ರೈತನೇ ಬೆನ್ನೆಲುಬು (ಕವನ -16)

ರೈತನೇ ಬೆನ್ನೆಲುಬು
*************
ಬೆಳಗಿನ ತಿಂಡಿ
ಗಂಜಿ ಊಟ
ಸೂರ್ಯ ಉದಯಿಸುತ್ತಿದ್ದಂತೆ
ಕರೆಯುತಿದ್ದ ಹಾಲು,
ಹಕ್ಕಿಗಳ ಚಿಲಿಪಿಲಿ
ಮುದ ನೀಡುತಿತ್ತು ದಿನಾಲೂ

ಹುಂಜನ  ಕೂಗು ಕೇಳಿದ ಮಾತ್ರಕೆ
ಕೋಳಿ ಮರಿಗಳ ಚಿಲಿಪಿಲಿ ಕೂಗು
ಗೂಡಲಿ ಹೊರಗೆ ಓಡುತ ಸಾಗುತ
ತೋಟದ ಕೀಟಗಳೆ ಕೋಳಿಗೆ ಊಟ

ಅಂಗಳದಿ ಕರುವು
ಅಂಬಾ ಎನುತಲೇ
ಬಿಚ್ಚಿದ ಹಗ್ಗವ ಎಳೆದಾಡುತಲೇ
ಸೇರಿತು ತಾಯಿಯ ಕೆಚ್ಚಲು ಗುದ್ದಲು
ಪ್ರೀತಿಯ ಸವರಿಕೆ ನೆತ್ತಿಯ ಮೇಲೆ
ಸಂತೋಷದಿ ಕರುವು ಕುಡಿಯಿತು ಹಾಲು

ಕತ್ತಿಯ ಹರಿತಕೆ
ಬೋರ್ಗಲ್ಲ ಹುಡಿಯು
ಮರದ ದಿಂಬಿನ ಮೇಲೆ ಉಜ್ಜುತ್ತಾ
ಮಾರುದ್ದದ ಹಗ್ಗವ ಸುತ್ತಿದ ಅಪ್ಪ
ಮೈತುಂಬ ಬೆವರೊಂದಿಗೆ ಬರುತ್ತಲೇ
ತಲೆಯಲಿ ಹುಲ್ಲಿನ ಮೇವು

ಕೋಣಗಳ ಮುದ್ದಾಡುತಾ
ಹಾಕಿದ ಮೇವು
ಗಬ ಗಬ ತಿನ್ನುತಾ ನೋಡಿದ "ಕಾಳ "
ತಂದೆಯ ಮೊಗದಲಿ
ಅದೆಷ್ಟು ಆನಂದ
ಇನ್ನಷ್ಟು ಹೊಟ್ಟೆಗೆ ತಿಂದನು "ಬೊಲ್ಲ "

ಅಮ್ಮನ ಕೂಗು
ಎಲ್ಲಿರುವಿರಿ ಮಕ್ಕಳೇ?
ತಡವಾಯ್ತು ಎನಗೆ ಗದ್ದೆಗೆ ನಡೆಯಲು
ನೇಜಿಯ ಎಳೆದು ಹಾಕಬೇಕೆನುತ
ಓಡಿ ಓಡಿ ನಡೆದು
ಬಂದಳು ಮೈಗೆ ಕೆಸರನು ಹೊತ್ತು

ಮೊಸರಿನ ಗಂಜಿ ಬಟ್ಟಲು ತುಂಬ
ತೆಗೆದರು ಭರಣಿಯ  ಉಪ್ಪಿನಕಾಯಿ
ಹಪ್ಪಳ ಸೆಂಡಿಗೆ ಚಟ ಪಟ ಅಗಿಯುತ
ಮಾವಿನ ಕಾಯಿಯ ರಸವನು ಸವಿಯುತ

ದಿನವನು ದೂಡುವ ರೈತನ ಅಳಲು
ಕೇಳಲು ಯಾರಿಲ್ಲ ಅವನ ನೋವು
ಪೇಪರು ಟಿವಿ ಯಲಿ ದಿನವೂ ಕಾವು
ರೈತರೇ ಬೆನ್ನೆಲುಬು ಅವನಿಗಿಲ್ಲವಂತೆ ನೋವು
✍️ಮಾಧವ ನಾಯ್ಕ್ ಅಂಜಾರು 🙏🌹

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.