ನನ್ನ ಚಿನ್ನ



ನಾ ಎದ್ದೇಳುವ ಮುನ್ನ ಮೆಲ್ಲನೆ ಎದ್ದಳು ನನ್ನ ಚಿನ್ನ
ಕೊಟ್ಟಳು ಹಣೆಗೆ ಸಿಹಿಯಾದ ತುಟಿಯಲಿ ಅಂತರಂಗದ  ಮುತ್ತನು 

ಅದೇನೋ ತುಂಬಿದಂತಾಯಿತು ಪ್ರೀತಿಯ ಕೊಡಪಾನ 
ಬತ್ತಿ ತುಳುಕದಿರಲಿ ದಿನನಿತ್ಯದ ಬದುಕ ಬವಣೆಯಲಿ 

ಮೋಹದಲಿ ನೀಡಿದಳು ತಿಂಡಿ ತಿನಸುಗಳ ಸವಿಯಲು 
ನಾನನುಭವಿಸಿದೆ ಊಟೋಪಚಾರಗಳ ಸರಮಾಲೆಯನು 

ಮನದುಂಬಿ ಹೇಳಬಯಸಿದೆ ನೀ ನನ್ನ ಬಂಗಾರ 
ಹೇಳುವ ಮುನ್ನ , ನಾ ಕಂಡೆ ಅವಳ ಮುಖದಲಿ ಚಿತ್ತಾರ 

ಇರಲಿ ಎಂದೆಂದಿಗೂ ಸಹಬಾಳ್ವೆಯ ರಥದ ಚಲನೆಯ 
ಜೀವನ ಸಾಗಲಿ ಅಡೆತಡೆಯ ಎದುರಿಸಿ ಮುನ್ನುಗ್ಗಲು 

ದಿನಬಿಡದೆ ಬಯಸುವೆ ಓ ನನ್ನ ಚಿನ್ನ , ನೀ ಎನ್ನ 
ಬಿಡಲಾರೆ ಎಂದಿಗೂ ಪ್ರತಿಕ್ಷಣದ ಹೆಜ್ಜೆಯಲಿ 

ನಿನ್ನ ಕೈಗೆ ನನ್ನ ಕೈಯ ಜೋಡಿಸಿರುವೆ ಒಂದಾಗಿರಲು 
ಸುಖವಾಗಿ ಚಿನ್ನದಂತೇ ಹೊಳೆಯಲಿ  ನಮ್ಮ ಬದುಕು 

                         -ಅಂಜಾರು ಮಾಧವ ನಾಯ್ಕ್ 


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ