ಕವಿ ಬಯ್ದರೂ ,

ಕವಿ ಬಯ್ದರೂ  ,
ಕವನದಲ್ಲಿಯೇ ಬಯ್ಯಬಹುದು
ಎಂದು ಹೇಳುತ್ತಾ ...
ಕವಿಯ ಕಿವಿ ತಿವಿದರು ..!

ಕವಿಯಲ್ಲದ ಕವಿಗೆ
ಕವಿಯೆಂದು ಹೇಳಿದೊಡನೆ .
ಕವಿಯಾಗೋ ಆಸೆ
ಚಿಗುರಿಸಿ ಬಿಟ್ಟರು ..!

ಸ್ವಾಮಿ ನಾ ಈಗವಂತೂ
ಕವಿಯಲ್ಲ , ಅನುಭವವು ಇಲ್ಲಾ ...
ಹೇಳುತ್ತಿದ್ದಂತೆ ...!
ನುಡಿಮುತ್ತು ಹೇಳಿಯೇಬಿಟ್ಟರು ..!

ಮಾವಿನ ಮರದಲ್ಲಿ ..
ಒಂದು ಮಾವು ಹಣ್ಣಾಗಿದ್ದರೂ
ಮಾವಿನ ಹಣ್ಣೇ ಆಗಿರುತ್ತದೆ ..!
ಹಾಗಾಗಿ ನೀವು ಕವಿ ಅಂದುಬಿಟ್ಟರು ..!

(ಈ ಕವನ ನನ್ನ ಪ್ರೀತಿಯ ಗೆಳೆಯ
ಶ್ರೀ ಸೀತಾರಾಮ ಕೆ ಗೌಡ
ಅವರ ಮಾತುಕತೆಯಲ್ಲಿ ಮೂಡಿಬಂದಿದ್ದು )







Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.