ಕಣ್ಣ ತುಂಬಾ ನಿನ್ನ ನೋಟ...

ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ...
ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ...

ನಿನ್ನೀ ತುಳುಕು ನಡೆಯು.....  ಎನ್ನ...
ಹೃದಯ ಸ್ಪರ್ಶ ಮಾಡುತಿದೆ....
ನಿನ್ನ ರೆಪ್ಪೆ ನೋಟ ಅಂದ ...
ಉಸಿರ ಚಲನೆ ಆಗುತಿದೆ ..
ಕಣ್ಣ ತುಂಬಾ ನಿನ್ನ ನೋಟ...
ರಾತ್ರಿ ಹಗಲೆಲ್ಲಾ ಕಾಡುತಿದೆ ..

ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ...
ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ...

ತಬ್ಬಿಕೋ ಬಾ...  ಮುದ್ದಿಸೂ ನನ್ನ ... 
ಈ ಜೀವ ನಿನಗಾಗಿ ಕಾಯುತಿದೆ..... 
ಒಪ್ಪಿಕೋ ಗೆಳತೀ ... ನನ್ನೀ ಪ್ರೀತಿಯ ... 
ಅಪ್ಪಿಕೋ ಗೆಳತೀ ... ಈ ಪ್ರೇಮಿಯ .. 
ಮನ ನೋಯುವುದು  .. ನೀ ಒಲ್ಲೆ ಅಂದರೇ ...... 
ತಿಳಿದು ಸೇರಿಕೋ ... ಎನ ಬಂಗಾರ ... 

ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ...
ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ...

ಪುಟ್ಟ  ಹೃದಯ...  ತಡೆಯಲಾರದು...
ಸ್ವಚ್ಛ ಮನಸು .... ತಾಳಲಾರದು ..
ನಿನ್ನ ಮುದ್ದು ಮಾಡೋ ... ಆಸೆ ಎನಗೆ ..
ಮುತ್ತಾಗಿ ಬಾ ...
ಏಳು ಜನುಮಕೂ .. ನಿನ್ನ ಬಿಡದೇ ...
ಸುತ್ತಿ ಕಟ್ಟಿ... ಮುದ್ದಾಡಿ ಪಾಲಿಸುವೆ ...

ಸನಿಹಕೆ ನೀ ಬಂದೆ .... ಹೃದಯದಿ...  ಓಡಾಡಿದೆ ...
ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ...




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ