...ಈ ಜಗದಲಿ

ತತ್ತರಿಸಿ ಹೋಗಿರುವೆನು ಈ ಜಗದ ನಾಟಕವ ಕಂಡು
ಕತ್ತರಿಸಿ ಬಿಡುತಿಹುದು ಚಿತ್ತವ ಸುತ್ತಮುತ್ತಲ ಪಾಪಿ ಹಿಂಡು
                                                     ...ಈ ಜಗದಲಿ      

ಸತ್ಯದಲಿ ಇರುತಿಹೆನು ಪ್ರತಿನಿತ್ಯದ ಬದುಕಿನಾಟದಲಿ
ಕುತ್ತಾಗಿ ಬರುತಿಹುದು ಸತ್ಯಕ್ಕೆ ಬೆಲೆ ಇಲ್ಲದೇ ಎತ್ತಲೂ
                                                     ...ಈ ಜಗದಲಿ  

ಹಂಗಿನಾಟವ  ಆಡುವರು ನಿನ್ನ ಕಣ್ಣ ಮುಂದೆ ಬಣ್ಣದಿಂದಲಿ
ಪುಂಗಿ ಊದುವರು  ಹಲವು ಭಂಗಿಗಳ ತೋರಿಸುವರು
                                                    ...ಈ ಜಗದಲಿ

ಮಂಗನಾಗುವೆ ಹಲವು ಬಾರಿ ದಂಗುಬಡಿದಂತಾಗುವೆ ನಿಮಿಷದಲಿ
ಚೊಂಗನಂತೆ ಬಂದು ನುಂಗಿ ಬಿಡಲು ನೋಡುವರು
                                                      ...ಈ ಜಗದಲಿ

ಎದುರು ನೋಡುತ್ತಿರುವೆ ಆನಂದದ ಹೊಳೆಯಲ್ಲಿ ಈಜಾಡಲು
ಮೊಸಳೆಯಂತೆ ಬೆನ್ನಟ್ಟಿ ಬರುತಿಹರು ತಿಂದು ಮುಗಿಸಲು
                                                     ...ಈ ಜಗದಲಿ
                                                         
                                                                   - ಅಂಜಾರು ಮಾಧವ ನಾಯ್ಕ್



Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.