✍️Madhav. K. Anjar (ಲೇಖನ-108) ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ, ಭಾರತವೆಂದರೆ ಭವ್ಯ ಪರಂಪರೆ, ಕೌಶಲ್ಯ, ವಿಜ್ಞಾನ. ಭಾರತವೆಂದರೆ ಒಗ್ಗಟ್ಟು, ಎಲ್ಲವನ್ನು ಪಡೆದಿರುವ ಭಾರತೀಯರು ಜಗತ್ತಿಗೆ ಸಂಪತ್ತು, ಜಗತ್ತಿನಲ್ಲಿ ಇನ್ನೊಬ್ಬರನ್ನು ನೋಯಿಸದೆ ಬದುಕುವ ರಾಷ್ಟ್ರವೆಂದರೆ ಭಾರತವೊಂದೆ, ಇತಿಹಾಸದಲ್ಲಿ ಭಾರತೀಯರ ಮೇಲೆ ದಬ್ಬಾಳಿಕೆಗಳಾದ ಉದಾಹರಣೆ ಸಾಕಷ್ಟಿದೆ ಆದರೆ ಭಾರತೀಯರು ಆಕ್ರಮಣ ಮಾಡಿರುವ ಯಾವ ಇತಿಹಾಸದಲ್ಲೂ ಇಲ್ಲ. ಅದಕ್ಕೆ ಕಾರಣ ನಮ್ಮಲ್ಲಿರುವ ಸಂಸ್ಕೃತಿ, ಬಾಂಧವ್ಯ, ಮತ್ತು ವಿವೇಚನೆ ಎಲ್ಲವೂ ಭಾರತೀಯ ಮಣ್ಣಲ್ಲಿ ಉತ್ತಮ ರೀತಿಯಲ್ಲಿ ಬೇರೂರಿದೆ. ಸರ್ವಧರ್ಮದವರು ಕೂಡಿ ಒಗ್ಗೂಡಿ ಬಾಳುವ ಏಕೈಕ ದೇಶ ನಮ್ಮ ಭಾರತ. ಭಾರತೀಯರ ಶಕ್ತಿಯನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ, ಭಾರತದ ವಿಜ್ಞಾನ, ಬುದ್ದಿವಂತಿಕೆಯನ್ನು ಪಡೆಯಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಜಗತ್ತಿನಲ್ಲಿ ವಿಜ್ಞಾನ ಎಷ್ಟು ಮುಂದುವರಿದಿದ್ದರೂ ಭಾರತೀಯರಿಲ್ಲದ ವಿಜ್ಞಾನನಕ್ಕೆ ಬೆಲೆಯಿಲ್ಲ. ಹಾಗಾಗಿ ಭಾರತ ದೇಶದ ಬಗ್ಗೆ ಅಸೂಯೆಪಡುವ ಕೆಲವರು ಆಂತರಿಕ ಮತ್ತು ಬಾಹ್ಯ ದುಷ್ಟರ ಸಹಾಯದೊಂದಿಗೆ ಭಾರತವನ್ನು ನಾಶಮಾಡಲು ಶ್ರಮಿಸುತ್ತಿದ್ದಾರೆ. ಇಲ್ಲಿ ಉದ್ದೇಶಗಳು ಬೇರೆ ಬೇರೆ. ಭಾರತದ ಉನ್ನತಿಯನ್ನು ಬಯಸುವ ಜನರ ಸಂಖ್ಯೆಯನ್ನು ಕಡಿಮೆಗೊಳಿಸಲು ಶತಮಾನದಿಂದಲೂ ಶ್ರಮಿಸಿ ಸುಸ್ತಾಗಿ ಹೋಗ
Comments
Post a Comment