ತಿರುಗಿನೋಡೊಮ್ಮೆ ಓ ಮನುಜ

        ತಿರುಗಿನೋಡೊಮ್ಮೆ ಓ ಮನುಜ ಜೀವನದ ಪಗಡೆಯಾಟವ
  ಅದೆಷ್ಟು ತಪ್ಪುಗಳ ಮಾಡಿರುವೆಯೋ ,ತಿಳಿದು - ತಿಳಿಯದೆ ನಿನ್ನಾಟದಲಿ

 ಮಾಡಿದ ತಪ್ಪಿಗೆ ತಲೆಬಾಗಿ ನೀನಿದ್ದರೇ , ಚೆಲುವಾಗಿ ಇರಬಹುದು ನಿನ್ನ ಪಯಣ
  ತಪ್ಪೆಂದು ತಿಳಿದು ಅಹಂಕಾರಿಯಾದರೆ , ಕರಗಿ ಹೋಗುವುದು ನಿನ್ನ ಜೀವನ

         ನೀಡುತ್ತಿರು ನೊಂದ ಜೀವಕೆ , ಪ್ರೀತಿಯ ಔತಣವ ಚೆಂದದಲಿ
          ಅದರಿಂದ ನಿನಗಾಗುವುದು ಆನಂದದ ನಿರಂತರ ಅನುಭವ

            ಪಾಪಿ , ನೀನೆಷ್ಟು ಜನರ ಮನದಲಿ ಚೆಲ್ಲಾಟವಾಡಿರುವೆ
         ಆ ಮನದ ಶಾಪವು ನಿನ್ನ ಬಿಡಲಾರದು ತಿನ್ನದೇ ಎಂದಿಗೂ

         ನೀನೆಂದುಕೊಂಡಂತೆ , ಇರಬಹುದು ನಿನ್ನಲ್ಲಿ ಹಣ ಜನ ಬಲ
               ದೇವರು ಮುನಿದರೆ ಪಡುತ್ತಿಯಾ ಪಾಪದ ಫಲ

         ಅತಿಯಾಸೆಗೆ ಬಲಿಯಾಗಿ , ಬಲಿತೆಗೆದುಕೊಳ್ಳಬೆಡ ಬಡವರನು
      ಅಹಂಕಾರವ ದೂರವಿಟ್ಟು ,ಹರುಷದಿಂದಲಿ ಆಡು ಪಗಡೆಯಾಟವ

                                          -ಅಂಜಾರು ಮಾಧವ ನಾಯ್ಕ್ 

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.