ನನ್ನ ನಾಲ್ಕೇ ನಾಲ್ಕು ಮಾತು ...

ಇದ್ದರೇನಂತೆ ಐಶ್ವರ್ಯ  ನಿನಗೆ
ಕದ್ದು ತಿನ್ನುವ ಚಟವಿದ್ದರೆ.......!
ತಿದ್ದಿ ಹೇಳಲು ಹೊರಟ ನನಗೇ
ಬುದ್ದಿಯಿಲ್ಲ ಎನ್ನುವ ಹಟವಿದ್ದರೆ

ಸದ್ದು ಮಾಡಿ ಒದ್ದು ಬದುಕುವ ನೀನು,
ಹೊದ್ದು  ಸತ್ತರೂ ಸಿಗದು ಸಂಪತ್ತು
ಜಿಪುಣನಾಗಿ ಅನ್ನತಿನ್ನಲೂ ಎಣಿಸುವವನು
ಕಣ್ಮುಚ್ಚುವಾಗ ಚಿನ್ನವೂ ಮಣ್ಣಾಗಿ ಹೋದೀತು

ಉಸಿರಿರೋ ತನಕ ನಿಟ್ಟುಸಿರು ಬಿಡುವೆ
ಯಾರು ಬಲ್ಲರು ನಿನ್ನ ಕೊನೆಯುಸಿರು
ಮುಗ್ದ ಜನರ ಎದೆಯ ತುಳಿದು ಬದುಕುವೆ
ಏನು ಪ್ರಯೋಜನ ಸಿಂಗಾರ ಮಾಡಿದರೂ ?

 ಸುಖ-ಸಂತೋಷ ಪ್ರೀತಿ ಸಹನೆ  ಇದ್ದಲ್ಲಿ
ಹಾಯಾಗಿ ಕಳೆವೆ  ಪರಸ್ಪರ ಅರಿತಾಗ
ಸುಖವಿರದು ಅಹಂಕಾರದ ಮನವಿದ್ದಲ್ಲಿ
ಅದಕೆ ಎಂದೆಂದೂ ನಗುತಾ ಜೀವಿಸು ಸರಾಗ ...

                    - ಅಂಜಾರು ಮಾಧವ ನಾಯ್ಕ್





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.