ತಂಗಾಳಿ

ತಂಗಾಳಿ ಬೀಸುತಲಿ ,ನೀ ನನ್ನ ಹೃದಯದಲಿ
ನಾನಿರುವೆ ಸಂತೋಷದ ಹೊನಲಿನಲಿ
ಇಂದು ಮುಂದು ಎಂದೆಂದಿಗೂ

ಬಯಕೆ ಬಣ್ಣಗಳಿಗೆ ಮರುಳಾಗದೆ, ಇರುವೆ
ನಿನ್ನೀ ಪ್ರೀತಿಯ ನಸುನಗೆಯ ಸವಿಯಲು
ಮರೆಯಲಾಗದ ಕಂಬನಿ ನೀಡುತ್ತಿದೆ ಇಬ್ಬನಿ

ಎಲ್ಲೊ ಇರುವ ಮನಸ್ಸಿನ ,ಉಯ್ಯಾಲೆಯ
ನೀ ತಂದು ತೂಗುತ್ತಿರುವೆ , ಹಾಯಾಗಿ
ನಿನ್ನುಸಿರು ಸೇರುತಿದೆ ನನ್ನುಸಿರ ಪಾಲಿನಲಿ

ತಪ್ಪು ಒಪ್ಪುಗಳಿಗೆ ಸರಿಸಾಟಿಯಾಗಿ , ಈ ಜೀವನ
ಸಾಗುತ್ತಿದೆ ಕಲ್ಲು ಮುಳ್ಳುಗಳ ಕಾಡು ಮೇಡಿನಲಿ
ತಂಗಾಳಿ ಬೀಸಲಿ ನೋವು ನಲಿವಿನಲಿ ,
ತಂಗಾಳಿ ಬೀಸಲಿ ನೋವು ನಲಿವಿನಲಿ

                            -ಅಂಜಾರು ಮಾಧವ ನಾಯ್ಕ್


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.