ಓ ಕಲಿಯುಗದ ಮನುಜ .......
ಹೆತ್ತು ಸಲಹಿದವರ ಮರೆತ ಕರುಳಕುಡಿಯ , ನೀನೆಷ್ಟು
ಗಳಿಸಿದರೇನು ಫಲ, ತುತ್ತು ಅನ್ನವ ನೀಡದೆ ಇದ್ದರೆ
ಚರ್ಮದ ಹೊದಿಕೆಯ ಮೇಲೆ ,ಸೂಟು ಬೂಟುಗಳ ಧರಿಸಿ
ಮಲ್ಲಿಗೆ ಪರಿಮಳ ಸಿಂಪಡಿಸಿ ,ಲೋಕವೆಲ್ಲ ನಾನೇ ಚೆಲುವ ಎಂದರೆ ...!!!
ಒಂದಿಷ್ಟು ಸೌಜನ್ಯತೆ ಇರದೆ , ಮತ್ತೋರ್ವರ ಹೀಯಾಳಿಸಿ
ಬುದ್ದಿಯ ಹೇಳಹೊರಟ ನೀನೆಷ್ಟು ಯೋಗ್ಯನಯ್ಯ ....!!!!
ಕಷ್ಟ ಸುಖಗಳ ಅರಿಯದೆ , ತೋರುಬೆರಳ ಎತ್ತುವ
ನೀನ್ಯಾಕೆ ತೆಗಳುತ್ತೀಯ , ಅವನ ಅವಸ್ಥೆಯ ಕಂಡು
ಪರರು ಹೇಳುತಿಹರು , ಅವನ ಜೀವನ ಪಾಡುಗಳ
ನಿನಗೇನು ಗೊತ್ತು ಪರರು ನಿನ್ನ ನೋಡುವ ರೀತಿ
ಅವಲೋಕಿಸುತ್ತಿರು ನಿನ್ನನು , ಪ್ರಶ್ನಿಸಿಸುತ್ತಿರು ತನ್ನನು
ಅಹಂಕಾರಿಯೇ ಆಸೆಬುರುಕನೇ ,ವಿಶ್ವಾಸಿಯೇ
ಲೋಕದಿ ಕಹಿಯಾಗದೆ ,ಸಿಹಿಯಾದ ಬಾಳನ್ನು ಬಾಳಿ
ಮಾದರಿಯಾಗಿ ಬದುಕಲು ಕಲಿ, ಓ ಹುಲು ಮನುಜ
- ಅಂಜಾರು ಮಾಧವ ನಾಯ್ಕ್
ಗಳಿಸಿದರೇನು ಫಲ, ತುತ್ತು ಅನ್ನವ ನೀಡದೆ ಇದ್ದರೆ
ಚರ್ಮದ ಹೊದಿಕೆಯ ಮೇಲೆ ,ಸೂಟು ಬೂಟುಗಳ ಧರಿಸಿ
ಮಲ್ಲಿಗೆ ಪರಿಮಳ ಸಿಂಪಡಿಸಿ ,ಲೋಕವೆಲ್ಲ ನಾನೇ ಚೆಲುವ ಎಂದರೆ ...!!!
ಒಂದಿಷ್ಟು ಸೌಜನ್ಯತೆ ಇರದೆ , ಮತ್ತೋರ್ವರ ಹೀಯಾಳಿಸಿ
ಬುದ್ದಿಯ ಹೇಳಹೊರಟ ನೀನೆಷ್ಟು ಯೋಗ್ಯನಯ್ಯ ....!!!!
ಕಷ್ಟ ಸುಖಗಳ ಅರಿಯದೆ , ತೋರುಬೆರಳ ಎತ್ತುವ
ನೀನ್ಯಾಕೆ ತೆಗಳುತ್ತೀಯ , ಅವನ ಅವಸ್ಥೆಯ ಕಂಡು
ಪರರು ಹೇಳುತಿಹರು , ಅವನ ಜೀವನ ಪಾಡುಗಳ
ನಿನಗೇನು ಗೊತ್ತು ಪರರು ನಿನ್ನ ನೋಡುವ ರೀತಿ
ಅವಲೋಕಿಸುತ್ತಿರು ನಿನ್ನನು , ಪ್ರಶ್ನಿಸಿಸುತ್ತಿರು ತನ್ನನು
ಅಹಂಕಾರಿಯೇ ಆಸೆಬುರುಕನೇ ,ವಿಶ್ವಾಸಿಯೇ
ಲೋಕದಿ ಕಹಿಯಾಗದೆ ,ಸಿಹಿಯಾದ ಬಾಳನ್ನು ಬಾಳಿ
ಮಾದರಿಯಾಗಿ ಬದುಕಲು ಕಲಿ, ಓ ಹುಲು ಮನುಜ
- ಅಂಜಾರು ಮಾಧವ ನಾಯ್ಕ್
Comments
Post a Comment