Posts

Showing posts from 2022

ಲೇಖನ -80)- ಕ್ಷಮೆ ಇರಲಿ - ಕ್ಷಮಿಸಿ ಬಿಡು ನನ್ನನು , ಈ ಹಿಂದೆ ನಾನು ಮಾಡಿರುವ ಪ್ರತಿ ತಪ್ಪಿಗೆ ಕ್ಷಮೆಯಿರಲಿ.

Image
 ( ಲೇಖನ -80)- ಕ್ಷಮೆ ಇರಲಿ -  ಕ್ಷಮಿಸಿ ಬಿಡು ನನ್ನನು , ಈ ಹಿಂದೆ  ನಾನು ಮಾಡಿರುವ ಪ್ರತಿ ತಪ್ಪಿಗೆ ಕ್ಷಮೆಯಿರಲಿ. ನಾನು ನಿನ್ನ ಹೀಯಾಳಿಸಿರಬಹುದು, ನಾನು ನಿನನ್ನು ಬೈದಿರಬಹುದು, ನಾನು ನಿನ್ನನ್ನು ಹೊಡೆದಿರಬಹುದು, ನಾನು ನಿನಗೆ ಸಂತೋಷ ಕೊಡದಿರಬಹುದು, ಗೊತ್ತಿಲ್ಲದೆ ಮಾಡಿದ ಪ್ರತಿಯೊಂದು ತಪ್ಪಿಗೆ ನಿನ್ನಲ್ಲಿ ಕ್ಷಮೆ ಕೇಳುವೆ, ಎನ್ನ ಗುರುವೇ, ಎನ್ನ ತಂದೆ ತಾಯಿ, ಬಂದು ಬಳಗ, ಸಂಬಂಧಿಗಳೇ, ಮತ್ತು ನನ್ನ ಹೆಂಡತಿ ಮಕ್ಕಳೇ. ಸಹ ಕೆಲಸಾಗರರೇ, ಎನ್ನ ಶ್ರಮಕ್ಕೆ ಬೆಲೆ ಕೊಡುವ ನೀವುಗಳೇ ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿಬಿಡಿ. ಈ ಪ್ರಪಂಚದಲ್ಲಿ ಬದುಕಿರುವ ಪ್ರತೀ ಜೀವಿಗಳೇ, ನನ್ನನು ಕ್ಷಮಿಸು. ಮಾನವನಾದ ಎನಗೆ ದ್ವೇಷ, ಮೋಹ, ಮದ ಮತ್ಸರ, ನಗು, ಗೌರವ, ಸೌಜನ್ಯ, ಮರ್ಯಾದೆ, ಸಹಾಯ, ಪ್ರೀತಿ, ಪ್ರೇಮ ಎಲ್ಲವನ್ನು ಕಲಿಸಿದ್ದಾರೆ, ನನ್ನ ಇತಿಮಿತಿಯನ್ನು ದಾಟಿ ವ್ಯವಹರಿಸಿದ್ದರೆ ದಯವಿಟ್ಟು ಕ್ಷಮಿಸಿಬಿಡು.          ನನ್ನ ವಯಸ್ಸು ಇದ್ದರೆ ಇರಬಹುದು 60 70 80, ಅದಕ್ಕಿಂತಲೂ ಮುಂಚೆ ನಾನು ಇಹಲೋಕ ತ್ಯಜಿಸಬಹುದು, ಭವಿಷ್ಯವನ್ನು ಅರಿಯದ ನಾನು ಈವರೆಗೆ ಇರುವುದೇ ನಿಮ್ಮೆಲ್ಲರ ಆಶೀರ್ವಾದದಿಂದ, ದೇವರು ನೀಡಿರುವ ಆಯುಷ್ಯದಿಂದ, ಮತ್ತು ಆರೋಗ್ಯದಿಂದ. ನನ್ನ ಬದುಕಿನಲ್ಲಿ ಆಸೆ ಆಕಾಂಕ್ಷೆಗಳು ಜೀವಂತವಾಗಿದೆ, ಆಸೆ ಆಕಾಂಕ್ಷೆಗಳಿಗೆ  ನಿಮ್ಮನ್ನು ಬಲಿಪಶು ಮಾಡಲು ನನ್ನ ನನ್ನ ಮನಸು ಒಪ್ಪದು, ಆಡಂಬರದ ಜೀವನ ನನ್ನ ಆಯ್ಕೆ ಅಲ್ಲ, ಅನ್ಯಾಯ ಸಂಪಾದನೆ

(ಲೇಖನ 79 ) ಮಮತೆಯ ತೊಟ್ಟಿಲು

Image
 (ಲೇಖನ 79 ) ಮಮತೆಯ ತೊಟ್ಟಿಲು     ತಾಯಿಯು ಮಕ್ಕಳ ಮೇಲೆ ತೋರಿಸುವ ಪ್ರೀತಿ ಮಮತೆಯಾದರೆ, ಆ ಪ್ರೀತಿಗೆ ಬೆಲೆ ಕಟ್ಟುವ ಸಾಧ್ಯತೆ ಯಾವ ಮಕ್ಕಳಿಗೂ ಬರದು. ಮಮತೆ ಅನ್ನೋದು ದೊಡ್ಡವರು ತನಗಿಂತ ಚಿಕ್ಕವರಿಗೆ ತೋರುವ ಪ್ರೀತಿ ವಾತ್ಸಲ್ಯ. ಮಕ್ಕಳನ್ನು ಹೊಂದಿರುವ ಪ್ರತಿ ತಾಯಿಯ ಪ್ರೀತಿ, ಮಮಕಾರ, ಆರೈಕೆ, ಹಾರೈಕೆ, ವರ್ಣಿಸಲು ಸಾಧ್ಯವಿಲ್ಲ. ತನ್ನ ಮಕ್ಕಳಿಗಾಗಿ ತಾಯಿ ಪಡುವ ಕಷ್ಟಗಳು ಒಂದೆಡೆಯಾದರೆ, ಜವಾಬ್ದಾರಿಯುತ ಅಪ್ಪ ಸಂಸಾರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಬದುಕುತ್ತಿರುತ್ತಾನೆ.         ಮಕ್ಕಳು ಎಲ್ಲಿದ್ದರೂ ಕ್ಷೇಮವಾಗಿರಲಿ ಆ ದೇವರು ಸದಾಕಾಲ ಕಾಪಾಡುತ್ತಿರಲಿ ನನಗೆ ಕಷ್ಟವಾದರೂ ಪರವಾಗಿಲ್ಲ ನನ್ನ ಮಕ್ಕಳಿಗೆ ಕಿಂಚಿತ್ತು ಕಷ್ಟವನ್ನು ಕೊಡಬೇಡ ದೇವರೇ ಎನ್ನುತ್ತಾ, ಸದಾ ಹಾರೈಸುವ ಜೀವ ತಾಯಿಯೊಬ್ಬಳೇ. ಮಕ್ಕಳಿಗೆ ಏನೇ ಕಷ್ಟ ಬಂದರೂ  ಅದನ್ನು ಎದುರಿಸುವ ಶಕ್ತಿಯನ್ನು ಕೊಡುತ್ತಿರು, ಭಗವಂತ ನೀನೆ ಅವರನ್ನು ಕಾಪಾಡುತ್ತಿರು ಎಂದು ಮನದೊಳಗೆ ಹಾರೈಸುವ ಪೋಷಕರು . ತಂದೆ ತಾಯಿಯ ಮತ್ತು ಮಕ್ಕಳ ನಡುವಿನ ಬಾಂಧವ್ಯ,ಸಂಬಂಧ ವರ್ಣಿಸಲಸಾಧ್ಯ.  ನಮ್ಮ ಜೀವನದಲ್ಲಿ ತಂದೆ ತಾಯಿ ನೀಡಿದ ಪ್ರೀತಿ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನಮ್ಮ ಬಾಲ್ಯತನದಿಂದ, ನಮ್ಮ ಮುಪ್ಪಿನ ಜೀವನ ಮುಗಿದು ಸಾಯುವವರೆಗೂ ತಂದೆ ತಾಯಿಯ ಪ್ರೀತಿ ಸದಾ ನಮ್ಮ ಕಣ್ಣ ಮುಂದೆ ಇರುತ್ತದೆ.        ಮಗಾ, ಮಗಳೇ ಬೆಳಗಾಯ್ತು ಎದ್ದೇಳು, ಕೈ ಕಾಲು ಮುಖ ತೊಳೆದು ತಿಂಡಿ ತಿನ್ನು ಶಾಲೆಗೆ ಹೋ

(ಲೇಖನ 78 ) ಅರಣ್ಯ ನಾಶ = ನಮ್ಮೆಲ್ಲರ ನಾಶ. ಎಗ್ಗಿಲ್ಲದೇ ನಡೆಯುತ್ತಿದೆ ಅರಣ್ಯ ಸಂಪತ್ತಿನ ಲೂಟಿ

Image
 (ಲೇಖನ 78 ) ಅರಣ್ಯ ನಾಶ = ನಮ್ಮೆಲ್ಲರ ನಾಶ. ಎಗ್ಗಿಲ್ಲದೇ ನಡೆಯುತ್ತಿದೆ ಅರಣ್ಯ ಸಂಪತ್ತಿನ ಲೂಟಿ, ಪ್ರಕೃತಿಯ  ಅತ್ಯಾಚಾರ, ಕಾಡನ್ನು ನಾಶಪಡಿಸಿ, ಪಟ್ಟಣವನ್ನಾಗಿ ಪರಿವರ್ತಿಸಲು ಪ್ರಭಾವಿ ವ್ಯಕ್ತಿಗಳ ಮಹಾಕೂಡುಗೆ. ಅಗತ್ಯವಿಲ್ಲದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು, ಹೆಕ್ಟೇರುಗಟ್ಟಲೆ ದಟ್ಟಾರಣ್ಯವನ್ನು ಅಗೆದು, ಸುಂದರಮಯ ವಾದ  ಬೆಟ್ಟಗುಡ್ಡಗಳನ್ನು ಸಮತಟ್ಟ ಮಾಡಿ  ಕಾನೂನಿನ  ಲೋಪದೋಷಗಳನ್ನು ದುರುಪಯೋಗ ಮಾಡಿಕೊಂಡು, ಕಾಡಿನ ರಕ್ಷಕರೆಲ್ಲರೂ ಭಕ್ಷಕರಾಗಿ ಮಾರ್ಪಟ್ಟು ತುಂಬಾ ವ್ಯವಸ್ಥಿತವಾಗಿ ಹಣದ ಕಂತೆಯನ್ನು ಕಟ್ಟಿಕೊಂಡು ಐಷಾರಾಮಿ ಬದುಕು ಮಾಡುತ್ತಿರುವ ಕೆಲವರು ಭವಿಷ್ಯದ ಬಗ್ಗೆ ಚಿಂತೆ ಇಲ್ಲದೆ ಬದುಕುತ್ತಿದ್ದಾರೆ. ಈಗಾಗಲೇ  ಹಲವು ರೀತಿಯ ಪ್ರಕೃತಿ ವಿಕೋಪಗಳನ್ನು ಎದುರಿಸಲಾಗದೆ  ನಮ್ಮ ವ್ಯವಸ್ಥೆಗಳೇ ಮಾಡಿ ಕೊಟ್ಟ ಗುಂಡಿಗೆ ಬಿದ್ದು ಸರ್ವನಾಶವಾಗುತ್ತಿದ್ದಾರೆ. ಇತ್ತೀಚೆಗೆ  ಸರ್ಕಾರಿ ಜಾಗದ ಅಕ್ರಮ ಸಕ್ರಮಕ್ಕೆ ಅರ್ಜಿಯನ್ನು ಕರೆದಾಗ, ರಾಜಕೀಯ ಶಕ್ತಿ, ರಾಜಕೀಯ ಚೇಲಾಗಳು ತನ್ನ ಶಕ್ತಿಯನ್ನು ದಟ್ಟಾರಣ್ಯ  ಕಡಿದು  ಕೃಷಿಯೆಂಬ ಸುಳ್ಳು ಕಾರಣ ಕೊಟ್ಟು, ದೊಡ್ಡ ದೊಡ್ಡ ಮರಗಳನ್ನು ನೆಲಕ್ಕುರುಳಿಸಿ ಜಾಗವನ್ನು ಭಕ್ಷಿಸುವ  ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಕೆಲವು ಅಪ್ರಾಮಾಣಿಕ  ಅಧಿಕಾರಿಗಳು, ಗ್ರಾಮಸೇವಕರು, ಗ್ರಾಮ ಲೆಕ್ಕಾಧಿಕಾರಿ, ಅಧ್ಯಕ್ಷರು ಸದಸ್ಯರು, ಅರಣ್ಯ ಅಧಿಕಾರಿಗಳು, ಸಂಪೂರ್ಣ ವ್ಯವಸ್ಥೆ ಕೈ ಜೋಡಿಸಿಕೊಂಡು  ತನಗೆ ಬರುವ ಪಾಲನ್

ಕಾಪಾಡುವೆ ಜೀವ ಕೊಟ್ಟು

ಕಣ್ಣಲ್ಲಿ ಕಣ್ಣನಿಟ್ಟು ಮನಸಲ್ಲಿ ಮನಸನಿಟ್ಟು ಹೃದಯದೊಳಗೆ ನಿನ್ನನಿಟ್ಟು ಕಾಪಾಡುವೆ ಜೀವ ಕೊಟ್ಟು, ಪ್ರೀತಿಯಲಿ ತಲೆಯ ಸವರಿ ಪ್ರೇಮದಲಿ ಮುತ್ತನು ಕೊಟ್ಟು ಮೈಮರೆಯುವೆ ನನ್ನನು ಉಸಿರಾಗುವೆಯಾ? ಮಾತು ಕೊಟ್ಟು.            -Madhav. K. Anjar

ನಗುತಾ ನಿಂತಾಗ

ನೀ ನಗುತಾ ನಿಂತಾಗ ಸವಿ ಮಾತು ನುಡಿದಾಗ ಸೋತೆ...ನಾನಾಗ! ನಿನ್ನ ಕಣ್ಣಲೇನು ಮಾಯೆ ಎನ್ನ ಹೃದಯದೊಳು ನೀಯೇ  ಸನಿಹಕೆ ಬಾರೆಯ ತಡವೇತಕೆ ನೀನಿಗ! ಬಾಗಿಲನು ತೆರೆದಾಗ  ನಿನ್ನ ಮೊಗವ ಕಂಡಾಗ ಸೋತೆ.. ನಾನಾಗ! ಬೇಲೂರ ಶಿಲೆಯಂತೆ ನಿನ್ನ ಚೆಂದದಾಕಾರ ಶಿಲ್ಪಿಯೇ ನಾಚುವ ನಿನ್ನ ಆ ಸೌಂದರ್ಯಕೆ ಹೇಗಿರಲಿ ನಾನೀಗ!        ✍️Madhav. K. Anjar 

(ಲೇಖನ -76)ದಿನ ಬೆಳಗಾಗುತ್ತಿದ್ದಂತೆ, ಅಪೌಷ್ಟಿಕ ಆಹಾರದ ದಾಸರಾಗುತ್ತಿರುವ ಇಂದಿನ ಪೀಳಿಗೆ,

Image
(ಲೇಖನ -76) ದಿನ ಬೆಳಗಾಗುತ್ತಿದ್ದಂತೆ, ಅಪೌಷ್ಟಿಕ ಆಹಾರದ ದಾಸರಾಗುತ್ತಿರುವ ಇಂದಿನ ಪೀಳಿಗೆ, ಬಹಳಷ್ಟು ಬದಲಾವಣೆ ನಮ್ಮ ಆಹಾರ ಪದ್ಧತಿಯಲ್ಲಿ ಆಗಿ ಹೋಗಿದೆ. ಸುಲಭವಾಗಿ ಅಲ್ಪಪರಿಶ್ರಮ ಮತ್ತು ಸಮಯದಲ್ಲಿ ಸಿಗಲ್ಪಡುವ ಆಹಾರಕ್ಕೆ ಹೆಚ್ಚಿನವರು ಸೇರಿಕೊಳ್ಳುತ್ತಿದ್ದಾರೆ. ಇಂದಿನ ಕಾಲದಲ್ಲಿ ಹೆಚ್ಚಾಗಿ ಬಹಳಷ್ಟು ಜನರು ಸಮಯವೇ ಇಲ್ಲವೆಂದು ಹೇಳುತ್ತಾ, ಪಾಶ್ಚರೀಕರಿಸಿದ ಆಹಾರ ಪದಾರ್ಥಗಳು ತಂದು ತಿನ್ನುತ್ತಿದ್ದಾರೆ. ನಮ್ಮ ಬಾಲ್ಯದಲ್ಲಿ ಸೇವಿಸುತ್ತಿದ್ದ  ಆಹಾರ ಪದಾರ್ಥ ಬರ ಬರುತ್ತಾ ಮಾಯವಾಗುತ್ತಿದೆ. ಬೆಳಗೆದ್ದು ಇಡ್ಲಿ, ದೋಸೆ, ತಂಗಳನ್ನ, ಮೊಸರು, ಉಪ್ಪಿನಕಾಯಿ ಊಟ, ಮೀನು, ಮನೆಯಲ್ಲಿ ಸಾಕಿರುವ ಕೋಳಿ, ಮೊಲ, ಕಾಡುತ್ಪತ್ತಿಯಲ್ಲಿ ಸಿಗುತ್ತಿದ್ದ ಫಲವಸ್ತು, (ಹಲಸು, ಮಾವಿನಕಾಯಿ, ನೇರಳೆ, ಗೇರುಹಣ್ಣು, ಗೇರುಬೀಜ, ಹೆಬ್ಬಲಸು, ಸೀತಾಫಲ, ರಾಮ ಫಲ, ಮುಂತಾದವು ) ಹಾಗೆಯೇ ಸಸ್ಯಾಹಾರ, ತರಕಾರಿ, ಬಸಳೆ, ಅಲಸಂಡೆ, ಪಪ್ಪಾಯ, ಕುಂಬಳಕಾಯಿ, ಸೌತೆಕಾಯಿ, ಕಾಳು ಬೇಳೆ, ಎಲ್ಲವೂ ಹೆಚ್ಚಾಗಿ ಗದ್ದೆಯಲ್ಲಿ ಬೆಳೆಸಿ ತಾಜಾತನದಿಂದ ಕೂಡಿದ ಆಹಾರವನ್ನು ಸೇವಿಸುತಿದ್ದ ಕಾಲ. ಆರೋಗ್ಯ, ಆಯುಷ್ಯ, ತ್ವಚೆ, ಎಲ್ಲವೂ ಸರಿಯಾಗಿ ಇದ್ದ ಕಾಲ.         ಇಂದಿನ, ಆಹಾರ, ಬ್ರೆಡ್, ಬರ್ಗರ್, ಹಾಟ್ ಡಾಗ್, ಶವರ್ಮ, ಚೈನೀಸ್ ಫಾಸ್ಟ್ ಫುಡ್, ಕೆ. ಎಫ್. ಸಿ. ಪಿಜ್ಜಾ ಮುಂತಾದ ಆಹಾರವನ್ನು ಅತಿಯಾಗಿ ಸೇವಿಸಿ ಆರೋಗ್ಯ ಮತ್ತು ವಿಪರೀತ ಬೊಜ್ಜಿನೊಂದಿಗೆ ಜೀವನ ಕಳೆಯುವ ಸ್ಥಿತಿ. ಆಯುಷ್ಯ

ನಿನ್ನ ಸನ್ನೆ

ಮುಗ್ದ ಮೊಗದೊಳು ಆ ನಿನ್ನ ಸನ್ನೆಯು ಮಿಂಚಾಗಿ ಸೇರಿತೇನ್ನ ಹೃದಯದಾಳದೊಳು, ಆ ನಿನ್ನ ಕೆನ್ನೆಗೆ ಮುತ್ತಿಡಲೇ ನಾನು ಕಣ್ಣಿನ ನೋಟಕೆ ಸೋತೆನು ಇನ್ನೇನು? ನಿನ್ನ ನಗುವಿಗೆ ಚಿಂತೆಯು ಮರೆಯಾಯ್ತು ಮಗುವಿನಂತೆ ನಿನ್ನ ಮುದ್ದಾಡಲೇ ನಾನು ಬಾ ಎನ್ನ ಹತ್ತಿರ ರಾಣಿಯೇ ನೀನು ಉಸಿರಾಗಿ ಸೇರೆನ್ನ ಹೃದಯದ ಗೂಡಿನೋಳು.        - Madhav. k. Anjar

(ಲೇಖನ -70)12 ವರುಷದ ಹುಡುಗಿ ಕಾಣೆಯಾಗಿದ್ದಾರೆ! ,ನನ್ನ ಗೆಳೆಯನ ಕರೆ ಬಂದಾಗ ಕಾಣೆಯಾದವರ ವಾಸ ಸ್ಥಳ ಅರಿತ ಕೂಡಲೇ

Image
    12 ವರುಷದ ಹುಡುಗಿ  ಕಾಣೆಯಾಗಿದ್ದಾರೆ! ,ನನ್ನ ಗೆಳೆಯನ ಕರೆ ಬಂದಾಗ ಕಾಣೆಯಾದವರ ವಾಸ ಸ್ಥಳ ಅರಿತ ಕೂಡಲೇ,ಬಂದ ಮಾಹಿತಿಯನ್ನು ನನಗೆ ತಿಳಿದಿರುವ ವಾಟ್ಸಪ್ಪ್ ಗ್ರೂಪ್ ಮತ್ತು ಸ್ನೇಹಿತರಿಗೆ ಕಳುಹಿಸಿ, ಕೂಡಲೇ ಹುಡುಕಾಟ ಆರಂಭಿಸಿ ನನ್ನ ಪ್ರಯತ್ನ ಮತ್ತು ಸಹಾಯಕ್ಕೆ ಅಣಿಯಾದೆ,  ಸಂಜೆಯ ಹೊತ್ತಿಗೆ ಮನೆಯಿಂದ ಕಾಣೆಯಾದ ಹುಡುಗಿ, ಒಂದು ತರ ಎಲ್ಲರನ್ನೂ  ಆತಂಕಕ್ಕೀಡು ಮಾಡಿತ್ತು, ಕುವೈಟ್ ದೇಶದ ಅಬಾಸಿಯ ಎಂಬ ನಗರದಲ್ಲಿ, ಜನನಿಭಿಡ ಪ್ರದೇಶದಲ್ಲಿ ಮನೆಯವರ ಬುದ್ದಿಮಾತಿಗೆ ಸಿಟ್ಟುಗೊಂಡು ಮನೆಯ ಹೊರಗೆ ನಡೆದ ಹುಡುಗಿಯ ಪತ್ತೆ ಯಾಗದೆ ಇದ್ದಾಗ, ಕೂಡಲೇ ಎಚ್ಚತ್ತುಕೊಂಡು ಸುಮಾರು 50 ತಂಡಕಿಂತಲೂ ಜಾಸ್ತಿ ಮಲಯಾಳಿ ಜನರು   ತನ್ನ ತನ್ನ ವಾಹನದಲ್ಲಿ ಹುಡುಕಾಟದಲ್ಲಿ ತೊಡಗಿಕೊಂಡರು. ಅವರಂತೆ ನಾನೂ ಒಬ್ಬ ನನ್ನ ವಾಹನದಲ್ಲಿ ಹೊರಟು, ನಾಪತ್ತೆಯಾದ ಸ್ಥಳದಿಂದ ಹುಡುಕಾಟ, ಪ್ರತೀ ಗುಂಪಿನ ಹುಡುಕಾಟದ ಮಾಹಿತಿ ವಾಟ್ಸಪ್ಪ್ ನಲ್ಲಿ ಕಳುಸುತೀದ್ದ ತಂಡ,  ಹೆಚ್ಚಿನ ಕಟ್ಟಡ, ಮನೆ, ಅಂಗಡಿಗಳಲ್ಲಿ ಸಿಸಿ ಟಿವಿ ಅಳವಡಿಸಿರುವ ಕಾರಣ ಹುಡುಗಿಯ ಛಲನವಲನದ ಮಾಹಿತಿಯನ್ನು ಆಧರಿಸಿ ನಗರದ ಮೂಲೆ ಮೂಲೆಯನ್ನು ತಡಾಕಡಿ ಸುಸ್ತಾಗಿ ಹೋದ ಎಲ್ಲರೂ, ಇನ್ನಷ್ಟು ಭಯಗೊಳ್ಳಲು ಆರಂಭಿಸಿದರು,  ಪೋಷಕರ ಭಯ ಇಮ್ಮಡಿಯಾಗಿ ಕಣ್ಣೀರುಹಾಕುತಿದ್ದರು.  7 ರಿಂದ ರಾತ್ರಿ 11.30 ರ ವರೆಗೂ ಸಿಗದ ಸಮಯದಲ್ಲಿ ನಿರಾಶೆಗೊಳ್ಳುತಿದ್ದ ನಾವೆಲ್ಲರೂ ನಮ್ಮ ಹುಡುಕಾಟದ ದಿಕ್ಕನ್ನು ಬದಲಾಯಿಸುವ  ನಿರ್ಧಾರಕ್ಕೆ

(ಲೇಖನ-71) ನನ್ನ ನಂಬಿ ಊರು ಸುತ್ತಿದ ಮಾತು ಬರದ ಮಾರ್ಜಾಲ, ಮನುಷ್ಯರಿಗಿಂತ ಪ್ರಾಣಿಗಳು ಎಷ್ಟು ವಾಸಿ

Image
ನನ್ನ ನಂಬಿ ಊರು ಸುತ್ತಿದ ಮಾತು ಬರದ ಮಾರ್ಜಾಲ, ಮನುಷ್ಯರಿಗಿಂತ ಪ್ರಾಣಿಗಳು ಎಷ್ಟು ವಾಸಿ , ನಂಬಿಕೆ ವಿಶ್ವಾಸ ಎನ್ನುವುದು ಪ್ರಾಣಿಗಳಲ್ಲಿರುವಷ್ಟು  ಮನುಷ್ಯ ಜೀವಿಯಲ್ಲಿ ಇರುವುದಿಲ್ಲ. ಅದೊಂದು ದಿನ, ನಮ್ಮ ಪಿಕಪ್ವಾಹನದ ಹಿಂದುಗಡೆ ಖಾಲಿ  ರಟ್ಟಿನ ಪೆಟ್ಟಿಗೆ ಒಳಗೆ ಗಾಢ ನಿದ್ರೆಯಲ್ಲಿದ್ದ ಮಾರ್ಜಾಲ, ನಾನು ಗಮನಿಸದೆ  ವಾಹನವನ್ನು ಸುಮಾರು ಒಂದುವರೆ ಕಿಲೋಮೀಟರ್ ದೂರ ಇಂಧನ ತುಂಬಿಸಲು ನಿಲ್ಲಿಸಿದಾಗ  ಒಮ್ಮೆಲೇ  ಹಿಂದುಗಡೆಯಿಂದ ಮೇಲ್ಚಾವಣಿಯ ಮೇಲೇರಿ ಕಾರಿನ ಬಾನೆಟ್ ಎದುರುಗಡೆ  ಬಂದು ನಿಂತಿತು, ಆ ದಿನ ನನ್ನ ಮಗು ಕಿವಿಯೊಳಗೆ  ಯಾವುದೋ ವಸ್ತುವನ್ನು ಹಾಕಿದ ಪರಿಣಾಮ  ಆಸ್ಪತ್ರೆಗೆ  ಅಗತ್ಯವಾಗಿ ನನ್ನ ಹೆಂಡತಿ ಮಕ್ಕಳೊಂದಿಗೆ ಹೋಗುವ ದಾರಿಯಲ್ಲಿದ್ದೆ,  ನಮ್ಮ ಕಟ್ಟಡದ ಕೆಳಗಡೆ ವಾಸವಾಗುತ್ತಿದ್ದ ಈ ಮರಿ ಬೆಕ್ಕು  ಇನ್ನು ಅಲ್ಲೇ ಬಿಟ್ಟರೆ ಯಾವುದಾದರೂ ಕೆಳಗಡೆ  ಬಿದ್ದು ಸಾಯೋದು ಖಚಿತವೆಂದು  ನನ್ನ ಮನದಲ್ಲಿ ಮೂಡಿದಾಗ, ಅದೇ ಕ್ಷಣ  ಬೆಕ್ಕನ್ನು  ನಮ್ಮ ಕಾರಿನೊಳಗಡೆ  ಸೇರಿಸಿಬಿಟ್ಟೆ, ಅಲ್ಪ ಹೆದರಿಕೆಯಾದರೂ, ಬೆಕ್ಕಿನ ಸ್ಪಂದನೆ ನೋಡಿ ಮಿಯಾವ್ ಹೇಳುತ್ತಾ ಹಿಂದುಗಡೆ ಸಿಟಿನ ಕೆಳಗಡೆ ಕೂರಿಸಿಬಿಟ್ಟೆ. ಸಾಧಾರಣವಾಗಿ ಬೆಕ್ಕುಗಳು  ಎಲ್ಲಾ ಬಾಗಿಲನ್ನು ಮುಚ್ಚಿದಾಗ ಗಲಿಬಿಲಿಗೊಂಡು ಜಾಸ್ತಿ ಓಡಾಟ ಮಾಡುತ್ತವೆ. ನಾ ಇನ್ಯಾವುದೋ   ಪ್ರದೇಶಕ್ಕೆ ಬಂದು ಸಿಕ್ಕಿಬಿದ್ದಿದ್ದೇನೆ ಎಂದು ಅರಿತ  ಬೆಕ್ಕು, ಸುಮ್ಮನೆ ಕುಳಿತುಕೊಂಡಿತು. ಆ ಬೆಕ್ಕಿನೊಂದಿಗೆ ಆಸ್ಪತ

(ಲೇಖನ -72)ಕುವೈತ್ ಕನ್ನಡ ಕೂಟವೆಂಬ ಪ್ರಭುದ್ದ ಸಂಘಟನೆ, ಕನ್ನಡಿಗರ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತಾ ಬಂದಿದೆ,

Image
ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ, ಕನ್ನಡವೇ ನನ್ನುಸಿರು ಹೀಗೆ ಹತ್ತು ಹಲವು ವ್ಯಾಖ್ಯಾನಗಳಿಂದ, ಕವಿಗಳು ಮೇಧಾವಿಗಳು,  ಕನ್ನಡಾಂಬೆಯ ವರ್ಣನೆಯನ್ನು ಮಾಡುತ್ತಾ, ಕನ್ನಡ ಭಾಷೆಯ, ಕರ್ನಾಟಕ ರಾಜ್ಯದ, ಕನ್ನಡ ಜನತೆಯ ಹೆಸರನ್ನು ಶಿಖರದೆತ್ತರಕ್ಕೆ ಕೊಂಡೊಯ್ತಿದ್ದಾರೆ. ಕನ್ನಡ ನೆಲದಲ್ಲಿ ಹುಟ್ಟಿ ಬಂದಿರುವಂತಹ ಪ್ರಬಲ  ಕವಿಗಳು ಕವಿಯತ್ರಿಗಳು ಕನ್ನಡ ಭಾಷೆಗೆ ಮರೆಯಲಾಗದ ಕೊಡುಗೆಯನ್ನು  ಕೊಡುತ್ತಾ ಬಂದಿರುತ್ತಾರೆ.              ಕುವೈತ್ ಕನ್ನಡ ಕೂಟವೆಂಬ ಪ್ರಭುದ್ದ ಸಂಘಟನೆ, ಕನ್ನಡಿಗರ ಗೌರವವನ್ನು  ಇನ್ನಷ್ಟು ಹೆಚ್ಚಿಸುತ್ತಾ ಬಂದಿದೆ, ಈ ಸಂಘಟನೆಯ  ಅತ್ಯಂತ ಹಿರಿ ಸಂಘಟನೆಯಾಗಿದ್ದು, ಹೆಚ್ಚು ಮೌಲ್ಯಯುತ ವ್ಯಕ್ತಿಗಳನ್ನು ಹೊಂದಿರುವ ಗೌರವಾನ್ವಿತ ಜನರ ಗುಂಪು. ಪ್ರತಿಯೊಂದು ಕಾರ್ಯಕ್ರಮಗಳು ಅತ್ಯುತ್ತಮ ಮತ್ತು ಬಹಳ ಅಚ್ಚುಕಟ್ಟಾಗಿ ನಡೆಸಿಕೊಡಲು ಪ್ರಯತ್ನಪಡುವ ಸಂಘದ ಪ್ರತಿ ಸದಸ್ಯರು ಮತ್ತು ಆಡಳಿತ ಸಮಿತಿ. ಪ್ರತಿವರ್ಷ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವಂತಿರುತ್ತದೆ. ಈ ಸಲವೂ, ರಾಜ್ಯೋತ್ಸವವನ್ನು ಕರ್ನಾಟಕದ ಪ್ರತಿ ಜಿಲ್ಲೆಯ ಸಾಂಸ್ಕೃತಿಕ ಕಲಾವೈಭವನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶನ ಮಾಡಿ  ಜನ ಮೆಚ್ಚುಗೆಗೆ ಪಾತ್ರರಾಗಿಬಿಟ್ಟಿತು.         &quo

(ಲೇಖನ -73)ದೈವ ಶಕ್ತಿಯನ್ನು ನಂಬಿ ನಡೆಸಿದ ಕುವೈಟ್ ಬ್ಯಾಡ್ಮಿಂಟನ್ ಪಂದ್ಯ

Image
(ಲೇಖನ -ದೈವ ಶಕ್ತಿಯನ್ನು ನಂಬಿ ನಡೆಸಿದ  ಕುವೈಟ್ ಬ್ಯಾಡ್ಮಿಂಟನ್ ಪಂದ್ಯ,  ಆ ಒಂದು ತಿಂಗಳು ಹೇಗೆ ಹೋಯಿತು ಎಂಬುದೇ ಗೊತ್ತಾಗಲಿಲ್ಲ, ಸಾಧಾರಣವಾಗಿ  ನನ್ನ ಕೆಲಸ ಮುಗಿಸಿ  ಮನೆಗೆ  ಆಗಮಿಸುವ ನಾನು, ಎಂದಿನಂತೆ  ತನ್ನ ಮಕ್ಕಳೊಂದಿಗೆ ಕಟ್ಟಡದ ಕೆಳಗೆ  ಆಟವಾಡಲು  ಹೋಗುತ್ತಿದ್ದೆ, ಸಮಯ ಸಿಕ್ಕಾಗ  ಲೇಖನಗಳನ್ನು ಬರೆಯುತ್ತಲು ಇದ್ದೆ, ನಾವು ವಾಸ ಮಾಡುತ್ತಿರುವ ಕಟ್ಟಡದಲ್ಲಿ  ನನ್ನ ಕಣ್ಣೆದುರಿಗೆ  ಬ್ಯಾಡ್ಮಿಂಟನ್ ಆಡುವ ಆಟದ ಬ್ಯಾಟನ್ನು ಎತ್ತಿಕೊಂಡು ಬರುತ್ತಿದ್ದ, ಮುಖ ಪರಿಚಯ ಇರುವ ಅವರಲ್ಲಿ, ಎಲ್ಲಿ ಆಟವಾಡಲು ಹೋಗುತ್ತಿದ್ದೀರಿ ಎಂದು ಕೇಳಿ ಬಿಟ್ಟೆ, ಹೋ ಇಲ್ಲಿ ಹತ್ತಿರದ ಶಾಲೆಯಲ್ಲಿ ನಾನು ನಾಲ್ಕು ಜನ ಸೇರಿ ಆಟವಾಡುತ್ತೇವೆ ಅಂದುಬಿಟ್ಟರೆ, ಹೌದಾ ಇಲ್ಲಿ ಬ್ಯಾಡ್ಮಿಂಟನ್ ಕೂಡ ಆಡುತ್ತಾರೆಯೇ, ಎಂದು ಕೇಳಿದ್ದಕ್ಕೆ, ಹೌದು ಅಂದುಬಿಟ್ಟರು. ಅದೇ ಕ್ಷಣದಲ್ಲಿ  ನಾನು ಎದುರು ನೋಡುತ್ತಿದ್ದ ಚಿಕ್ಕ ಮತ್ತು ಮೊದಲ ಪ್ರಯತ್ನದ  ಪಂದ್ಯವನ್ನು  ಯಾಕೆ ಮಾಡಿಸಬಾರದು ಎಂಬ  ಯೋಚನೆಯೊಂದಿಗೆ ಮಾರನೆಯ ದಿನ ನಾವು ಒಂದು ಟೂರ್ನಮೆಂಟ್ ಮಾಡಿದರೆ ಹೇಗೆ ಅಂದುಬಿಟ್ಟೆ, ಅವರ ಉತ್ತರ ಮಾಡಬಹುದಲ್ಲವೇ, ಹೌದು ಅನ್ನುವಷ್ಟರಲ್ಲಿಯೇ, ಅದೇ ಕ್ಷಣದಿಂದ ಕಾರ್ಯಪ್ರವೃತ್ತನಾದ ಎನಗೆ ಎಲ್ಲಿ ಆರಂಭ ಮಾಡಬೇಕೆಂಬುದೇ  ತಿಳಿದಿರಲಿಲ್ಲ, ಆದರೆ ನನ್ನ ಕೆಲವು ಗೆಳೆಯರೊಂದಿಗೆ  ವಿಚಾರ ಮಾಡಿದಾಗ, ಹಲವು ಸಲಹೆಗಳನ್ನು ಕೊಟ್ಟುಬಿಟ್ಟರೆ, ಕೆಲವರು, "ನಿಕ್ಕು ದಾಯಗ ಮಾರಾಯ  ಅವುಮಾತ &

(ಲೇಖನ -75)ಕಲಾ ಮಾಣಿಕ್ಯ ಶ್ರೀ ಸುರೇಶ್ ಸಾಲ್ಯಾನ್ ತುಳುಕೂಟವೆಂಬ ಕಲಾ ಸಾಗರದಲ್ಲಿ

ಕಲಾ ಮಾಣಿಕ್ಯ ಶ್ರೀ ಸುರೇಶ್ ಸಾಲ್ಯಾನ್ ತುಳುಕೂಟವೆಂಬ ಕಲಾ ಸಾಗರದಲ್ಲಿ , ತುಳು ನೌಕೆಯ ನಾವಿಕ. ತುಳುವರಿಂದ, ತುಳುವರಿಗಾಗಿ, ತುಳು ಭಾಷೆ ಸಂಸ್ಕೃತಿಯನ್ನು ಪೂಜಿಸುತ್ತಾ, ಬೆಳೆಸುತ್ತಾ, ಪ್ರಪಂಚದ ಮೂಲೆ ಮೂಲೆಗೂ  ತುಳುವರ ಸಂಸ್ಕೃತಿ ಮತ್ತು ಭಾರತ ದೇಶದ ಸಂಸ್ಕೃತಿಯನ್ನು ದೃಶ್ಯ ರೂಪದಲ್ಲಿ ಸಾದರಪಡಿಸಿ  ಮಕ್ಕಳಿಂದ ಹಿರಿಯರವರೆಗಿನ  ಜನರ ಮೆಚ್ಚುಗೆಗೆ ಪಾತ್ರರಾಗಿ ಮತ್ತೊಮ್ಮೆ  ತಮ್ಮ ಕೀರ್ತಿ ಪತಾಕೆಯನ್ನು  ಮರಳುಗಾಡಿನ  ಊರಿನಲ್ಲಿ ಓಯಸಿಸ್ ನಂತೆ ಭಾರತದ ಪ್ರತಿ ರಾಜ್ಯದ, ಪ್ರತಿ ಜಿಲ್ಲೆಯ ಸಂಸ್ಕೃತಿಯನ್ನು ಅದ್ದೂರಿಯಾಗಿ ಪ್ರದರ್ಶನ ಮಾಡಿ  ಸಾವಿರಾರು ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕಲೆ ಎಂಬುದು ದೇವರ ಆಶೀರ್ವಾದ, ಅದನ್ನು  ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದಾಗ ಯಶಸ್ವಿ ಎಂಬುದು ಕಟ್ಟಿಟ್ಟ ಬುತ್ತಿ . ತುಳುಕುಟ ಎಂಬ ಸಂಘಟನೆಯಲ್ಲಿ ನಾ ಕಂಡಂತೆ ಮಾನ್ಯ ಸುರೇಶ್ ಸಾಲಿಯಾನ್  ರವರು  ಸುಮಾರು 25 ವರ್ಷಗಳಿಂದ ತನ್ನ ಕಲಾ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ ಬಂದಿರುತ್ತಾರೆ. ಅವರ ಚಿಂತನೆ, ಅವರಲ್ಲಿರುವ ಭಾವನೆ, ಅವರಲ್ಲಿರುವ ವಿನಯತೆ, ಅವರಲ್ಲಿರುವ ಸೌಜನ್ಯತೆ ಇಷ್ಟಪಡದವರು ಇಷ್ಟಪಡುವಂತೆ ಇರುತ್ತದೆ ಹಾಗೂ ಯಾವುದೇ ಪ್ರಶಸ್ತಿ ಬಯಸದೆ  ಆತ್ಮಾರ್ಥವಾಗಿ ಮಾಡುತ್ತಿರುವ ಕೆಲಸಗಳು ನಡೆಯುತ್ತಲೇ ಇದೆ. ಸುರೇಶ್ ರವರೇ ನಮಗೆ ಈ ವರ್ಷ  ನಿಮ್ಮಿಂದ ಹೊಸ ಕಾರ್ಯಕ್ರಮಗಳು ಬೇಕು ಎಂದು ಹೇಳಿದಾಗಲೇ ಸಂತೋಷದಿಂದ ಸ್ವೀಕರಿಸಿ ಹೇಳಿದ ದಿನದಿಂದಲೇ  ತನ್ನ ಬು

(ಲೇಖನ -74)ಬಿಲ್ಲವ ಸಂಘ, ಕುವೈಟ್ ದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ, ಬೈರಾಸ್ ಭಾಸ್ಕರೆ ಎಂಬ ನಾಟಕವನ್ನು ಪ್ರದರ್ಶನವನ್ನು ಮಾಡಿ,

Image
 ಬಿಲ್ಲವ ಸಂಘ,  ಕುವೈಟ್ ದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ, ಬೈರಾಸ್ ಭಾಸ್ಕರೆ ಎಂಬ ನಾಟಕವನ್ನು ಪ್ರದರ್ಶನವನ್ನು ಮಾಡಿ, ಇಂದಿನ ದಿನಗಳಲ್ಲಿ ಹಣಕ್ಕೆ ಮತ್ತು ಗುಣಕ್ಕಿರುವ ಮೌಲ್ಯವನ್ನು ಸಾವಿರಾರು ಜನರಿಗೆ ತಿಳಿಯುವಂತೆ ಮಾಡಿರುವ ಆ ಕ್ಷಣಗಳು, ನಾನು ಬರೆಯಲೇ ಬೇಕೆಂಬ ಆಸಕ್ತಿಯೊಂದಿಗೆ!      ಹಲವಾರು ನಾಟಕಗಳನ್ನು  ನನ್ನ ಜೀವನದಲ್ಲಿ ನೋಡಿರುತ್ತೇನೆ!, ಈ ಹಿಂದೆ ನಾಟಕವೆಂದಾಗ ಹೆಚ್ಚಿನವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ಸೃಷ್ಟಿ ಮಾಡುತ್ತಿತ್ತು,  ಬರಬರುತ್ತಾ ಕೆಲವರ ನಾಟಕ ಬರವಣಿಗೆಗಳು ಅಶ್ಲೀಲ ಮತ್ತು ಅರ್ಥವಿಲ್ಲದ ಸ್ಥಿತಿಗೆ ತಲುಪಿ ಏನೇನೋ ಅವಾಂತರ ಸೃಷ್ಟಿಸಿ ಸಮಾಜವನ್ನು ಕೆಡಿಸುವ ಮಟ್ಟಿಗೆ ಇಳಿದಿದ್ದು ಇದೆ. ಇಂದಿನ ಮೊಬೈಲ್ ಮತ್ತು ಟಿವಿ ಮಾಧ್ಯಮದ ನಡುವೆ ಅಲ್ಲಲ್ಲಿ ಹಲವಾರು ಸಂಘಟನೆಗಳು ಮಾಡುವ ಒಳ್ಳೆಯ ವಿಚಾರಗಳು ಅಲ್ಪ ಜನರಿಗೆ ತಲುಪಿದರೂ, ನಾಟಕದ ಪ್ರತಿಯೊಂದು ದೃಶ್ಯಗಳು ಮನಮುಟ್ಟುವಂತೆ ಇರುತ್ತದೆ.          ಬೈರಾಸ್ ಭಾಸ್ಕರ, ಮುಗ್ದ ಮನಸಿನ ವ್ಯಕ್ತಿ, ತನ್ನ ಅಣ್ಣನನ್ನು ಬೆಳೆಸಲು ಮತ್ತು ಸಮಾಜದಲ್ಲಿ ಉತ್ತಮವಾದ ವ್ಯಕ್ತಿಯನ್ನಾಗಿ ಮಾಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟ, ಅಣ್ಣನಿಗೆ ಒಂದೊಳ್ಳೆಯ ಕೆಲಸ ಸಿಕ್ಕಿ ಶ್ರೀಮಂತನಾಗುತ್ತಾನೆ. ಅಣ್ಣ ತಮ್ಮನ ಬಾಂಧವ್ಯ ಉತ್ತಮವಾಗಿರುವ ಸಮಯದಲ್ಲಿ ಅತ್ತಿಗೆಯ ರೂಪದಲ್ಲಿ ಮನೆಗೆ ಸೇರಿ, ಆಸ್ತಿಗಾಗಿ ಸಂಸಾರದ ಸಂಬಂಧವನ್ನು ಹಾಳು ಮಾಡಿ

(ಲೇಖನ -69)ಸ್ನೇಹದಲ್ಲಿ ನ ವಿಶ್ವಾಸ, ಸಂಬಂಧದಲ್ಲಿನ ವಿಶ್ವಾಸ, ಪ್ರೀತಿಯಲ್ಲಿನ ವಿಶ್ವಾಸ ಉಳಿಸಿಕೊಳ್ಳುವ ಯೋಗ್ಯತೆ ಕೆಲವರಿಗೆ ಮಾತ್ರ ಇರುತ್ತದೆ, ವಿಶ್ವಾಸಘಾತ ವಾಗಲು ಅವಕಾಶವನ್ನು ಮಾಡಿಕೊಡಬಾರದು

Image
✍️ Madhav. K. Anjar  ( ಲೇಖನ 69 ) ರಾತ್ರಿ 9:30 ಸಮಯ,  ಇವತ್ತು ಎನಗೆ ಹೆಚ್ಚು ಮಾತನಾಡಲು ಸಮಯವಿಲ್ಲ,  ಥಟ್ಟನೆ  ಇವತ್ತಿನ ಲೇಖನ ಬರೆಯಲು ಒಂದು ವಿಷಯ ಕೊಡಿ ಎಂದು ನನ್ನ ಅತ್ಯಂತ ಪ್ರೀಯ ಗೆಳೆಯನೊಬ್ಬನಿಗೆ ಕರೆ ಮಾಡಿದಾಗ,  ವಂಚನೆ, ವಿಶ್ವಾಸಘಾತದ ಬಗ್ಗೆ  ಬರೆದುಬಿಡಿ ಎಂದುಬಿಟ್ಟರು!  ಓಹ್,  ವಿಶ್ವಾಸಘಾತವೆ ..... ಇಂದಿನ ಪ್ರಪಂಚದಲ್ಲಿ, ವಿಶ್ವಾಸ ಘಾತುಕರ ಸಂಖ್ಯೆ ಬಹಳಷ್ಟಿದೆ, ಮುತ್ತಿನಂಥಹ ಮನುಷ್ಯರನ್ನು ಹುಡುಕಲು ಹರಸಾಹಸ ಪಡಬೇಕಾಗುತ್ತದೆ, ನಾವೆಷ್ಟು  ಎಚ್ಚರಿಕೆಯಿಂದಿದ್ದರೂ, ವಿದ್ಯಾವಂತರಾಗಿದ್ದರೂ, ಬುದ್ಧಿವಂತರಾಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ವಂಚನೆಗೆ ಒಳಗಾಗುತ್ತೇವೆ ಅಲ್ಲವೇ?  ವಂಚಕರ ತಂಡ , ವಿಶ್ವಾಸ ಘಾತುಕರ ತಂಡ ಯಾವುದೇ ಮುಲಾಜಿಲ್ಲದೆ  ತನ್ನ ಕಾಯಕದಲ್ಲಿ ತಲ್ಲೀನರಾಗಿರುತ್ತಾರೆ . ಅವರಿಗೆ, ಗೌರವ, ನಾಚಿಕೆ, ಮಾನ ಮರ್ಯಾದೆ, ಸಮಾಜದ ಬಗ್ಗೆ ಯಾವುದೇ ಹೆದರಿಕೆ ಗಳಿಲ್ಲದೆ ಧೈರ್ಯವಾಗಿ ನಡೆಸುವ ಕಾಯಕ. ನಿಮ್ಮ ಜೀವನದಲ್ಲಿ ಅದೆಷ್ಟೋ ಸಂದರ್ಭಗಳನ್ನು ಅನುಭವಿಸಿರಬಹುದು,  ವ್ಯಕ್ತಿಯ ವಿಶ್ವಾಸ ಮಾಡುವುದಕ್ಕೂ,  ವಿಶ್ವಾಸ ಗಳಿಸುವುದಕ್ಕೂ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತೇವೆ, ಆದರೆ ಗಳಿಸಿದ ವಿಶ್ವಾಸವನ್ನು  ಉಳಿಸಿಕೊಳ್ಳುವವರು ಬಹಳಷ್ಟು ಕಡಿಮೆ,  ಸರಾಸರಿ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು  ಗಟ್ಟಿಗೊಳಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತೇವೆ. ಬಹಳಷ್ಟು ಗಟ್ಟಿಯಾಗಿರುವ ಸ್ನೇಹ ಮುರಿದು ಹೋಗಲ

(ಲೇಖನ -68)ಸಂಸಾರವೆಂದ ಕೂಡಲೇ , ನನ್ನ ಮನದಲ್ಲಿ ಸಾವಿರಾರು ವ್ಯಾಖ್ಯಾನ, ಮೂಡಿಬರತೊಡಗಿತು

Image
✍️ Madhav. K. Anjar  (ಲೇಖನ -68) ದಿನಚರಿ, ಎಂದಿನಂತೆ  ಬೆಳಗೆದ್ದು  ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ, ದುಡಿಮೆಗಾಗಿ ಮನೆಯಿಂದ ಹೊರಟ ನನ್ನೊಂದಿಗೆ ಮಲಯಾಳಿ ಸಂಗಡಿಗ, ಆತನ ಕೆಲಸ ಚಿಕ್ಕದಾದರೂ, ಚೊಕ್ಕ ಮತ್ತು ಪ್ರಾಮಾಣಿಕತೆಯಿಂದ ಬದುಕುವ ವ್ಯಕ್ತಿಯೊಂದಿಗೆ.....ಇವತ್ತು ಯಾವುದರ ಬಗ್ಗೆ ಲೇಖನ ಬರೆಯುವುದು ತಿಳಿಯುತ್ತಿಲ್ಲವೆಂದು ಹೇಳಿದಾಗ, ಸರ್ ನೀವು ಇವತ್ತು ಸಂಸಾರದ ಬಗ್ಗೆ ಬರೆಯಿರಿ ಅಂದುಬಿಟ್ಟರು.....           ಸಂಸಾರವೆಂದ ಕೂಡಲೇ , ನನ್ನ ಮನದಲ್ಲಿ ಸಾವಿರಾರು ವ್ಯಾಖ್ಯಾನ, ಮೂಡಿಬರತೊಡಗಿತು, ಇಲ್ಲಿ ಅಕ್ಷರ ರೂಪದಲ್ಲಿ ನಿಮ್ಮ ಮುಂದಿಡುತಿದ್ದೇನೆ. ಕೆಲವರ ಸಂಸಾರ ಆನಂದ ಸಾಗರ, ಹಲವರ ಸಂಸಾರ ಸಮಸ್ಯೆಗಳ ಆಗರ, ಇನ್ನು ಕೆಲವರ ಸಂಸಾರ ನಗು, ಪ್ರೀತಿ, ಕಷ್ಟ ಸುಖವನ್ನು ಸಮಾನ ರೀತಿಯಲ್ಲಿ ನೋಡುವುದು, ಇನ್ನು ಕೆಲವರು ಏನಾದರಾಗಲಿ ಎಂಜಾಯ್ ಮಾಡಬೇಕೆಂದು ಹಾಸಿಗೆಗೆಗಿಂತ ಜಾಸ್ತಿ ಕಾಲು ಚಾಚಿ ಅತ್ಯಂತ ಕನಿಷ್ಠ ಗುಣಮಟ್ಟದಲ್ಲಿ ಇನ್ನೊಬ್ಬರಿಗೆ ಭಾರವಾಗಿ ಬದುಕುವುದು .          ಅಂದಿನ ಕಾಲದಲ್ಲಿ ಸುಮಾರು ಮೂರ್ನಾಲ್ಕು ತಲೆಮಾರಿನ  ಕುಟುಂಬದ ಸದಸ್ಯರೆಲ್ಲರೂ ಒಂದೇ ಮನೆಯಲ್ಲಿ  ವಾಸಮಾಡುತ್ತಿದ್ದರು, ಮನೆಗೊಬ್ಬ ಹಿರಿಯ ವ್ಯಕ್ತಿ, ಯಜಮಾನ ನಾಗಿ ಮನೆ ಪತಿ ಸದಸ್ಯರ ಆಗುಹೋಗುಗಳನ್ನು ನೋಡಿಕೊಳ್ಳುತ್ತಾ, ಹಬ್ಬ-ಹರಿದಿನಗಳನ್ನು  ಚಿಕ್ಕ ಮಕ್ಕಳಿಂದ ಹಿಡಿದು  ಮನೆಯ ಹಿರಿಯ ಸದಸ್ಯರು ತುಂಬಾ ಸಂತೋಷದಿಂದ  ಮಾಡಿಕೊಳ್ಳುತ್ತಿದ್ದರು. ಗಂಡ-ಹೆಂಡತಿಯ ಸ

(ಲೇಖನ -67)-ಮೌನ - ನಾನು ಮತ್ತು ನನ್ನ ಗೆಳೆಯನೊಬ್ಬನ ದೀರ್ಘವಾದ ಸಂಭಾಷಣೆಯಲ್ಲಿ ಆಯ್ಕೆಯಾದ ಮೌನ ಶಬ್ದದ ಲೇಖನ ಎನ್ನ ಬಾಳಿನ ಪುಟದಲಿ

Image
 ( ಲೇಖನ -67 )- ಮೌನ  - ನಾನು ಮತ್ತು ನನ್ನ ಗೆಳೆಯನೊಬ್ಬನ ದೀರ್ಘವಾದ ಸಂಭಾಷಣೆಯಲ್ಲಿ ಆಯ್ಕೆಯಾದ ಮೌನ ಶಬ್ದದ ಲೇಖನ ಎನ್ನ ಬಾಳಿನ ಪುಟದಲಿ......           ಮೌನಕ್ಕೆ ಅದೆಷ್ಟು ಶಕ್ತಿ ಇದೆ ಎಂಬುದನ್ನು ಹಲವಾರು ಸಂದರ್ಭಗಳಲ್ಲಿ ನಾವೆಲ್ಲರೂ ಅನುಭವಿಸಿರುತ್ತೇವೆ, ಮೌನ  ಅಸ್ತ್ರ ವಾಗಬಹುದು, ಮೌನ  ಉತ್ತರ ವಾಗಬಹುದು, ಮೌನ ಮಾತಾಗಲೂ ಬಹುದು, ಮೌನವೆಂಬುದು ತಂತಿ ಯೊಳಗಿನ ವಿದ್ಯುತ್ತಿನಂತೆ, ನಿರ್ದಿಷ್ಟ ಜಾಗಕ್ಕೆ ಸೇರಿ  ಅದನ್ನು ಬೆಳಗಲು ಬೇಕಾಗುವ ಸಾಮಗ್ರಿಗಳು ಸಿಕ್ಕಾಗ ಬೆಳಕನ್ನು  ನೀಡಬಹುದು ಅಥವಾ ಬೆಂಕಿಯ ಜ್ವಾಲೆ ಯಾಗಲು ಬಹುದು. ನಮ್ಮ ಜೀವನದಲ್ಲಿ ಬರುವ ಹಲವಾರು ಸಂದರ್ಭಗಳಲ್ಲಿ ಕೆಲವೊಮ್ಮೆ ಮೌನವಾಗಿ ಉತ್ತರವನ್ನು ಕೊಡುವ ಸಂದರ್ಭಗಳನ್ನು  ರೂಢಿ ಮಾಡಿಕೊಳ್ಳುತ್ತೇವೆ. ಅಜ್ಞಾನಿಗೆ ಮೌನವೆಂಬುದು ಹೇಡಿಯ ಲಕ್ಷಣವೆಂದು ಕಂಡರೂ, ಜ್ಞಾನಿಗೆ  ಮೌನವೆಂಬುದು ಪ್ರಬುದ್ಧತೆಯ   ಲಕ್ಷಣವಾಗಿ ಕಾಣುತ್ತದೆ. ನಮ್ಮ ಸಂಸ್ಕಾರಗಳಲ್ಲಿ ವೃತ, ಪ್ರಾರ್ಥನೆಯನ್ನು ಮಾಡುತ್ತಿರುವಾಗ ಮೌನವಾಗಿ ಶ್ರದ್ಧೆಯಿಂದ  ಆಚರಿಸುವ ಕಾರ್ಯಕ್ರಮಗಳು  ಅದೆಷ್ಟೋ ಇದೆ. ದೇವಸ್ಥಾನ, ಮಂದಿರ ಮಸೀದಿಗಳಲ್ಲಿ, ಪ್ರಾರ್ಥನೆಯ ನಂತರ ಒಂದೆರಡು ನಿಮಿಷ ಮೌನವಾಗಿ ಪ್ರಾರ್ಥನೆಯನ್ನು ಸಲ್ಲಿಸುವ ವಿಧಗಳು ನಮ್ಮ ಮನಸ್ಸಿಗೆ ಅತ್ಯಂತ ಪ್ರಬಲ ಶಕ್ತಿಯನ್ನು ನೀಡುತ್ತದೆ. ಮೌನಕ್ಕೆ ಇರುವಷ್ಟು ಶಕ್ತಿ  ಬೇರೆ ಯಾವುದಕ್ಕೂ ಇಲ್ಲ, ಮೌನ ನಿಮ್ಮನ್ನು, ದೊಡ್ಡ ಸಮಸ್ಯೆಯಿಂದ  ಹೊರ ಗೆಳೆಯ ಬಹುದು, ಮೌನ ನ

(ಲೇಖನ -66)ಹಣದುಬ್ಬರ ವೆಂದರೆ ಏನೆಂದು ಕೂಡ ತಿಳಿಯದ ಸಾಮಾನ್ಯ ಜನರು ತನ್ನ ಹೊಟ್ಟೆಪಾಡಿಗಾಗಿ ಹರಸಾಹಸ ಪಡುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ.

Image
(ಲೇಖನ -66) - ಹಣದುಬ್ಬರ - ಹಣದುಬ್ಬರ ವೆಂದರೆ  ಏನೆಂದು ಕೂಡ ತಿಳಿಯದ ಸಾಮಾನ್ಯ ಜನರು  ತನ್ನ ಹೊಟ್ಟೆಪಾಡಿಗಾಗಿ ಹರಸಾಹಸ ಪಡುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ. ದಿನದಿಂದ ದಿನಕ್ಕೆ ದಿನೋಪಯೋಗಿ ವಸ್ತುಗಳ ಬೆಲೆಗಳು ಏರುತ್ತಲೇ ಇದೆ. ಇದಕ್ಕೆ ಕಾರಣ  ಹಲವಾರು, ಆದರೆ ಹಣದುಬ್ಬರವನ್ನು ಹತೋಟಿಯಲ್ಲಿಡುವ  ಜವಾಬ್ದಾರಿ ಸಂಬಂಧಪಟ್ಟ  ಇಲಾಖೆ ಅಥವಾ ಉತ್ತಮ  ಬುದ್ಧಿವಂತ ಮತ್ತು ಜ್ಞಾನವುಳ್ಳ   ಹಣಕಾಸು ಮಂತ್ರಿಗಳಿಗೆ  ಅಥವಾ ಪ್ರಧಾನಮಂತ್ರಿಗಳಿಗೆ ಹಾಗೂ  ಜವಾಬ್ದಾರಿಯುತ ಪ್ರಜೆಗಳಿಂದ  ಕೂಡಿರುತ್ತದೆ. ಹಣದುಬ್ಬರಕ್ಕೆ ನೇರ  ಮತ್ತು ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಇದರಲ್ಲಿ  ಸರ್ಕಾರದ ಆಡಳಿತದ ರೀತಿ ಬಹಳ ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ. ಭಾರತೀಯರು ತಾವು ಖರೀದಿಸುವ  ಪ್ರತಿಯೊಂದು ವಸ್ತುಗಳಲ್ಲಿ  ತೆರಿಗೆ  ಮೂಲಕ ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ ಆದರೆ ಪಾವತಿ ಮಾಡಿದ ತೆರಿಗೆ  ಜನರಿಗೆ ಎಷ್ಟರಮಟ್ಟಿಗೆ  ತಲುಪುತ್ತಿದೆ  ಎನ್ನುವುದು  ನಿಗೂಢವಾಗಿಯೇ ಇರುತ್ತದೆ. ಸರ್ಕಾರ ಹಲವಾರು  ಸವಲತ್ತು ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ  ಕೋಟಿಗಟ್ಟಲೆ  ಹಣವನ್ನು ಬಿಡುಗಡೆ ಮಾಡುತ್ತಿರುತ್ತದೆ, ಬಿಡುಗಡೆಯಾದ  ಹಣ ಪೂರ್ಣವಾಗಿ ಪ್ರಜೆಗಳ  ಕೈ ಸೇರುವುದಿಲ್ಲ. ಹಣವು  ಬಿಡುಗಡೆಯಾಗುತ್ತಿದ್ದಂತೆಯೇ ಭ್ರಷ್ಟಾಚಾರ ಮಾಡುವ ರಾಜಕೀಯ ವ್ಯಕ್ತಿಗಳ ಕೈ ಸೇರಿಬಿಡುತ್ತದೆ, ಒಂದು ಯೋಜನೆಯಲ್ಲಿ ಹಣಕ್ಕಾಗಿ  ಆಸೆ

(ಲೇಖನ -65) ನಾಶವಾಗುತ್ತಿರುವ ಅರಣ್ಯ ಪ್ರದೇಶಗಳು, ನವರಂದ್ರಗಳನ್ನು ಮುಚ್ಚಿ ಕುಳಿತುಕೊಳ್ಳುವ ಅರಣ್ಯಾಧಿಕಾರಿಗಳು,

Image
(ಲೇಖನ -65) ನಾಶವಾಗುತ್ತಿರುವ ಅರಣ್ಯ ಪ್ರದೇಶಗಳು, ನವರಂದ್ರಗಳನ್ನು ಮುಚ್ಚಿ ಕುಳಿತುಕೊಳ್ಳುವ ಅರಣ್ಯಾಧಿಕಾರಿಗಳು,ಅರಣ್ಯ ಸಂಪತ್ತು ನಮಗೆ ಅಗತ್ಯವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿರುವ ಇಂದಿನ ಯುವಪೀಳಿಗೆ, ಎಸಿ ಕಾರು, ಬೈಕು ಎಸಿ ಬಸ್ಸು ಎಲ್ಲವೂ ಹವಾನಿಯಂತ್ರಿತ  ವಾಹನಗಳು  ಸುತ್ತಾಡಲು ಇರುವಾಗ ನಮಗೆ ಮರಗಿಡಗಳ ಅವಶ್ಯಕತೆಯಿದೆಯೇ? ಸುಂದರ ಮನೆಗಳ ಕಿಟಕಿ ಬಾಗಿಲನ್ನು ಅಲಂಕರಿಸಲು ತೇಗ ಬೀಟೆ, ಹಲಸಿನ ಮರಗಳು ಎಲ್ಲಿಯಾದರೂ ಸಿಕ್ಕಿದರೆ ಸಾಕು ನನ್ನ ಮನೆ ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲರಲ್ಲೂ ಇದೆ, ಆದರೆ ಖಾಲಿ ಜಾಗಗಳು ಇರುವಲ್ಲಿ  ಒಂದು ಗಿಡ ನೆಡುವ  ಮನಸ್ಸು ಯಾವನು ಮಾಡುತ್ತಿಲ್ಲ! ಪರಿಸರ ಪ್ರೇಮಿಗಳು ಒಂದಷ್ಟು ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟು  ಪ್ರಕೃತಿಯ  ಮಡಿಲನ್ನು ಕಾಪಾಡುತ್ತಿರುತ್ತಾರೆ, ಆದರೆ ಸಾಮಾನ್ಯ ಜನರು ಪ್ರಕೃತಿಯ ಬಗ್ಗೆ  ಚಿಂತೆಯಿಲ್ಲದೆ ಬದುಕುತಿದ್ದಾರೆ.  ಎಲ್ಲಿಯೂ ಹೋಗಬೇಕಾಗಿಲ್ಲ, ತಮ್ಮ ತಮ್ಮ ಊರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ನೀವು ನಡೆಯುತ್ತಿದ್ದ, ಅಥವಾ ಹಾದುಹೋಗುತ್ತಿದ್ದ ಪ್ರದೇಶಗಳು ಎಷ್ಟು ಸುಂದರ ಮಯವಾಗಿತ್ತು,  ಅದೆಷ್ಟು ಮರ ಗಿಡಗಳಿದ್ದವು, ಸುತ್ತಲ ಪ್ರದೇಶಗಳು ಎಷ್ಟು ಹಸಿರುಮಯ ವಾಗಿತ್ತು, ನದಿಗಳು ಅದೆಷ್ಟು  ಶುಭ್ರವಾಗಿ ಹರಿಯುತ್ತಿತ್ತು, ನೀರಿನ ಆಶ್ರಯ  ಎಲ್ಲಾ ಪ್ರದೇಶದಲ್ಲೂ ಹೇಗಿತ್ತು? ಆಮ್ಲಜನಕ, ಅರಣ್ಯ ಜೀವಿಗಳು, ಶುಭ್ರ ಗಾಳಿ, ಶ

(ಲೇಖನ -64)ಭೂ ಕಂದಾಯ ಇಲಾಖೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಆದಷ್ಟು ಜಾಗ್ರತರಾಗಿರಿ

Image
(ಲೇಖನ -64) ಭೂ ಕಂದಾಯ ಇಲಾಖೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಆದಷ್ಟು ಜಾಗ್ರತರಾಗಿರಿ, ಅಮಾಯಕ ಜನರ ಜಮೀನು ಹಣದಾಸೆಗಾಗಿ ಭ್ರಷ್ಟ ಅಧಿಕಾರಿಗಳು ನಿಮಗೆ ತಿಳಿಯದಂತೆ ಬೇರೆಯವರ ಹೆಸರಿಗೆ ಮಾರಾಟ ಮಾಡಿದ ಪ್ರಸಂಗಗಳು ಅದೆಷ್ಟೋ ನಡೆದಿರಬಹುದು. ಇದರಲ್ಲಿ ಲ್ಯಾಂಡ್ ಲಿಂಕ್ಸ್, ಭ್ರಷ್ಟ ರಾಜಕೀಯ, ಭ್ರಷ್ಟ ಪೊಲೀಸ್, ಭ್ರಷ್ಟ ವಕೀಲ, ಭ್ರಷ್ಟಚಾರ ಮಾಡುವ ನ್ಯಾಯಾಧೀಶ ಕೂಡ ಸೇರಿ ನಡೆಸುವ ಸಾಧ್ಯತೆಗಳಿವೆ . ನಿಮಗೆ ಭೂಮಿ ಅಥವಾ ಕೃಷಿ ಜಾಗಗಳ ಮೂಲ ದಾಖಲೆ ಬಗ್ಗೆ ಮಾಹಿತಿಗಳು ಇಲ್ಲದೇ ಇದ್ದಲ್ಲಿ ಕೇಳಿ ತಿಳಿದುಕೊಳ್ಳಿ,  ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಅಥವಾ ಕಡತಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವವರಲ್ಲಿ ಮಾತ್ರ ನಿಮ್ಮ ಸಮಸ್ಯೆಗಳನ್ನು ಹೇಳಿ ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಿ. ನಿಮ್ಮ ಸಮಯ ಸರಿಯಾಗಿ ಇಲ್ಲದೇ ಹೋದಲ್ಲಿ ಅಥವಾ ಸರಿಯಾದ ಮಾಹಿತಿಗಳು ಇಲ್ಲದೇ ಹೋದಲ್ಲಿ ಜಮೀನು ತೆಗೆದುಕೊಳ್ಳುವುದು ಅಥವಾ ಮಾರುವ ಕೆಲಸಕ್ಕೆ ಹೋಗಬೇಡಿ. ಇಲ್ಲಿ ಕೆಲವು ನಾನು ಕೇಳಿದ ಪ್ರಸಂಗಗಳನ್ನು  ಗಮನಿಸಿ, ಪಿತ್ರಾರ್ಜಿತ ಆಸ್ತಿ - ಕಾನೂನು ಪ್ರಕಾರ ಹಕ್ಕುದಾರರಿಗೆ ಹಕ್ಕು ಆದರೆ ಅಮಾಯಕ ಮತ್ತು ಅವಿದ್ಯಾವಂತ ಕೃಷಿಕನ ಭೂಮಿಯನ್ನು ಬ್ಯಾಂಕ್ ಮ್ಯಾನೇಜರ್ ಮತ್ತು ಅವರ ಸಂಬಂಧಿಗಳು ಕೃಷಿಕನ ಜಾಗವನ್ನು ಬ್ಯಾಂಕ್ ಎಲಂ ಪ್ರಕ್ರಿಯೆ ಎಂದು ತೋರಿಸಿ, ನ್ಯಾಯಾಲಕ್ಕೂ ತಪ್ಪು ಮಾಹಿತಿಯನ್ನು ಕೊಡಲು ಭ್ರಷ್ಟ ನ್ಯಾಯವಾದಿ ಸಹಕರಿಸಿ ನ್ಯಾಯಾಲಯದ ಕಣ್ಣಿಗೆ ಮಣ್ಣೇರಚಿ ನ್ಯಾಯಾಲಯ

(ಲೇಖನ -63) ಅನಾಥ ಆಶ್ರಮಕ್ಕೆ ಹೆಚ್ಚಿನವರು ಬಡವರ ಮಕ್ಕಳು ಸೇರುತಿದ್ದರೆ, ವೃದ್ದಾಶ್ರಮಕ್ಕೆ ಶ್ರೀಮಂತ ಮಕ್ಕಳ ಪೋಷಕರೇ ಸೇರಿಕೊಳ್ಳುತ್ತಾರೆ!

Image
 (ಲೇಖನ -63) ಅನಾಥ ಆಶ್ರಮಕ್ಕೆ ಹೆಚ್ಚಿನವರು ಬಡವರ ಮಕ್ಕಳು ಸೇರುತಿದ್ದರೆ, ವೃದ್ದಾಶ್ರಮಕ್ಕೆ ಶ್ರೀಮಂತ ಮಕ್ಕಳ ಪೋಷಕರೇ ಸೇರಿಕೊಳ್ಳುತ್ತಾರೆ! ಹಾಗಾದರೆ ಸ್ವಚ್ಛ ಮನಸಿಲ್ಲದೆ ಸಿಕ್ಕಿರುವ ಸಿರಿವಂತಿಕೆ ಕೊನೆಗಾಲಕ್ಕೆ ಸಿರಿವಂತ ಪೋಷಕರಿಗೆ ಶಾಪವೇ? ತುಂಬಾ ಬಡತನ ಉಳ್ಳವರು ಹೇಗಾದರು ಮಾಡಿ ಬದುಕಬೇಕೆಂಬ  ಛಲ ಹಿಡಿದರೆ ಸಿರಿವಂತರ ಮಕ್ಕಳು ಐಷಾರಮದ ಗುಂಗಲ್ಲಿ ತೆಲುತ್ತಾ ಬದುಕುತಿರುತ್ತಾರೆ. ಇಲ್ಲಿ, ಯಾರ ತಪ್ಪುಗಳು ಎಂದು ಹೇಳಲು ಸಾಧ್ಯವಿಲ್ಲ ಆದರೆ ಕಷ್ಟದಿಂದ ಬದುಕಿ ಬಂದವನು ಕೊನೆಗಾಲದವರೆಗೂ ಧೈರ್ಯವಾಗಿ ಬದುಕುತ್ತಾನೆ, ಹೆಚ್ಚಿನ ಕಷ್ಟಗಳನ್ನು ನಮ್ಮ ಭಾಗ್ಯವೆಂದು ತಿಳಿದು ಬದುಕುತ್ತಾನೆ. ಏನೇ ಬರಲಿ ಗೋವಿಂದನ ದಯೆ ಇರಲಿ, ನಾಳೆ ಬೆಳಗಾದರೆ ಉಣ್ಣಲು ಎರಡು ಅನ್ನವ ಕೊಡುವ ದೇವ ಎಂಬ ಭರವಸೆಯಲಿ ನಿದ್ರಿಸುತ್ತಾನೆ.            ತಂದೆ ತಾಯಿಯರು ಮಕ್ಕಳಿಗಾಗಿ ತನ್ನ ಸರ್ವಸ್ವ ತ್ಯಾಗ ಮಾಡಿ, ಓದು ಬರಹ, ಬಟ್ಟೆ ಬರೆಯನ್ನು, ಬೇಕಾದ ತಿಂಡಿ ತಿನಸುಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ತಂದು ಕೊಡುತ್ತಾರೆ, ಮಕ್ಕಳನ್ನು ಉನ್ನತ ಶಿಕ್ಷಣ ಕೊಟ್ಟು ದೊಡ್ಡ ಕೆಲಸವನ್ನು ದೇಶ ವಿದೇಶದಲ್ಲಿ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿ, ತನ್ನ ಜೀವಿತದ ಹೆಚ್ಚಿನ ಸಮಯಗಳನ್ನು ಗೆಳೆಯರು, ತಿರುಗಾಟ, ಮಾದಕ ವ್ಯಸನ, ಮತ್ತು ಇನ್ನಿತರ ಚಟುವಟಿಗಳಿಗೆ ತೊಡಗಿಸಿಕೊಂಡು, ನಾನೊಬ್ಬ ಸಿರಿವಂತನೆಂಬ ಅಹಂಕಾರದಿಂದ ತನ್ನ ಮದ್ಯವಯಸ್ಸನ್ನು ಕಳೆಯುತ್ತಿರುವಾಗ, ಅವರನ್ನು ಸಾಕಿ ಸಲಹಿದ ಪೋಷಕರನ

(ಲೇಖನ -62)- ಭಾರತೀಯ ಪ್ರಜೆಗಳಿಗೆ ಉಚಿತ ಶಿಕ್ಷಣ ಬೇಕೆಂದು ಹೇಳುವವರು ತೀರಾ ಬಡತನ ಉಳ್ಳವರು ಮತ್ತು ಮಧ್ಯಮ ವರ್ಗದ ಜನರು ಮಾತ್ರ

Image
 (ಲೇಖನ -62)-  ಭಾರತೀಯ ಪ್ರಜೆಗಳಿಗೆ ಉಚಿತ ಶಿಕ್ಷಣ ಬೇಕೆಂದು ಹೇಳುವವರು ತೀರಾ ಬಡತನ ಉಳ್ಳವರು ಮತ್ತು ಮಧ್ಯಮ ವರ್ಗದ ಜನರು ಮಾತ್ರ, ಶಿಕ್ಷಣ ಎಂಬುವುದು ಎಲ್ಲಾ ಪ್ರಜೆಗಳಿಗೆ ಸಿಗಬೇಕು, ಉತ್ತಮವಾದ ಶಿಕ್ಷಣ ಪಡೆದುಕೊಂಡಿರುವ ಹೆಚ್ಚಿನ ಜನರು ಕೆಲಸ ಗಿಟ್ಟಿಸಿಕೊಳ್ಳದಿದ್ದರೂ, ಭಾರತದ ಉತ್ತಮ ಭವಿಷ್ಯಕ್ಕೆ ಅಡಿಪಾಯವಾಗಿ ಮಾರ್ಪಟ್ಟುಗೊಳ್ಳುತ್ತಾರೆ. ಶಿಕ್ಷಣವನ್ನು ಉಚಿತವಾಗಿ ಕೊಟ್ಟರೆ ಪ್ರಜೆಗಳು ಮೈಗಳ್ಳರಾಗುತ್ತಾರೆಂಬ ಮಾತುಗಳನ್ನು ಕೆಲವರು ಹೇಳಬಹುದು, ಆದರೆ ಅಂತಹ ಮಾತುಗಳು ವಿದ್ಯೆ ಇರುವವನ ಬಾಯಲ್ಲಿ ಬರಲು ಸಾಧ್ಯವಿಲ್ಲ! ವಿದ್ಯೆ ಎಂಬುವುದು ಮೇಲ್ಜಾತಿ, ಕೀಲ್ಜಾತಿ, ಮೇಲ್ವರ್ಗ, ಕೆಳವರ್ಗ, ವಿವಿಧ ಧರ್ಮ ದೇಶಗಳನ್ನು ಶಿಸ್ತುಬದ್ದವಾಗಿ ನಡೆಸಲು ಉಪಯೋಗವಾಗುವ ಅತ್ಯುತ್ತಮ ಸಾಧನ. ವಿದ್ಯೆಯಿಂದ ವಂಚಿತಗೊಂಡ ಪ್ರತೀ ಪ್ರಜೆ ಸಮಾಜದಲ್ಲಿ ನಡೆಯುವ ಪ್ರತೀ ದಬ್ಬಾಳಿಕೆ, ಅರಾಜಕತೆ, ಬೇಧ ಭಾವ ಮೋಸ, ವಂಚನೆಗಳನ್ನು ಪ್ರಶ್ನಿಸುವ, ಹೋರಾಟ ಮಾಡುವ ಶಕ್ತಿಯನ್ನು, ಧೈರ್ಯವನ್ನು ಕೊಡುವ ಬಹಳ ದೊಡ್ಡ ಬತ್ತಳಿಕೆ.              ರಾಜಕೀಯ, ಕೆಲಸ, ದೇಶ ವಿದೇಶ,ಹಿತ ಚಿಂತನೆ, ಉತ್ಕೃಷ್ಟ ಮನೋಭಾವನೆ, ಇದೆಲ್ಲವನು ಪಡೆಯಬೇಕಾದರೆ ಶಿಕ್ಷಣ ಬಹಳ ಮಹತ್ತರವಾದ ಪಾತ್ರ ವಹಿಸಿಕೊಂಡಿರುತ್ತದೆ. ಯಾವ ದೇಶ ಅಥವಾ ಊರು ಶಿಕ್ಷಣದಲ್ಲಿ ಹಿಂದೆ ಉಳಿದಿರುತ್ತದೆಯೋ ಅಲ್ಲಿ ಅತೀ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತದೆ. ಸಮಾನ ರೀತಿಯಲ್ಲಿ ಜಾತಿ ಧರ್ಮ ಮತಗಳ ಬೇಧ ಭಾವಗಳಿಲ್ಲದ ಶಿಕ್ಷಣ ವ

ತ್ರಿವರ್ಣದೊಳು ನನ್ನುಸಿರು

ಕೇಸರಿ ಬಿಳಿ ಹಸಿರು ತ್ರಿವರ್ಣದೊಳು ನನ್ನುಸಿರು ಈ ಮಣ್ಣಿನ ಋಣ ಎನಗೆ ಭರತ ಖಂಡವೆ ನನ್ನುಸಿರು, ಎದುರಾಳಿಗಳಿರಲಿ ಶತ್ರು ಸಾಮ್ರಾಜ್ಯವೇ ಇರಲಿ ಉಸಿರಿರುವವರೆಗೂ ಪ್ರೀತಿಸುವೆ ಭಾರತವೇ ನನ್ನುಸಿರು, ಇಂದಾದರೂ, ನಾಳೆಯಾದರೂ ಭರತ ಭೂಮಿಯ ಹೆಸರು ಎದೆತಟ್ಟಿ ಹೇಳುವೆ  ಭಾರತವೇ ನನ್ನುಸಿರು ಸದೆಬಡಿಯುವೆ ಶತ್ರುಗಳನು ಪೂಜಿಸುವೆ ಸೈನಿಕರನು ಸ್ವಾತಂತ್ರ್ಯಕೆ ನಿಮ್ಮ ಬಲಿ ಮರೆಯಲಾಗದು ವೀರ ಶೈಲಿ, ಕ್ಷಣ ಕ್ಷಣಕೂ ಪ್ರತೀ ದಿನಕು ಭವ್ಯ ಭಾರತದ ಕನಸು ಜಯವಾಗಲಿ ಜಯವಾಗಲಿ ತ್ರಿವರ್ಣಧ್ವಜವೇ ನನ್ನುಸಿರು.        ✍️ಮಾಧವ ಅಂಜಾರು.

(ಲೇಖನ -61) ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಉಸಿರು- ದೇವರು ಕೊಟ್ಟ ವರ

Image
 (ಲೇಖನ -61) ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಉಸಿರು- ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಶಕ್ತಿ ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಯುಕ್ತಿ ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಸಂಪತ್ತು, ಬುದ್ದಿ, ದೇವರು ಕೊಟ್ಟ ವರ. ಅದನ್ನೆಲ್ಲವ ಪಡೆದುಕೊಂಡು ಇನ್ನೂ ಜೀವಿಸುತ್ತಿರುವೆಯೆಂದರೆ ನಿನ್ನ ತಂದೆ ತಾಯಿಯ ವರ. ಮನುಷ್ಯ ಸಾವಿರಾರು ತಪ್ಪುಗಳನ್ನು ಮಾಡುತ್ತಾನೆ, ಸಾವಿರಾರು ದ್ರೋಹಗಳನ್ನೂ ಮಾಡುತ್ತಾನೆ, ಸಾವಿರಾರು ಪಾಪಗಳನ್ನು ಮಾಡುತ್ತಾನೆ, ಆದರೆ ಯಾವುದನ್ನೂ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ, ಎಗ್ಗಿಲ್ಲದೇ ತನ್ನ ಕೈ ಕಾಲುಗಳು ಸರಿಯಾಗಿರುವಾಗ ಮಾಡಬಾರದ್ದನ್ನು ಮಾಡಿ, ಹೇಳಬಾರದ್ದನ್ನು ಹೇಳಿ, ಅತ್ಯಂತ ಕ್ರೂರವಾಗಿ ಜೀವಿಸಿ ಕೊನೆಗಾಲಕ್ಕೆ ನಡೆಯಲು ಆಗದೆ , ಹಾಸಿಗೆ ಹಿಡಿದು ಪರಿತಪಿಸುವ ಕಾಲದಲ್ಲಿ ದೇವರನ್ನು ದೂರುವ ಜನರು, ತಾನು ಯಾವುದೇ ತಪ್ಪುಗಳನ್ನೇ ಮಾಡದೆ ಅನುಭವಿಸುವ ಕಷ್ಟಗಳು ಕೂಡ ದೇವರು ಕೊಟ್ಟ ವರ, ಯಾಕೆಂದರೆ?  ನಿನ್ನ ಆಲೋಚನೆ, ಶಕ್ತಿ, ಸಮಾಧಾನ ಇವೆಲ್ಲವನ್ನು ಪರೀಕ್ಷೆ ಮಾಡುವ ಸಮಯ ಕೂಡ ದೇವರು ಕೊಟ್ಟ ವರ. ಯಾವ ಸಮಯದಲ್ಲಿ ಯಾರನ್ನು ಹೇಗೆ ಉಪಕರಿಸುವೆಯೋ, ಅಪಕರಿಸಿವೆಯೋ ಅದು ನಿನ್ನ ಮೇಲಿದೆ, ಮಾನವೀಯತೆಯ ಮನುಜ ತನ್ನ ಬುದ್ದಿಯನ್ನು ಒಳಿತಿನ ಕೆಲಸಕ್ಕಾಗಿ ಉಪಯೋಗ ಮಾಡುತ್ತಾನೆ , ತನ್ನ ಬುದ್ದಿಯನ್ನು ಇನ್ನೊಬ್ಬನ ಅವನತಿಗಾಗಿ ಉಪಯೋಗಿಸಿ ಜೀವಿಸುವವನು ಮಾನವನಾಗಿರಲು ಅರ್ಹನಲ್ಲ, ತಿಳಿಯದೆ

(ಲೇಖನ -60) ಆಡಂಬರವಾಗುತ್ತಿರುವ ಹಬ್ಬ ಹರಿದಿನಗಳು! ದೇವರೊಬ್ಬ ನಾಮ ಹಲವು

Image
 (ಲೇಖನ -60) ಆಡಂಬರವಾಗುತ್ತಿರುವ ಹಬ್ಬ ಹರಿದಿನಗಳು! ದೇವರೊಬ್ಬ ನಾಮ ಹಲವು, ನಾವು ಪೂಜಿಸಿ, ಆರಾಧಿಸಿ, ಕೈಮುಗಿದು ಬೇಡಿಕೊಳ್ಳುವ ದೇವರನ್ನು ಗೊತ್ತಿದ್ದು, ಗೊತ್ತಿಲ್ಲದೇ ಆಡಂಭರದ ಪ್ರಪಂಚಕ್ಕೆ ಕೊಂಡೋಯುತ್ತಿದ್ದೇವೆ. ಮನುಜ ದಿನದಿಂದ ದಿನಕ್ಕೆ ಬದಲಾಗುತ್ತಾ, ತನಗಿಷ್ಟದಂತೆ ಸಂಸ್ಕಾರ, ಸಂಸ್ಕೃತಿಯ ನಿಜ ರೂಪವನ್ನು ಬದಲಾಯಿಸಿ ಹೊಸ ಹೊಸ ಆಚಾರಗಳನ್ನು ಸೃಷ್ಟಿಸಿ ತನ್ನ ಹೊಟ್ಟೆ ತುಂಬಿಸಲು, ಅತಿಯಾದ ಹಣ ಸಂಪಾದಿಸಲು ನಂಬಿಕೆಯನ್ನು ಅಸ್ತ್ರವಾಗಿಸಿ ಕೆಲವರು ಜೀವಿಸುತಿದ್ದರೆ, ಕೆಲವರು ಇನ್ನಿಲ್ಲದ ಕಥೆಗಳನ್ನು ಸೃಷ್ಟಿಸಿ ದೇವರೆಂಬ ನಂಬಿಕೆಯನ್ನು ನಂಬಿಕಸ್ತನ ಮೇಲೆಯೇ ಪ್ರಯೋಗ ಮಾಡಿ ವಿಲಾಸಿ ಜೀವನವನ್ನು ಮಾಡುತ್ತಿರುವವರನ್ನು ನೀವು ನೋಡುತ್ತಲೇ, ಪೋಶಿಸುತ್ತ, ಜೀವಿಸುತ್ತಿರುವ ಕಾಲವಾಗಿ ಹೋಗಿದೆ.        ಹೌದು, ದೇವರೆಂದರೆ ನಮ್ಮ ಜೀವನವನ್ನು, ಜೀವಿತವನ್ನು ಯಾವುದೇ ತೊಂದರೆಗಳು  ಇಲ್ಲದೆ, ತೊಂದರೆಗಳು ಬಂದಾಗ ಎದುರಿಸಲು ಶಕ್ತಿಕೊಡು, ದೈರ್ಯವಾಗಿ ಬದುಕುವ ಮತ್ತು ಹಣ ವಂತ, ಗುಣವಂತ, ಆರೋಗ್ಯವಂತನನ್ನಾಗಿ, ರಕ್ಷಣೆ ಮಾಡು ಎನ್ನುವ ಬೇಡಿಕೆಗಳನ್ನು ನಾವುಗಳು ನಂಬಿರುವ ಶಕ್ತಿ ಅಥವಾ ದೇವರುಗಳ ಮುಂದಿಡುತ್ತೇವೆ. ಆದರೆ ನಂಬಿಕೆಗಳು ಪ್ರಾಮಾಣಿಕವಾಗಿಲ್ಲದಿದ್ದರೆ ಆಡಂಬರದ ದಾರಿಗೆ ಹೋಗಿಬಿಡುತ್ತದೆ. ಯಾವುದೇ ಹಬ್ಬಗಳು, ಅಥವಾ ದೈವ ದೇವರುಗಳ ಕೆಲಸಗಳು ಕೆಲವೊಂದು ಕಡೆ ಪೈಪೋಟಿಯಲ್ಲಿ ತೊರ್ಪಡಿಕೆಗೆ ನಡೆಯುತ್ತಿದೆ. ಇಂತಹ ಆಚರಣೆಗಳನ್ನು ಯಾರಿಂದಲೂ ನಿಲ್ಲಿಸ

(ಲೇಖನ -59)ನಾವು ಭಾರತೀಯರು, ಇಂದು ಭಾರತೀಯರಾಗಿ ಉಳಿದಿದ್ದೇವೆ ಎಂದರೆ, ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಜೀವ ಜೀವನವನ್ನು ಪಣವಿಟ್ಟು ನಮ್ಮ ದೇಶವನ್ನು ಉಳಿಸಿ ನಮ್ಮ ಕೈಗೆ ಕೊಟ್ಟುಬಿಟ್ಟಿದ್ದಾರೆ

Image
(ಲೇಖನ -59)ನಾವು ಭಾರತೀಯರು, ಇಂದು ಭಾರತೀಯರಾಗಿ ಉಳಿದಿದ್ದೇವೆ ಎಂದರೆ, ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಜೀವ ಜೀವನವನ್ನು ಪಣವಿಟ್ಟು ನಮ್ಮ ದೇಶವನ್ನು ಉಳಿಸಿ ನಮ್ಮ ಕೈಗೆ ಕೊಟ್ಟುಬಿಟ್ಟಿದ್ದಾರೆ. ಭಾರತವೆಂದರೆ ಸೌಭಾಗ್ಯ, ಭಾರತವೆಂದರೆ ಮೌಲ್ಯ, ಭಾರತವೆಂದರೆ ಪ್ರೀತಿ, ಭಾರತವೆಂದರೆ ಹೆಮ್ಮೆ. ಪ್ರತಿಯೊಬ್ಬ ನೈಜ ಭಾರತೀಯ ನಾನೊಬ್ಬ ಭಾರತೀಯನೆಂದು ಧೈರ್ಯವಾಗಿ ಹೇಳುತ್ತಾನೆ. ನಮ್ಮ ದೇಶದಲ್ಲಿ ಹಲವು ಜಾತಿ ಧರ್ಮ, ಮತ ಪಂಗಡಗಳು, ಹಲವಾರು ಭಾಷೆಗಳು, ಸಂಸ್ಕೃತಿ, ಸಂಸ್ಕಾರಗಳಿದ್ದಾವೆ. ಪ್ರಪಂಚದ ಎಲ್ಲಾ ದೇಶಗಳಿಗೆ ಭಾರತದ ಬಗ್ಗೆ ವಿಶ್ವಾಸ, ಪ್ರೀತಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ಭಾರತೀಯರಲ್ಲಿ ಇರುವ ಗೌರವ ಮನೋಭಾವನೆ, ಸೇವಾ ಮನೋಭಾವನೆ, ಪ್ರೀತಿ ಮುಂತಾದವು. ಸಂಸ್ಕಾರವೆಂಬುದು ಭಾರತೀಯರಲ್ಲಿ ಕಲಿಯಬೇಕು, ಬುದ್ದಿವಂತಿಕೆ, ಮತ್ತು ಯಾವುದೇ ಕಠಿಣ ಸಂಧರ್ಭದಲ್ಲಿ ಮೇಲೆದ್ದು ಬರುವ ದೇಶವೆಂದರೆ ಅದು ಭಾರತ ಮಾತ್ರ. ಈ ವಿಷಯಗಳು ಪ್ರಪಂಚದ ಮೂಲೆ ಮೊಲೆಗೂ ತಿಳಿದಿದೆ. ಹಾಗಾಗಿ ಹೆಚ್ಚಿನ ದೇಶಗಳು ಭಾರತದ ತಂಟೆಗೆ ಬರುವುದಿಲ್ಲ. ನಮ್ಮ ದೇಶದೊಳಗೆ ಕುಳಿತು ದೇಶದ ಬಗ್ಗೆ ಬಿನ್ನಾಭಿಪ್ರಾಯ ಸೃಷ್ಟಿಸುವ ಕೆಲವು ಜನರನ್ನು ಹೊರತುಪಡಿಸಿ ಭಾರತೀಯತೆಯ ಘನತೆಯನ್ನು ನಾಶಪಡಿಸಲು ಯಾರಿಗೂ ಸಾಧ್ಯವಿಲ್ಲ, ಇಂದು, ಮುಂದೆ ಕೂಡ. ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದು ಭಾರತವನ್ನು ತನ್ನ ಹಿಡಿತದಲ್ಲಿ ಇಡಲು ಶ್ರಮಿಸಿದರು, ಭಾರತದ ಮುಗ್ದ ಜನರನ್ನು ತುಳಿದು,