ಇನ್ನೇನು ಬೇಕು (ಕವನ -25)

ಇನ್ನೇನು ಬೇಕು ಜಗದಲಿ
ರಕ್ಷಕರು ಭಕ್ಷಕರಾಗಿಹರು
ಜನಸೇವಕರು ಕುರುಡರಾದರು 
ಸತ್ಯವಾದ ತ್ಯಜಿಸಿರುವರು
ನ್ಯಾಯ ಸತ್ತುಹೋಯಿತು 

ಇನ್ನೇನು ಬೇಕು ಜಗದಲಿ
ಅಧಿಕಾರ ಅಸ್ತ್ರವಾಯಿತು
ಬಡವನ  ತುಳಿದಾಯಿತು
ಸತ್ಯವನ್ನು ತಿರುಹಿಬಿಟ್ಟರು
ಅತ್ಯಾಚಾರ ಮಿತಿಮೀರಿತು

ಇನ್ನೇನು ಬೇಕು ಜಗದಲಿ
ಅಣ್ಣ ತಮ್ಮನ ಕೊಲ್ಲುತಿಹರು 
ಅಪ್ಪ ಮಗಳನ್ನು ಭೋಗಿಸಿದನು
ತಮ್ಮ ಅಣ್ಣನ ಕೊಂದನು
ಮಕ್ಕಳು ಪೋಷಕರ ತುಳಿದರು

ಇನ್ನೇನು ಬೇಕು ಜಗದಲಿ
ಮಾಂಗಲ್ಯದ ಅರ್ಥ ಹೋಯಿತು
ವಿವಾಹಿತ ವಿಕೃತ ಸುಖ ಬಯಸಿದ
ವಯಸ್ಸಿಗೆ ಮೊದಲೇ ಕಾಮ
ಕಿರಿಯರನ್ನು ವಿವಾಹವಾದರು 

ಇನ್ನೇನು ಬೇಕು ಜಗದಲಿ
ಸಂಬಂಧಗಳು  ಬಿರುಕಾದವು 
ಪ್ರೀತಿ ನಾಟಕವಾಯಿತು
ಉಪಕರಿಸಿದವಗೆ ಉಪದ್ರವಿಸಿದರು
ಸ್ನೇಹ ಸುಳ್ಳಾಯಿತು

ಇನ್ನೇನು ಬೇಕು ಜಗದಲಿ
ಆನೆಗೆ ಬೆಂಕಿಯಿಟ್ಟರು
ನಾಯಿಯನ್ನು ಜಿವಂತ ಸುಟ್ಟರು
ಮನುಷ್ಯನ ಜೀವಂತ ಸುಟ್ಟರು
ಎಲ್ಲಾ ಪ್ರಾಣಿಗಳ ತಿಂದು ಬಿಟ್ಟರು

ಇನ್ನೇನು ಬೇಕು ಜಗದಲಿ
ಕಾಡುಗಳ ಅಳಿಸಿದರು 
ನದಿಗಳ ನಾಶಗೈದರು
ನಗು, ಅಳು  ಕಪಟವಾಯಿತು
ದೇವರನ್ನೂ ಹೀಯಾಳಿಸಿದರು

ಇನ್ನೇನು ಬೇಕು  ಜಗದಲಿ
ಧರ್ಮಗಳು ಹೊಡೆದಾಡಿತು 
ಜಾತಿಗಳು ಮತಿಗೆಟ್ಟಿತು
ಮನುಷ್ಯತ್ವ ಇಲ್ಲವಾಯಿತು
   ✍️ಮಾಧವ ನಾಯ್ಕ್ ಅಂಜಾರು 🌷













































Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ