ತಂದೆಯಾದವನ ಆಸೆ,

ತಂದೆಯಾದವನ ಆಸೆ,
ಮಗ ದೊಡ್ಡವನಾಗಿ
ನಮ್ಮನ್ನು ಸಾಕಲಿ
ನಡೆಯಲಾಗದಿದ್ದರೆ
ಕೈ ಹಿಡಿದು ನಡೆಸಲಿ ,

ವಿದ್ಯಾವಂತನಾಗಿ
ಕೀರ್ತಿಯನು ಗಳಿಸಲಿ
ಧೈರ್ಯದಲಿ  ಮುನ್ನಡೆಯೊ
ಸಜ್ಜನನಾಗಿ ಬಾಳಲಿ
ಮುಪ್ಪಿನ ಸಮಯದಲಿ
ತುತ್ತು ಅನ್ನ ಉಣಿಸಲಿ

ದೃಷ್ಟಿ ಹೀನವಾಗಿ
ಪರದಾಟ ಮಾಡಿದರೆ
ಪ್ರೀತಿಯಲಿ ಮಾತಾಡಲಿ
ಕೋಲು ಹಿಡಿದು ನಡೆಯುವಾಗ
ಹೆಗಲ ಕೊಟ್ಟು ನಡೆಸಲಿ
ಪ್ರಾಣ ಪಕ್ಷಿ ಹಾರಿ ಹೋದರೆ
ಕಣ್ಣೀರ ಸುರಿಸದಿರಲಿ ,,,, !
                -ಮಾಧವ ಅಂಜಾರು





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.