ತಿಂಗಳ ಬೆಳಕನು

ತಿಂಗಳ ಬೆಳಕನು
ನೋಡಲು ಅದೆಷ್ಟು ಆತುರ
ಆ ಚಂದಿರನ ಕಂಡಾಗಲೇ
ಮನಸೆಲ್ಲಾ  ಹಗುರ ,

ತಂಬಿಗೆ ನೀರನು ಕುಡಿಯಲು
ಅದೆಷ್ಟು ಆತುರ
ಹೊಟ್ಟೆತುಂಬಾ ಕುಡಿದಾಗ
ದಣಿವಾರಿತು ಬೇಗ.

ಇಂದಿನ ದಿನಗಳೆಲ್ಲಾ
ಮೊಬೈಲುಗಳೇ ಚಂದಿರ
ಹೊಟ್ಟೆ ಚುರುಗುಟ್ಟಿದರೂ
ಬೇಡವೇ ಬೇಡ , ಆಹಾರ,

ಬರ ಬರುತ್ತಲೇ
ಹಾಳಾಗುತ್ತಿದೆ ಸಂಸಾರ
ಕೆಲವೇ ವರುಷದಲ್ಲಿ
ಇಲ್ಲವಾದೀತು ಸಂಸ್ಕಾರ ...!
         - Madhavanjar...👍


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ