ಆಶೀರ್ವಾದ

ಅಮ್ಮನ ಆಸರೆಯಲಿ , ಕಳೆದು ಹೋದ ಆ ದಿನಗಳು
ಬಯಸುತ್ತಿದೆ ಇಂದು ,ಮರುಕಳಿಸಲಿ ಸಂತೋಷದ ಕ್ಷಣಗಳು

ಎದೆತುಂಬಿ ನಗುತ್ತಿದ್ದೆ, ಅಮ್ಮನ ಮೋಹವನು ಕಂಡು
ಕಾಡುತ್ತಿದೆ ಇಂದು ,ಬಾಲ್ಯದಾಟದ ಹುಲ್ಲಿನ ಚೆಂಡು

ತಾಳಲಾರದ ಹಸಿವಿನ ನಡುವೆಯೂ ಇರುತ್ತಿತ್ತು ಹುಮ್ಮಸ್ಸು
ಆದರಿಂದು ನನಗಾಗುತ್ತಿದೆ ಮನದಾಳದ ವಿಪತ್ತು

ಹಲವು ಕನಸುಗಳ ಕಂಡೆ , ನಮ್ಮವರ ಮುಂದೆ
ಅದ ತಿಳಿದು ನೆನೆಸಿಕೊಂಡರು ,ಇವನಿಗಿಲ್ಲ ಹಿಂದೆ ಮುಂದೆ

ನಾ ಕಳೆಯಲಿಲ್ಲ ಹೃದಯದ ಬಲವನ್ನು , ಅಷ್ಟು ಸುಲಭವಾಗಿ
ಸಿಗಲಿಲ್ಲ ಪ್ರೋತ್ಸಾಹದ ಹರಿವು , ಎನ ಬಾಳಲಿ ನಿರಂತರವಾಗಿ

ವಿಶ್ವಾಸವು ಕೊಂಡೊಯ್ಯುತ್ತಿದೆ, ನನ್ನೀ ಬಾಳಿನ ದೋಣಿಯನು
ಭರವಸೆಯು ನೀಡುತ್ತಿದೆ , ಪ್ರತಿಕ್ಷಣದ ಚಲನೆಯನು

ನನಗಿರಲಿ ಆತ್ಮ ಸ್ಥೈರ್ಯದ ಬತ್ತಳಿಕೆಯು ಮುಂದೂ
ನಾನಾಗಿರುವೆ ಬಹುಬಾಣಗಳ ಸರದಾರ ಎಂದೂ

ಲೊಕದೆತ್ತರಕೆ ಬೆಳಗಿಸಲಿ ನನ್ನ , ನಾ ಸಾಯುವ ಮುನ್ನ .
ನನಗಿದೆ  ತಂದೆ ತಾಯಿಯ ಆಶೀರ್ವಾದವು

               - ಅಂಜಾರು ಮಾಧವ ನಾಯ್ಕ್




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.