'ಮತ್ತೆ ಬಾ ಮಧುರ ಬಾಲ್ಯ'

ಕಣ್ಣಾಮುಚ್ಚಾಲೆ ಆಡೋವಾಗ
ಅವಿತು ಕುಳಿತು ಇರೋ ಜಾಗ
ಪತ್ತೆ ಹಚ್ಚಿ ನೀ ಸಿಕ್ಕಿದಾಗ
ಅಚ್ಚರಿಯಾದೆ ನನ್ನ ನೋಡಿ
ಬೆಚ್ಚಿ ಕಿರುಚಿದೆ ಮುಟ್ಟುವಾಗ ..!

ತಟ್ಟನೆ ಎದ್ದು ಓಡಿಬಿಟ್ಟೆ
ನಿನ್ನ ಹಿಂಬಾಲಿಸಿ ಬಂದು ಬಿಟ್ಟೆ
ಮುಟ್ಟಿ ಕಟ್ಟಿ ತಿರುಗಿಸಿ ಬಿಟ್ಟೆ
ಬೆಟ್ಟಕೆ ನಗುವ ಕಳುಹಿಸಿ ಬಿಟ್ಟೆ
ನನ್ನೆದೆ ಬಡಿತವ ಹೆಚ್ಚಿಸಿ ಬಿಟ್ಟೆ ..!

ಅಮ್ಮನ ಕೂಗು ದೂರದ ಕೋಣೇಲಿ
ಮೈ ಜುಮ್ಮೆನಲು ಕೇಳಿ ನಮಗೂ
ತಮ್ಮನ ಕೂಡಿ ಓಡಿದೆ ಆಗ
ತಿಂಡಿಯ ಕೊಟ್ಟು ಬಿಟ್ಟಳು ಬೇಗ
ತಟ್ಟೆಯ ಖಾಲಿಯೆ ನನ್ನಯ ವೇಗ ...!

ಗಾನ ಕೋಗಿಲೆಯ  ಇನಿದು ರಾಗ
ಅಂಗಳದಿ ಕರುವಿನ ಓಟದ ನೋಟ
ನೋಡುತ ಕುಳಿತೆ ಖುಷಿಯ ಆಟ
ಎನ್ನ ಮನವು ಕಲಿಯಿತು ಪಾಠ
ಬಾಲ್ಯದ ದಿನಗಳ ರಂಗಿನ ಆಟ...!

                 - ಅಂಜಾರು ಮಾಧವ ನಾಯ್ಕ್ ,


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ