ದೇವರೇ ಕಣ್ಣ ತೆರೆ (ಕವನ -12)


ಕಣ್ಣ ತೆರೆ ದೇವರೇ
************
ನೀನ್ಯಾಕೆ ಕಲ್ಲಾಗಿರುವೆ
ಎನ್ನ ಅಳಲು
ಕೇಳಬಾರದೆಂದೇ?
ನೀನ್ಯಾಕೆ ಮೌನವಾಗಿರುವೆ
ಎನ್ನ ಪ್ರಾರ್ಥನೆಗೆ
ಅರ್ಥವಿಲ್ಲವೆಂದೇ?
ನೀನ್ಯಾಕೆ ಮರೆಯಾಗಿರುವೆ
ನಿನ್ನ ಕಂಡರೆ
ಬಿಡಲಾರೆನೆಂದೇ?
ನೊಂದು ಬಸವಳಿದೆ
ಅಂದು,  ಇಂದೂ
ಭುವಿಯಲಿ ನಡೆಯೋ
ಅನಾಚರವ ಕಂಡು
ನಿಲ್ಲುತ್ತಿಲ್ಲ ಅಲ್ಪವೂ
ಭಯವಿಲ್ಲ ಸ್ವಲ್ಪವೂ
ನಿನ್ನ ನಂಬಿದೆನಗೆ
ದಿನವೆಲ್ಲಾ  ಯಾಕೀ ನೋವು?
ನೀನಿದ್ದರೆ ಕಣ್ಣತೆರೆ
ನೀನಿದ್ದರೆ ಮೌನತೊರೆ
ನೀನಿದ್ದರೆ ದೇವರೇ
ಎನಗೊಳಿತು ಬರೆ
ಆಲಿಸೆನ್ನ ಪ್ರೀತಿಯ ಕರೆ
ಇಲ್ಲವೆಂದಾದರೆನ್ನ
ನಿನ್ನ ಬಳಿ ಬೇಗ ಕರೆ 😢
✍️ಮಾಧವ ನಾಯ್ಕ್ ಅಂಜಾರು 🌹























Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.