ಬೇಗನೆ ಅವತರಿಸು (ಕವನ -28)

ಏನ ಕಾಣಲಿ  ನಾನಿನ್ನೇನ ಕೇಳಲಿ
ದೇವ ನೀನಿಲ್ಲವೆಂದು ಹೇಳುವವರು
ಈ ಜಗದಲಿರುವಾಗ,
ಎನ್ನ ದೂಷಿಸೋರು ಏನು ಮಹಾ
ನಿನ್ನ ನೋವೆನಗೆಕೊಡು
ನಾನಿನ್ನವನು ಜಗದೊಡೆಯ

ನಿನ್ನೆಸರಲಿ ಮಾಡುವರು ಹಾಸ್ಯ
ನಿನ್ನ ರೂಪವ ವಿರೂಪಗೊಳಿಸಿ
ನೀನಿಲ್ಲವೆಂದೇ ಸಾರುತಿಹರು
ಜನರು ಈ ಜಗದಲಿ
ಕಲ್ಲಾಗಿರುವ ನಿನ್ನ ಕೊಲ್ಲುತಿಹರು
ನಿನ್ನ ಜೊತೆಗಿರಿಸು ಎನ್ನನು

ನೀನಿರಲು  ನಾನಿರುವೆ
ನೀನಿಲ್ಲವೆಂದರೆ ನಾನಿರೆನು 
ನಿನ್ನ ಪರೀಕ್ಷಿಸಿದವಗೆ
ಎನ್ನ ಕಣ್ಣಮುಂದೆ ತೋರಿಸು
ಸರ್ವ ಶಕ್ತಿ ನೀನೆಂದು
ನೀ ಬೇಗನೆ ಬಂದು ಅವತರಿಸು
         ✍️ಮಾಧವ ಅಂಜಾರು 🌷

















Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.