ಕೆಳೆದೋಯ್ತು ಎಪ್ಪತ್ತು

ಕೆಳೆದೋಯ್ತು ಎಪ್ಪತ್ತು ವರುಷ
ಸ್ವಾತಂತ್ರ್ಯ ಗಳಿಸಿ  ದೇಶಕ್ಕೆ
ಕಳೆದೋಯ್ತು ಮೂವತ್ತೈದು ವರ್ಷ
ಮೂಳೆಮಾಂಸದ  ಜೀವಕ್ಕೆ
ಅದೆಷ್ಟು ಕಸರತ್ತು ಅದೆಷ್ಟು ಆಪತ್ತು
ಆದರಿನ್ನೂ ಮುಗಿಯಲಿಲ್ಲ ಬೆವರಿಳಿಸೋ ಸುತ್ತು ,

ಭರವಸೆಯ ಜೀವನ ಯಾವತ್ತೂ
ಕೊಂಡು ಬರಬಹುದೇ ಆಪತ್ತು ?
ಇಲ್ಲ ಸಾಧ್ಯವಿಲ್ಲ ಎಂದು ಕುಳಿತರೆ ..!
ಮುಗಿಯುವುದೇ ? ನನ್ನ ಸುತ್ತು ?
ಬರಲಿ ಬರಲಿ ಅದೆಷ್ಟೋ ಇರಲಿ
ನನಗಿರೋ ಧೈರ್ಯವೇ ಸಂಪತ್ತು ..!

ಕುಗ್ಗಬೇಡ ಎಂದಿಗೂ ನೀ...  ಸುತ್ತು ..!
ಬಗ್ಗಬೇಡ ಯಾರಿಗೂ ಮಾಡಿದರೆ ಕುತ್ತು  ..!
ತಗ್ಗಿ ಬಗ್ಗಿ ನಡೆದರೆ ತಪ್ಪಲ್ಲ ಇನಿತು
ನಿನಗೆ ನೀನೆ ತಂದುಕೊಳ್ಳುವೆ ಆಪತ್ತು,
ವಂಚಿಸುವವರನು  ಬಿಡಬೇಡ ಯಾವತ್ತೂ ..!
ಅಪ್ಪಿ ಪ್ರೀತಿಸು ಎಲ್ಲರನೂ ಸತ್ಯ ವಿದ್ದರೆ ಯಾವತ್ತೂ ..!
                   -ಮಾಧವ ನಾಯ್ಕ್ ಅಂಜಾರು




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ