ಓ ಕಲಿಯುಗದ ಮನುಜ .......

ಹೆತ್ತು ಸಲಹಿದವರ ಮರೆತ  ಕರುಳಕುಡಿಯ , ನೀನೆಷ್ಟು
ಗಳಿಸಿದರೇನು ಫಲ, ತುತ್ತು ಅನ್ನವ ನೀಡದೆ ಇದ್ದರೆ

ಚರ್ಮದ ಹೊದಿಕೆಯ ಮೇಲೆ ,ಸೂಟು ಬೂಟುಗಳ ಧರಿಸಿ
ಮಲ್ಲಿಗೆ ಪರಿಮಳ ಸಿಂಪಡಿಸಿ ,ಲೋಕವೆಲ್ಲ ನಾನೇ ಚೆಲುವ ಎಂದರೆ ...!!!

ಒಂದಿಷ್ಟು ಸೌಜನ್ಯತೆ ಇರದೆ , ಮತ್ತೋರ್ವರ  ಹೀಯಾಳಿಸಿ
ಬುದ್ದಿಯ ಹೇಳಹೊರಟ ನೀನೆಷ್ಟು ಯೋಗ್ಯನಯ್ಯ ....!!!!

ಕಷ್ಟ ಸುಖಗಳ ಅರಿಯದೆ , ತೋರುಬೆರಳ ಎತ್ತುವ
ನೀನ್ಯಾಕೆ ತೆಗಳುತ್ತೀಯ  , ಅವನ ಅವಸ್ಥೆಯ ಕಂಡು

ಪರರು ಹೇಳುತಿಹರು , ಅವನ ಜೀವನ ಪಾಡುಗಳ
ನಿನಗೇನು ಗೊತ್ತು ಪರರು ನಿನ್ನ ನೋಡುವ ರೀತಿ

ಅವಲೋಕಿಸುತ್ತಿರು ನಿನ್ನನು , ಪ್ರಶ್ನಿಸಿಸುತ್ತಿರು ತನ್ನನು
ಅಹಂಕಾರಿಯೇ ಆಸೆಬುರುಕನೇ ,ವಿಶ್ವಾಸಿಯೇ

ಲೋಕದಿ ಕಹಿಯಾಗದೆ ,ಸಿಹಿಯಾದ ಬಾಳನ್ನು ಬಾಳಿ
ಮಾದರಿಯಾಗಿ ಬದುಕಲು ಕಲಿ, ಓ  ಹುಲು  ಮನುಜ

                      - ಅಂಜಾರು ಮಾಧವ ನಾಯ್ಕ್




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.