ನಿಮ್ಮ ಓಟು

ನಿಮ್ಮ ಓಟು
ನಾಯಕತ್ವ ಇರೋರಿಗೆ 
ಹಾಕಿ ಬನ್ನಿ
ಬರೀ ಕುರ್ಚಿಗಾಗಿ
ಒದ್ದಾಡೋ ನಾಲಯಕರಿಗೆ
ಕ್ಯಾಕರಿದು ಉಗಿದುಬನ್ನಿ

ನಿಮ್ಮ ಓಟು
ಸರಿಯಾದ ನಾಯಕನಿಗೆ
ಹಾಕಿ ಬನ್ನಿ
ಸಾವಿರದ  ನೋಟು
ನಿಮ್ಮ ಕೈಲಿ ಕೊಡೋರು ಇದ್ದರೆ
ಆ ದುಡ್ಡು ನಿನ್ನ ಅಪ್ಪನದೇ ಅನ್ನಿ ?

ನಿಮ್ಮ ಓಟು
ನಾಲಯಕನಿಗೆ ಹಾಕಿ ಬನ್ನಿ
ಮತ್ತೆ ದಿನಾಲು ಹೆಕ್ಕಿ ತಿನ್ನಿ
ನಿಮ್ಮ ಓಟು
ನಿಮಗಾಗಿ ಹಾಕಿಬನ್ನಿ
ಫಲಿತಾಂಶ ಬಂದಮೇಲೆ ನನ್ನದೇ ಪಕ್ಷವೆನ್ನಿ ,

ನಿಮ್ಮ ಓಟು
ಸುಭದ್ರ ದೇಶಕ್ಕಾಗಿ
ಹಾಕಿಬನ್ನಿ,
ನಿಮ್ಮ ನಾಯಕ
ಜಯಗಳಿಸಲೆಂದು
ನಿಮ್ಮವರ ಓಟು ಹಾಕಿಸಿ ಬನ್ನಿ ......!
              -ಮಾಧವ ಅಂಜಾರು

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.