ನಿನ್ನವರಿಲ್ಲ (ಕವನ 23)

ನಿನ್ನವರು ಯಾರು ಇಲ್ಲ
ಇಲ್ಲಿ ನಿನ್ನವರು ಯಾರೂ ಇಲ್ಲ
ಬೆಣ್ಣೆಯಂತೆ ಮಾತನ್ನಾಡಿ
ಕನ್ನ ಹಾಕೋ ಜನರೇ ಎಲ್ಲಾ
ನೊಂದು ನೀನು ಜೀವಿಸುತ್ತಿದ್ದರು
ಬಂದು ತುಳಿಯೋ ಜನರೇ ಎಲ್ಲಾ,
ಇಲ್ಲಿ ನಿನ್ನವರು ಯಾರೂ ಇಲ್ಲ

ಬಂಧುಬಳಗ ಸೋಗಿನಲ್ಲಿ
ಬಣ್ಣ ಬಣ್ಣದ ಚಿತ್ರಣವೆಲ್ಲ
ಸಮಯ ಕೆಟ್ಟು ಸತ್ತು ಹೋದರೂ 
ನಿನ್ನನಿನಿತು ನೆನೆಯೋರಿಲ್ಲ
ಮಾಡಿದಕರ್ಮ ಜಾಸ್ತಿಯಾಗಿ
ದೇವನಶಿಕ್ಷೆ ಹೇಳುವರೆಲ್ಲ
ಇಲ್ಲಿ ನಿನ್ನವರು ಯಾರೂ ಇಲ್ಲ

ನ್ಯಾಯನೀತಿ ಪಾಲಿಸೋರಿಲ್ಲ
ಸಿರಿವಂತನ ಹಿಂಬಾಲಕರೆಲ್ಲ
ಬಡವನೆಂದು ಅರಿತಮೇಲೆ
ನಿನ್ನ ಬಳಿ ಸುಳಿಯೋರಿಲ್ಲ
ಆಡಂಬರದ ಬದುಕಿಗಾಗಿ
ಕಣ್ಣಿದ್ದೂ ಕುರುಡರೇ ಎಲ್ಲಾ
ಇಲ್ಲಿ ನಿನ್ನವರು ಯಾರೂ ಇಲ್ಲ
    ✍️ಮಾಧವ ನಾಯ್ಕ್ ಅಂಜಾರು🙏









































Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.