಾಹವಾದರು  ಇನ್ನೇನು ಬೇಕು ಜಗದಲಿ ಸಂಬಂಧಗಳು  ಬಿರುಕಾದವು  ಪ್ರೀತಿ ನಾಟಕವಾಯಿತು ಉಪಕರಿಸಿದವಗೆ ಉಪದ್ರವಿಸಿದರು ಸ್ನೇಹ ಸುಳ್ಳಾಯಿತು ಇನ್ನೇನು ಬೇಕು ಜಗದಲಿ ಆನೆಗೆ ಬೆಂಕಿಯಿಟ್ಟರು ನಾಯಿಯನ್ನು ಜಿವಂತ ಸುಟ್ಟರು ಮನುಷ್ಯನ ಜೀವಂತ ಸುಟ್ಟರು ಎಲ್ಲಾ ಪ್ರಾಣಿಗಳ ತಿಂದು ಬಿಟ್ಟರು ಇನ್ನೇನು ಬೇಕು ಜಗದಲಿ ಕಾಡುಗಳ ಅಳಿಸಿದರು  ನದಿಗಳ ನಾಶಗೈದರು ನಗು, ಅಳು  ಕಪಟವಾಯಿತು ದೇವರನ್ನೂ ಹೀಯಾಳಿಸಿದರು ಇನ್ನೇನು ಬೇಕು  ಜಗದಲಿ ಧರ್ಮಗಳು ಹೊಡೆದಾಡಿತು  ಜಾತಿಗಳು ಮತಿಗೆಟ್ಟಿತು ಮನುಷ್ಯತ್ವ ಇಲ್ಲವಾಯಿತು    ✍️ಮಾಧವ ನಾಯ್ಕ್ ಅಂಜಾರು 🌷

ಹೊಂಗಿರಣ (ಕವನ -26)

ನಿನಗಾಗಿಯೇ  ಕವನ ನಿನಗಾಗಿಯೇ ಈ ಜೀವನ ಹಾಯಾಗಿರಲಿ ಪ್ರತೀದಿನ ಬಾಳಪುಟಗಳ ತೋರಣ ನಿನಗಾಗಿಯೇ ಕವನ ಹಲವು ಸಂಧರ್ಭಗಳೇ ಕಾರಣ ಬೆಸೆದುಬಿಟ್ಟ ಸುಗುಣ ಹಸಿರಾಗಿರಲಿ ನಮ್ಮದಿನ ನಿನಗಾಗಿಯೇ ಈ ಕವನ ಎನ್ನೆದೆಯ ಗೂಡಲಿ ಬಡಿದಾಡುವ ಹೃದಯಕೆ ಸಿಹಿಮಾತುಗಳೇ ಹೊಂಗಿರಣ           ✍️ಮಾಧವ ನಾಯ್ಕ್ ಅಂಜಾರು 🌷

ಬೇಗನೆ ಅವತರಿಸು (ಕವನ -28)

ಏನ ಕಾಣಲಿ  ನಾನಿನ್ನೇನ ಕೇಳಲಿ ದೇವ ನೀನಿಲ್ಲವೆಂದು ಹೇಳುವವರು ಈ ಜಗದಲಿರುವಾಗ, ಎನ್ನ ದೂಷಿಸೋರು ಏನು ಮಹಾ ನಿನ್ನ ನೋವೆನಗೆಕೊಡು ನಾನಿನ್ನವನು ಜಗದೊಡೆಯ ನಿನ್ನೆಸರಲಿ ಮಾಡುವರು ಹಾಸ್ಯ ನಿನ್ನ ರೂಪವ ವಿರೂಪಗೊಳಿಸಿ ನೀನಿಲ್ಲವೆಂದೇ ಸಾರುತಿಹರು ಜನರು ಈ ಜಗದಲಿ ಕಲ್ಲಾಗಿರುವ ನಿನ್ನ ಕೊಲ್ಲುತಿಹರು ನಿನ್ನ ಜೊತೆಗಿರಿಸು ಎನ್ನನು ನೀನಿರಲು  ನಾನಿರುವೆ ನೀನಿಲ್ಲವೆಂದರೆ ನಾನಿರೆನು  ನಿನ್ನ ಪರೀಕ್ಷಿಸಿದವಗೆ ಎನ್ನ ಕಣ್ಣಮುಂದೆ ತೋರಿಸು ಸರ್ವ ಶಕ್ತಿ ನೀನೆಂದು ನೀ ಬೇಗನೆ ಬಂದು ಅವತರಿಸು          ✍️ಮಾಧವ ಅಂಜಾರು 🌷

ನಿನ್ನೊಲವ ನೀನಾಗಿರು (ಕವನ -27)

ನಿನ್ನ ಹೆತ್ತವಳು ಶಪಿಸುವಷ್ಟು ಕೆಟ್ಟವನಾಗಬೇಡ ಪಿತನನ್ನು ಹೀಯಾಳಿಸುವಷ್ಟು ಬೆಳೆದುನಿಲ ಬೇಡ ನೀನು ತಾಳಿ ಕಟ್ಟಿದವಳ  ಮನೆಗೆ ಕನ್ನ ಹಾಕಬೇಡ ನಿನ್ನ ನೋವನರಿವವಳ ದೂರ ನಿಲಿಸಬೇಡ ನಿನ್ನ ಜವಾಬ್ದಾರಿಯ ಮರೆತು ಮಾಯವಾಗಬೇಡ ಬೇಜವಾಬ್ದಾರಿ ತೋರುವ ಮನುಷ್ಯನಾಗಲೇ ಬೇಡ ನಿನ್ನವರಿಲ್ಲವೆಂದು ಅಳಬೇಡ ನಿನ್ನವರಿರುವರೆಂದು ಹೊಗಳಬೇಡ ನಿನ್ನೊಲವ ನೀನಾಗಿರು ನಾನೆಂಬುದ ಬಿಟ್ಟು ಹಾಯಾಗಿರು      ✍️ಮಾಧವ ನಾಯ್ಕ್ ಅಂಜಾರು 🌷

ಕೂ ಕೂ (ಕವನ 29)

ಕೂ ಕೂ ****** ಕೂ ಗೊಟ್ಟು ಕರೆಯುವೆ ಕರೆ ಕೇಳಿದರೆ ನೀ ಹೇಳು.. ಕೂ ಓ ಗೊಟ್ಟು ಬರುವೆ ನೀ ಕೂಗಿದರೆ ಕೂ ಸೇರಿಬಿಡು ನೀ ಕೋಗಿಲೆಯ ದನಿಯೊಳಗಿನ ಕೂ ಅದೆಷ್ಟು  ಸೌಲಭ್ಯ ಅದೆಷ್ಟು ವಿಶಾಲ ಇಂದು ನಾಳೆ ಎಂದಿಗೂ ಕೇಳಲಿ  ಕೂ ಕೂ.. ಸಾಮಾಜಿಕ ಜಾಲಕ್ಕೆ ಜೊತೆಯಾಯ್ತು ಭಾರತೀಯ ಕೂ (app)       ✍️ಮಾಧವ ನಾಯ್ಕ್ ಅಂಜಾರು 🙏

ಬಿಸಿ -ಮಸಿ (ಕವನ -31)

ಮುಖಕ್ಕೆ ಬಳಿದ ಮಸಿ ಮನಸ್ಸಿಗೆ ಹಚ್ಚಿದ ಮಸಿ ಏನಿದ್ದರೂ ತಲೆ ಬಿಸಿ ಒಟ್ಟಾರೆ ಕಸಿ ವಿಸಿ, ಹಚ್ಚಿಸಿಕೊಂಡವರು ಬಿಸಿ ಹಚ್ಚಿದವರೂ ಬಿಸಿ ಬಿಸಿ ಇಬ್ಬರ ಬಾಯಿ ತೆರೆದರು ಮಾತೆಲ್ಲ ಬಹಳ ಬಿಸಿ ಮನಸ್ಸು ಕಪ್ಪಗಿರುವವಗೆ ನಾಟುವುದೇ ಮಸಿ ಸಿಟ್ಟು ಜಾಸ್ತಿ ಇರುವವಗೆ  ಸಾಕೆ ಬರೇ ಮಸಿ? ಅವರ ಮುಖಕ್ಕೆ ಮಸಿ ಇವರ  ಕೈಗೆ ಮಸಿ ಮಸಿಯಾಯ್ತು ಇನ್ನಷ್ಟು ಬಿಸಿ ನೋಡುವವರಿಗೆ ಖುಷಿ?           ✍️ಮಾಧವ ನಾಯ್ಕ್ ಅಂಜಾರು 🌷        ✍️ಮಾಧವ 

ಪ್ರತಿಜ್ಞೆ (ಕವನ -32)

ನನ್ನ ಮಾತಲ್ಲಿ ನಿನಗೆ ಬೇಸರವಾದರೂ ಪರವಾಗಿಲ್ಲ ನನ್ನೊಂದಿಗಿರುವ ನಿನ್ನನ್ನು ದೂಷಿಸಲು ಬಿಡೋದಿಲ್ಲ ನನ್ನ ಮಾತಲ್ಲಿ ನಿನ್ನ  ಬೈದರೂ ನಾನು ಚಿಂತಿಸೋದಿಲ್ಲ ನನ್ನೆದುರು ನಿನ್ನ ದೂರುವವರನು ಸಹಿಸೋದಿಲ್ಲ ನನ್ನ ಬಿಟ್ಟು ಬಿಡುವೆ ಎಂದು ಹೇಳಿದರೂ ತೊಂದರೆಯಿಲ್ಲ ನಿನ್ನನು ಕೆಟ್ಟವ(ಳ)ನೆಂದು ಹೇಳಲು ನಾನು ಬಿಡೋದಿಲ್ಲ            ✍️ಮಾಧವ ನಾಯ್ಕ್ ಅಂಜಾರು 🌷

ಕನಸಲೂ ನೀನೆ (ಕವನ -34)

ಕನಸಲೂ ನೀನೆ,ಮನಸಲೂ ನೀನೆ ರವಿಮೂಡಿ ಬರುವಾಗ ಅರಳೋ ಹೂವು ನೀನೆ ನನ್ನೆದೆಯಗೂಡಲಿ  ಹೃದಯಬಡಿತವು ನೀನೆ ನನ್ನುಸಿರ ಗಾಳಿಯು  ನಿನ್ನಲ್ಲವೇ ಜಾಣೆ? ಹಗಳಲೂ ನೀನೆ ಇರುಳಲೂ ನೀನೆ ನಿನ್ನ ಕಣ್ಣಲಿ ಕಣ್ಣನಿಟ್ಟು ನೋಡುವಾಸೆ ಎನ್ನಲಿ ಹೊನ್ನಾಗಿ ನಿನ್ನ ಕೊರಳ ಅಲಂಕರಿಸುವ ಆಸೆಗೆ ಒಲ್ಲೆಯನ್ನಬೇಡ ಪ್ರೀಯೆ ಸೇರೆನ್ನ ಬಾಳ ಪುಟಕೆ       ✍️ಮಾಧವ ನಾಯ್ಕ್ ಅಂಜಾರು 🌷

ಜೊತೆಯಲಿ (ಕವನ 33)

ನೇಸರಮೂಡುತ ನಿನ್ನ ಸುಂದರ ಮೊಗವ ಕಾಣಲು ಆತುರ ನಗುವಬೀರುತ ಹಾಕುವ ಹೆಜ್ಜೆಯ  ನೋಡುವ ತವಕವೆನಗೆ ಓ ಚೆಲುವೆ ನಿನಗೆ ಸಾಸಿರ ಮುತ್ತನಿಯುವಾಸೆ ಘಾಸಿ ಮಾಡದಿರೆನ್ನ ಆಸೆಗೆ ಮೀಸಲಾಗಿರುವೆ ನಿನಗೆ ಪ್ರೀತಿಸಿಬಿಡೋಮ್ಮೆ ನಾ ನಿನ್ನ ಜೊತೆಯಲಿರುವೆ ಕೊನೆಯುಸಿರಿರೋತನಕ,        ✍️ಮಾಧವ ನಾಯ್ಕ್ ಅಂಜಾರು🌷

ಸರದಾರ (ಕವನ -35)

ನೋಯದಿರು ಒಲವೇ ಸಾಲು ಕಟು ಮಾತಿಗೆ ಹೇಯ ವೃತ್ತಿಯ ಜನರು ಘೀಲಿಡುವರು ಸುಮಾರು ಸೋಲದಿರು ಒಲವೇ ನೂರಾರು ಅಲೆಯೇರಿದರೂ ಮಾರುದ್ಧಕೆ ಒಬ್ಬರಿಗೊಬ್ಬರು ಕೋಟೆ ಕಟ್ಟಿ ಶ್ರಮಿಸಿದರೂ ಯಾರ ಭಯಬೇಡ ನಿನಗೆ ಸಾರಿ ಸಾರಿ ಹೇಳುತಿರು ಸೋಲಿಲ್ಲದ ಸರದಾರ ನಾನು ಎದೆತಟ್ಟು ನನ್ನೊಲವೇ ಕಲಿಯುಗದ ಈ ದಿನಗಳು ಬಲಿಪಶು ಮಾಡಲು ಕಾಯ್ದರೂ ಅಭಿಮನ್ಯು ನೀನಾಗು ಏಳು ಕೋಟೆಯ ಸಿಗಿದು ಸಾಲು ಸಾಲಾಗಿ ನೆಲಕಚ್ಚಿಸು ಶೂರ ನೀ ಹೇಳು ನನ್ನೊಲವೇ       ✍️ಮಾಧವ ನಾಯ್ಕ್ ಅಂಜಾರು 🌷

ನಂಬಿಕೆ (ಕವನ -36)

ಹುಚ್ಚರನ್ನು ನಂಬಬಹುದು ಹುಚ್ಚರಂತೆ ವರ್ತಿಸುವವರನ್ನು ನಂಬಲಾಗದು  ಹೆಚ್ಚು ಮಾತಾಡುವವರನು ನಂಬಬಹುದು ಹೊಟ್ಟೆಕಿಚ್ಚು ಮಾತಾಡುವವರನು ನಂಬಲಾಗದು! ನೊಂದು ಕಣ್ಣೀರು ಸುರಿಸುವವರ ಕಣ್ಣೀರ ಒರೆಸಬಹುದು ಮೊಸಳೆ ಕಣ್ಣೀರು ಸುರಿಸುವವರು ನಿನಗೆ  ಕಣ್ಣೀರ ಬರಿಸಬಹುದು ನಿದ್ದೆ ಮಾಡಿದವರನು ಎಬ್ಬಿಸಬಹುದು ನಿದ್ದೆ ಮಾಡಿದಂತೆ ನಟಿಸುವವರನು ಎಬ್ಬಿಸಲಾಗದು          ✍️ಮಾಧವ ನಾಯ್ಕ್ ಅಂಜಾರು 🌷            

ಕಳೆದೋಯ್ತು 8 ವರುಷ (ಕವನ -38)

ಮರವಾಗಿರೋ ಎನಗೆ ಬಳ್ಳಿಯಾದೆ ನೀನು ಸುಗಂಧ ಕುಸುಮವೆ ನೀ ಜೊತೆಯಾಗಿದ್ದರೆ ಎನ  ಜೀವನ ಸಂಪನ್ನ, ತಾಯಿಯಾಗಿ ನೀನು ಗೆಳತಿಯಾಗಿಯು ನೀನು ಜೀವನದ ಪ್ರತಿಹೆಜ್ಜೆಗೆ  ಹೂವಾಗಿರುವ ನೀನು ಎನ ಭಾಗ್ಯ ಮತ್ತಿನ್ನೇನು ಕಳೆದೋಯ್ತೆಂಟು ವರುಷ ಬೆಳೆದುಬಿಟ್ಟಿದು ಸಂಸಾರ ವೃಕ್ಷ ಮುಂದುವರಿಯಲಿ ನಮ್ಮ ಹರುಷ ಜೊತೆಯಾಗಿರು ಪ್ರತಿನಿಮಿಷ ಬಾಳೋಣ ಸಾವಿರ ವರುಷ       ✍️ಮಾಧವ ಅಂಜಾರು 🙏

ಹೊಗಳುವವರು (ಕವನ -37)

ನಿನ್ನ ಬಣ್ಣಿಸುವರಯ್ಯ ಹೊನ್ನ ಸರಮಾಲೆಯು  ಕೊರಳಲಿ ಇರುವಾಗ, ನಿನ್ನ ಹೊಗಳುವರಯ್ಯ ಬಣ್ಣ ಬಣ್ಣದ ಉಡುಗೆ ತೊಡುತ್ತ ಹೊರಟಾಗ ನಿನ್ನ ಪೂಜಿಸುರಯ್ಯಾ ಜ್ಞಾನ ನಿನ್ನಲಿರುವಾಗ ದಾನ ಧರ್ಮವಿರುವಾಗ, ನಿನ್ನ ಹೀಯಾಳಿಸುವರಯ್ಯ ಎಲ್ಲವನ್ನು ಕಳೆದುಕೊಂಡಾಗ ಏನಿಲ್ಲವೆಂದು ತಿಳಿದಾಗ, ನಿನ್ನತನವ ಮಾರಬೇಡ ನಿನ್ನತನವ ಹೊಗಳಬೇಡ ನೂರು ವೈರಿಗಳು ಸುತ್ತಿದರೂ ನಿನ್ನತನವ ಬಿಡಬೇಡ ನೀನು ನೀನಾಗಿಯೇ ಬದುಕಿ ವೀರನಾಗಿರಲು ಮರೆಯಬೇಡ             ✍️ಮಾಧವ ನಾಯ್ಕ್ ಅಂಜಾರು 🌷

ಬೇಡ -ಬೇಡ (ಕವನ -39)

ಸಮಯವನ್ನು ಕೆಟ್ಟ ಕೆಲಸಕ್ಕಾಗಿ ಉಪಯೋಗಿಸಬೇಡ ಸಮಯವನ್ನು ದೂಷಿಸಲು ವ್ಯರ್ಥ ಮಾಡಲೇಬೇಡ ಸಿಕ್ಕಿರುವ ಅಧಿಕಾರವನ್ನು ದುರುಪಯೋಗ ಮಾಡಬೇಡ ದಕ್ಕಿರುವ ಭಾಗ್ಯಗಳಿಗೆ ಬೇಸರಿಸಲೂ ಬೇಡ ನಿಂತ ನೀರಾಗಿ ಆವಿಯಾಗುತ್ತಿರಬೇಡ ಹರಿವ ನೀರಾಗು  ಆದರೆ ಪ್ರವಾಹ ಸೃಸ್ಟಿಸ ಬೇಡ ಮನದ ಆಸೆಗಳ ಪೂರೈಸಲು ಶ್ರಮಪಡದಿರಬೇಡ ದುರಾಸೆಗಳ ಬೆನ್ನಹತ್ತಿ ನಾಶವಾಗಬೇಡ        ✍️ಮಾಧವ ನಾಯ್ಕ್ ಅಂಜಾರು 🌷