ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ

                ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನುವರು, ಈ ಜಗದಲಿ
            ಕತ್ತೆ ಇರದಿದ್ದರೇ ನಾನಿಂದು ಸತ್ತೆ ಎನುವನು ಭಾರವ ಹೊರುವವನು

 ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಅನ್ನುವರು, ಈ ಜಗದಲಿ
 ಮಾತು ಮಾತಿಗೂ ಜಗಳವನು ಕಾಯುತ , ನಾ ನಿನ್ನ ಬಿಡಲಾರೆ ಅನ್ನುವರು ದ್ವೇಷದಲಿ

      ತಂದೆ ತಾಯಿಯೇ ದೇವರು, ಮೊದಲ ಪಾಠ ಅನ್ನುವರು, ಈ ಜಗದಲಿ
ಪ್ರತಿದಿನವೂ ಹೀಯಾಳಿಸುವರು ಹೆತ್ತುಸಲಹಿದ ತಂದೆ ತಾಯಿಯ ಕೆಲ ಮನುಜರು

    ಕಾಯಕವೇ ಕೈಲಾಸ -ಕೈ ಕೆಸರಾದರೆ ಬಾಯಿ ಮೊಸರೆನ್ನುವರು, ಈ ಜಗದಲಿ
       ದಿನಕ್ಕೊಂದು ತುತ್ತು ಅನ್ನವ ಕೊಡದೇ ದುಡಿಸಿಕೊಳ್ಳುವರು ಈ ದಿನದಲಿ

                ಮಾತು ಬೆಳ್ಳಿ ಮೌನ ಬಂಗಾರ ಎನುವರು , ಈ ಜಗದಲಿ
    ಮಾತಾಡದಿದ್ದರೂ...  ಮಾನ ತೆಗೆದು ಮೌನವಾಗಿಸಿ ಬಿಡುವರು,ಈ ಲೋಕದಲಿ

                                                       - ಅಂಜಾರು ಮಾಧವ ನಾಯ್ಕ್

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.