Posts

Showing posts from 2023

ಲೇಖನ -116) ಇಸವಿ 2024 ರ, 24 ಕನಸುಗಳು ನನಸಾಗಲಿ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ,

Image
✍️Madhav K Anjar (ಲೇಖನ -116) ಇಸವಿ 2024 ರ, 24 ಕನಸುಗಳು ನನಸಾಗಲಿ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ,  ವರುಷದ ಕೊನೆಯ ದಿನದಲ್ಲಿ ನಾವೆಲ್ಲರೂ ಭವ್ಯ ಭಾರತದ ಕನಸಿಗೆ ಸೇತುವೆಯಾಗೋಣ, ಡಿಸೆಂಬರ್ 31, 2023. ರ ರಾತ್ರಿ 12 ಗಂಟೆಗೆ ಎಲ್ಲರೂ ಹೊಸ ವರುಷವನ್ನು ಸ್ವಾಗತಿಸಲು ತಯಾರಿಯಲ್ಲಿದ್ದೀರಾ?, ಹೆಚ್ಚಿನ ಜನರು ತಮ್ಮ ಗೆಳೆಯ ಗೆಳತಿ ಕುಟುಂಬ ಮತ್ತು ಸಂಗಡಿಗರೊಂದಿಗೆ ಸೇರಿ ವಿಭಿನ್ನ ರೀತಿಯ ಆಚರಣೆಗೆ ಅಣಿಯಗುತ್ತೀರಿ ಆದರೆ ನಮ್ಮ ಆಚರಣೆ ಕೇವಲವಾಗಿ ಮೋಜು ಮಸ್ತಿಗೆ ಸೀಮಿತವಾಗಿರದೆ ಕೆಲವೊಂದು ಕನಸುಗಳ ಜೊತೆಗೆ ಆಚರಿಸುವಂತಾಗಲಿ.  ಸಾವಿರಾರು ಕನಸುಗಳನ್ನು ಹೊತ್ತು  ಮುನ್ನುಗ್ಗುತ್ತಿರುವ ನಮ್ಮ ದೇಶಕ್ಕಾಗಿ ನಿಮ್ಮೆಲ್ಲರ ಕಿರು ಕಾಣಿಕೆ ಇರಲಿ. ಅದೇನು ಅಂತಹದು ಆಲೋಚನೆಗಳು ನಿಮ್ಮ ಮನಸಲ್ಲಿ ಮೂಡಿಲ್ಲವೇ, ಇಂದು ಹೊಸ ಚಿಂತನೆಗಳೊಂದಿಗೆ ಹೊಸ ವರುಷವನ್ನು ಸ್ವಾಗತಿಸಲು ನಾವೆಲ್ಲರೂ ತಯಾರಾಗೋಣ.           ಭಾರತವೆಂಬುವುದು ಸೌಭಾಗ್ಯವಂತರ ದೇಶ, ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲದ ಸ್ವಾತಂತ್ರ್ಯ, ನಮ್ಮ ದೇಶದ ಮಣ್ಣಲ್ಲಿ, ಪ್ರತೀ ಪ್ರಜೆಗೂ ಇಲ್ಲಿದೆ ಹಕ್ಕು ಸಾಧಿಸಬೇಕೆಂದು ಛಲವಿದ್ದರೆ ಭಾರತ ಸೂಕ್ತ ಪ್ರದೇಶ, ಸಂಪತ್ತಿನ ಆಗರವಾಗಿದ್ದ ದೇಶವನ್ನು ಅದೆಷ್ಟು ವಿದೇಶಿಗರು ಬಂದು ಲೂಟಿ ಮಾಡಿದ್ದರೂ ಬರಿದಾಗಿಸಲು ಸಾಧ್ಯವಾಗಲಿಲ್ಲ, ಅನೇಕ ದೇಶ ಭಕ್ತರನ್ನು ಕೊಂದು ರಕ್ತ ಕುಡಿದಿದ್ದರೂ ಭಾರತವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಇಂದಿಗೂ ಅಲ್ಲಲ್ಲಿ ಕೆಲವ

(ಲೇಖನ -115)ಸಂಗೀತವನ್ನು ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಮುಂಜಾನೆಯ ಸಂಗೀತ, ಮದ್ಯಾಹ್ನದ ಸಂಗೀತ, ಸಾಯಂಕಾಲ ದ ಸಂಗೀತ ಇದರಲ್ಲಿ ವ್ಯತ್ಯಾಸ ತಿಳಿದುಕೊಂಡು ಮನಸ್ಸನ್ನು ಹಗುರಗೊಳಿಸಿ.

Image
✍️Madhav. K. Anjar. (ಲೇಖನ -115) ಮನ  ತಣಿಸುವ ಸಂಗೀತ - Music,  ಸಂಗೀತಕ್ಕೆ ಸೋಲದೆ ಇರುವ ಜೀವಿಗಳಿಲ್ಲ, ಸಂಗೀತ ಲೋಕದಲ್ಲಿ ಮುಳುಗಿದಾಕ್ಷಣ ಎಲ್ಲವನ್ನೂ ಮರೆಯುವ ಅನೇಕ ಸಂಧರ್ಭಗಳನ್ನು ನಾವೆಲ್ಲರೂ ಅನುಭವಿಸಿರುತ್ತೇವೆ. ಸಂಗೀತಕ್ಕೆ ಅದೇನು ಶಕ್ತಿ ಅಲ್ಲವೇ? ರಾಗ, ಲಯ, ತಾಳ ಎಲ್ಲವನ್ನೂ ಸರಿಯಾಗಿಸಿ ಹೊರ ಹೊಮ್ಮವ ಸ್ವರ ಅದೆಷ್ಟು ಮನಸುಗಳನ್ನು ಶಾಂತಿಯಾಗಿಸುತ್ತದೆ, ಸ್ವರದೊಂದಿಗೆ ಜೊತೆಯಾಗುವ ಸಂಗೀತ ಸಾಧನಗಳು ಸಂಗೀತಗಾರರ ಕಂಠಕ್ಕೆ ಮತ್ತಷ್ಟು ಮೆರುಗು ಕೊಡುತ್ತವೆ. ಸಂಗೀತ ಕಲೆ ಕೆಲವೇ ಕೆಲವರಲ್ಲಿ ಇರುತ್ತದೆ, ಹಾಡುವುದು ಅಷ್ಟು ಸುಲಭವೂ ಅಲ್ಲ, ಕೇಳುಗರಿಗೆ ಹಾಡುವುದು ಸುಲಭವಾಗಿ ಕಂಡರೂ, ಹಾಡನ್ನು ಹಾಡಿದಾಗಲೇ ಅದರ ಮರ್ಮ ಗೊತ್ತಾಗುವುದು. ಹಾಡು ಉತ್ತಮವಾದ ಸ್ವರದಿಂದ ಕೂಡಿದ್ದರೆ ಮಾತ್ರ ಕೇಳಲು ಇಂಪಾಗಿರುತ್ತದೆ,ನಮ್ಮ ಸಂತೋಷವನ್ನು ಹಂಚಿಕೊಳ್ಳುವ ಸಂಧರ್ಭಗಳಲ್ಲಿ, ಮನಸ್ಸಿಗೆ ಬೇಸರವಾದಾಗ, ಅಥವಾ ಒಬ್ಬಂಟಿತನದ ಸಮಯದಲ್ಲಿ ಹಾಡನ್ನು ಕೇಳುತ್ತ ಮೈ ಮರೆಯುತ್ತೇವೆ ನಮಗೆ ಅರಿವಿಲ್ಲದೆ,  ಪ್ರತಿಯೊಂದು ಸಂಗೀತ ಸಾಧನಗಳಲ್ಲಿ ಹೊರ ಹೊಮ್ಮವ ಸ್ವರಕ್ಕೆ ವಿಶಿಷ್ಟ ಶಕ್ತಿ ಇರುತ್ತದೆ.  ಕೊಳಲು ಊದುವ ಸಂಧರ್ಭದಲ್ಲಿ ದನ ಕರುಗಳು ತನ್ನ ಕಿವಿಯನ್ನು ನೇರ ಮಾಡಿಕೊಂಡು ಕೊಳಲಿನ ದನಿಯನ್ನು ಆಲಿಸುವ, ಮತ್ತು ಅದರಲ್ಲಿ ಹೊಮ್ಮವ ಸಂಗೀತಕ್ಕೆ ಕುಣಿಯುವ ಪ್ರಸಂಗವನ್ನು ನಾವು ನೋಡುತ್ತೇವೆ, ಹಾಗೆಯೇ ಭಜನೆ ಸಂಕೀರ್ತನೆ, ರಸ ಮಂಜರಿ ಇಂತಹ ಅನೇಕ ಸಂಗೀತ ಪ್ರಸಾರದ ಸಂ

(ಲೇಖನ -114) - ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ

Image
(ಲೇಖನ -114) - ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ -ದೈಹಿಕವಾಗಿ ಜೀವದ ಪ್ರತಿಯೊಂದು ಅಂಗಗಳು  ಸರಿಯಾಗಿ ಕೆಲಸ ಮಾಡುತ್ತಾ, ಆರೋಗ್ಯದಲ್ಲಿ ಯಾವುದೇ ಏರುಪೇರುಗಳಿಲ್ಲದೆ ಚೆನ್ನಾಗಿದ್ದರೂ ಮಾನಸಿಕವಾಗಿ ಸರಿಯಾಗಿಲ್ಲದಿದ್ದರೆ ಅವರ ಬದುಕು  ಬಹಳ ದೊಡ್ಡ ಸಮಸ್ಯೆಯಾಗಿ ಮಾರ್ಪಾಡಾಗಿರುತ್ತದೆ. ಜೀವದ  ಪ್ರತಿಯೊಂದು ಅಂಗಗಳು  ಮಾನವನಿಗೆ  ಅಥವಾ  ಪ್ರಾಣಿಗಳಿಗೆ ಬಹಳ ಪ್ರಾಮುಖ್ಯ, ಒಂದು ಸಲ  ಅಂಗಾಂಗಗಳನ್ನು ಕಳೆದುಕೊಂಡಾಗ  ಅದರಲ್ಲಾಗುವ  ತೊಂದರೆಗಳು  ಅನುಭವಿಸಿದವರಿಗೆ ಮಾತ್ರ ಗೊತ್ತು. ಜೀವ ಸರಿಯಾಗಿ ಇರುವಾಗ ತಮ್ಮ ಅಜಾಗ್ರತೆಯಿಂದ ಅಥವಾ ಅವಘಡಗಳಲ್ಲಿ  ಅದೆಷ್ಟೋ ಜನರು  ಶಾಶ್ವತವಾಗಿ  ಅಂಗವಿಕಲರಾಗುತ್ತಾರೆ. ರೋಗಕ್ಕೆ ತುತ್ತಾಗಿ ಅಂಗವಿಕಲರಾದಾಗ ಮಾನಸಿಕವಾಗಿ ಕುಗ್ಗಿ ಹೋಗಿ ಅಲ್ಲಿ ಬದುಕಲು ಆಗದೇ ಇಲ್ಲಿ ಜೀವಿಸಲೂ ಆಗದೇ ಕಷ್ಟ ಪಡುವ ಜೀವಗಳು ನಮ್ಮ ಕಣ್ಣ ಮುಂದೆ ಕಾಣುತಿರುತ್ತದೆ.        ಈ ವಿಷಯದಲ್ಲಿ, ಕಷ್ಟಗಳು  ನೋಡುವವರ ಕಣ್ಣಿಗೆ  ಗೊತ್ತಾಗುವುದಿಲ್ಲ, ನಿಜವಾಗಿ  ತೊಂದರೆಗೆ  ಒಳಪಟ್ಟು  ಜೀವಿಸುವವರು  ಅನೇಕ ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಹೆಚ್ಚಿನ ಜನರು ಆಸ್ಪತ್ರೆಯಲ್ಲಿ ಜೀವನ್ಮರಣದಲ್ಲಿ, ಮತ್ತು ಅನೇಕ ಜನರು ತಮ್ಮ ಮನೆಗಳಲ್ಲಿ ತೊಂದರೆಗಳೊಂದಿಗೆ ಬದುಕುತಿದ್ದಾರೆ. ಆಕಸ್ಮಿಕ ಘಟನೆಗಳಿಗೆನೂ ಮಾಡಲು ಸಾಧ್ಯವಿಲ್ಲ, ಆದರೆ ಅಜಾಗರೂಕತೆಯಿಂದ ನಡೆಯುವ ಅವಘಡಗಳು ಜೀವನದ ಚಿತ್ರಣವನ್ನು ಬದಲಾಯಿಸುತ್ತದೆ. ಅದೆಷ್ಟೋ ಯುವಕರು ಬೈಕು, ಕಾರು ಮತ್ತಿ

ನಾನಿನ್ನ ನೆನೆದಾಗ!

ಯಾಕಿಷ್ಟು ನಿನ್ನ ಕನಸು ಯಾಕಿಷ್ಟು ನಿನ್ನ ನೆನಪು ತುಂಟಾಟ ನಿನ್ನ ಪಾಠ ಪ್ರೀತಿಯ ನಿನ್ನ ನೋಟ ಹಗಲಿರುಳು ಕಾಡುತಿದೆ ಕದ್ದು ಬಿಟ್ಟೆಯಾ ನನ್ನ ಮನಸು! ಮುಗುಳುನಗೆ ಕಂಡಾಗ ನೀನೆದುರು ನಿಂತಾಗ ಜಗವನ್ನೇ ಮರೆಯುವೆ ನಿನ್ನೊಂದಿಗೆ ಬೆರೆತಾಗ ಪ್ರೇಮದ ಪಾಠವ ಕೇಳುತ್ತ ಕುಳಿತಾಗ! ಸಾವಿರ ಜನ್ಮದ ಪುಣ್ಯದ ಫಲವೋ ಬಾಳಿನ ಪುಟಗಳ ನವವಿಧ ಅದ್ಯಾಯ ಬರೆಯುವ ನೀನಂತೂ ಜೊತೆಯಾಗಿರುವೆಯಾ  ನಾನಿನ್ನ ನೆನೆದಾಗ!      ✍️ ಮಾಧವ. ಕೆ. ಅಂಜಾರು 

(ಲೇಖನ -113) ತುಳುನಾಡು ಮತ್ತು ತುಳು ಸಂಸ್ಕೃತಿ, ತುಳುವರು ಪ್ರಪಂಚದ ಎಲ್ಲಾ ಕಡೆಯಲ್ಲೂ ಸಿಗುತ್ತಾರೆ

Image
✍️Madhav. K. Anjar  (ಲೇಖನ -113) ತುಳುನಾಡು ಮತ್ತು ತುಳು ಸಂಸ್ಕೃತಿ,  ತುಳುವರು ಪ್ರಪಂಚದ ಎಲ್ಲಾ ಕಡೆಯಲ್ಲೂ ಸಿಗುತ್ತಾರೆ, ತುಳುನಾಡಿನ ಜನರಲ್ಲಿನ ಜೀವನ ಪದ್ಧತಿ, ಧೈರ್ಯ, ಬುದ್ದಿವಂತಿಕೆ, ಸೌಂದರ್ಯ ಎ ಭಾಷಾ ಗೌರವ, ವ್ಯಕ್ತಿ ಗೌರವ, ದೇಶ ಭಕ್ತಿ ಹಾಗೂ ಅನೇಕ ತರಹದ ವಿಶೇಷತೆ ತುಳುನಾಡಿನ ಜನರಲ್ಲಿ ನೋಡಬಹುದು. ಅದು ಹೇಗೆ, ತುಳುವರು ಯಾಕೆ ಅಷ್ಟು ಬುದ್ದಿವಂತರು ಅನ್ನುವ ಪ್ರಶ್ನೆ ಮೂಡ ಬಹದು. ತುಳು ಭಾಷೆ ಪುರಾತನ ಭಾಷೆ, ಶೇಕಡಾ 99 % ಜನರು ತುಳು ಬಲ್ಲವರು, ಇತ್ತೀಚಿನ ದಿನದ ಇಂಗ್ಲಿಷ್ ಪ್ರಭಾವದ ಕಾರಣಕ್ಕೂ ತುಳು ಭಾಷೆ ತಲೆಬಾಗುತ್ತಿಲ್ಲ ಯಾಕೆಂದರೆ ತುಳು ಭಾಷೆಗೆ ಯಾವ ಭಾಷೆಯೂ ಪೈಪೋಟಿ ನೀಡಲು ಸಾಧ್ಯವಿಲ್ಲ. ತುಳು ಭಾಷೆಯನ್ನು ಬಲ್ಲವರು ಮಾತ್ರ ಭಾಷೆಯ ವಿಶೇಷತೆಯ ಬಗ್ಗೆ ತಿಳಿದಿರುತ್ತಾರೆ.         ಉದಾಹರಣೆಗೆ, " ನಮಸ್ಕಾರ ಈರ್ ಎಂಚ ಉಲ್ಲರ್ " ಇದರ ಅರ್ಥ ಕನ್ನಡದಲ್ಲಿ " ನಮಸ್ಕಾರ ನೀವು ಹೇಗಿದ್ದೀರಿ " ಇಲ್ಲಿ ಈ ವಾಕ್ಯವನ್ನು ಕನ್ನಡದಲ್ಲಿ ಕೇವಲ ಹಿರಿಯರಿಗೆ ಉಪಯೋಗಿಸುತ್ತಾರೆ, ಆದರೆ ತುಳು ಭಾಷೆಯಲ್ಲಿ ಹಿರಿಯರಿಗೂ, ಕಿರಿಯರಿಗೂ ಉಪಯೋಗಿಸುತ್ತಾರೆ ಯಾಕೆಂದರೆ ತುಳು ಭಾಷೆ ಕಿರಿಯರಿಂದ ಹಿರಿಯರವರೆಗೂ  ಗೌರವವನ್ನು ಕೊಡುವ ಶಬ್ದ ಅತೀ ಹೆಚ್ಚಾಗಿ ಉಪಯೋಗಿಸುತ್ತಾರೆ. ಅದು ಕೂಡ ಒಬ್ಬರಿಗೆ ಬೈಗುಳ ಕೊಡುವ ಸಂಧರ್ಭದಲ್ಲೂ ಗೌರವ ಶಬ್ದದ ಉಪಯೋಗ ಮಾಡುತ್ತಾರೆ. ಬೇರೆ ಭಾಷೆಗಳಲ್ಲಿ ಉಪಯೋಗಿಸುವ ಅತೀ ಕೆಟ್ಟ ಶಬ್ದದ ಉಪಯ

(ಲೇಖನ -112)ಗಲ್ಫ್ ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ?

(ಲೇಖನ -112) ಗಲ್ಫ್ ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ? ನಿಮ್ಮ ಕುತೂಹಲಕ್ಕೆ ನನ್ನೆರಡು ಮಾಹಿತಿ. ಹಬ್ಬದ ಸಮಯಬಂದಾಗ ಕುಟುಂಬ, ಗೆಳೆಯ, ಗೆಳತಿ ಸಮಾಜದಲ್ಲಿ ಸಂತೋಷ ಸಡಗರ, ಹೊಸ ಬಟ್ಟೆ, ವಾಹನ, ಇನ್ನಿತರ ಆಸೆಗಳ ಅನಾವರಣ. ಹಬ್ಬ ನಮ್ಮ ಕನಸುಗಳನ್ನು ನನಸುಮಾಡುವ ಶಕ್ತಿಯನ್ನು ಹೊಂದಿರುತ್ತವೆ ಎಂದು ಹೇಳಬಹುದು. ಯಾಕೆಂದರೆ ಪ್ರತೀ ವರುಷದ ಹಬ್ಬದ ದಿನದಂದು ನಾವುಗಳು ತೆಗೆದುಕೊಳ್ಳುವ ನಿರ್ಧಾರ ನನಸಾಗಿರುತ್ತದೆ. ಉದಾಹರಣೆಗೆ ವರುಷದ ಮೊದಲನೆಯ ಹಬ್ಬ ಯುಗಾದಿ, ಅಂದು ನಾವುಗಳು ಹೊಸ ಮನೆಯನ್ನು ಕಟ್ಟುವ, ಹೊಸ ವಾಹನ ತೆಗೆದುಕೊಳ್ಳೋಣ ಅಥವಾ ಇನ್ನಿತರ ವಿವಿಧ ಆಸೆಗಳ ಪಟ್ಟಿಯನ್ನು ನಮ್ಮ ಮನಸ್ಸಿನೊಳಗೆ ಇಟ್ಟುಕೊಂಡು ನಮಗೆ ಗೊತ್ತಿಲ್ಲದೆಯೇ ಸಾಕಾರಗೊಳ್ಳಲು ಪ್ರಯತ್ನಿಸಿ ಹೊಸ ವರುಷ ಬರುತ್ತಿದ್ದಂತೆ ನಮ್ಮ ಯೋಜನೆ ಕಾರ್ಯರೂಪಕ್ಕೆ ಬಂದಿರುತ್ತದೆ. ಹಬ್ಬದ ವಾತಾವರಣದೊಂದಿಗೆ ನಮ್ಮ ಮನೆ ಮನ ಖುಷಿಯಾಗಿರುತ್ತದೆ.        ಸಂಸ್ಕಾರ, ಸಂಸಾರ ಇವೆರಡನ್ನು ಸಂತೋಷದಿಂದ ನೋಡಿಕೊಂಡಾಗ ನಮಗೆ ಉನ್ನತಿಎಂಬುದು ತಾನಾಗಿಯೇ ಬರುತ್ತದೆ ಅನ್ನುವ ಅಭಿಪ್ರಾಯ. ಸಾಗರದಾಚೆಯ ದೇಶ ಅದೂ ಗಲ್ಫ್ ರಾಜ್ಯದಲ್ಲಿ ಎಲ್ಲರೂ ಹಬ್ಬಗಳನ್ನು ಆಚರಿಸುತ್ತಾರೆ, ದೀಪಾವಳಿಯ ಸಂಧರ್ಭದಲ್ಲಿ ಮನೆಗೆ ದೀಪಾಲಂಕಾರ, ಹೊಸ ಬಗೆಯ ತಿಂಡಿ ತಿನಸು, ಭೋಜನ ಮತ್ತು ಕೆಲವರು ವಿಶಿಷ್ಟ ರೀತಿಯಲ್ಲಿ ಸುಂದರವಾದ ಬಟ್ಟೆಗಳನ್ನು ಧರಿಸಿ ದೇವರಿಗೆ ನಮಿಸಿ ಸಿಹಿ ತಿಂಡಿಯನ್ನು ಹಂಚಿಕೊಂಡು ಸಂಭ್ರಮ

ಜಯಗಳಿಸುವನು

ಎಲ್ಲವೂ ಸರಿಯಾಗಿರುವಾಗ ಅಳುವವರು ಎಲ್ಲವನ್ನೂ ಕಳೆದುಕೊಂಡಾಗ ಬದುಕಲಾರರು, ಎಲ್ಲವೂ ಸರಿಯಾಗಿರುವಾಗ ಹೆದರುವವರು ಎಲ್ಲವನ್ನೂ ಕಳೆದುಕೊಂಡಾಗ ಮತ್ತೆ ಮೇಲೆ ಬರರು, ಏನೂ ಇಲ್ಲದೇ ಬದುಕಿದವನು ಹೆದರಿಕೆಯನ್ನೇ ಮರೆಯುವನು ಎಲ್ಲವನ್ನೂ ಗಳಿಸುತ್ತಾ ಜಯಗಳಿಸುವನು.        ✍️ಮಾಧವ. ಕೆ. ಅಂಜಾರು.

ಕೇವಲ ಅಲ್ಪ ದಿನವೆಂದು ಮರೆತಿರುತ್ತಾರೆ!

ಬದುಕಿನ ಪಯಣದಲಿ ಒಂದಷ್ಟು ಜನ ಸಂತೋಷವನ್ನು ಕೊಡುತ್ತಾರೆ ಒಂದಷ್ಟು ಜನ ನೋವನ್ನು ಕೊಡುತ್ತಾರೆ ಒಂದಷ್ಟು ಜನ ಪ್ರೀತಿಯನ್ನು ತೋರಿಸುತ್ತಾರೆ  ಒಂದಷ್ಟು ಜನ ಅಸೂಯೆ ಪಡುತ್ತಾರೆ ಒಂದಷ್ಟು ಜನ ಪ್ರೋತ್ಸಾಹ ಕೊಡುತ್ತಾರೆ ಒಂದಷ್ಟು ಜನ ಕಾಲೆಲೆಯುತ್ತಾರೆ ಬದುಕುವುದು ಕೇವಲ ಅಲ್ಪ ದಿನವೆಂದು ಮರೆತಿರುತ್ತಾರೆ!         ✍️ಮಾಧವ ಕೆ ಅಂಜಾರು.

(ಲೇಖನ -110)ಹೊಸ ಕನಸುಗಳ ಸುರಿಮಳೆ ದಿನ ಬಿಡದೆ ಕಾಡುತ್ತಿರಲು ನಿನ್ನ ಆಕರ್ಷಣೆ ಕಾರಣವಾಯಿತೇ?

( ಲೇಖನ- 110 ) ಪೂರ್ಣ ಚಂದಿರನ ಬೆಳಕಿನೊಳು ನಿನ್ನ ಸುಂದರ ಮೊಗವ ಕಾಣುವ ತವಕ ಚಂದಿರನ ಆಯುಷ್ಯದಷ್ಟು ನನ್ನ ಪ್ರೀತಿ ನಿನ್ನ ಜೊತೆಯಲಿರಲಿ, ದಿನದ 24 ಗಂಟೆಯ ಪ್ರತೀ ನಿಮಿಷ ನಿನ್ನ ಪ್ರೀತಿಯ ನಗು ಮೊಗವ ಕಾಣಲು  ಆಸೆಎನಗೆ , ನಿನ್ನಲಿರುವ ಆಕರ್ಷಣೆಯು ನಿದ್ದೆಗೆಡಿಸುತ್ತಿದೆ, ಆ ನಗು, ಮಾತುಗಳು ಕಿವಿಯೊಳಗೆ ಗುನುಗುತ್ತಿವೆ, ನಿನ್ನ ಕಾಲ್ಗೆಜ್ಜೆ ಶಬ್ದದೊಳು ಸುಂದರ ನಡಿಗೆ ಭೂಮಿಯೇ ನಾಚುತ್ತಿರುವಾಗ ನನ್ನ ಹೃದಯದ ವೇಗ ಹೆಚ್ಚುತ್ತಿರಲು ಕಾರಣ ನಿನ್ನ ಆಕರ್ಷಣೆಯೇ ಸರಿ. ಬದುಕು ನಾಲ್ಕು ದಿನ ಜೀವನದ ಏರಿಳಿತ ಅಲ್ಲಿ ಕುಳಿತುಕೊಳ್ಳಬೇಕೋ ಇಲ್ಲಿ ಸಮಯ ವೆಂಬ ವೇಗ ಬಹಳಷ್ಟು ಬೇಗ ಓಡುತ್ತಿದೆ ನಿನ್ನ ಕನಸು ಕಾಣುತ್ತಲೇ...! ಬೇಲೂರ ಶೀಲಾಬಾಲೆಯು ನಿನ್ನ ನೋಡಿ ಕೆತ್ತಲಾಗಿದೆಯೋ, ರಂಬೆ ಊರ್ವಶಿಯ ಸೌಂದರ್ಯಕೆ ನಿನ್ನ ಸೌಂದರ್ಯ, ಸಮನಾಗಿ ಕಾಡುತ್ತಿರುವ ಹೊಸ ಕನಸುಗಳ ಸುರಿಮಳೆ ದಿನ ಬಿಡದೆ ಕಾಡುತ್ತಿರಲು ನಿನ್ನ ಆಕರ್ಷಣೆ ಕಾರಣವಾಯಿತೇ?         ಸಮ್ಮಿಲನದ ಆಕರ್ಷಣೆ, ನಿನ್ನ ಸೇರಲು ಬಯಕೆ, ಎತ್ತಿ ಮುತ್ತನೀಯಲು, ಸುತ್ತಿ ಬಿಗಿದಪ್ಪಿಕೊಳ್ಳಲು ಆ ಕೆಟ್ಟ ದೃಷ್ಟಿ ಬೀಳದಿರಲಿ, ಮಗುವಿನ ನಗುವಿಗೆ, ಪ್ರಣಯದ ಆಸೆಗೆ, ಎದುರಾಗದಿರಲಿ ಕರಿ ಮೋಡ, ಕಾಮನಬಿಲ್ಲಿನ ಬಣ್ಣಕ್ಕೆ ಮರುಳಾಗಿ ಕುಣಿಯುವ ನವಿಲಿನಂತೆ, ವಸಂತ ಋತುವಿನ ಕೋಗಿಲೆಯ ಸ್ವರ ಮಾಧುರ್ಯ ನಿನ್ನ ಕಂಠದೊಳು ಹೊರ ಹೊಮ್ಮತ್ತಲೇ ಹಾಯಾಗಿ ಜೋಗುಳವ ಹಾಡಿ ಮಲಗಿಬಿಡುವೆ ಮಗುವಂತೆ. ಪ್ರಪಂಚದ ಅತೀ ಹೆಚ್ಚು ಬೆಳೆಯುಳ್ಳ ವಸ

(ಲೇಖನ -109) ಗ್ರಂಥಾಲಯ, ಈ ಗ್ರಂಥಾಲಯ ಎಂಬ ಶಬ್ದವನ್ನು ಕೇಳುವಾಗಲೇ ಮೈ ನವಿರೇಳುವುದು ಗ್ರಂಥದ ಆಲಯ

Image
 (ಲೇಖನ -109) ಗ್ರಂಥಾಲಯ, ಈ ಗ್ರಂಥಾಲಯ ಎಂಬ ಶಬ್ದವನ್ನು ಕೇಳುವಾಗಲೇ ಮೈ ನವಿರೇಳುವುದು ಗ್ರಂಥದ ಆಲಯ - ಗ್ರಂಥಾಲಯ, ಸಾವಿರಾರು ಕವಿಗಳ, ವಿಜ್ಞಾನಿಗಳ, ಇತಿಹಾಸಕಾರರ, ತಂತ್ರಜ್ಞಾನ, ಕೃಷಿ, ಸಂಸ್ಕೃತಿ , ಧರ್ಮಗಳನ್ನು ಕಲಿಯುವ ಏಕೈಕ ಸ್ಥಳ ಗ್ರಂಥಾಲಯ. ಗ್ರಂಥಾಲಯವೆಂಬುವುದು ದೇವಾಲಯಕ್ಕಿಂತಲೂ ಮಿಗಿಲು, ನಮ್ಮ ಬದುಕಿನ ಉತ್ತಮವಾದ ದಿನಗಳನ್ನು ಕಾಣಬೇಕಿದ್ದರೆ ಪುಸ್ತಕಗಳನ್ನು ಓದಬೇಕು, ಪ್ರಪಂಚವನ್ನು ತಿಳಿಯಬೇಕಿದ್ದರೆ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಂಡರೆ ಬದುಕಿನ ಕಷ್ಟದ ಸ್ಥಿತಿಯನ್ನು ಮತ್ತು ಉತ್ತಮ ಸ್ಥಿತಿಯನ್ನು  ಒಂದೇ ರೀತಿಯಲ್ಲಿ ನೋಡಿಕೊಳ್ಳುವ ಶಕ್ತಿಯನ್ನು ಯುಕ್ತಿಯನ್ನೂ ಪಡೆಯಲು ಸಾಧ್ಯವಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಎಲ್ಲರಲ್ಲೂ ಇರುವುದಿಲ್ಲ, ನಮ್ಮ ಶಾಲಾ ಕಾಲೇಜುಗಳಲ್ಲಿ ಓದುವ ಪುಸ್ತಕ ಮತ್ತು ಜ್ಞಾನವೃದ್ಧಿಗೊಳಿಸುವ ಪುಸ್ತಕಗಳಿಗೆ ತುಂಬಾನೇ ವ್ಯತ್ಯಾಸಗಳಿರುತ್ತವೆ. ನಮ್ಮ ತರಗತಿಯಲ್ಲಿ ಓದುವ ಪಾಠವು ಹೆಚ್ಚಾಗಿ ಉದ್ಯೋಗನಿಮಿತ್ತ ಮತ್ತು ಸಂಪಾದನೆಯ ಮಾರ್ಗದರ್ಶನ ಮತ್ತು ಅಲ್ಪ ಸ್ವಲ್ಪ ಇತಿಹಾಸ, ತಂತ್ರಜ್ಞಾನವನ್ನು ಕಲಿಸಿಕೊಡುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಮೇಧಾವಿ ಎಂಬ ಸ್ಥಾನಕ್ಕೆ ಹೋಗಬೇಕಾದರೆ ಅವನು ತನ್ನ ಜೀವನ ಪಾಠಕ್ಕಿಂತಲೂ ಜಾಸ್ತಿಯಾಗಿ ಅತೀ ಉತ್ತಮವಾದ ಪುಸ್ತಕಗಳನ್ನು ಓದಬೇಕು, ಉತ್ತಮವಾದ ಪುಸ್ತಕವನ್ನು ಓದಿದಾಗ ಜ್ಞಾನ ವೃದ್ಧಿಯಾದಂತೆ ಅವನ ಗುಣ ನಡತೆ ಶಕ್ತಿ ಯುಕ್ತಿ, ತೇಜಸ್ಸು ಎಲ್ಲವ

ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ,

Image
✍️Madhav. K. Anjar  (ಲೇಖನ-108) ಭಾರತವೆಂದರೆ  ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ, ಭಾರತವೆಂದರೆ ಭವ್ಯ ಪರಂಪರೆ, ಕೌಶಲ್ಯ, ವಿಜ್ಞಾನ. ಭಾರತವೆಂದರೆ ಒಗ್ಗಟ್ಟು, ಎಲ್ಲವನ್ನು ಪಡೆದಿರುವ ಭಾರತೀಯರು ಜಗತ್ತಿಗೆ ಸಂಪತ್ತು, ಜಗತ್ತಿನಲ್ಲಿ ಇನ್ನೊಬ್ಬರನ್ನು ನೋಯಿಸದೆ ಬದುಕುವ ರಾಷ್ಟ್ರವೆಂದರೆ ಭಾರತವೊಂದೆ, ಇತಿಹಾಸದಲ್ಲಿ ಭಾರತೀಯರ ಮೇಲೆ ದಬ್ಬಾಳಿಕೆಗಳಾದ ಉದಾಹರಣೆ ಸಾಕಷ್ಟಿದೆ ಆದರೆ ಭಾರತೀಯರು ಆಕ್ರಮಣ ಮಾಡಿರುವ ಯಾವ ಇತಿಹಾಸದಲ್ಲೂ ಇಲ್ಲ. ಅದಕ್ಕೆ ಕಾರಣ ನಮ್ಮಲ್ಲಿರುವ ಸಂಸ್ಕೃತಿ, ಬಾಂಧವ್ಯ, ಮತ್ತು ವಿವೇಚನೆ ಎಲ್ಲವೂ ಭಾರತೀಯ ಮಣ್ಣಲ್ಲಿ ಉತ್ತಮ ರೀತಿಯಲ್ಲಿ ಬೇರೂರಿದೆ. ಸರ್ವಧರ್ಮದವರು ಕೂಡಿ ಒಗ್ಗೂಡಿ ಬಾಳುವ ಏಕೈಕ ದೇಶ ನಮ್ಮ ಭಾರತ.        ಭಾರತೀಯರ  ಶಕ್ತಿಯನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ, ಭಾರತದ ವಿಜ್ಞಾನ, ಬುದ್ದಿವಂತಿಕೆಯನ್ನು ಪಡೆಯಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಜಗತ್ತಿನಲ್ಲಿ ವಿಜ್ಞಾನ ಎಷ್ಟು ಮುಂದುವರಿದಿದ್ದರೂ ಭಾರತೀಯರಿಲ್ಲದ ವಿಜ್ಞಾನನಕ್ಕೆ ಬೆಲೆಯಿಲ್ಲ. ಹಾಗಾಗಿ ಭಾರತ ದೇಶದ ಬಗ್ಗೆ ಅಸೂಯೆಪಡುವ ಕೆಲವರು ಆಂತರಿಕ ಮತ್ತು ಬಾಹ್ಯ ದುಷ್ಟರ ಸಹಾಯದೊಂದಿಗೆ ಭಾರತವನ್ನು ನಾಶಮಾಡಲು ಶ್ರಮಿಸುತ್ತಿದ್ದಾರೆ. ಇಲ್ಲಿ ಉದ್ದೇಶಗಳು ಬೇರೆ ಬೇರೆ. ಭಾರತದ ಉನ್ನತಿಯನ್ನು ಬಯಸುವ ಜನರ ಸಂಖ್ಯೆಯನ್ನು ಕಡಿಮೆಗೊಳಿಸಲು ಶತಮಾನದಿಂದಲೂ ಶ್ರಮಿಸಿ ಸುಸ್ತಾಗಿ ಹೋಗ

(ಲೇಖನ -107)ಕೊರೋನ ಕಾಲದಲ್ಲಿ ಮನೆಯಿಂದ ಕಿತ್ತೊಗೆಸೆದ ಕೇಬಲ್ ಇಂದಿಗೂ ಇಲ್ಲ ಕಾರಣವಷ್ಟೇ, ನಮ್ಮನ್ನು ಅತಿಯಾಗಿ ಭಯಗೊಳಿಸಿ ದಿನಾಲೂ ಸಾಯಿಸುತ್ತಿದ್ದ TV

Image
✍️Madhav. K. Anjar  (ಲೇಖನ -107) ಮೂರ್ಖರ ಪೆಟ್ಟಿಗೆಯೆಂದು ಕರೆಯಲ್ಪಡುವ (TV)ಯನ್ನು ನೋಡುವುದನ್ನೇ ಬಿಟ್ಟಿದ್ದೇನೆ! ಯಾಕೆಂದರೆ ನನ್ನನ್ನು ಇನ್ನಷ್ಟು ವಿಶ್ರಾಂತಿಇಲ್ಲವಾಗಿಸುವುದು ಬೇಡವೆಂದು, ನಮ್ಮ ಇಂದಿನ ಮಾಧ್ಯಮಗಳು ವಿಷಯಗಳನ್ನು ಖಾರ ಪುಡಿ ಮಸಾಲಾ ಹಾಕಿ ರುಬ್ಬುತ್ತಾ ವೀಕ್ಷಕರ ಒಳ್ಳೆಯ ಮನಸ್ಸನ್ನು ವಿಕಾರಗೊಳಿಸಿ ಒಂದಷ್ಟು ಅವಿವೇಕಿಗಳನ್ನು ತನ್ನ ಕ್ಯಾಮೆರ ಮುಂದೆ ಕೂರಿಸಿ ವಿಚಾರವಲ್ಲದ ವಿಚಾರಗಳನ್ನು ಗಂಟೆಗಟ್ಟಲೆ ಮಾತನ್ನಾಡಿ ಸ್ವಲ್ಪ ದಿನ ಜಾಸ್ತಿ ಬದುಕುವವರನ್ನು ಬೇಗನೆ ಮುಗಿಸಿಬಿಡುವ ತಾಕತ್ತು  ಕೆಲವು TV ಮಾಧ್ಯಮಗಳಿಗೆ ಇದೆ. ತನ್ನ ಜಾತಿಗಾಗಿ, ಧರ್ಮಕ್ಕಾಗಿ, ಪಕ್ಷಕ್ಕಾಗಿ ಮತ್ತು ಬೆಂಬಲಿಗರಿಗಾಗಿ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತ ಮಕ್ಕಳಿಂದ ಹಿರಿಯರವರೆಗಿನ ಮನಸ್ಸನ್ನು ಹಾಳು ಮಾಡುತ್ತಿರುವ ಮಟ್ಟಿಗೆ ಬೆಳೆದು ಹೋಗಿದೆ. ಹತ್ತಿಪ್ಪತು ವರುಷದ ಹಿಂದೆ ಮಾಧ್ಯಮಗಳಿಗೆ ಅದರದ್ದೇ ಆದ ನಿಯಮಗಳಿತ್ತು ಆ ನಿಯಮಗಳನ್ನು ಜನರ ಒಳಿತಿಗಾಗಿ ಪಾಲಿಸುತಿದ್ದ ಚಾನೆಲ್ಗಳು ಇಂದು ಬರೇ ಹಣ ಸಂಪಾದನೆಯ ಗುರಿಯೊಂದಿಗೆ ಸತ್ಯವನ್ನು ಸುಳ್ಳಾಗಿಸಿ, ಸುಳ್ಳನ್ನು ಸತ್ಯವಾಗಿಸಿ ಬಿತ್ತರಿಸುವ ಕೆಲಸವನ್ನು ಮಾಡುತ್ತ ತನ್ನ ಹೊಟ್ಟೆಯನ್ನು ತುಂಬಿಸುತ್ತ ಇದ್ದಾರೆ.       ಕೊರೋನ ಕಾಲದಲ್ಲಿ ಮನೆಯಿಂದ ಕಿತ್ತೊಗೆಸೆದ ಕೇಬಲ್ ಇಂದಿಗೂ ಇಲ್ಲ ಕಾರಣವಷ್ಟೇ, ನಮ್ಮನ್ನು ಅತಿಯಾಗಿ ಭಯಗೊಳಿಸಿ ದಿನಾಲೂ ಸಾಯಿಸುತ್ತಿದ್ದ TV ಮಾಧ್ಯಮ ಮ

(ಲೇಖನ -106)ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಆಹಾರಗಳಲ್ಲಿ ಕಲಬೆರಕೆ ಮತ್ತು ರಾಸಾಯನಿಕ ಸಿಂಪಡಿಸಿ ಬೆಳೆಸಿದ ಮತ್ತು ಶೇಖರಣೆ ಮಾಡಿರುವ ಆಹಾರವನ್ನು ನಮಗೆ ತಿಳಿದು ಮತ್ತು ತಿಳಿಯದೆ ದಿನದಿಂದ ದಿನಕ್ಕೆ ವಿಷವನ್ನು ತಮ್ಮ ಹೊಟ್ಟೆಗೆ ಸೇವಿಸಿ ಕೆಲವು ಸಂಧರ್ಭ

Image
✍️Madhav. K. Anjar  (ಲೇಖನ -106) ಎಲ್ಲವೂ ಇದ್ದು ಆರೋಗ್ಯ ಇಲ್ಲದೇ ಹೋದರೆ ನಾವು ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ . .ಆರೋಗ್ಯವೇ ಭಾಗ್ಯ ಆರೋಗ್ಯಕ್ಕಿಂತ ಮಿಗಿಲಾದದ್ದು ಬೇರೇನೂ ಇಲ್ಲ ಅಲ್ಲವೇ ? ನಾವು ಅಥವಾ ನಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಗಳು ಎದುರಾದಾಗ ನಾವು ಮಾನಸಿಕವಾಗಿ,ದೈಹಿಕವಾಗಿ,ಮತ್ತು ಆರ್ಥಿಕವಾಗಿ ಬಹಳಷ್ಟು ಕುಗ್ಗಿಹೋಗುತ್ತೇವೆ . ಇಂದಿನ ದಿನಗಳ ಆಹಾರ ಪದ್ದತಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಾಧನೆ ಆಗಿರುತ್ತದೆ . ನಮಗರಿವಿಲ್ಲದಂತೆ ಎದುರಾಗುವ ಆರೋಗ್ಯ ಸಮಸ್ಯೆಗಳು ದಿನ , ತಿಂಗಳು, ಮತ್ತು ವರ್ಷಾನುಗಟ್ಟಲೆ ನಮ್ಮನ್ನು ಕೊಳೆಯುವಂತೆ ಮಾಡುತ್ತದೆ . ಬದುಕಿನುದ್ದಕೂ ಉತ್ತಮ ಆರೋಗ್ಯ ಕೊಟ್ಟು ನಮ್ಮನ್ನು ಕಾಪಾಡು ದೇವರೇ ಎಂದು ಬೇಡಿಕೊಳ್ಳುವ ನಾವೆಲ್ಲರೂ , ನಮ್ಮ ಆಹಾರ ಪದ್ಧತಿ ಮತ್ತು ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಯಾವ ರೀತಿಯಯಲ್ಲಿ ಕಾಳಜಿಯನ್ನು ವಹಿಸುತ್ತೇವೆ ಅನ್ನುವುದು ತಿಳಿದುಕೊಳ್ಳಬೇಕಾಗಿದೆ .           ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಆಹಾರಗಳಲ್ಲಿ ಕಲಬೆರಕೆ  ಮತ್ತು ರಾಸಾಯನಿಕ ಸಿಂಪಡಿಸಿ ಬೆಳೆಸಿದ ಮತ್ತು ಶೇಖರಣೆ ಮಾಡಿರುವ ಆಹಾರವನ್ನು ನಮಗೆ ತಿಳಿದು ಮತ್ತು ತಿಳಿಯದೆ ದಿನದಿಂದ ದಿನಕ್ಕೆ ವಿಷವನ್ನು ತಮ್ಮ ಹೊಟ್ಟೆಗೆ ಸೇವಿಸಿ ಕೆಲವು ಸಂಧರ್ಭದಲ್ಲಿ ನಮ್ಮ ಜೀರ್ಣಾಂಗ ಮತ್ತು ದೇಹದ ಪ್ರಮುಖ ಭಾಗವನ್ನೇ ನಿಷ್ಕ್ರಿಯಗೊಳಿಸಿ ಹಾಸಿಗ

(ಲೇಖನ -105)ಅದೆಷ್ಟು ಜಾಗರೂಕರಾಗಿ ನಡೆಸಿದ ಮದುವೆ ಕೂಡ ಒಂದೆರಡು ತಿಂಗಳಲ್ಲಿ ವಿಚ್ಚೇದನ ಆಗಿರುವ ನಿದರ್ಶನ ಅತಿಯಾಗಿ ಇದೆ, ಯಾವುದೇ ಜಾತಕ ಆಡಂಬರವಿಲ್ಲದೆ ನಡೆಸಿದ ಮದುವೆ ದೀರ್ಘ ಕಾಲ ಉಳಿದ ಉದಾಹರಣೆ ಕೂಡ ಇವೆ.

Image
(ಲೇಖನ -105), ಮದುವೆಯ ವಯಸ್ಸಿಗೆ ಬಂದ ಗಂಡು, ಕಾಣುವ ಕನಸುಗಳು ಸಾವಿರಾರು, ನಾನು ಮದುವೆ ಯಾಗುವ ಹೆಣ್ಣು ಸಿರಿವಂತಳು, ಸುಂದರಿಯಾಗಿರಬೇಕು, ಅವಳ ಕಣ್ಣುಗಳು ಜಿಂಕೆಯ ಕಣ್ಣಿನಂತೆ ಇರಬೇಕು, ಮೈಕಟ್ಟು ಬೇಲೂರ ಶಿ ಲಾಬಾಲಿಕೆಯಂತಿರಬೇಕು, ಬೆಳಗ್ಗಿನಿಂದಲೂ ರಾತ್ರಿಯವರೆಗೂ ಮುದ್ದಾಡಿ ನನ್ನ ಪ್ರತೀ ಆಸೆಯನ್ನು ಈಡೇರಿಸುವಂತೆ ಇರಬೇಕು, ನಾನು ಹೇಳಿದ್ದನೆಲ್ಲ ಕೇಳಿ ನನ್ನ ಸೇವೆಯನ್ನು ಮಾಡಬೇಕು ಹೀಗೆ ಹತ್ತು ಹಲವು ಕನಸುಗಳ ಪಟ್ಟಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುವ ವಧು ವರರು,    ಹೆಣ್ಣುಮಕ್ಕಳ ಕನಸುಗಳು, ನನ್ನ ಜೀವನ ಸಂಗಾತಿ ನನ್ನ ಮಾತನ್ನು ಕೇಳಿ ನನ್ನನ್ನು ಪ್ರೀತಿಯಿಂದ ನೋಡಬೇಕು, ನನಗೆ ಬೇಕಾದ ಬಂಗಾರ, ಹಣ, ಕಾರು, ಬಂಗಲೆ ಎಲ್ಲವನ್ನೂ ಹೊಂದಿರಬೇಕು, ನನ್ನ ಮೊಗದಲ್ಲಿ ನಗು ಬರಿಸುವ, ಸುಂದರ ಮೈಕಟ್ಟು, ಒಳ್ಳೆಯ ಬುದ್ದಿ, ವಿದ್ಯಾವಂತನು ಆಗಿರಬೇಕು, ನನ್ನನ್ನು ಗೌರವಿಸಿ ರಾಣಿಯಂತೆ ನೋಡಿಕೊಳ್ಳುವವನಾಗಿರಬೇಕು. ಸ್ವಂತ ಮನೆ ಹೊಂದಿರಬೇಕು, ಹೀಗೆ ವಿವಿಧ ತರಹದ ಬೇಕುಗಳ ಪಟ್ಟಿಯಿಂದ ಜೀವನ ಸಂಗಾತಿಯನ್ನು ಹುಡುಕುತ್ತಾರೆ ಮತ್ತು ಮದುವೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ದುಷ್ಟ ಚಟಗಳಿಲ್ಲದೆ ಇದ್ದರೆ ಸಾಕು, ಇನ್ನೊಬ್ಬರ ಸಹವಾಸ ಮಾಡದೇ ಇದ್ದರೆ ಸಾಕು, ಆರೋಗ್ಯ, ನಮ್ಮ ಕುಟುಂಬ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಂಗಾತಿ ಸಿಕ್ಕಿದರೆ ಸಾಕು. ಆಸೆಗಳ ಪಟ್ಟಿಯಲ್ಲಿ ತನ್ನನ್ನು ದೂರವಿಟ್ಟು ನಗುವಿನ ಸಂಸಾರ ನಮ್ಮದಾಗಿರಲಿ ಎಂದು ಬಯಕುವ ಅನ

ಪ್ರಯಾಣಿಕರಿಗಾಗಿ ಹೊಸ ಸೇವೆಯ ಆರಂಭದೊಂದಿಗೆ ಸಾಗರ ಟ್ರಾನ್ಸ್ಪೋರ್ಟ್ - ಕುಂದಾಪುರದಿಂದ - ಬೆಂಗಳೂರಿಗೆ

Image
 ಪ್ರಯಾಣಿಕರಿಗಾಗಿ  ಹೊಸ ಸೇವೆಯ ಆರಂಭದೊಂದಿಗೆ  ಸಾಗರ ಟ್ರಾನ್ಸ್ಪೋರ್ಟ್ - ಕುಂದಾಪುರದಿಂದ - ಬೆಂಗಳೂರಿಗೆ. ನಮ್ಮ ನಿಮ್ಮೆಲ್ಲರ ನೆಚ್ಚಿನ ಶ್ರೀಯುತ ಗೋಕುಲ್ ದಾಸ್ ಭಟ್  ರವರ ಕನಸಿನ ಕೊಡುಗೆ ಸಾಗರ ಟ್ರಾನ್ಸ್ಪೋರ್ಟ್ ಆರಂಭಗೊಂಡಿದ್ದು ಪ್ರಯಾಣಿಕರು ಇದರ ಸದುಪಯೋಗಪಡೆದುಕೊಂಡು ಪ್ರೋತ್ಸಾಹಿಸಿ ತಮ್ಮ ಸುಖಮಯ ಪ್ರಯಾಣವನ್ನು ಮಾಡಬಹುದು.    ಪ್ರಯಾಣಿಕರ ಕೋರಿಕೆಯ ಮೇರೆಗೆ ಕುಂದಾಪುರ -ಕಾರ್ಕಳ - ಬೆಳ್ತಂಗಡಿ - ಧರ್ಮಸ್ಥಳ ಈ ಮಾರ್ಗವಾಗಿ ಸಂಚಾರಿಸುವ ಈ ಬಸ್ಸು ಸುಂದರ ವಿನ್ಯಾಸ ಮತ್ತು ಉತ್ತಮವಾದ ಸೇವೆಯೊಂದಿಗೆ ತನ್ನ ಹೊಸ ಹೆಜ್ಜೆಯನ್ನಿಟ್ಟಿದೆ, ಪ್ರಯಾಣಿಕರು www.sagartransport.co ಈ ವೆಬ್ಸೈಟ್ ನಲ್ಲಿ ಅಥವಾ 8989532929, 8989512929 ಈ ಮೊಬೈಲ್ ನಂಬರ್ ಮುಖಾಂತರ ತಮ್ಮ ಸೀಟನ್ನು ಕಾಯ್ದಿರಿಸಿಕೊಳ್ಳಬಹುದು.      ನಮ್ಮೂರಿಗೆ ಹೊಸ ಮೆರುಗನ್ನು ನೀಡುವ ಸಾಗರ್ ಟ್ರಾನ್ಸ್ಪೋರ್ಟ್ ಜನರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಕೊಡಲು ಸನ್ನದ್ಧವಾಗಿದೆ. ಈ ಬಸ್ಸು  AC ಸ್ಲೀಪರ್ ಕೋಚ್ ವ್ಯವಸ್ಥೆ ಹೊಂದಿದ್ದು ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಹಲವಾರು ವರುಷದ ಬಸ್ ಸೇವೆಯ ಅನುಭವದೊಂದಿಗೆ ಬೆಂಗಳೂರಿಗೆ ಮೊದಲ ಹೆಜ್ಜೆಯನಿತ್ತು ಪ್ರಯಾಣಿಕರ ಕನಸನ್ನು ನನಸು ಮಾಡಲಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲಿಚ್ಚಿಸುವವರು ದಯವಿಟ್ಟು ಸಂಪರ್ಕಿಸಿ.        

(ಲೇಖನ -104)ಭಾರತೀಯರನ್ನು ಹೆಚ್ಚಾಗಿ ಪ್ರೀತಿಸುವ ಕುವೈಟ್ ಪ್ರಜೆಗಳು, ಕಾರಣ ಭಾರತೀಯರಲ್ಲಿ ನಂಬಿಕೆ ಮತ್ತು ಕ್ರಿಮಿನಲ್ ಚಟುವಟಿಗಳ ಜನರ ಸಂಖ್ಯೆ ಕಡಿಮೆ ಮತ್ತು ಮಾತಿಗೆ ಬೆಲೆ ಕೊಟ್ಟು ನಡೆಯುವ ಜನರು ಎಂಬ ಭಾವನೆ ಇಲ್ಲಿಯ ಜನತೆಯಲ್ಲಿದೆ

Image
✍️Madhav. K. Anjar (ಕೆಲವು ಮಾಹಿತಿಯನ್ನು ಜಾಲತಾಣದಲ್ಲಿ ಸಂಗ್ರಹಣೆ ಮಾಡಲಾಗಿದೆ )  (ಲೇಖನ -104) ಇಸವಿ 2022ರ ಜನನಗಣತಿಯ ಪ್ರಕಾರ  , ಕುವೈತ್ 4.45 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಅದರಲ್ಲಿ 1.45 ಮಿಲಿಯನ್ ಜನರು ಕುವೈಟ್ ಪ್ರಜೆಗಳು ಮತ್ತು ಉಳಿದ 3.00 ಮಿಲಿಯನ್ ಜನರು 100 ಕ್ಕೂ ಹೆಚ್ಚು ದೇಶಗಳ ವಿದೇಶಿ ಪ್ರಜೆಗಳು.  ಕುವೈತ್ ವಿವಿಧ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿದೆ,  ಕುವೈತ್‌ನ ಜನರು ಸಾಹಿತ್ಯ, ರಂಗಭೂಮಿ, ಸಂಗೀತ, ನೃತ್ಯ, ಚಲನಚಿತ್ರಗಳು ಅಥವಾ ಸಮಕಾಲೀನ ಕಲೆಗಳ ಬಗ್ಗೆ ವಿಶೇಷ ಪ್ರೀತಿ ಯನ್ನು   ಹೊಂದಿದ್ದಾರೆ. ಭಾರತವು ಕುವೈಟ್ ದೇಶಕ್ಕೆ ಉತ್ತಮವಾದ ಇಂಜಿನಿಯರ್, ಡಾಕ್ಟರ್, ಮತ್ತು ಅನೇಕ ರೀತಿಯ ಕೆಲಸಗಾರರನ್ನು ಕೊಟ್ಟಿದ್ದು ಭಾರತೀಯರು ತನ್ನ ಕುಟುಂಬಕ್ಕಾಗಿ ಕರ್ಮಭೂಮಿಯಲ್ಲಿ ದುಡಿದು ಆರ್ಥಿಕವಾಗಿ ದೇಶಕ್ಕೆ ಆಧಾರವಾಗಿದ್ದಾರೆ. ಸಣ್ಣ ಮಟ್ಟದ ಕೆಲಸಾಗರರಿಂದ ಹಿಡಿದು ದೊಡ್ಡ ಹುದ್ದೆ ಮತ್ತು ಅನೇಕ ಕಂಪನಿಗಳನ್ನು ಭಾರತೀಯರು ಕುವೈಟ್ ದೇಶದ ಪ್ರಜೆಗಳೊಂದಿಗೆ ಸೇರಿ ನಡೆಸುತ್ತಿದ್ದಾರೆ. ಅನೇಕ ಜನರು ಉತ್ತಮ ಹಣಗಳಿಸಿ ಬದುಕು ಕಟ್ಟಿಕೊಂಡು ಜೀವಿಸುತ್ತಿದ್ದಾರೆ. ಸುಮಾರು ಇಪ್ಪತ್ತು ವರುಷಗಳ ಅವಧಿಯಲ್ಲಿ ಕುವೈಟ್ ದೇಶವು ರಸ್ತೆ ಪಟ್ಟಣಗಳಿಂದ ಅಭಿವೃದ್ಧಿ ಪಥಕ್ಕೆ ಸಾಗಿದೆ. ಅನೇಕ ಭಾರತೀಯ ಶಾಲೆಗಳು ಮತ್ತು ಭಾರತೀಯ ಸಂಸ್ಕೃತಿ ಕಾರ್ಯಕ್ರಮ ನಡೆಸುವ ಅನೇಕ ಸಂಘಟನೆಗಳು ಶಿಸ್ತುಬದ್ದವಾಗಿ ಕುವೈಟ್ ನೆಲದ ಜನರಿಗೆ ಗೌರವಿಸುತ್

ಆಕರ್ಷಣೆ

ನಿನ್ನ ತುಟಿಗಳು ನನ್ನ ತ್ವಚೆಗೆ.... ಆಯಸ್ಕಾಂತವಾಗಿದೆ ಈ ರೀತಿ ಪ್ರೀತಿಸುವುದು  ಅಪರೂಪವೇ ಅನಿಸುತ್ತಿದೆ ಅದಕ್ಕಾಗಿಯೇ ನಾನು " ನಿನಗಾಗಿ ಹಂಬಲಿಸಿದೆ, ಗುರುತಿಸಲಾಗದ ಆನಂದವ ಕಳೆದುಕೊಳ್ಳುವ ಭಯ ನಿನ್ನ ಪ್ರೀತಿಯ ಪ್ರತಿಕ್ರಿಯೆ ನನಗೆ ಸಿಗುವ ಜಯ  ರಥ ಚಕ್ರ  ಮುಂದುವರಿದಂತೆ  ಹೃದಯದಲಿ ನೀ ನಡೆವೆ! ಬಹುಶಃ ಈ ಸಮಯವು ಹೊಸ ಆರಂಭವಾಗಿದೆ ಆಕರ್ಷಣೆ ನಿನ್ನಲಿ  ನಿನಗಾಗಿ ನಾ ಕಾಯುವೆ ಮುದ್ದಾಡುವೆ.... ಹಗಲಿರುಳು ಕಾಯುವೆ.          ✍️ಮಾಧವ. ಕೆ. ಅಂಜಾರು 

(ಲೇಖನ -103) ಗನ್ ಹಿಂಸೆಯು US ನಲ್ಲಿ ಅಕಾಲಿಕ ಮರಣಕ್ಕೆ ಪ್ರಮುಖ ಕಾರಣವಾಗಿದೆ 38,000 ಕ್ಕಿಂತ ಹೆಚ್ಚು ಜನರನ್ನು ಕೊಲ್ಲುತ್ತದೆ ಮತ್ತು ಪ್ರತಿ ವರ್ಷ ಸುಮಾರು 85,000 ಗಾಯಗಳನ್ನು ಉಂಟುಮಾಡುತ್ತದೆ

Image
✍️Madhav. K. Anjar  (ಲೇಖನ -103)  ಗನ್ ಹಿಂಸೆಯು US ನಲ್ಲಿ ಅಕಾಲಿಕ ಮರಣಕ್ಕೆ ಪ್ರಮುಖ ಕಾರಣವಾಗಿದೆ 38,000 ಕ್ಕಿಂತ ಹೆಚ್ಚು ಜನರನ್ನು ಕೊಲ್ಲುತ್ತದೆ ಮತ್ತು ಪ್ರತಿ ವರ್ಷ ಸುಮಾರು 85,000 ಗಾಯಗಳನ್ನು ಉಂಟುಮಾಡುತ್ತದೆ. ಗನ್ ವಯಲೆನ್ಸ್ ಆರ್ಕೈವ್ ಪ್ರಕಾರ, ಈ ವರ್ಷ USನಾದ್ಯಂತ 470 ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ, ಇದು ಸಾಮೂಹಿಕ ಗುಂಡಿನ ದಾಳಿಯನ್ನು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗಾಯಗೊಂಡ ಅಥವಾ ಕೊಲ್ಲಲ್ಪಟ್ಟ ಘಟನೆ ಎಂದು ವ್ಯಾಖ್ಯಾನಿಸುತ್ತದೆ. ಅಂಕಿಅಂಶಗಳ ಪ್ರಕಾರ ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಗುಂಡಿನ ದಾಳಿಗಳನ್ನು ಒಳಗೊಂಡಿವೆ. ಕೆಲವು ಮೂಲಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಪ್ರತಿಯೊಂದಕ್ಕೂ 600 ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ - ಸರಾಸರಿ ದಿನಕ್ಕೆ ಎರಡು. ಯುನೈಟೆಡ್ ಸ್ಟೇಟ್ಸ್ ವಿಶ್ವದ ಜನಸಂಖ್ಯೆಯ 4% ಅನ್ನು ಹೊಂದಿದೆ, ಆದರೆ ಅದರ ನಾಗರಿಕರು ವಿಶ್ವದ ಬಂದೂಕುಗಳಲ್ಲಿ ಸುಮಾರು 40% ಅನ್ನು ಹೊಂದಿದ್ದಾರೆ. "329 ಮಿಲಿಯನ್ ಜನರಿರುವ ದೇಶದ ಬೀದಿಗಳಲ್ಲಿ 390 ಮಿಲಿಯನ್ ಬಂದೂಕುಗಳಿವೆ"  ಯುನೈಟೆಡ್ ಸ್ಟೇಟ್ಸ್ನಲ್ಲಿ ನಾಗರಿಕ-ಮಾಲೀಕತ್ವದ ಬಂದೂಕುಗಳ ಇತ್ತೀಚಿನ ಅಧ್ಯಯನವು ಹೇಳುತ್ತಿದೆ .  ಗನ್ ಮಾಲೀಕತ್ವದ ದರಗಳು ದೇಶಾದ್ಯಂತ ಗಮನಾರ್ಹವಾಗಿ ಬದಲಾಗುತ್ತವೆ,  ಪ್ರತಿ 100 ಜನರಿಗೆ 120.5 ಬಂದೂಕುಗಳೊಂದಿಗೆ ಯುನೈಟೆಡ್ ಸ್ಟೇಟ್ಸ್ ಅತಿ

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

Image
✍️Madhav. K. Anjar ನನ್ನ ಹೃದಯ ಹಗುರಗೊಳಿಸಲಷ್ಟೇ..... ನೋವನ್ನು ಮರೆಸಿ ನನ್ನನ್ನು ನಾನು ಉಳಿಸುತ್ತ ಮಗುವಿನ ಅಗಲುವಿಕೆಯ ಸಾಂತ್ವನ ಬಿಟ್ಟು ಮತ್ತೇನು ಸಾಧ್ಯ ಭಗವಂತ 🙏🏿ಕ್ಷಮಿಸು.  (ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ! ನೀವೆಲ್ಲರೂ ಕ್ಷೇಮವಾಗಿರಿ, ದೇವರು ನನ್ನನ್ನು ಬಹಳವಾಗಿ ಇಷ್ಟಪಟ್ಟ ನನಗೆ ಆತನ ಪಾದ ಸೇರಲು ಅವಕಾಶ ಕೊಡಿ.... ನಾನೆಲ್ಲಿದ್ದರೂ ನಿಮ್ಮೊಳಗಿರುವೆ, ಬೇಸರ ಬೇಡ, ನನ್ನ ಅಪ್ಪ ಅಮ್ಮನ ಹೃದಯದಲ್ಲಿ ಹಾಯಾಗಿರುವೆ, ಅವರು ತಂದು ಕೊಟ್ಟ ಪ್ರತೀ ಉಡುಗೊರೆ, ಎಲ್ಲವೂ ನನಗೆ ತುಂಬಾ ಖುಷಿ ಕೊಟ್ಟಿದೆ,  ಆದರೇನು ಮಾಡಲಿ ದೇವರು ಸುಮಾರು ತಿಂಗಳ ಹಿಂದೆಯೇ ಬರಹೇಳುತಿದ್ದ,   ಬರಲಾರೆ ಎಂದು ಹೇಳಿದರೂ ಕೇಳಲಿಲ್ಲ ಕರೆದುಬಿಟ್ಟ. ಆ ಪುಟ್ಟ ಹೆಜ್ಜೆಗಳನ್ನೀಡುತ್ತ, ಅಂಗಳದಲ್ಲಿ ಅಣ್ಣ ತಮ್ಮ ತಂಗಿಯ ಜೊತೆಯಾಗಿ ಕಣ್ಣಮುಚ್ಚಾಲೆ, ಆಡಿದ ನೆನಪುಗಳು, ಅಪ್ಪ ಅಮ್ಮ ಗೆಳೆಯ ಗೆಳತಿಯರೊಂದಿಗೆ ಆಟವಾಡಿ ಸುಸ್ತಾಗಿ ರಾತ್ರಿ ಕನಸಲ್ಲೂ ನನ್ನ ಪ್ರೀತಿಯ ಎಲ್ಲರನ್ನು ನೋಡುತಿದ್ದೆ, ನಿಮ್ಮೆಲರ ನಗು ಆಶೀರ್ವಾದ ಚಿಕ್ಕ ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿಯಿತು. ನಾನೇನು ತೊಂದರೆ ಮಾಡಿದ್ದರೂ ಕ್ಷಮಿಸಿ...... ನನಗೆ ಕೊನೆಯ ಕ್ಷಣದಲ್ಲಿ ನೋವನ್ನು ತಡೆಯುವ ಶಕ್ತಿ ಆ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

Image
✍️Madhav. K. Anjar  (ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್.   ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ. ಅಂತರಾಷ್ಟ್ರೀಯ ಮಟ್ಟದಲ್ಲಿ ದನಿಯಾಗತೊಡಗಿದ ಸೌಜನ್ಯ ಪರ ನ್ಯಾಯ ಹೋರಾಟ. ಈ ಹಿಂದಿನ ಲೇಖನದಂತೆ ಕಲೆಯೊಂದು ಶಕ್ತಿ, ವಿವಿಧ ಕಲೆ ವಿವಿಧ ರೂಪದಲ್ಲಿ ಜನರನ್ನು ತಲುಪುತ್ತದೆ ಮತ್ತು ಜನರನ್ನು ರಂಜಿಸಿ, ಉತ್ತಮವಾದ ಸಂದೇಶವನ್ನು ಮನಸ್ಸಿಗೆ ಮುಟ್ಟುವಂತೆ ಮಾಡುತ್ತದೆ.       ಒಂದು ಸುಂದರವಾದ ಕುಟುಂಬದಲ್ಲಿನ ಪ್ರೀತಿ, ಪ್ರೇಮ ಮತ್ತು ಮೊಬೈಲ್ ಬಳಕೆಯೊಂದಿಗೆ ಭಗ್ನ ಪ್ರೇಮಿಯ ಬಲೆಯಲ್ಲಿ ಸಿಕ್ಕಿ ಒಂದು ದುರಂತ ಅಂತ್ಯ ಕಂಡ ಹೆಣ್ಣು. ಹೌದು ಇದೆಷ್ಟೋ ಮನೆಯಲ್ಲಿ ನಡೆಯುವ ಘಟನೆಗಳು, ಕೆಲವೊಂದು ಪ್ರೇಮ ಪ್ರಕರಣಗಳು ಸುಖ ಅಂತ್ಯ ಕಂಡರೂ, ಹಲವಾರು ಪ್ರೇಮ ಪ್ರಕರಣಗಳು ದುರಂತ ಅಂತ್ಯ ಕಂಡಿರೋ ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಿದೆ. ಪ್ರೀತಿಯ ಅಣ್ಣನ ಒಂದು ಮೊಬೈಲ್ ಕೊಡುಗೆ ತಂಗಿಯ ಜೀವನದಲ್ಲಿ ಬದಲಾವಣೆ, ಓದು ಬರಹ ಬದಿಗಿಟ್ಟು ಅಪರಿಚಿತನ ಪ್ರೇಮದ ಬಲೆಗೆ ಸಿಕ್ಕಿ ಕೊನೆಗೆ ಪ್ರೇಮಿಯಿಂದ ಮತ್ತು ಅವನ ಸ್ನೇಹಿತರಿಂದ ಅತ್ಯಾಚಾರ ಮತ್ತು ಹತ್ಯೆಯಾದ ಮುಗ್ದ

ಮುದ್ದಿನ ಚೆಂದುಳ್ಳಿ

ನಿನ್ನ ನೋಡಲು ಹಂಬಲವು ಎನಗೆ ನಿನ್ನ ಕಾಣಲು ಬಯಕೆಯು ಎನಗೆ ನೆನಪುಗಳ ಸೆರೆಯಲ್ಲಿ ಕನಸುಗಳ ಪುಟದಲ್ಲಿ ಹೃದಯದ ಮಾತುಗಳ ಆಲಿಸುವ ಸುಖವಿಲ್ಲಿ, ನಿನ ಕಣ್ಣುಗಳ ರೆಪ್ಪೆಯ ತುಂಟಾಟಕೆ ನಿನ್ನ ಹೆಜ್ಜೆಗುರುತುಗಳ ಹುಡುಕಾಟಕೆ ಚಡಪಡಿಕೆ ನನ್ನಲಿ ಬಳಿ ಬಂದು ನಿಲ್ಲೆಯ? ಮುದ್ದಿನ ಚೆಂದುಳ್ಳಿ!       ✍️ಮಾಧವ. ಕೆ. ಅಂಜಾರು