ಖಾಕಿ ಬಟ್ಟೆಯ ಜೀಪು ಬಂದಾಗ

ಕೋಟಿ ಕೋಟಿಯ ಸೂಟು ಬೂಟುಗಳ ಹಾಕಿದ್ದರೂ
ಕಿತ್ತೊಗೆದು ಬಿಸಾಕುವೆ ಅವಸರದ ಮಲ ಬಂದಾಗ

ಸಾವಿರ ಬಾರಿ ದೇಶ ವಿದೇಶವ ವಿಮಾನದಲಿ ಸುತ್ತಿದ್ದರೂ
ಉಡುಗೆ ಒದ್ದೆ  ಮಾಡಿಕೊಳ್ಳುವೆ  ಪೈಲಟ್ ಕೈ ಕೊಟ್ಟಾಗ

ಅಪ್ಪಿ ತಪ್ಪಿ ಕೊಂದು ಬದುಕಿ ಜೀವಿಸುತ್ತಿದ್ದರೂ
ದಂಗಾಗಿ ಬಿಡುವೆ ನೀ ಕಿಂಡಿ ಬಾಗಿಲ ಸದ್ದು ಬಂದಾಗ

ಹಲವು ಬಾರಿ ಮೋಸ ವಂಚನೆ ಮಾಡಿ ಜಯಗಳಿಸಿದರೂ
ವಿಚಲಿತನಾಗುವೆ ತರ ತರದ ಕಷ್ಟ ಬಂದಾಗ

ಗೊತ್ತಿದ್ದೂ ಕದ್ದು ತಿಂದು ಸಾಚನಂತೆ ತಿರುಗಿದರೂ
ಬೆವೆರಿಳಿಸುವೆ ಖಾಕಿ ಬಟ್ಟೆಯ ಜೀಪು ಬಂದಾಗ

                         - ಅಂಜಾರು ಮಾಧವ ನಾಯ್ಕ್


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ