ಕೀಳು ದೃಷ್ಟಿ


ನೋವಾಗುತಿದೆನಗೆ ಮೂರ್ಖ ಜನರ ಕೀಳು ದೃಷ್ಟಿಯ ಕಂಡು
ಸಾಲು ಸಾಲಾಗಿ ಕುಕ್ಕುತಿಹರೆನ್ನ ಮೌನ ಮಾತನು ಕಂಡು

ಹೇಳಲಾಗದೆ ಚಡಪಡಿಸುತ್ತಿರುವೆ ಸೋಲುಣ್ಣುವ  ಆಟದಲಿ
 ಕಿವುಡನಂತೆ ನಟಿಸುವರು ನೋವ ಹೇಳುವ ಸಮಯದಲಿ

     ಜೋರು ಸ್ವರವ ಬೀರುವರು ನನ್ನ ವ್ಯಥೆಯ ಕಥೆಯಲಿ
ಒಂದು ಚೂರು ಕರುಣೆಯ ತೋರರು ಮೇಲಕ್ಕೆತ್ತಲು ಸುಳಿಯಲಿ

      ಅಸುರರಾಗಿ ಬಂದು ದಮನಿಸುವರು ಮತ್ತೊಬ್ಬರ
      ಸ್ಥಿರವಾಗಿ ಇರುವರು ಬಾಳ ಕೆಣಕಲು ಇನ್ನೊಬ್ಬರ

     ಸಹಿಸಲಾರೆ ಕಂತ್ರಿ ಜನರ ಮಂತ್ರ ಕುತಂತ್ರಗಳ
     ತಂತ್ರದಲಿ ಜಯಿಸುವೆ ವಿಧ ವಿಧದ ಕರಾಮತ್ತುಗಳ

                                      -ಅಂಜಾರು ಮಾಧವ ನಾಯ್ಕ್ 

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.