ದರೋಡೆಕೋರರಿದ್ದಾರೆ ಎಚ್ಚರಿಕೆ

ದರೋಡೆಕೋರರಿದ್ದಾರೆ ಎಚ್ಚರಿಕೆ
ಮಾತು ಬರದೆ
ಸರಿದು ನಿಂತಿದ್ದ ವನ
ಕಿಸೆ ದೋಚೋ
ಪಾಪಿಗಳಿದ್ದಾರೆ ಎಚ್ಚರಿಕೆ

ತಪ್ಪು ಮಾಡದಿದ್ದರೂ
ನೀನು ತಪ್ಪಿತಸ್ಥನೆಂದು ವಾದಿಸೋ
ನೀತಿ ಇಲ್ಲದ
ದುಷ್ಟರಿದ್ದಾರೆ ಎಚ್ಚರಿಕೆ

ಕಾಸಿಗಾಗಿ ದಿನವಿಡಿ
ಬಣಗುಟ್ಟುತ್ತ, ಆಚಿಚೆ
ಎಗ್ಗಿಲ್ಲದೆ ಸುಳಿದಾಡುತ್ತಾರೆ
ನೀವಿರಿ ಸದಾ ಎಚ್ಚರಿಕೆ ,

ಕೂಸನ್ನು ಶಾಲೆಗೆ
ಸೇರಿಸಲು ಹೋಗುವವರ
ತಲೆ ಬೋಳಿಸಿ
ಲೂಟಿ ಮಾಡುವರು ಎಚ್ಚರಿಕೆ

ರಕ್ಷಣೆಗೆಂದು ಸಹಾಯ
ಬಯಸಿ  ನಡೆದರೂ
ಭಕ್ಷಕರಿರಬಹುದು
ಎಚ್ಚರಿಕೆ

ಸೋತು ಸೋತು
ಬಸವಳಿದು ನಿಂತಾಗ
ನಿಮ್ಮ ಕತ್ತು ಹಿಸುಕೋ
ದ್ರೋಹಿಗಳಿದ್ದಾರೆ ಎಚ್ಚರಿಕೆ

ಬೆಣ್ಣೆಯಂತೆ ಮಾತನ್ನಾಡುತ್ತಾ
ಹಾಲಿನಂತೆ ಬಿಳಿ  ಹೇಳುತಾ
ನಿಮ್ಮನ್ನ ನುಂಗಿಬಿಡೋ
ರಾಕ್ಷಸರಿದ್ದಾರೆ ಎಚ್ಚರಿಕೆ
       -ಮಾಧವ ಅಂಜಾರು








Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.