'ವಿಘ್ನ ವಿನಾಶಕ'

ಓಂ ಶ್ರೀ ಮಹಾಗನಪತಯೇ  ನಮಃ ।।೩।।

ವಿಘ್ನ ವಿನಾಶಕ..  ನಮ್ಮಯ  ರಕ್ಷಕ...
ಭಕುತರ ಪಾಲಿಸೋ ವಿನಾಯಕ.... ।।೧।।

ಮೊದಲ ಪೂಜೆಯ ಪಡೆಯುವ ದೇವನೇ...
ಸಿದ್ಧಿ -ಬುದ್ಧಿ  ಪ್ರದಾಯಕ ಗಣನೇ...  ।।೧।।

ರಕ್ತಚಂದನದಲಿ ಅಭಿಷೇಕ ಮಾಡುತ....
ಚೌತಿಯ ದಿನವಿಂದು ನಿನ್ನ ಪೂಜೆ ಮಾಡುವೆ...  ।।೧।।

ಮೋದಕಪ್ರಿಯನೇ...   ಗಜಮುಖ ದೇವನೆ....
ಲಡ್ಡು,  ಗರಿಕೆ  ಪ್ರಿಯ  ಮೂಷಿಕವಾಹನನೆ ।।೧।।

ಶಿವ ಪಾರ್ವತಿಯರ ಪ್ರಿಯ ಪುತ್ರನೇ ..
ನಂಬಿದ ಭಕ್ತಗೆ ಜಯನೀಡೋ ಗಣಪನೇ .. ।।೧।।

ರಕ್ಷಿಸೆನ್ನ ಗಜವದನ....  ಏಕದಂತನೇ ..
ಶಕ್ತಿ ನೀಡೆನಗೆ ಹೇ ಲಂಬೋದರನೇ.. ।।೧।।
               
                    -ಅಂಜಾರು ಮಾಧವ ನಾಯ್ಕ್




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ