ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗೆ ......


ಪಡಬೇಡ ಅನ್ಯರ ಸ್ವತ್ತುಗಳನ್ನು ಕಂಡು ; ಹೊಟ್ಟೆಕಿಚ್ಚು
ಅನ್ನೋದು ನಿನ್ನ ಹಿಂಡೋದು  ತರತರ,ನಿರಂತರ

ನೀನ್ಯಾಕೆ ಶ್ರಮಿಸದಿರುವೆ , ಶಿಖರವೆರಲು ಪ್ರತಿನಿತ್ಯ
ಅಂಕುಶ ಹಾಕಬೇಡ , ಏರಿ ನಿಲ್ಲಲು ಬಯಸುವ ಮನುಜಗೆ

ನಿನ್ನ ಒಳಗಿನ ಸದ್ಗುಣಗಳ ಬಾಗಿಲ ತೆರೆ ಜಗಕೆ
ಖುಷಿಯ ಕ್ಷಣಗಳ ತುಂಬಿಕೊಳ್ಳು ನಿನ್ನ  ಮನಕೆ

ಸುಮ್ಮಗೆ  ನುಡಿಯದಿರವಗೆ ಕೆಲಸವಿಲ್ಲ ಎಂದು  ,
ಬರಬಹುದದು ತಿರುಗು ಬಾಣವಾಗಿ ಮುಂದೂ

ಪ್ರೀತಿಯಿಂದ ಸ್ವಾಗತಿಸು , ಕಷ್ಟಗಳನು ಎಂದಿಗೂ
ಸುಖ ಬಂದಾಗ ಮರೆಯಬೇಡ ನಡೆದು ಬಂದ ಪಯಣವ

ನಿನಗಾದಲ್ಲಿ ಸಹಾಯ ಹಸ್ತವ ನೀಡು ಪರರಿಗೆ
ಮರೆಯಬೇಡ ಕರಮುಗಿದು ಪ್ರಾರ್ಥಿಸಲು ಸರ್ವಶಕ್ತಗೆ

                         - ಅಂಜಾರು ಮಾಧವ ನಾಯ್ಕ್







Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ