Posts

ಮೊಸಳೆ ಕಣ್ಣೀರು

ಮೊಸಳೆ ಕಣ್ಣೀರು ಹಾಕೋರಿಗೆ ಸೆಗಣಿ ನೀರು ಕುಡಿಸಿ ನಿಜ ಕಣ್ಣೀರು ಸುರಿಸೋರಿಗೆ ಕಣ್ಣ ನೀರ ಒರೆಸಿ ಕಪಟ ಕಣ್ಣೀರು ಸುರಿಸೋರಿಗೆ ಚರಂಡಿ ನೀರು ಕುಡಿಸಿ ಸತ್ಯ ತುಂಬಿದ ಕಣ್ಣೀರ ಹನಿಗೆ ಬೆಲೆಕೊಟ್ಟು ಜಯಕೊಡಿಸಿ        -ಮಾಧವ ಅಂಜಾರು

ಪಕ್ಷದ ಅನುಯಾಯಿಗಳು

ಪಕ್ಷದ  ಅನುಯಾಯಿಗಳು ಅಕ್ಷರಸ್ತರಾಗಿದ್ದರೂ ವಿವೇಚನಾಶಕ್ತಿ ಹೊಂದಿರದಿದ್ದರೆ ..! ಪಕ್ಷ ತಪ್ಪು ಮಾಡಿದ್ದರೂ ...! ಸರಿಯೆಂದೇ ವಾದಿಸುತ್ತಾರೆ ಅಂತವರು  ದೇಶಕ್ಕೆ ಕೆಡುಕು ..! ಕಣ್ಣಿದ್ದೂ ಕುರುಡರಂತೆ ನಟಿಸಿ ಬಾಳುವವರು ಕಿವಿಯಿದ್ದೂ ಕಿವುಡರಂತೆ ವರ್ತಿಸುವವರು ..! ಊರನ್ನು ಆಳಿದರೆ ನಿಮ್ಮ ಪಂಚೇಂದ್ರಿಯವನ್ನು ಮುಚ್ಚಿಬಿಡುತ್ತಾರೆ ..! ಜಾಗ್ರತೆ .              -ಮಾಧವ ಅಂಜಾರು

ಅವಿವೇಕಿಗಳು

ಅವಿವೇಕಿಗಳು ರಾಜಕೀಯಕ್ಕೆ  ಸೇರಿ ಅಧಿಕಾರ ಪಡೆದರೆ  ಊರು ತುಂಬಾ ಅವಿವೇಕಿಗಳನ್ನು ಪೋಷಿಸುತ್ತಾರೆ ...! ವಿವೇಕಿಗಳು ರಾಜಕೀಯದಲ್ಲಿ ಅಧಿಕಾರ ಪಡೆದರೆ ಪ್ರಪಂಚದಲ್ಲೆಲ್ಲಾ ದೇಶಭಕ್ತರನ್ನು ಹೆಚ್ಚಿಸುತ್ತಾರೆ ..!             - ಮಾಧವ ಅಂಜಾರು  

ಹುಚ್ಚಾಗಬೇಡಿ

ಹುಚ್ಚಾಗಬೇಡಿ ಪಕ್ಷಗಳ ದೊಂಬರಾಟಕೆ ಸಹನೆ ಕಳೆದುಕೊಳ್ಳಬೇಡಿ ಪಕ್ಷಗಳ ಅವಿವೇಕತೆಗೆ ..! ಬೇಕು ನಮಗೆ ದೇಶ ಒಳ್ಳೆಯ  ನಾಯಕ  ನಮಗೆ ಮುಖ್ಯ ಪಕ್ಷದ ಬಗ್ಗೆ ಒಲವು ಬಿಡಿ ಮೊದಲು ದೇಶವೆಂಬ ಛಲ ಹಿಡಿ ರಾಜನೊಬ್ಬ ಚೆನ್ನಾಗಿದ್ದರೆ ..! ಪ್ರಜೆಗಳೆಲ್ಲಾ ಚಿಂತೆ ಬಿಡಿ ನಿಮ್ಮ ಒಂದು ಮತದ  ಬೆಲೆ ಚಿತ್ರಣವೇ ಬದಲಿಸಬಹುದು ನೋಡಿ ..! ಈ ಸಲದ ಮತದಾನಕ್ಕೆ ಯೋಚನೆ ಮಾಡೊದನು ಬಿಡಿ ದೇಶಾಭಿಮಾನಿಗಳೆಲ್ಲಾ ಒಂದಾಗಿ ದೇಶದ್ರೋಹಿಗಳನ್ನು ಕಿತ್ತು ಹಾಕಿ ..!                      -ಮಾಧವ ಅಂಜಾರು

ತಿಂಗಳ ಬೆಳಕನು

ತಿಂಗಳ ಬೆಳಕನು ನೋಡಲು ಅದೆಷ್ಟು ಆತುರ ಆ ಚಂದಿರನ ಕಂಡಾಗಲೇ ಮನಸೆಲ್ಲಾ  ಹಗುರ , ತಂಬಿಗೆ ನೀರನು ಕುಡಿಯಲು ಅದೆಷ್ಟು ಆತುರ ಹೊಟ್ಟೆತುಂಬಾ ಕುಡಿದಾಗ ದಣಿವಾರಿತು ಬೇಗ. ಇಂದಿನ ದಿನಗಳೆಲ್ಲಾ ಮೊಬೈಲುಗಳೇ ಚಂದಿರ ಹೊಟ್ಟೆ ಚುರುಗುಟ್ಟಿದರೂ ಬೇಡವೇ ಬೇಡ , ಆಹಾರ, ಬರ ಬರುತ್ತಲೇ ಹಾಳಾಗುತ್ತಿದೆ ಸಂಸಾರ ಕೆಲವೇ ವರುಷದಲ್ಲಿ ಇಲ್ಲವಾದೀತು ಸಂಸ್ಕಾರ ...!          - Madhavanjar ...👍

ಏನೂ ಇಲ್ಲದವನ ಕೈಲಿ

ಏನೂ ಇಲ್ಲದವನ ಕೈಲಿ ಬಂದು ಕೂಡಿತು ಕೋಟಿ ಕೋಟಿ ಹಣ ಅದಕ್ಕೆ ಕಾರಣ ದರಿದ್ರ ರಾಜಕಾರಣ...! ಏನೂ ಇಲ್ಲದವನ ಕೈಗೆ ಸಿಕ್ಕಿಯೇ ಬಿಟ್ಟಿತು ಮೂರು ಕೋಟಿ ಹಣ ಅದಕ್ಕೆ ಕಾರಣ ಒಲಿದ ಲಾಟರಿಯ ಹಣ ..!          - Madhavanjar ...👍            

ಯಾರಾದರೂ ನಿಮ್ಮಲ್ಲಿ

ಯಾರಾದರೂ ನಿಮ್ಮಲ್ಲಿ ದೇಶದ ಪ್ರಧಾನಿ ಯಾರಾಗಬೇಕೆಂದು ಕೇಳಿದರೆ ? ಯಾರಾದರೂ ಆಗಲಿ ನಮಗೇನು ಹೇಳಬೇಡಿ ....! ಒಂದು ವೇಳೆ ಅಪ್ಪಿ ತಪ್ಪಿ ಉಪಯೋಗಕ್ಕೆ ಬಾರದವರು ನಮ್ಮ ದೇಶದ ಪ್ರಧಾನಿಯಾದರೆ ..! ನಮ್ಮ ದೇಶವಂತೂ ಉದ್ಧಾರವೇ ಆಗೋದಿಲ್ಲ ಅಂತ ಹೇಳಲೇಬೇಡಿ ..!        - Madhavanjar ...👍