ಕೆಟ್ಟ ಯೋಚನೆ ಬಿಟ್ಟು ಸತ್ಯದಲಿ ಬದುಕು ..

ನ್ಯಾಯಕ್ಕೆಂದೇ....  ಅಲೆದಾಡುವರು ಕೋರ್ಟು ಕಛೇರಿ
ಅನ್ಯಾಯಕ್ಕೆಂದೇ ... ಜನಿಸಿ ಬಿಡುವರು ಬೀದಿ ಬೀದಿಯಲಿ

ಕೈ ಮುಗಿಯಲೆಂದೇ ಓಡಾಡುವರು ದೇಗುಲಗಳ
ಮನದ , ಮನೆಯ ದೇವರನೇ ಮರೆವರು ಜನರು

ಅಧಿಕಾರಿಯು ನಾನು , ನೀ ಎನ್ನ ಚೇಲನಯ್ಯ ಎನುವರು
ನಾಯಿ ಬಾಲದಂತೆ ಅಲ್ಲಾಡುವರು , ಮೇಲಧಿಕಾರಿಯ ಕಂಡು ಕೆಲವರು

ಡೊಂಬರಾಟ ಮಾಡುವರು ನಾಯಿ ಕುನ್ನಿಗಳ ಸೇರಿಸಿ
ಕಂಡ ತ್ಯಾಜ್ಯ , ಮಾಂಸವ ಕಚ್ಚಿ ತಿನುವರು

ಕಷ್ಟಪಟ್ಟ  ಪುಣ್ಯಕೆ..  ಮುತ್ತುಗಳ ಗಳಿಸುವೆ
ನನ್ನಿಷ್ಟದಂತೆ ಹಾಯಾಗಿರುವೆ ತೃಪ್ತಿಯಲಿ ...

ಕೆಟ್ಟ ಯೋಚನೆ ಬಿಟ್ಟು ಸತ್ಯದಲಿ ಬದುಕು ..
ನಿತ್ಯ ಆನಂದವಾಗಿರುವುದು ನಿನ್ನ  ಜೀವನವು

                     - ಅಂಜಾರು ಮಾಧವ ನಾಯ್ಕ್

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ