ಕನ್ನಡ ಶಾಲೆ (ಕವನ -13)


ಕನ್ನಡ ಶಾಲೆ
********
ಒಂದು ಚೀಲ
ಒಂದು ಕೊಡೆ
ಒಂದು ಜೊತೆ ಬಟ್ಟೆಯು
ಸಾಕಿತ್ತು ಕನ್ನಡ ಶಾಲೆಗೆ
ಒಂದು ಶಾಲೆಗೆ
ಒಬ್ಬ ಮೇಸ್ಟ್ರು
ಒಂದು ಊರಿಗೆ ನಾಲ್ಕು ಮೇಸ್ಟ್ರು
ಸಾಕಿತ್ತು ಕನ್ನಡ ಶಾಲೆಗೆ
ಒಂದು  ಮೈಲಿ
ನಡೆದುಕೊಂಡು
ಹಣ್ಣು ಹಂಪಲು ತಿಂದುಕೊಂಡು
ಹೋಗುತಿದ್ದೆ ಕನ್ನಡ ಶಾಲೆಗೆ
ಶಾಲೆ ಬಿಡುತ
ರಾಷ್ಟ್ರಗೀತೆ
ಆರಂಭದಲಿ ನಾಡ ಗೀತೆ
ಕಲಿಯುತಿದ್ದೆ ಕನ್ನಡ ಶಾಲೆಯಲಿ
ತಂದೆ ತಾಯಿ
ದೇವರೆನುತ
ದಿನಚರಿಯ ಬರೆದುಕೊಂಡು
ಹೋಗುತಿದ್ದೆ ಕನ್ನಡ ಶಾಲೆಗೆ
ನೂಲು ಸುತ್ತಿದ ಚೆಂಡಿನಲಿ
ಲಗೋರಿ ಆಟವಾಡುತಲಿ
ಕುಟ್ಟಿ ದೊಣ್ಣೆಯ ಆಟವು
ನಡೆಯುತಿತ್ತು ಶಾಲೆಯಲಿ
ಕೊಕ್ಕೋ ಆಟ
ಮರಕೋತಿಯಾಟವಾಡುತ
ಆಲದ ಮರದ ಜೋಕಾಲಿ
ದಾಟುತ್ತಿದ್ದೆ  ಮುಳ್ಳ ಬೇಲಿ
ತುಂಬಿ ತುಳುಕುವ ಕೆರೆಯಲಿ
ಮುಳುಗಿ ತೆಗೆದ ಹೂ ಕಮಲ
ತಂದು ಮಾಲೆ ಮಾಡುತಲಿ
ತೊಡುತ  ಕಲಿತೆ ಶಾಲೇಲಿ
ಆದರಿಂದು ಬೀಗ ಬೀಳುತಿದೆ
ಕನ್ನಡ ಶಾಲೆಯಲಿ
ಹಂಚು ಹಳೆಯಾಗುತಿದೆ
ಪ್ರತಿ ಕನ್ನಡ ಶಾಲೆಯಲಿ
ಮಕ್ಕಳಿಲ್ಲದ ಶಾಲೇಲಿ
ಕಾಯುತಿವೆ ಹಳೆ ಬೆಂಚು
ಬೀಳುತಿದೆ ಕಪ್ಪು ಗೋಡೆ
ಆವರಿಸುತಿದೆ ಬಳ್ಳಿ ಗಿಡಗಳು
✍️ಮಾಧವ ನಾಯ್ಕ್ ಅಂಜಾರು😔

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ