ಹೊಗಳುವವರು (ಕವನ -37)

ನಿನ್ನ ಬಣ್ಣಿಸುವರಯ್ಯ
ಹೊನ್ನ ಸರಮಾಲೆಯು 
ಕೊರಳಲಿ ಇರುವಾಗ,
ನಿನ್ನ ಹೊಗಳುವರಯ್ಯ
ಬಣ್ಣ ಬಣ್ಣದ ಉಡುಗೆ
ತೊಡುತ್ತ ಹೊರಟಾಗ

ನಿನ್ನ ಪೂಜಿಸುರಯ್ಯಾ
ಜ್ಞಾನ ನಿನ್ನಲಿರುವಾಗ
ದಾನ ಧರ್ಮವಿರುವಾಗ,
ನಿನ್ನ ಹೀಯಾಳಿಸುವರಯ್ಯ
ಎಲ್ಲವನ್ನು ಕಳೆದುಕೊಂಡಾಗ
ಏನಿಲ್ಲವೆಂದು ತಿಳಿದಾಗ,

ನಿನ್ನತನವ ಮಾರಬೇಡ
ನಿನ್ನತನವ ಹೊಗಳಬೇಡ
ನೂರು ವೈರಿಗಳು ಸುತ್ತಿದರೂ
ನಿನ್ನತನವ ಬಿಡಬೇಡ
ನೀನು ನೀನಾಗಿಯೇ ಬದುಕಿ
ವೀರನಾಗಿರಲು ಮರೆಯಬೇಡ
            ✍️ಮಾಧವ ನಾಯ್ಕ್ ಅಂಜಾರು 🌷
















Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.