'ಮಹಾಗಣಪತಿ'

'ಓಂ ಶ್ರೀ ಮಹಗಣೇಶಾಯ ನಮಃ '

ಬನ್ನಿರೆಲ್ಲ .. ಮಹಾಗಣಪತಿಯ ಪೂಜೆಯ ಮಾಡೋಣ ..
ಬನ್ನಿರೆಲ್ಲ , ಭಕುತರು ಸೇರಿ ಹರುಷದಿ ನಲಿಯೋಣ ...।।೧।।

ಚೌತಿಯ ದಿನದಲಿ ಏಕದಂತನ ಸೇವೆಯ ಮಾಡೋಣ
ಫಲಪುಷ್ಪಗಳ ಸಿಂಗರಿಸಿ ಆರತಿ ಎತ್ತೋಣ ..।।೧।।

ಲೋಕವ ಕಾಯುವ ಮೂಷಿಕವಾಹನಗೆ ಜೈಕಾರ ಹಾಕೋಣ
ಭಕ್ತಿಯಿಂದ ಚರಣಕೆ ತಲೆಬಾಗಿ ನಮಿಸೋಣ ..।।೧।।

ಎಲ್ಲರು ಸೇರಿ ಲೋಕಕಲ್ಯಾಣಕ್ಕೆ ಪ್ರಾರ್ಥನೆ ಮಾಡೋಣ
ಈ ಲೋಕಕೆ ಬರೋ ವಿಘ್ನಗಳ ದೂರ ಮಾಡೋಣ ..।।೧।।

ಬಾಳಿಗೆ ಸುಖ ಸಂತೋಷವ ಬೇಡಿ ಪಡೆಯೋಣ
ವಿಘ್ನ ವಿನಾಶಕನ ಕೃಪೆಗೆ ಪಾತ್ರರಾಗೋಣ ..।।೧।।

ಬನ್ನಿರೆಲ್ಲ .. ಮಹಾಗಣಪತಿಯ ಪೂಜೆಯ ಮಾಡೋಣ ..
ಬನ್ನಿರೆಲ್ಲ , ಭಕುತರು ಸೇರಿ ಹರುಷದಿ ನಲಿಯೋಣ ...।।೧।।

ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ ಮೋರ್ಯ
ಗಣಪತಿ ಬಪ್ಪ ಮೋರ್ಯ ... ಮಂಗಳ ಮೂರ್ತಿ ಮೋರ್ಯ

                                - ಅಂಜಾರು ಮಾಧವ ನಾಯ್ಕ್



Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.