Posts

Showing posts from 2013

ಹೊಸ ವರುಷ ಹೊಸ ಹರುಷ

ಕಳೆದುಕೊಂಡೆ ಜೀವನದ ಅಮೂಲ್ಯ ದಿನಗಳ ತಿಳಿದೆ  ಕನಸು ನನಸಾಗಲು ಪರಿಶ್ರಮದ ಪುಟಗಳ ಬರುತ್ತಿರಲಿ ಉಲ್ಲಾಸದ ಹನಿಮಳೆಯ ಸಿಂಚನವು ಚಿಗುರಲಿ ಹೊಸ ಕನಸಿನ ಸುಗಂಧ ಬಳ್ಳಿ ಹೂವು ಸುತ್ತಿಬೇಳೆಯಲಿ ಹರುಷದ ಹೂದೋಟ ಜೀವನದಿ ನಕ್ಕು ನಲಿಯಲಿ ಹೂ ಮೊಗ್ಗುಗಳು ಹಸಿರಿನಂಗಳದಿ ಸ್ವಾಗತಿಸುವೆ ಹರುಷದ ವರುಷವ ಉತ್ಸುಕದಲಿ ನೀಡಲಿ ನಮ್ಮ ಬಾಳಿಗೆ ಸುಖ ನೆಮ್ಮದಿ  ಅಮಿತ ಕೈಮುಗಿದು ಬೇಡುವೆ ಸೃಷ್ಟಿಕರ್ತನ ಪ್ರತಿನಿಮಿಷ ನಮಿಸುವೆ ಶಿರಬಾಗಿ ತಂದೆ ತಾಯಿಯ ಚರಣಕೆ                              - ಅಂಜಾರು ಮಾಧವ ನಾಯ್ಕ್                                                          

ನನ್ನ ನಾಲ್ಕೇ ನಾಲ್ಕು ಮಾತು ...

ಇದ್ದರೇನಂತೆ ಐಶ್ವರ್ಯ  ನಿನಗೆ ಕದ್ದು ತಿನ್ನುವ ಚಟವಿದ್ದರೆ.......! ತಿದ್ದಿ ಹೇಳಲು ಹೊರಟ ನನಗೇ ಬುದ್ದಿಯಿಲ್ಲ ಎನ್ನುವ ಹಟವಿದ್ದರೆ ಸದ್ದು ಮಾಡಿ ಒದ್ದು ಬದುಕುವ ನೀನು, ಹೊದ್ದು  ಸತ್ತರೂ ಸಿಗದು ಸಂಪತ್ತು ಜಿಪುಣನಾಗಿ ಅನ್ನತಿನ್ನಲೂ ಎಣಿಸುವವನು ಕಣ್ಮುಚ್ಚುವಾಗ ಚಿನ್ನವೂ ಮಣ್ಣಾಗಿ ಹೋದೀತು ಉಸಿರಿರೋ ತನಕ ನಿಟ್ಟುಸಿರು ಬಿಡುವೆ ಯಾರು ಬಲ್ಲರು ನಿನ್ನ ಕೊನೆಯುಸಿರು ಮುಗ್ದ ಜನರ ಎದೆಯ ತುಳಿದು ಬದುಕುವೆ ಏನು ಪ್ರಯೋಜನ ಸಿಂಗಾರ ಮಾಡಿದರೂ ?  ಸುಖ-ಸಂತೋಷ ಪ್ರೀತಿ ಸಹನೆ  ಇದ್ದಲ್ಲಿ ಹಾಯಾಗಿ ಕಳೆವೆ  ಪರಸ್ಪರ ಅರಿತಾಗ ಸುಖವಿರದು ಅಹಂಕಾರದ ಮನವಿದ್ದಲ್ಲಿ ಅದಕೆ ಎಂದೆಂದೂ ನಗುತಾ ಜೀವಿಸು ಸರಾಗ ...                     - ಅಂಜಾರು ಮಾಧವ ನಾಯ್ಕ್

ಖಾಕಿ ಬಟ್ಟೆಯ ಜೀಪು ಬಂದಾಗ

ಕೋಟಿ ಕೋಟಿಯ ಸೂಟು ಬೂಟುಗಳ ಹಾಕಿದ್ದರೂ ಕಿತ್ತೊಗೆದು ಬಿಸಾಕುವೆ ಅವಸರದ ಮಲ ಬಂದಾಗ ಸಾವಿರ ಬಾರಿ ದೇಶ ವಿದೇಶವ ವಿಮಾನದಲಿ ಸುತ್ತಿದ್ದರೂ ಉಡುಗೆ ಒದ್ದೆ  ಮಾಡಿಕೊಳ್ಳುವೆ  ಪೈಲಟ್ ಕೈ ಕೊಟ್ಟಾಗ ಅಪ್ಪಿ ತಪ್ಪಿ ಕೊಂದು ಬದುಕಿ ಜೀವಿಸುತ್ತಿದ್ದರೂ ದಂಗಾಗಿ ಬಿಡುವೆ ನೀ ಕಿಂಡಿ ಬಾಗಿಲ ಸದ್ದು ಬಂದಾಗ ಹಲವು ಬಾರಿ ಮೋಸ ವಂಚನೆ ಮಾಡಿ ಜಯಗಳಿಸಿದರೂ ವಿಚಲಿತನಾಗುವೆ ತರ ತರದ ಕಷ್ಟ ಬಂದಾಗ ಗೊತ್ತಿದ್ದೂ ಕದ್ದು ತಿಂದು ಸಾಚನಂತೆ ತಿರುಗಿದರೂ ಬೆವೆರಿಳಿಸುವೆ ಖಾಕಿ ಬಟ್ಟೆಯ ಜೀಪು ಬಂದಾಗ                          - ಅಂಜಾರು ಮಾಧವ ನಾಯ್ಕ್

ಜಯಗಳಿಸುವೆ ನೀನು.....

ನೀಲಿ ಆಕಾಶದಲಿ ನಕ್ಷತ್ರವು ಮಿನುಗುತ್ತಿರುವಂತೆ ಹೊಳೆಯಲಿ ನಿನ್ನ ಜೀವನ ಸುಖದಾರಿಯ ಪಯಣದಲಿ ಮುಂದೆ ಸಾಗುತ್ತಿರಲಿ ಬಂಡಿಯು ಉಬ್ಬು ತಗ್ಗುಗಳೆನ್ನದೆ ಮುನ್ನುಗ್ಗು ಧೈರ್ಯದಲಿ ಗುರಿ ಮುಟ್ಟುವ ತನಕ ಮರೆಯದಿರು ಸಾಗಿದ ದಾರಿಯ ವಿಚಿತ್ರ ಸತ್ಯಾಸತ್ಯಗಳ ಮರೆತರೆ ಫಲವಿಲ್ಲದಂತಾಗುವುದು ನೀ ಗಳಿಸಿದ ಸುಖ ಸಂಪತ್ತು ಒಂದೇ ಆಗಿರಲಿ ನಿನ್ನ ಧ್ಯೇಯ ಒಳಿತಿಗಾಗಿ  ಬದುಕಲು ಒಟ್ಟಾಗಿ ಬರುವುದು ನಿನ್ನೆದುರಿಗೆ ಪ್ರೀತಿಯೆಂಬ ಮಾಲೆಯು ಸ್ವಾಗತಿಸುತಿರು ಎಂದಿಗೂ ಬಡವ ಬಲ್ಲಿದನ ಅಂತರವಿರದೆ  ಜೀವನದ ಪ್ರತಿ ಆಟದಲೂ  ಜಯಗಳಿಸುವೆ ನೀನು                                                  - ಅಂಜಾರು ಮಾಧವ ನಾಯ್ಕ್

ಬೇಗ ಬಾ...............!!!!!!!

ಬೆಳ್ಳಿ ಮೋಡದ ನಡುವೆ ಸೂಸುವ ಹೊಂಗಿರಣದಂತೆ ಬೀರುತ್ತಿದೆ ನಿನ್ನ ನೋಟ ನನ್ನ ಮನವ ಸೆಳೆಯಲು ಭಾಸವಾಗುತ್ತಿದೆ ನೀ ಎನ್ನ ಕೈ ಸ್ಪರ್ಶಿಸಲು ತಂಪುಗಾಳಿಯ ಆನಂದವ ಸವಿಯುತ್ತಿರುವಂತೆ ಜನುಮದ ಜೋಡಿ  ನಾನಾಗಿ ನಿನ್ನ ಪ್ರತಿ ಉಸಿರಲಿ ಮೆಲ್ಲನೆ ನಿನ್ನ ಸೇರುವೆ, ಮರೆಸಲಿ ಪ್ರತೀ  ನೋವ ಒಪ್ಪಿಕೋ ನನ್ನ ಪ್ರೀತಿಯ, ಹಿಡಿದಪ್ಪಿಕೋ ನಿರಂತರ ಹೂವಂತೆ  ನೋಡಿ ಮುದ್ದು ಮಾಡುವೆ ಚೆನ್ನ ಪ್ರೀತಿಯ ಹೃದಯವನು ಮರೆಯಬೇಡ ಪ್ರಿಯೆ   ಬೇಗ ಬಾ , ನಾ ನಿನಗಾಗಿ ಕಾದಿರುವ  ಪ್ರೇಮಿ                            - ಅಂಜಾರು ಮಾಧವ ನಾಯ್ಕ್

ಕೀಳು ದೃಷ್ಟಿ

ನೋವಾಗುತಿದೆನಗೆ ಮೂರ್ಖ ಜನರ ಕೀಳು ದೃಷ್ಟಿಯ ಕಂಡು ಸಾಲು ಸಾಲಾಗಿ ಕುಕ್ಕುತಿಹರೆನ್ನ ಮೌನ ಮಾತನು ಕಂಡು ಹೇಳಲಾಗದೆ ಚಡಪಡಿಸುತ್ತಿರುವೆ ಸೋಲುಣ್ಣುವ  ಆಟದಲಿ  ಕಿವುಡನಂತೆ ನಟಿಸುವರು ನೋವ ಹೇಳುವ ಸಮಯದಲಿ      ಜೋರು ಸ್ವರವ ಬೀರುವರು ನನ್ನ ವ್ಯಥೆಯ ಕಥೆಯಲಿ ಒಂದು ಚೂರು ಕರುಣೆಯ ತೋರರು ಮೇಲಕ್ಕೆತ್ತಲು ಸುಳಿಯಲಿ       ಅಸುರರಾಗಿ ಬಂದು ದಮನಿಸುವರು ಮತ್ತೊಬ್ಬರ       ಸ್ಥಿರವಾಗಿ ಇರುವರು ಬಾಳ ಕೆಣಕಲು ಇನ್ನೊಬ್ಬರ      ಸಹಿಸಲಾರೆ ಕಂತ್ರಿ ಜನರ ಮಂತ್ರ ಕುತಂತ್ರಗಳ      ತಂತ್ರದಲಿ ಜಯಿಸುವೆ ವಿಧ ವಿಧದ ಕರಾಮತ್ತುಗಳ                                       -ಅಂಜಾರು ಮಾಧವ ನಾಯ್ಕ್ 

ನಾ ಮರಾಠಿ

Image
  " ನಾ ಮರಾಠಿ " ಹೆಮ್ಮೆಯಿಂದ ಹೇಳುವೆ ನಾನೊಬ್ಬ ಮರಾಠಿ ಚಿನ್ನದಂತಿರುವೆ ಭೂಮಿತಾಯಿಗೆ ನಮಿಸಿ ಗರ್ವದಿಂದ ಹೇಳುವೆ ನಮ್ಮವರ ಇತಿಹಾಸವನು ಶಿವಾಜಿ ಮಹಾರಾಜನು  ನಮ್ಮವರ ವಂಶಿಕನು  ಗದ್ದುಗೆಯ ಅಮ್ಮ , ಜ್ಯೋತಿಭಾ ,ಅಂಬಾ - ತುಳಜಾ ಭವಾನಿ ನಮ್ಮವರ ಕುಲದೇವರು  ಬೈರವ, ವರ್ತೆ ಪಂಜುರ್ಲಿ ನಮ್ಮನು ಕಾಯ್ವರು  ಪೂಜಿಪೆವು  ದೈವ ದೇವರುಗಳ  ಹಲನಾಮದಿಂದ  ತಾಯ ಕರುಣೆಯು ನಮಗಿಹುದು ಎಂದೂ  ಒಂದಾಗಿ ಬಾಳೋಣ ಪ್ರತಿದಿನವೂ ಮುಂದೂ  ಕೆಣಕದಿರು ಮರಾಠಿಗನ ಮನಸನ್ನು ನೀನು  ಕೆಣಕಿದರೆ ಮಣ್ಣು ಮುಕ್ಕಿಸುವ ವೀರನು ನಾನು  ಎಲ್ಲಾ ಮತ ಬಂಧಗಳ ಸಮ ದೃಷ್ಟಿಯಲಿ ನೋಡುವೆ  ಮೇಲು ಕೀಳೆಂಬ ಭಾವನೆಯ  ಸರಿದೆದ್ದು  ನಿಲುವೆ  ನಾ ಮರಾಠಿ.. ನಾ ಮರಾಠಿ.. ನಾ ಮರಾಠಿ.. ಜೈ ಭವಾನಿ..! ಜೈ ಭವಾನಿ...! ಜೈ ಭವಾನಿ...!                                                - 'ನಾ ಮರಾಠಿ'  ಅಂಜಾರು ಮಾಧವ ನಾಯ್ಕ್ 

ಮಾರುತಿ

ಮಾರುತಿಯ ಬೇಡಿಕೊಂಡೆ ನನಗೆ ಕೀರುತಿಯ ನೀಡೆಂದು ನನ್ನಾಸೆಗೆ  ಓಗೊಟ್ಟು ಮನೆಗಿಂದು ಮಾರುತಿಯು  ಬಂದಿಹನು ಹೂ ತೋರಣದಿ ಸಿಂಗರಿಸಿದೆ ಆರತಿಯ ಬೆಳಗಿದೆ ಕೂಗಿಹೇಳಿದೆ ತಂದೆತಾಯಿಗೆ ಬನ್ನಿ ನೋಡಿ ಎಂದು ಸಂತಸದಿ ಅನುಜರೆಂದರು ಜಯವಾಗಲಿ  ನಿನಗೆಂದೂ ಸುಖವಾಗಿರಲಿ ಪಯಣ ಹರುಷದಿಂ ಮುಂದೂ ಉಲ್ಲಾಸವು ನನಗೆ ಮಾರುತಿಯು ಜೊತೆಗಿರಲು ಮರೆಯಲಾರೆ ಎಂದಿಗೂ ತಲೆಬಾಗಿ ಸ್ಮರಿಸಲು ಪೂಜಿಸುವೆನು ಸದಾ ಮಾರುತಿಯ ಪ್ರೀತಿಯಲಿ ಕಾಣುತಿಹೆ ಅವನ ಮನೆಗೆ ಬಂದ 'ಮಾರುತಿ'ಯಲ್ಲಿ                        - ಅಂಜಾರು ಮಾಧವ ನಾಯ್ಕ್ 

ಬಿಳಿಯೂ ಬೆಳ್ಳಿಯೂ

Image
ಕನ್ನಡಿಯ ನೋಡುತ್ತಿದ್ದಂತೆ ಕಂಡೆನೊಂದು ಬಿಳಿಕೂದಲು ಹೊಳೆಯುತಿತ್ತು ಬೆಳ್ಳಿಯಂತೆ ನನ್ನ ಪ್ರಾಯ ಹೇಳಲು ಆರಂಭದಲಿ ಕತ್ತರಿಯನು ಎತ್ತಿಕೊಂಡೆ , ಬುಡದಲ್ಲೇ ಕಿತ್ತು ಬಿಸಾಕಿದೆ ರಕ್ತಬೀಜಾಸುರನ ಸಂತತಿಯಂತೆ ಕಂಡಿತು ಮತ್ತೊಂದು ! ಬಾಚಣಿಗೆಯ ಕಿಸೆಯಲ್ಲಿ ಹಾಕಿ ನಡೆಯುತ್ತಿದ್ದೆ ದಿನಾಲೂ ಕಾಣದಿರಲೆಂದು ಬಿಳಿಕೂದಲು ಸುಲಭದಲ್ಲಿ ಯಾರಿಗೂ ಗೆಳೆಯನೆಂದನು  ಏನಪ್ಪಾ ಪ್ರಾಯವಾಯಿತಾ ನಿನಗೆ ನಾನೆಂದೆ ತಲೆಯ ಸವರುತ್ತಾ ಇಲ್ಲಪ್ಪಾ ಇದು ಎರಡನೆಯದು ದಿನಕಳೆದಂತೆ ಗೊತ್ತಾಯಿತು ನನಗೆ ಬೆಳ್ಳಿಕೂದಲಿನ ಚೆಲ್ಲಾಟವು ಗೋಜಿಗೆ ಹೋಗದೆ ಒಪ್ಪಿಕೊಂಡೆ  ಬಿಳಿಯೂ ಬೆಳ್ಳಿಯೂ ಒಂದೇ ಎಂದು  ..!!

ಮನೆಯೊಡತಿಯ ಅಡುಗೆ

Image
ಹಸಿದ ಹೊಟ್ಟೆಗೆ ಬಿಸಿ ಬಿಸಿ ದೋಸೆಯ ತಿನ್ನಲು ಕೊಟ್ಟಳು ತಟ್ಟೆಯಲಿ ಸಕ್ಕರೆ ತುಪ್ಪವ ಸವರಿ ಬಡಿಯುತ್ತಿರಲು ಮೂಗಿಗೆ ಗಮ ಗಮ ಪರಿಮಳವು ಸೂಸುತಿರಲು ಬಾಯಲ್ಲಿ ನೀರನು , ಅವಳೆಂದಳು..... ತಿನ್ನಿರಿ ಪ್ರೀತಿಯಲಿ ನಾ ಮಾಡಿದ ಅಡುಗೆಯ ಅನ್ನದಿರಿ ಏನನ್ನು ಹುಳಿ ಕಾರ ಉಪ್ಪನು ನೋಡಿ...!! ಮೊದಮೊದಲು ನಾ ತಿಂದೆ , ಕೊಟ್ಟ ಅಡುಗೆಯ ಸಂತಸದಲಿ ಬರಬರುತ್ತಾ ನಿಪುಣಳಾದಳು ಬಹುವಿಧದ ಅಡುಗೆಯಲಿ....!! ನನಗಾಯಿತು ಸಂತೋಷವು ಹೊಟ್ಟೆ ತುಂಬಿದಾಗಲೆಲ್ಲ..!! ದಿನ ದಿನ ಆಸ್ವಾದಿಸುವೆ ಅಡುಗೆ ಬಗೆ ಬಗೆ ಮುಂದುವರಿಯಲಿ ನನ್ನವಳ ದಿನಚರಿಯ ಅಡುಗೆಯು ನಾ ತರುವೆ ಚೆಂದ ಚೆಂದದ ಉಡುಗೆ -ಉಡುಗೊರೆಯು                                                       - ಅಂಜಾರು ಮಾಧವ ನಾಯ್ಕ್

ವ್ಯರ್ಥ ಮನುಜರಿಹರು ಭೂಮಿಯಲಿ

ಸತ್ಯ ಧರ್ಮದ ಶಕ್ತಿಯನರಿಯದೆ , ಕತ್ತಿ ಎತ್ತಿ ಕತ್ತನು ಕೊಯ್ವರು ಹುಂಬರು    ನಿತ್ಯ ಬದುಕಿನ ಹೋರಾಟದಲಿ , ನ್ಯಾಯವನ್ನೇ ಮರೆವರು ಜನರು   ಇನ್ಯಾರೋ ಮಾಡಿದ ಆಸ್ತಿಯನು , ತನ್ನದೆಂದು ಬೊಗಳುವರು ಧೈರ್ಯದಲಿ ಕಂಡ ಕಂಡವರಿಗೆಲ್ಲಾ ಡಂಗುರವ ಸಾರುವರು , ಬೆಂಡಾಗಿ ಹೋದರು ಜೀವದಲಿ.....!      ರಕ್ತ ಸಂಬಂಧದ ಅರ್ಥವನರಿಯದೆ ವ್ಯರ್ಥ ಮನುಜರಿಹರು ಭೂಮಿಯಲಿ ಅರ್ಥವಾದರೂ  ದುಷ್ಕೃತ್ಯವ ಮಾಡುವರು ಒಂದಿಷ್ಟೂ ನೋವನರಿಯದೆ ಸಂಬಂಧದಲಿ ಒಟ್ಟಾಗಿ ಬರುವರು ಕೆಟ್ಟದಾಗಿ ಹೇಳುವರು , ನಾ ನೇರ ನಿನ್ನ ಚಟ್ಟ ಕಟ್ಟುವೆ ಎಂದು     ಸಿಟ್ಟಾಗಿ ದೇವನು ಕಷ್ಟ ಕೊಟ್ಟರೂ , ತನ್ನಿಷ್ಟದಂತೆ ನಡೆವರು ಲೋಕದಲಿ ಕಟ್ಟು ಕಟ್ಟಿನ ನೋಟನು  ಹೊಯ್ವರು ಕೆಟ್ಟು ಹೋದರು ಮಾನವು ಕೆಟ್ಟ ಕೆಲಸವ ಮಾಡಿ ದುಷ್ಟರಾಗಿ ಬಂದು ಕಷ್ಟ ಕೊಡುವರು ಜನರು    ಸದಾ ಭಕ್ತಿಯನು ಮಾಡುತಿಹೆ , ಶಕ್ತಿಯನು ನೀಡು ಎನಗೆ ನಿರಂತರ ಯುಕ್ತಿಯಲಿ  ನನ್ನ ನಿಯುಕ್ತಿ ಮಾಡು ಕೆಟ್ಟ  ಜನರ  ಜುಟ್ಟನು ಎತ್ತಿ ಹಿಡಿಯಲು                                           - ಅಂಜಾರು ಮಾಧವ ನಾಯ್ಕ್

...ಈ ಜಗದಲಿ

ತತ್ತರಿಸಿ ಹೋಗಿರುವೆನು ಈ ಜಗದ ನಾಟಕವ ಕಂಡು ಕತ್ತರಿಸಿ ಬಿಡುತಿಹುದು ಚಿತ್ತವ ಸುತ್ತಮುತ್ತಲ ಪಾಪಿ ಹಿಂಡು                                                      ...ಈ ಜಗದಲಿ       ಸತ್ಯದಲಿ ಇರುತಿಹೆನು ಪ್ರತಿನಿತ್ಯದ ಬದುಕಿನಾಟದಲಿ ಕುತ್ತಾಗಿ ಬರುತಿಹುದು ಸತ್ಯಕ್ಕೆ ಬೆಲೆ ಇಲ್ಲದೇ ಎತ್ತಲೂ                                                      ...ಈ ಜಗದಲಿ   ಹಂಗಿನಾಟವ  ಆಡುವರು ನಿನ್ನ ಕಣ್ಣ ಮುಂದೆ ಬಣ್ಣದಿಂದಲಿ ಪುಂಗಿ ಊದುವರು  ಹಲವು ಭಂಗಿಗಳ ತೋರಿಸುವರು                                                     ...ಈ ಜಗದಲಿ ಮಂಗನಾಗುವೆ ಹಲವು ಬಾರಿ ದಂಗುಬಡಿದಂತಾಗುವೆ ನಿಮಿಷದಲಿ ಚೊಂಗನಂತೆ ಬಂದು ನುಂಗಿ ಬಿಡಲು ನೋಡುವರು                                                       ...ಈ ಜಗದಲಿ ಎದುರು ನೋಡುತ್ತಿರುವೆ ಆನಂದದ ಹೊಳೆಯಲ್ಲಿ ಈಜಾಡಲು ಮೊಸಳೆಯಂತೆ ಬೆನ್ನಟ್ಟಿ ಬರುತಿಹರು ತಿಂದು ಮುಗಿಸಲು                                                      ...ಈ ಜಗದಲಿ                                                                                                                              - ಅಂಜಾರು ಮಾಧವ ನಾಯ್ಕ್

ಅಮ್ಮ

ನೆನಪುಗಳು ಕಾಡುತ್ತಿದೆ ಅಮ್ಮ ನಿನ್ನ ನೋಡಲು ಸ್ವಪ್ನಗಳು ಬೀಳುತ್ತಿದೆ ನಿನ್ನಾಸರೆ ಪಡೆಯಲು ನಿನ್ನ ಪ್ರೀತಿಯ ಮಾತುಗಳು, ಕೇಳುತ್ತಿದೆ ನಿದ್ದೆಯಲಿ ನಾನೆದ್ದು ನೋಡಿದರೆ ಸ್ತಬ್ದನಾಗುವೆ ಹಾಸಿಗೆಯಲಿ ಹಣೆಯ ಮೇಲೆ ಕೈಯ ಸವರಿ, ಕಿವಿಯಲ್ಲಿ ಪಿಸುಗುಟ್ಟುತ್ತಿದ್ದೆ ಕಂದಾ ಎದ್ದೇಳು ಬೆಳಗಾಯಿತು, ನೇಸರ ನಗುತಿಹನು ಕೇಳಿಯೂ ಕೇಳದಂತೆ ನಾ ತಿರುಗಿ ಮಲಗುತ್ತಿದ್ದೆ ಚಾಪೆಯಲಿ ಸದ್ದು ಮಾಡದೇ ಮಲಗಬಿಟ್ಟಳು , ಕೆಲಹೊತ್ತು ಸಂತಸದಲಿ ತಿಂಡಿ ತಿನಸುಗಳ ಗಮಗಮ ಪರಿಮಳ ಬಡಿಯುತ್ತಿರಲು ಮೂಗಿಗೆ ಅಮ್ಮಾ ನಾ ಎದ್ದೆ , ಎಂದು ತಬ್ಬಿಕೊಂಡೆನು ಪ್ರೀತಿಯಲಿ ಸಂತಸದಿಂದ ಅಮ್ಮನೆಂದಳು , ನೀ ಎನ್ನ ಮುದ್ದು ಬಂಗಾರ ಹರುಷದಲಿ ನಾ ಕುಣಿದೆ ಅಮ್ಮನಾ ಆಸೆಯನು ಕಂಡು                                             -ಅಂಜಾರು ಮಾಧವ ನಾಯ್ಕ್

ಪುಟ್ಟ ಕವಿಯ ಆಶಯ

ನಾ ಕವಿಯಲ್ಲ ,ನಾ ಕವಿಯಲ್ಲ ಗೀಚಿಹೆನು ಬರಬಲ್ಲ ಬರಹ ತಿಳಿಯದು ನನಗೆ ರಾಗ ಸುರಾಗವು, ನುಡಿಸುತಿರೆ ವೀಣೆ ತಂಬೂರಿಯ ಇಂಪಾಗಿ ಇರದು  ನುಡಿಸುವ ತಾಳ ತಂಬೂರಿಯು ಪ್ರೀತಿಯಲಿ ಸ್ವಾಗತಿಸುವೆ ತಂಬೂರಿ ನಾದಗಳ ಕೇಳಲು ಇಚ್ಚಿಸದಿರಬಹುದು ನೀ , ಪುಟ್ಟ ಹೃದಯದ ಮಿಡಿತ ಹಿಡಿತದಲಿಲ್ಲ ಏರಿಳಿತದ ನೂರೊಂದು ಸ್ವಪ್ನಗಳ ಬಡಿತ ಕೊಳದ ತಾವರೆಯಂತೆ ಹಾಯಾಗಿ ತೇಲುತಿರುವೆ ಮನದಲಿ ವಿಶ್ವಾಸದ ಮೊಗ್ಗು ಮೂಡುತಿಹುದು ಪುಟ್ಟ ಕವಿಯಾಗಲು ಮನಬಿಚ್ಚಿ ನುಡಿಸುವೆ  ತಂಬೂರಿಯ , ಕಂಠದಲಿ ಹಾಡುವೆ ರಾಗ ಲಯಗಳ ಓ ನನ್ನ ಗೆಳೆಯ ನೀ ಯಾಗಿರು ಆಸರೆ ಈ ಪುಟ್ಟ ಕವಿಯು  ಬೆಳೆಯಲು                                         -ಅಂಜಾರು ಮಾಧವ ನಾಯ್ಕ್

ತಿರುಗಿನೋಡೊಮ್ಮೆ ಓ ಮನುಜ

        ತಿರುಗಿನೋಡೊಮ್ಮೆ ಓ ಮನುಜ ಜೀವನದ ಪಗಡೆಯಾಟವ   ಅದೆಷ್ಟು ತಪ್ಪುಗಳ ಮಾಡಿರುವೆಯೋ ,ತಿಳಿದು - ತಿಳಿಯದೆ ನಿನ್ನಾಟದಲಿ  ಮಾಡಿದ ತಪ್ಪಿಗೆ ತಲೆಬಾಗಿ ನೀನಿದ್ದರೇ , ಚೆಲುವಾಗಿ ಇರಬಹುದು ನಿನ್ನ ಪಯಣ   ತಪ್ಪೆಂದು ತಿಳಿದು ಅಹಂಕಾರಿಯಾದರೆ , ಕರಗಿ ಹೋಗುವುದು ನಿನ್ನ ಜೀವನ          ನೀಡುತ್ತಿರು ನೊಂದ ಜೀವಕೆ , ಪ್ರೀತಿಯ ಔತಣವ ಚೆಂದದಲಿ           ಅದರಿಂದ ನಿನಗಾಗುವುದು ಆನಂದದ ನಿರಂತರ ಅನುಭವ             ಪಾಪಿ , ನೀನೆಷ್ಟು ಜನರ ಮನದಲಿ ಚೆಲ್ಲಾಟವಾಡಿರುವೆ          ಆ ಮನದ ಶಾಪವು ನಿನ್ನ ಬಿಡಲಾರದು ತಿನ್ನದೇ ಎಂದಿಗೂ          ನೀನೆಂದುಕೊಂಡಂತೆ , ಇರಬಹುದು ನಿನ್ನಲ್ಲಿ ಹಣ ಜನ ಬಲ                ದೇವರು ಮುನಿದರೆ ಪಡುತ್ತಿಯಾ ಪಾಪದ ಫಲ          ಅತಿಯಾಸೆಗೆ ಬಲಿಯಾಗಿ , ಬಲಿತೆಗೆದುಕೊಳ್ಳಬೆಡ ಬಡವರನು       ಅಹಂಕಾರವ ದೂರವಿಟ್ಟು ,ಹರುಷದಿಂದಲಿ ಆಡು ಪಗಡೆಯಾಟವ                                           -ಅಂಜಾರು ಮಾಧವ ನಾಯ್ಕ್ 

ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ

                ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನುವರು, ಈ ಜಗದಲಿ             ಕತ್ತೆ ಇರದಿದ್ದರೇ ನಾನಿಂದು ಸತ್ತೆ ಎನುವನು ಭಾರವ ಹೊರುವವನು  ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಅನ್ನುವರು, ಈ ಜಗದಲಿ  ಮಾತು ಮಾತಿಗೂ ಜಗಳವನು ಕಾಯುತ , ನಾ ನಿನ್ನ ಬಿಡಲಾರೆ ಅನ್ನುವರು ದ್ವೇಷದಲಿ       ತಂದೆ ತಾಯಿಯೇ ದೇವರು, ಮೊದಲ ಪಾಠ ಅನ್ನುವರು, ಈ ಜಗದಲಿ ಪ್ರತಿದಿನವೂ ಹೀಯಾಳಿಸುವರು ಹೆತ್ತುಸಲಹಿದ ತಂದೆ ತಾಯಿಯ ಕೆಲ ಮನುಜರು     ಕಾಯಕವೇ ಕೈಲಾಸ -ಕೈ ಕೆಸರಾದರೆ ಬಾಯಿ ಮೊಸರೆನ್ನುವರು, ಈ ಜಗದಲಿ        ದಿನಕ್ಕೊಂದು ತುತ್ತು ಅನ್ನವ ಕೊಡದೇ ದುಡಿಸಿಕೊಳ್ಳುವರು ಈ ದಿನದಲಿ                 ಮಾತು ಬೆಳ್ಳಿ ಮೌನ ಬಂಗಾರ ಎನುವರು , ಈ ಜಗದಲಿ     ಮಾತಾಡದಿದ್ದರೂ...  ಮಾನ ತೆಗೆದು ಮೌನವಾಗಿಸಿ ಬಿಡುವರು,ಈ ಲೋಕದಲಿ                                                        - ಅಂಜಾರು ಮಾಧವ ನಾಯ್ಕ್

ಹಿಂಡು ಪಾಪಿಗಳ ಕಂಡು ತುಂಡಷ್ಟೂ ಬೆರಗಾಗದಿರು

ಹಿಂಡು ಪಾಪಿಗಳ ಕಂಡು, ತುಂಡಷ್ಟೂ  ಬೆರಗಾಗದಿರು ಚೆಂಡಿನಾಟವ ಆಡು  ಜಗದ ಈ ಡೊಂಬರಾಟದಲಿ ಸಜ್ಜಾಗಿರು ನಿನ್ನಾಟಕೆ  ಹೆಜ್ಜೆಯನು ಕೊಡುತ ಗೆಜ್ಜೆ ನಾದವ ಹೊಮ್ಮಲಿ ನೀನಿಡುವ ಹೆಜ್ಜೆಯಲಿ ಆಗಮಿಸಲಿ ಪ್ರತಿಕ್ಷಣದ ಸವಾಲಿನ ಆಟವು ಹೆಮ್ಮೆಯಿಂದ ಹೇಳು , ನಾ ಬರುವೆ ಜಯಶಾಲಿಯಾಗಿ ಬಿಡಬೇಡ ಮೈದಾನದ ಪರಿಧಿಯನು , ಎಂದಿಗೂ ಜನ ನಿನ್ನಾಟವ ಕಂಡು , ಚೆಂಡನು ತುಂಡು ಮಾಡದಿರಲೆಂದು ಅನುಭವಿಸುವೆ ನೀನು ಆಟ ಚೆಲ್ಲಾಟಗಳ ನಿರಂತರ ಗಳಿಸುವೆ ಬಹು-  ಬಹುಮಾನಗಳ  ,ಆಡುತಲಿ ಎಂದೂ ಪ್ರೇಕ್ಷಕನಾಗಿಹನು ಜೀವನದಾಟದಲಿ, ಆ ಸೃಷ್ಟಿಕರ್ತನು ಮೋಸವ ಮಾಡದಿರು ನಿನ್ನಾಟ ಜಯಗಳಿಸುವತನಕ                                 - ಅಂಜಾರು ಮಾಧವ ನಾಯ್ಕ್

ನನ್ನ ಚಿನ್ನ

Image
ನಾ ಎದ್ದೇಳುವ ಮುನ್ನ ಮೆಲ್ಲನೆ ಎದ್ದಳು ನನ್ನ ಚಿನ್ನ ಕೊಟ್ಟಳು ಹಣೆಗೆ ಸಿಹಿಯಾದ ತುಟಿಯಲಿ ಅಂತರಂಗದ  ಮುತ್ತನು  ಅದೇನೋ ತುಂಬಿದಂತಾಯಿತು ಪ್ರೀತಿಯ ಕೊಡಪಾನ  ಬತ್ತಿ ತುಳುಕದಿರಲಿ ದಿನನಿತ್ಯದ ಬದುಕ ಬವಣೆಯಲಿ  ಮೋಹದಲಿ ನೀಡಿದಳು ತಿಂಡಿ ತಿನಸುಗಳ ಸವಿಯಲು  ನಾನನುಭವಿಸಿದೆ ಊಟೋಪಚಾರಗಳ ಸರಮಾಲೆಯನು  ಮನದುಂಬಿ ಹೇಳಬಯಸಿದೆ ನೀ ನನ್ನ ಬಂಗಾರ  ಹೇಳುವ ಮುನ್ನ , ನಾ ಕಂಡೆ ಅವಳ ಮುಖದಲಿ ಚಿತ್ತಾರ  ಇರಲಿ ಎಂದೆಂದಿಗೂ ಸಹಬಾಳ್ವೆಯ ರಥದ ಚಲನೆಯ  ಜೀವನ ಸಾಗಲಿ ಅಡೆತಡೆಯ ಎದುರಿಸಿ ಮುನ್ನುಗ್ಗಲು  ದಿನಬಿಡದೆ ಬಯಸುವೆ ಓ ನನ್ನ ಚಿನ್ನ , ನೀ ಎನ್ನ  ಬಿಡಲಾರೆ ಎಂದಿಗೂ ಪ್ರತಿಕ್ಷಣದ ಹೆಜ್ಜೆಯಲಿ  ನಿನ್ನ ಕೈಗೆ ನನ್ನ ಕೈಯ ಜೋಡಿಸಿರುವೆ ಒಂದಾಗಿರಲು  ಸುಖವಾಗಿ ಚಿನ್ನದಂತೇ ಹೊಳೆಯಲಿ  ನಮ್ಮ ಬದುಕು                           -ಅಂಜಾರು ಮಾಧವ ನಾಯ್ಕ್ 

ಓ ಕಲಿಯುಗದ ಮನುಜ .......

ಹೆತ್ತು ಸಲಹಿದವರ ಮರೆತ  ಕರುಳಕುಡಿಯ , ನೀನೆಷ್ಟು ಗಳಿಸಿದರೇನು ಫಲ, ತುತ್ತು ಅನ್ನವ ನೀಡದೆ ಇದ್ದರೆ ಚರ್ಮದ ಹೊದಿಕೆಯ ಮೇಲೆ ,ಸೂಟು ಬೂಟುಗಳ ಧರಿಸಿ ಮಲ್ಲಿಗೆ ಪರಿಮಳ ಸಿಂಪಡಿಸಿ ,ಲೋಕವೆಲ್ಲ ನಾನೇ ಚೆಲುವ ಎಂದರೆ ...!!! ಒಂದಿಷ್ಟು ಸೌಜನ್ಯತೆ ಇರದೆ , ಮತ್ತೋರ್ವರ  ಹೀಯಾಳಿಸಿ ಬುದ್ದಿಯ ಹೇಳಹೊರಟ ನೀನೆಷ್ಟು ಯೋಗ್ಯನಯ್ಯ ....!!!! ಕಷ್ಟ ಸುಖಗಳ ಅರಿಯದೆ , ತೋರುಬೆರಳ ಎತ್ತುವ ನೀನ್ಯಾಕೆ ತೆಗಳುತ್ತೀಯ  , ಅವನ ಅವಸ್ಥೆಯ ಕಂಡು ಪರರು ಹೇಳುತಿಹರು , ಅವನ ಜೀವನ ಪಾಡುಗಳ ನಿನಗೇನು ಗೊತ್ತು ಪರರು ನಿನ್ನ ನೋಡುವ ರೀತಿ ಅವಲೋಕಿಸುತ್ತಿರು ನಿನ್ನನು , ಪ್ರಶ್ನಿಸಿಸುತ್ತಿರು ತನ್ನನು ಅಹಂಕಾರಿಯೇ ಆಸೆಬುರುಕನೇ ,ವಿಶ್ವಾಸಿಯೇ ಲೋಕದಿ ಕಹಿಯಾಗದೆ ,ಸಿಹಿಯಾದ ಬಾಳನ್ನು ಬಾಳಿ ಮಾದರಿಯಾಗಿ ಬದುಕಲು ಕಲಿ, ಓ  ಹುಲು  ಮನುಜ                       - ಅಂಜಾರು ಮಾಧವ ನಾಯ್ಕ್

ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗೆ ......

Image
ಪಡಬೇಡ ಅನ್ಯರ ಸ್ವತ್ತುಗಳನ್ನು ಕಂಡು ; ಹೊಟ್ಟೆಕಿಚ್ಚು ಅನ್ನೋದು ನಿನ್ನ ಹಿಂಡೋದು  ತರತರ,ನಿರಂತರ ನೀನ್ಯಾಕೆ ಶ್ರಮಿಸದಿರುವೆ , ಶಿಖರವೆರಲು ಪ್ರತಿನಿತ್ಯ ಅಂಕುಶ ಹಾಕಬೇಡ , ಏರಿ ನಿಲ್ಲಲು ಬಯಸುವ ಮನುಜಗೆ ನಿನ್ನ ಒಳಗಿನ ಸದ್ಗುಣಗಳ ಬಾಗಿಲ ತೆರೆ ಜಗಕೆ ಖುಷಿಯ ಕ್ಷಣಗಳ ತುಂಬಿಕೊಳ್ಳು ನಿನ್ನ  ಮನಕೆ ಸುಮ್ಮಗೆ  ನುಡಿಯದಿರವಗೆ ಕೆಲಸವಿಲ್ಲ ಎಂದು  , ಬರಬಹುದದು ತಿರುಗು ಬಾಣವಾಗಿ ಮುಂದೂ ಪ್ರೀತಿಯಿಂದ ಸ್ವಾಗತಿಸು , ಕಷ್ಟಗಳನು ಎಂದಿಗೂ ಸುಖ ಬಂದಾಗ ಮರೆಯಬೇಡ ನಡೆದು ಬಂದ ಪಯಣವ ನಿನಗಾದಲ್ಲಿ ಸಹಾಯ ಹಸ್ತವ ನೀಡು ಪರರಿಗೆ ಮರೆಯಬೇಡ ಕರಮುಗಿದು ಪ್ರಾರ್ಥಿಸಲು ಸರ್ವಶಕ್ತಗೆ                          - ಅಂಜಾರು ಮಾಧವ ನಾಯ್ಕ್

ನೇಸರ ಮೂಡುತಲಿ

ನೇಸರ ಮೂಡುತಲಿ ತವಕದಿಂದೆದ್ದೆ ನಗು ಮೊಗವ ನೋಡಲು ಮಿಂಚಿನ ಸಂಚಲನ ಮನದಲಿ ದೀಪ ಉರಿಸಿ ಬೇಡಲು ಗೀರಿದೆ ವಿಶ್ವಾಸದ ಕಡ್ಡಿಯ, ಪ್ರಾರಂಬಿಸಲು ಧೈರ್ಯದಲಿ ಬೆಳಗಿತು  ಮುತ್ತಿನಂತಹ  ದಿನ ಹರುಷದಲಿ ಆಸೆಗಳ ಸರಮಾಲೆಯ ಪಟ್ಟಿಯ ನಿನ್ನ ಮುಂದಿಟ್ಟೆ ನಿರಂತರ ನೀಡುವೆಯ  ಆತ್ಮಸ್ಥೈರ್ಯದ ಬೆಳ್ಳಿತಟ್ಟೆ ನೀನಿರಲು ನನಗೇಕೆ ಭಯ, ಕಾಡದು ಇನ್ನಾವುದೇ ಅಪಜಯ ಬಲಪಡಿಸು ನನ್ನ ಇನ್ನಷ್ಟು , ದುಷ್ಟಶಕ್ತಿಗಳ ಎದುರಿಸಲು ತಲೆಬಾಗಿರುವೆ ನಿನ್ನ ಚರಣಕೆ ವಿನಂತಿಯನು ಮಾಡುತ ಕೈ ಬಿಡದಿರು ಎಂದೆಂದಿಗೂ ಸಡಗರವನ್ನು ನೀಡುತ ನಗುಮೊಗದಿಂದ ಬಾಳ ಬಯಸುವೆ ,ಪಾದ ಸೇವೆ ಮಾಡುತಲಿ ನೀಡುತ್ತಿರು ಹರುಷದ ಹೊಳೆಯನು ಸದಾ ಎನ್ನ ಬಾಳಲಿ                                                 - ಅಂಜಾರು ಮಾಧವ ನಾಯ್ಕ್

ಬದುಕೆಂಬ ನೌಕೆ

ಬದುಕೆಂಬ ನೌಕೆಯಲಿ ಸಾಗುತಿಹೆನು ದಡವ ಸೇರಲು ಸೇರಿ ನಲಿಯಲು ಹವಣಿಸುತಿದೆ ದಣಿದ ಪಯಣವು  ಕಂಡೆ ದೂರ ತೀರದಲಿ ನಸುನಗೆಯ ಹೊಂಗಿರಣ ಸಮೀಪಿಸಿದೆ ಆಲಂಗಿಸಲು ಕ್ಷಣ ಕ್ಷಣದ ಸಿಂಚನ ಖುಷಿಯಾಯಿತು ಮಿಲನ , ಸ್ಪರ್ಶಿಸಿದೆ ಅಂತಕರಣ  ಒಡೆಯದಿರಲಿ ಮನವೆಂಬ ಕನ್ನಡಿಯು ; ಪ್ರತಿಬಿಂಬಿಸಲಿ ಸದ್ಗುಣಗಳ ಸರಮಾಲೆ ನೀಡುತಿರಲಿ ರಹದಾರಿ ಮನದುಂಬಿ ನೀಡುವೆನು   ಹೂವನು ಸ್ನೇಹದಲಿ ತೆಗೆದುಕೋ ನಾ ತಂದ ಸಿಹಿಯನ್ನು ಪ್ರೀತಿಯಲಿ ಹರಸು ನೀ ಈ ನಾವಿಕನ ಪಯಣವು ದಡ ಮುಟ್ಟಲಿ                         - ಅಂಜಾರು ಮಾಧವ ನಾಯ್ಕ್

ಆಶೀರ್ವಾದ

ಅಮ್ಮನ ಆಸರೆಯಲಿ , ಕಳೆದು ಹೋದ ಆ ದಿನಗಳು ಬಯಸುತ್ತಿದೆ ಇಂದು ,ಮರುಕಳಿಸಲಿ ಸಂತೋಷದ ಕ್ಷಣಗಳು ಎದೆತುಂಬಿ ನಗುತ್ತಿದ್ದೆ, ಅಮ್ಮನ ಮೋಹವನು ಕಂಡು ಕಾಡುತ್ತಿದೆ ಇಂದು ,ಬಾಲ್ಯದಾಟದ ಹುಲ್ಲಿನ ಚೆಂಡು ತಾಳಲಾರದ ಹಸಿವಿನ ನಡುವೆಯೂ ಇರುತ್ತಿತ್ತು ಹುಮ್ಮಸ್ಸು ಆದರಿಂದು ನನಗಾಗುತ್ತಿದೆ ಮನದಾಳದ ವಿಪತ್ತು ಹಲವು ಕನಸುಗಳ ಕಂಡೆ , ನಮ್ಮವರ ಮುಂದೆ ಅದ ತಿಳಿದು ನೆನೆಸಿಕೊಂಡರು ,ಇವನಿಗಿಲ್ಲ ಹಿಂದೆ ಮುಂದೆ ನಾ ಕಳೆಯಲಿಲ್ಲ ಹೃದಯದ ಬಲವನ್ನು , ಅಷ್ಟು ಸುಲಭವಾಗಿ ಸಿಗಲಿಲ್ಲ ಪ್ರೋತ್ಸಾಹದ ಹರಿವು , ಎನ ಬಾಳಲಿ ನಿರಂತರವಾಗಿ ವಿಶ್ವಾಸವು ಕೊಂಡೊಯ್ಯುತ್ತಿದೆ, ನನ್ನೀ ಬಾಳಿನ ದೋಣಿಯನು ಭರವಸೆಯು ನೀಡುತ್ತಿದೆ , ಪ್ರತಿಕ್ಷಣದ ಚಲನೆಯನು ನನಗಿರಲಿ ಆತ್ಮ ಸ್ಥೈರ್ಯದ ಬತ್ತಳಿಕೆಯು ಮುಂದೂ ನಾನಾಗಿರುವೆ ಬಹುಬಾಣಗಳ ಸರದಾರ ಎಂದೂ ಲೊಕದೆತ್ತರಕೆ ಬೆಳಗಿಸಲಿ ನನ್ನ , ನಾ ಸಾಯುವ ಮುನ್ನ . ನನಗಿದೆ  ತಂದೆ ತಾಯಿಯ ಆಶೀರ್ವಾದವು                - ಅಂಜಾರು ಮಾಧವ ನಾಯ್ಕ್

ನಾಯಿ (ತುಳು )

ಈ ನಾಯಿ, ಮೂಜಿ  ಕಾಸ್ ದಾಯೆ ಪನ್ಪೆರ್ ಜನಕುಲು ಆ ನಾಯಿಗ್ ಗೊತ್ತುಂಡ ಈ ನಾಯಿದ ಕೈ ಬಾಯಿ ತೋಜಾವೆರ್ ಮಲ ಮಲ್ಲ ಮೆಂಚುನ ರೈಸುನ ಸಾಮನ್ ಎನ್ನ ಮಲ್ಲ ಎನ್ನ ಮಲ್ಲ ಪಂಡೆರ್ ,ಒಂಜಿ ರಡ್ಡ್ ನಿಮಿಷ ಬೊಕ್ಕ ಗೊತ್ತಾಂಡ್ , ಅವ್ ದಾಲ ಮಲ್ಲ ಅತ್ತ್  ಪಂಡ್ ದ್ ಈ ಲೊಕೊಡ್ ಬಾರಿಮಲ್ಲ ಬೇವು ಬೆಲ್ಲ ಸಸಾರ ಮಲ್ಪಡೆ ಈ ನಾಯಿಗ್ , ಅವೊಂಜಿ ದಿನ ಬರು ರಡ್ಡ್ ನಾಯಿಲ ಒಂಜಿ ಬಟ್ಟಲ್ಡ್ ಗಂಜಿ ತಿನ್ಪಿನ ದಿನ .                  -ಅಂಜಾರು ಮಾಧವ ನಾಯ್ಕ್                  

ತಂಗಾಳಿ

ತಂಗಾಳಿ ಬೀಸುತಲಿ ,ನೀ ನನ್ನ ಹೃದಯದಲಿ ನಾನಿರುವೆ ಸಂತೋಷದ ಹೊನಲಿನಲಿ ಇಂದು ಮುಂದು ಎಂದೆಂದಿಗೂ ಬಯಕೆ ಬಣ್ಣಗಳಿಗೆ ಮರುಳಾಗದೆ, ಇರುವೆ ನಿನ್ನೀ ಪ್ರೀತಿಯ ನಸುನಗೆಯ ಸವಿಯಲು ಮರೆಯಲಾಗದ ಕಂಬನಿ ನೀಡುತ್ತಿದೆ ಇಬ್ಬನಿ ಎಲ್ಲೊ ಇರುವ ಮನಸ್ಸಿನ ,ಉಯ್ಯಾಲೆಯ ನೀ ತಂದು ತೂಗುತ್ತಿರುವೆ , ಹಾಯಾಗಿ ನಿನ್ನುಸಿರು ಸೇರುತಿದೆ ನನ್ನುಸಿರ ಪಾಲಿನಲಿ ತಪ್ಪು ಒಪ್ಪುಗಳಿಗೆ ಸರಿಸಾಟಿಯಾಗಿ , ಈ ಜೀವನ ಸಾಗುತ್ತಿದೆ ಕಲ್ಲು ಮುಳ್ಳುಗಳ ಕಾಡು ಮೇಡಿನಲಿ ತಂಗಾಳಿ ಬೀಸಲಿ ನೋವು ನಲಿವಿನಲಿ , ತಂಗಾಳಿ ಬೀಸಲಿ ನೋವು ನಲಿವಿನಲಿ                             -ಅಂಜಾರು ಮಾಧವ ನಾಯ್ಕ್

ಆರ್ಥಿಕ ಸಹಾಯಕ್ಕಾಗಿ ಮನವಿ ಪತ್ರ

Image
PLEASE READ AND HELP THEM AS MUCH AS POSSIBLE , AND SHARE TO YOUR FRIENDS , SOCIAL WORKERS WHOM YOU KNOW TO GIVE FINANCIAL AND MORAL SUPPORT TO THIS POOR FAMILY. ಆರ್ಥಿಕ ಸಹಾಯಕ್ಕಾಗಿ ಮನವಿ ಪತ್ರ  ಮಾನ್ಯರೇ ,  ನಾನು ಸದಾನಂದ ನಾಯ್ಕ ಪ್ರಾಯ (45 ವರ್ಷ ), ... ನನ್ನ ಇಬ್ಬರು ಮಕ್ಕಳು ಸಚಿನ್ - ಪ್ರಾಯ (21 ವರ್ಷ ), ಸುಶ್ಮಿತಾ -ಪ್ರಾಯ (18 ವರ್ಷ ), ಹೆಂಡತಿ ಸುಜಾತ ಈ ಮೇಲಿನ ವಿಳಾಸ ದಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದೇನೆ . ಎಲ್ಲಾ ಹೃದಯವಂತರಲ್ಲಿ ನನ್ನ ಅಳಲನ್ನು ಹೇಳುತ್ತಿದ್ದೇನೆ , ಅವಿದ್ಯಾವಂತನಾದ ನಾನು ಬಡತನದಿಂದ ಬಳಲುತ್ತಿದ್ದು ನನ್ನ ಮಕ್ಕಳ ಜೀವನವಾದರೂ ಸುಖಮಯವಾಗಿರಲಿ ಎಂದು ಕೂಲಿ ಮಾಡಿ ದುಡಿದು ಜೀವನ ಮಾಡುತ್ತಿರುವಾಗಲೇ ತಾಳಲಾರದ ಕಷ್ಟ ಕಾರ್ಪಣ್ಯಗಳು ಒಂದರ ಹಿಂದೆ ಒಂದು ಎರಗಿ ಬರುತ್ತಿದ್ದು ನನ್ನಿಂದ ನನ್ನ ಕುಟುಂಬ ನಡೆಸಲು ತುಂಬಾ ಕಷ್ಟ ಆಗುತ್ತಿದೆ. ದಿನಕೂಲಿಯಿಂದ ಪಡೆದ ಹಣದಿಂದ ಇಬ್ಬರು ಮಕ್ಕಳ ಶಾಲೆ ಕಾಲೇಜು ಖರ್ಚು ವೆಚ್ಚ ನಡೆಯುತ್ತಿತ್ತು , ಕೆಲಸಮಯದ ಹಿಂದೆ ಸರ್ಕಾರದ ನಬಾರ್ಡ್ ನ ಹೊಸ ರಸ್ತೆ ಯೋಜನೆಯಿಂದಾಗಿ ನನ್ನ ಫಲವತ್ತಾದ ೫೦ ಸೆಂಟ್ಸ್ ಕೃಷಿ ಜಾಗವನ್ನು ಯಾವುದೇ ಪರಿಹಾರ ಇಲ್ಲದೆ ಕಳೆದುಕೊಂಡಿದ್ದೇನೆ. ಎರಡು ವರ್ಷಗಳ ಹಿಂದೆ ಕೆಲಸ ಮಾಡುತ್ತಿರುವಾಗ , ಬಲಕಣ್ಣಿಗೆ ಕಲ್ಲಿನ ಬಲವಾದ ಏಟು ಬಿದ್ದು ಆಸ್ಪತ್ರೆಗೆ

(ಕವನ -2) ಪಿದಾಯಿ ಊರು

ಅಣ್ಣನಕುಲೆ, ಅಕ್ಕನಕುಲೆ ನಮ್ಮ ಮಾತಾ ಬಂಧುನಕುಲೆ ಕೆಬಿ ಅರಪಾದ್ ಕೇನ್ಲೆ, ಯಾನೊಂಜಿ ಪಿದಾಯಿ ಊರುದಾಯೆ ಬೇಲೆದಾಂತೆ , ಗತಿದಾಂತೆ ,ಯಾನಿತ್ತೆ  ನಮ್ಮ ಊರುಡು ಎನನ್ ಏರ್ಲ ಕೆಂದಿಜೆರ್ ,ಈ ಎಂಚ ಉಲ್ಲ , ಉಂಡನಾ ,ತಿಂದನಾ ಕಾಲ ಎನನ್ ತಿರ್ಗಾದ್ ಕೊನೊತುಂಡು ಏಳ್ ಕಡಲ್ದ ಆಪೆಲ್ ಬನ್ನಗ ಎಂಕ್ ಗೊತ್ತಿಜ್ಜಿ ಉಂಡಲ್ಪ ಒಂಜಾತ್ ಕೂಪೊಲು ಕೈಕೊಂಜಿ ಕೊರಿಯೆರ್ ಬೇಲೆ ,ಖುಷಿಯಾಂಡ್ ,ದಿನ ಮರುದಿನ ತಿಂಗೊಲ್ ಕರಿಂಡ್ ,ವರ್ಷ ಅಗತ್ಂಡ್ ,ಪ್ರಾಯಲ ಆಂಡ್ ಸುರುಸುರುಟ್ ಎನ್ನಿಯೆ ಒಂತೆ ದಿನ ದೆಪ್ಪುಗ ಈ  ಮರುಭೂಮಿಡ್ ಆಂಡ  ಎಂಕ್ ಗೊತ್ತಾನಗ ಪೊರ್ತಾಂಡ್ ಈ ಮಣ್ಣ್ ದ   ಬಣ್ಣ ಎನ್ನೊಂದು ಕುಲ್ಲುವೆ ಮುಲ್ಪ ಇಜ್ಜೆರ್ ಎನ ಬಂಧು ಬಳಗ ಅಕ್ಲೆ ತೆರಿಪಾಯರೆ ಬಲ್ತೆ ಫೋನ್ ದ ಅಂಗಡಿಗ್ ಪನಿಯರೆ ಆಯಿಜಿ ಮುಲ್ಪದ  ಬಂಗ  ನಮ್ಮಕ್ಲೆಡ ಕಷ್ಟ ನಸ್ಟೊನು ಮಾತ ನಿಂಗ್ ದ್  ಶುರುಮಲ್ತೆ ಬದ್ಕೆರೆ .. ನೆತ್ತೆರ್  ನೀರಾಂಡ್ ,ಮನಸ್ ಬೇಜಾರಾಂಡ್ ,ಬಲ  ಕಮ್ಮಿಯಾಂಡ್ ಯಾನಾಯೆ ನಮ್ಮನೇ  ಊರದಕ್ಲೆಗ್ ಪಿದಾಯಿ ಊರುದಾಯೆ......!!!! ಮನದಾಸೆಡ್ ಊರುಗ್ ಪೋಯೆರೆ ಒಂಜಾತ್ ಸಾಲ ,ಕೋಲ ಉಡಲ್ಗ್ ಅಂಗಿ ಇಜ್ಜಂದೆ ಪೋಂಡ್ ,ಆಂಡ ಮೋಕೆಡ್ ಕೊನೊತೆ ತೀರಿನ ಸ್ವತ್ತು ಲು ಎದ್ಕೊಂಡ್ರೆ ಬತ್ತೆರ್  ,ಗೌಜಿ ಗಮ್ಮತ್ತ್  ಮಲ್ತೆರ್ ನಾಲ್ ದಿನೊಟ್ ಮುಗಿಂಡ್ ಮಾತೆರ್ನಲ ಸಂಗ ದಿನ ಬುಡ್ದ್ ಕೇಂಡೆರ್ ,ಈ ಏಪ ಪೋಪ ಯಾನ್ ಕೋಪೊಡೆ ಪಂಡೆ ಸದ್ಯೋಗ್ ಪೋಪೆ .....!!! ಓ ಎನ್ನ ದೆವೇರ

(ಕವನ -1)ನಮ ತುಳು ಅಪ್ಪೆನ ಜೋಕುಲು

ಸುದಿಪುಗ  ಬಲೆ ನಮ್ಮ ತುಳುವಪ್ಪೆನ್ .....  ಸುದಿಪುಗ  ಬಲೆ ನಮ್ಮ ತುಳುವಪ್ಪೆನ್ ......  ಮಾತಾ ಜೋಕುಲು ಒಂಜಾದ್   ಸೇರ್ ಗ ಜಾತಿ ಭೇದ ದಾಂತೆ ನಮ ಬದಕ್ ಗ ತುಳುಅಪ್ಪೆನ್  ನಮ ಒಂಜಾದ್ ತಾಂಕ್ ಗ ಬತ್ತಿ ಕಸ್ಟೊನು ಒಂಜಾದ್ ತೆಲಿತೊಂದು ಗೆಂದ್ ಗ ಸತ್ಯ ಧರ್ಮೊನು ಪಾಲನೆ ಮಲ್ಪುಗ ಮೋಸ  ವಂಚನೆ  ಸೇರ್ದ್ ಗಿಡಪುಗ   ಬಂಗಾರ್  ಬದ್ಕ್  ತುಳು ನಾಡ ಮಣ್ನ್ ಡ್ ಅವೆನ್ ನಮ ಯೆಪಲಾ ಒರಿಪಾಗ, ನಲಿಪಾಗ ಒಂಜೆ ಮಂತ್ರ  ತುಳುವಪ್ಪೆಗಾದ್  'ಮುಲ್ಪ- ಈ ಮಣ್ಣ್ ದ   ಋಣ 'ಎಪಲಾ ಮದಪಂದೆ ಉಪ್ಪುಗ ..                       - ಅಂಜಾರು ಮಾಧವ ನಾಯ್ಕ್