Posts

ಉಪದೇಶ

ಉಪದೇಶ ಮಾಡೋದು ತುಂಬಾ ಸುಲಭ ಉಪದೇಶ ಪಾಲಿಸೋದು ಸ್ವಲ್ಪ ಕಷ್ಟ ಕೆಲಸವನ್ನು ಮಾಡಿಸೋದು ತುಂಬಾ ಸುಲಭ ಕೆಲಸ ಮಾಡೋದು ಇಲ್ಲ ಅಷ್ಟು ಸುಲಭ ಇನ್ನೊಬ್ಬರನು ಟೀಕಿಸೋದು ತುಂಬಾ ಸುಲಭ ಟೀಕೆಗೆ ಒಳಗಾಗಿ ಇರೋದು ಸ್ವಲ್ಪ ಕಷ್ಟ ಏನೂ ಚಿಂತೆ ಇರದೇ ಬದುಕೋದು ಕಷ್ಟ ಚಿಂತೆ ಮಾಡುತ್ತಲೇ ಇದ್ದರೆ ಬದುಕೇ ತುಂಬಾ ಕಷ್ಟ - ಮಾಧವ ಅಂಜಾರು

ಇಂದಿನ ದಿನ

ನನ್ನಿಂದ ನಿನಗ್ಯಾಕೆ ತೊಂದರೆ ಎನ  ಮಾತು ನಿನಗಿಷ್ಟವಾಗಿಲ್ಲವೆಂದರೆ ನಮ್ಮ ಬದುಕೇ ತೊಂದರೆ ಇಂದಿನ ದಿನ ತರದಿರಲಿ ಇನಿತು ಭಯ ನಾಳೆ ಎನಗೆ ಸಿಗುವುದೋ ಇಲ್ಲವೋ ಎಂಬುದೇ ಅಂತರಾಳದ ಭಯ ಎನ ಬಯಕೆ, ಇರದಿರಲಿ ಆತಂಕ ಬರದಿರಲಿ ಮನಸ್ತಾಪ ಹೊಂದಿ ನಡೆಯ ಬಯಸುವೆ ಬಿಡು ನಿನ್ನ ಕೋಪ ನನ್ನುಸಿರು ನಿಂತರೂ ನಿನ್ನುಸಿರು ನಿಲ್ಲದಿರಲಿ ಉಸಿರಿರೋ ತನಕ ದೇವ ಕಾಪಾಡಲಿ ನಿನ್ನ ಕೊನೆತನಕ              -ಮಾಧವ ಅಂಜಾರು

ಒಲವೇ ಜೀವನ

ಮೌನ ಮಾತಾದರೆ ಪ್ರೇಮ ಅಳಿಯದಿರಲಿ ಮನಸು ನೋವಾದರೆ ಹೃದಯ ಬಿರುಕದಿರಲಿ ಒಲವೇ ಜೀವನ ನಮಗೆ ತಿಳಿದಿರಲಿ ಕವನಗಳೇ ಜೀವನ ಪ್ರೀತಿ ಬದುಕಿರಲಿ ಸಿಹಿ ತಿಂದ ಮಾತ್ರಕೆ ಸಿಹಿಯಾಗೋದಿಲ್ಲ ಯಾರೂ ಕಹಿ ಕುಡಿದ ಮಾತ್ರಕೆ ಕಹಿಯಾಗೋದಿಲ್ಲ ನಾನು ರವಿಯಂತೆ ಇರಬೇಕು ಕವಿಯಲ್ಲದಿದ್ದರೇನು ಚಂದಿರನಾಗಿಹೆ ನೀನು ನಮ್ಮಿ ಬದುಕು ಸವಿಜೇನು            -ಮಾಧವ ಅಂಜಾರು

ವಿಷ ಕುಡಿದವರು

ವಿಷ ಕುಡಿದವರು ಪ್ರಾಣ ಕಳೆದುಕೊಳ್ಳುತ್ತಾರೆ ಯಾಕೆಂದರೆ ಅತಿಯಾಗಿ ಒಂದೇ ಸಮಯಕ್ಕೆ ಕುಡಿದಿದ್ದರಿಂದ, ವಿಷ ಕಾರುವವರು ಪ್ರಾಣ ತೆಗೆಯುತ್ತಾರೆ ಯಾಕೆಂದರೆ ಹುಟ್ಟುತ್ತಾ ವಿಷ ಸ್ವಲ್ಪ ಸ್ವಲ್ಪನೇ ತಿಂದಿದ್ದರಿಂದ, ವಿಷ ಕುಡಿಯೋರಿಗೆ ಹಲವು ಕಾರಣ ಇರಬಹುದು ವಿಷ ಕಾರೋರಿಗೆ ಕಾರಣದ ಅಗತ್ಯವಿಲ್ಲ ಕಾರಲೆ ಬೇಕಾಗುತ್ತದೆ.. !         - ಮಾಧವ ಅಂಜಾರು

ಆಗಬೇಕಾದದ್ದು

ಆಗಬೇಕಾದದ್ದು ಆಗಿಯೇ ಆಗುತ್ತೆ , ಸಮಯ ಬಂದಾಗ ..! ಹೋಗಬೇಕಾದದ್ದು ಹೋಗಿಯೇ ಹೋಗುತ್ತೆ ಸಮಯ ನಿಲ್ಲದಾಗ . ಸಿಗಬೇಕಾದದ್ದು ಸಿಕ್ಕಿಯೇ ಸಿಗುತ್ತೆ ಸಮಯ ಇರುವಾಗ, ಆಗೋದಕ್ಕೂ ಹೋಗೋದಕ್ಕೂ ಸಿಗೋದಕ್ಕೂ ಬಿಡೋದಕ್ಕೂ ನಿಲ್ಲಿಸೋಕು  ನಮ್ಮಿಂದ ಸಾಧ್ಯವಿಲ್ಲ ಕೈಮೀರಿ ಹೋದಾಗ ....!            -ಮಾಧವ ಅಂಜಾರು

ಆಸೆಬುರುಕನ ಆಸೆ

ಆಸೆಬುರುಕನ ಆಸೆ ಮುಗಿದುಹೋಗದು ಬೆಳ್ಳಗಾದರೂ ಅವನ ಮೀಸೆ , ಮೋಸಗಾರನ ಕಿಸೆ ತುಂಬಲಾರದು ಚರಂಡಿಯೊಳು ಬಿದ್ದರೂ ಇಳಿಯದು ಅವನ ನಶೆ ,           - ಮಾಧವ ಅಂಜಾರು

ನಮ್ಮ ದೇಶದಲ್ಲಿ

ನಮ್ಮ ದೇಶದಲ್ಲಿ ಪ್ರಾಮಾಣಿಕತೆಗೆ ಬೆಲೆ ಕೊಡುವವರು ಬಹಳ ವಿರಳ ...! ತಮ್ಮ ಸ್ವಾರ್ಥಕ್ಕಾಗಿ ಸರಕಾರಿ ಉದ್ಯೋಗದ ದುರುಪಯೋಗ ಹಣ ಸಂಪಾದನೆಗೆ ಲಂಚಾವತಾರದ ಯೋಗ , ಎಷ್ಟು ಕೆಳಮಟ್ಟದಲ್ಲಿ ಅವರ ಬದುಕೆಂದರೆ ನ್ಯಾಯ ಕೊಡಿಸಬೇಕಾದವರು ಅನ್ಯಾಯ ಮಾಡುವರು ರಕ್ಷಕನಾಗಿ ಇರಬೇಕಾದವರು ಭಕ್ಷಕನಾಗಿ ಬದುಕುವರು, ಧಿಕ್ಕಾರವಿರಲಿ ಅಪ್ರಾಮಾಣಿಕರಿಗೆ ನರಕ ಯಾತನೆ ಸಿಗಲಿ ವಂಚನೆ ಮಾಡುವವರಿಗೆ, ಬೆಲೆ ಸಿಗಲಿ ಪ್ರಾಮಾಣಿಕರಿಗೆ ,                     -ಮಾಧವ ಅಂಜಾರು