ಓಂ ಗಂ ಗಣಪತಯೇ ನಮಃ

ಓಂ ಗಂ ಗಣಪತಯೇ ನಮಃ

ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ... ಜೈ ಗಣೇಶ

ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ  ಎನ್ನಿರೋ
ಭಕ್ತಿ ಭಾವದಿಂದ ಅವನ ನಾಮ ಸ್ಮರಣೆ ಮಾಡಿರೋ ..।।೧।।

ಬತ್ತಿ ಕರ್ಪೂರ ದೀಪ ಭಕ್ತಿಯಿಂದ ಬೆಳಗಿರೋ ..
ನಿತ್ಯ ವಿನಾಯಕನ ಕೃಪೆಗೆ ಪಾತ್ರರಾಗಿರೋ ..  ।।೧।।

ಫಲ ಪುಷ್ಪಗಳಿಂದ ಅಲಂಕಾರ ಮಾಡಿರೋ ..
ಮನದಿ ಬರೋ ಅಹಂಕಾರ ದೂರ ಮಾಡಿರೋ ..।।೧।।

ಚೌತಿಯ ದಿನವಿಂದು ನಕ್ಕು ನಲಿಯಿರೋ ...
ಘಂಟಾ ಘೋಷದಿ ಅವನ ಕೊಂಡಾಡಿರೋ ...।।೧।।

ಶಿವ ಪಾರ್ವತಿ ಪುತ್ರನ ನಿತ್ಯ ನೆನೆಯಿರೋ ...
ವಿದ್ಯೆ ಬುದ್ಧಿ  ಗಳಿಸಿ ನೀವು ಗಣ್ಯರಾಗಿರೋ ..।।೧।।

ವಿಘ್ನವಿನಾಶಕಗೆ ಹೃದಯದಲ್ಲಿ ಸ್ಮರಿಸಿರೋ ..
ಸಕಲ ಕಷ್ಟ ಕಾರ್ಪಣ್ಯವ  ದೂರ ಮಾಡಿರೋ ..।।೧।।

ಬಂಧು ಬಳಗ ಎಲ್ಲ ಸೇರಿ ಸಿಹಿಯ ಹಂಚಿರೋ
ದೇವಪ್ರಸಾದ ಸವಿದು ಹರುಷರಾಗಿರೋ.. ।।೧।।

ಜೈ ಗಣೇಶ..  ಜೈ ಗಣೇಶ .. ಜೈ ಗಣೇಶ..  ಜೈ ಗಣೇಶ

ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ  ಮೋರ್ಯ

                           - ಅಂಜಾರು ಮಾಧವ ನಾಯ್ಕ್


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.