ಎಂಥವರಯ್ಯಾ .....!!!!

ಹೆತ್ತ ತಾಯಿ , ಸಾಕಿ ಸಲಹಿದ ತಂದೆಯ ಮರೆತು
ನೀನೆಷ್ಟು ಗಳಿಸಿದರೂ , ತೃಪ್ತಿಯಾಗದು ನಿನ್ನ ಒಡಲು

ಸತ್ಯ ಧರ್ಮದ, ಅರ್ಥವನರಿಯದ ಷಂಡ ಮನುಜನು
ಸತ್ಯ ದೇವತೆಗೆ ನಿತ್ಯ ' ನೇಮ ' ಕೊಟ್ಟರೂ ವ್ಯರ್ಥವಯ್ಯ...

ಅಣ್ಣ ತಮ್ಮನ  ಬಂಧವನರಿಯದ ಮನುಕುಲವು
ಒಂದಾಗಿ ಬಂದು, ಕೊಂದು ತಿನ್ನಲು ಹವಣಿಪರು ...!

ಅಂಥರಾತ್ಮದಲಿ ಒಂದಷ್ಟು ನಂಜು ಹೊಂದಿ
ಬೆಣ್ಣೆಯಂತೆ ನಟಿಸುವರು ಕೆಲ ಬುದ್ದಿಜೀವಿಗಳು

ನಿಜ ವಿಷಯ ಅರಿತು ಆಡಂಭರವ ಮಾಡಲು ಹೊರಟರೇ
ತಂತ್ರಿ , ಭಟ್ಟರು ಮಾಡಿದ ಪೂಜೆಯು ವ್ಯರ್ಥವಯ್ಯ

ಭೂತ ಕೋಲದ ನೆಪದಿ ಕಾಸುಗಳಿಸುವ ಪೂಜಾರಿಯು , ಸಹಾಯಕನು
ಪೂಸಿ ಹೊಡೆದು ಹೆಂಡತಿಯ ಮಾರುವವನು ಆಗಿರಬಹುದಯ್ಯ ...!

ದೈವ ದರ್ಶನದ ಶಕ್ತಿಯನರಿಯದ ಕರ್ಮಸುತನು
ದುರುಪಯೋಗ ಮಾಡಿಕೊಳ್ಳುವರು ಹಿಂದೂ ಸಂಸ್ಕೃತಿಯ

ದುಡ್ಡು ಕೊಟ್ಟರೆ, ಚಟ್ಟದ ಬಟ್ಟೆಯನು ಕಟ್ಟಿಕೊಂಡು ..
ನಾ ಊರಿನ ಯಜಮಾನ , ಗುರಿಕಾರ ಎನುವರಯ್ಯ  ... !

ಸತ್ಯವನೆ.. ನಂಬಿ ಬದುಕಿದ  ನಿತ್ಯ ಜೀವನ ...
ಸತ್ತು ಹೋದರೂ ತೃಪ್ತಿಯಾಗದು ಮನವು ಈ ಪಾಪಿ ಜಗದಲಿ..

ಇದುವೇ ಕಲಿಯುಗ .. ಇದುವೇ ಹೊಸಯುಗ ..
ಇದುವೇ ಎನ್ನ ಅಂತರಾತ್ಮದ ತುಣುಕಯ್ಯಾ ....!!

                  - ಅಂಜಾರು ಮಾಧವ ನಾಯ್ಕ್






Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.