Posts

Showing posts from 2025

ರಾಮ ರಾಮ

ರಾಮ ನಿನ್ನ ನಾಮ ಜಪಿಸಿ  ಮನವು ತುಂಬಿತು  ರಾಮ ರಾಮ ರಾಮನೆನುತಾ  ಬದುಕು ಧನ್ಯವಾಯಿತು  ಸಜ್ಜಜನರ ಬಾಯಲಿ  ನಿನ್ನ ನಾಮ ಹೊರಡಿತು  ರಾಮ ನಿಮಗೆ ಕರುಣಿಸಲಿ  ದಯೆಯೂ ಅನ್ನಿತೂ  ರಾಮನೆಂಬ ನಾಮದೊಳು  ಸಕಲ ವ್ಯಥೆಗಳು  ದೂರವಾಯಿತು  ರಾಮ ರಾಮ ರಾಮನೇನುತಾ  ಹರುಷ ತುಂಬಿತು  ಹಗಲಿರುಳು ರಾಮ ನಾಮ  ರಕ್ಷಾ ಕವಚನೀಡಿತು  ರಾಮ ರಾಮ ರಾಮನೆನುತಾ  ಬದುಕು ಬಂಗಾರವಾಯಿತು         ✍️ಮಾಧವ. ಕೆ. ಅಂಜಾರು.

ಜಯನಿನ್ನದೇ

ಆಡುವ ಮಾತಿನೊಳಗೆ  ಕೊಡುವ ತುತ್ತಿನೊಳಗೆ  ನಿನ್ನ ಮುತ್ತಿನೊಳಗೆ  ಇರದಿರಲಿ ಸಂಶಯ  ಕಾಣುವ ಕನಸಿನೊಳಗೆ  ಇರುವ ಗುರಿಯೊಳಗೆ  ಮಾಡುವ ದಾನದೊಳಗೆ  ಬಾರದಿರಲಿ ಸಂಶಯ  ಇಂದಿಗೂ ನಾಳೆಗೂ  ಭರವಸೆಯ ಹೆಜ್ಜೆಯೊಳು  ನಡೆಯುತ್ತಿರು ಎಂದಿಗೂ  ಜಯನಿನ್ನದೇ ನಿಶ್ಚಯ         ✍️ಮಾಧವ. ಕೆ ಅಂಜಾರು 

ಸುಳ್ಳು

ಸತ್ಯವನ್ನು ಹೇಳುವವರು  ಸುಳ್ಳು ಹೇಳುವವರೊಂದಿಗೆ  ವ್ಯವಹಾರ ಮಾಡಬಾರದು  ಸತ್ಯವನ್ನು ಬಿಡದವರು  ಸುಳ್ಳು ಹೇಳುತ್ತಲಿರುವವರ  ಮಾತನ್ನು ನಂಬಬಾರದು  ಸುಳ್ಳು ಹೇಳುತ್ತಲೇ  ಬದುಕುವವಗೆ  ಸತ್ಯದ ಮಹತ್ವ ತಿಳಿಸುವ  ಕೆಲಸಕ್ಕೆ ಕೈ ಹಾಕಬಾರದು        ✍️ಮಾಧವ. ಕೆ. ಅಂಜಾರು 

ಬೆಂಬಲ

ಕೇವಲ ನೂರು ವರುಷ  ಬಾಳುವ ಮನುಜಗೆ  ಸಾವಿರಾರು ವರುಷ ಬದುಕುವ ಹಂಬಲ  ಶಾಶ್ವತವಲ್ಲದ  ಹುದ್ದೆ,  ಆಸ್ತಿಗಾಗಿ  ಮತ್ತೊಬ್ಬರ ಕತ್ತು ಹಿಸುಕಿ  ತಿನ್ನುವ ಹಂಬಲ  ಹಣಪಡೆದು ಮಾಡುವ   ಒಂದೊಂದು ಸನ್ಮಾನಕೆ  ಒಂದಿಷ್ಟು ಜನರ  ನಾಟಕೀಯ ಬೆಂಬಲ  .      -✍🏻Madhav K Anjar

ಬೇಲಿಯೇ ಎದ್ದು

ಬೇಲಿಯೇ ಎದ್ದು  ಹೊಲ ಮೇದಾಗ  ನ್ಯಾಯಾಲಯವೂ  ನರಕವಾಗಬಹುದು, ನ್ಯಾಯವಾದಿಯೇ  ಅನ್ಯಾಯ ಮಾಡಿದಾಗ  ನ್ಯಾಯಕೇಳುವವನು  ಅನ್ಯಾಯಕ್ಕೆ ಬಲಿಯಾಗಬಹುದು  ನ್ಯಾಯಾಲಯದ  ನ್ಯಾಯಾಧಿಶನೇ  ಹಣದ ದಾಸನಾದಾಗ  ನ್ಯಾಯಾಂಗ ವ್ಯವಸ್ಥೆ  ಸಜ್ಜನರನ್ನು ಅಳಿಸಬಹುದು,       ✍️ಮಾಧವ ಕೆ ಅಂಜಾರು 

ಸ್ನೇಹಿತರಲ್ಲ

ಲಾಭಕ್ಕಾಗಿ ಜೊತೆಗಿರುವವರು  ನಿನ್ನ ಸ್ನೇಹಿತರಲ್ಲ  ಲಾಭಕ್ಕಾಗಿ ಮಾತಾಡುವವರೂ  ನಿನ್ನ ಒಳಿತಿಗಾಗಿ ಅಲ್ಲ  ಪೊಳ್ಳು ಮಾತನ್ನಾಡುವವರು  ನಿನ್ನ ಸ್ನೇಹಿತರಲ್ಲ  ನಿನ್ನ ಉಪಯೋಗಿಸಿ  ಬದುಕುವವರೂ ಸ್ನೇಹಿತರಲ್ಲ  ಏನನ್ನೂ ಬಯಸದೆ  ನಿನ್ನ ಜೊತೆಗಿರುವವರು  ನಿಜವಾದ ಸ್ನೇಹಿತರು  ನಿನ್ನ ಏಳಿಗೆಯನ್ನು  ಬಯಸುತ್ತಲೇ ಇರುವವರು  ನಿಜವಾದ ಸ್ನೇಹಿತರು       ✍️ಮಾಧವ ಕೆ ಅಂಜಾರು 

ಪುಣ್ಯ

ಕಳೆದ ಸಮಯ  ಮತ್ತೆ ಬರದು ಉಳಿದಿರುವ ಸಮಯ ನಿನಗೆ ತಿಳಿಯದು  ಜಗದ ನಿಯಮ  ಬದಲಿಸಲಾಗದು  ಪಡೆವ ಪುಣ್ಯ  ತಡೆಯಲಾಗದು  ನೀನು ನೀನಾಗಿರು  ಎಂದಿಗೂ  ಬದುಕಿನ ಹೋರಾಟಕೆ  ವಿರಾಮವಿರದು   ✍️ ಮಾಧವ. ಕೆ. ಅಂಜಾರು 

ಅಹಂಕಾರ ಬೇಡ

ಬೆಂಕಿಯ ಮುಂದೆ  ಹೂವಾಗಿರಬೇಡ  ಹಾವಿನ ಮುಂದೆ  ಇಲಿಯಾಗಿರಬೇಡ  ಹಿರಿಯರ ಮುಂದೆ  ತನ್ನನ್ನು ಹೊಗಳಿಕೊಳ್ಳಬೇಡ  ಕಿರಿಯರ ಮುಂದೆ  ಜಾಣನೆನಬೇಡ  ಐಶ್ವರ್ಯವಿರುವಾಗ  ಅಹಂಕಾರ ಬೇಡ  ಬಡತನವಿರುವಾಗ  ಧೈರ್ಯಗೆಡಬೇಡ  ಯಾರೇನೇಆಗಲಿ  ನಾನಿದ್ದರೆ ಸಾಕೆನ್ನಬೇಡ  ಬದುಕಿರುವಷ್ಟು ದಿನ  ಉಪದ್ರವಿಸಬೇಡ    ✍️ಮಾಧವ. ಕೆ ಅಂಜಾರು.

ಪ್ರತಿಫಲ

ನಿನ್ನೊಳಿತಿನ ಕೆಲಸಕೆ  ಸಿಗುವುದು ಪ್ರತಿಫಲ  ಇಂದಲ್ಲ ನಾಳೆಯಾದರೂ  ಅದುವೇ ನಿನ್ನ ಕರ್ಮ ಫಲ  ನಿನ್ನೊಳಗಿನ ಪಾಪಕೆ  ಸಿಗುವುದು ಪ್ರತಿಫಲ  ಇಂದಲ್ಲ ನಾಳೆಯಾದರೂ  ಅದುವೇ ನಿನ್ನ ಅಧರ್ಮ ಫಲ  ಹುಟ್ಟಿರುವ ಮಾತ್ರಕೆ  ಸಿಗದು ನಿನಗೆ ಪುಣ್ಯಫಲ  ನೀನಿಟ್ಟಿರುವ ಹೆಜ್ಜೆ ಹೆಜ್ಜೆಗೂ  ಕಟ್ಟಿಕೊಳ್ಳುವೆ ಪ್ರತಿಫಲ.       ✍️ಮಾಧವ. ಕೆ ಅಂಜಾರು 

ಕರಿಕೋಟು ಹಾಕಿರುವನು

ಎಲ್ಲರಂತೆ ಅವನೂ  ಕರಿಕೋಟು ಹಾಕಿರುವನು  ನೋಡುವವರ ಕಣ್ಣಿಗೆ  ಬಹಳಷ್ಟು ಗಂಭೀರ  ಬಹಳಷ್ಟು ಪ್ರಸಿದ್ಧ, ಕರಿಕೋಟಿನವನು  ಮನದಲ್ಲೇ ಹೇಳಿಕೊಂಡನು  ನಾನವನ ಕಣ್ಣಿಗೆ  ಮಣ್ಣು ಹಾಕಿಯೇ ಸಿದ್ದ  ನನಗೆ ಸಿಕ್ಕಿದ ಪೆದ್ದ, ಎಲ್ಲರಂತೆ ಅವನೂ  ಕರಿಕೋಟು ಹಾಕಿರುವನು  ಮೊಸ ಮಾಡುತ್ತಲೇ  ಹುಳಬಿದ್ದು ಸತ್ತ....      ✍️ಮಾಧವ. ಕೆ ಅಂಜಾರು 

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

Image
ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ ಆರಂಭಕ್ಕೆ ಕಾರಣಕರ್ತರಾಗಿರುವ , ಬಾವಿಕಟ್ಟೆ ಪದ್ಮನಾಭ ನಾಯ್ಕ ಮತ್ತು ಅಂಜಾರು ಮಠದ ದಿ ll  ಲಕ್ಷೀ ನಾರಾಯಣ ಭಟ್. ಇಂದಿನ ಪೀಳಿಗೆಗೆ ತಿಳಿಯದೇ ಇರುವ ವಿಷಯ ಮತ್ತು ಸವಿ ನೆನಪುಗಳ ಪುಟಗಳು. ಸುಮಾರು 45 ವರುಷದ ಹಿಂದೆ ಆರಂಭಗೊಂಡ ಭಜನಾ ಮಂಡಳಿಯ ಮುಖ್ಯ ಕಾರಣಕರ್ತ ಅಂಜಾರು ಬಾವಿಕಟ್ಟೆ ಶ್ರೀ ಪದ್ಮನಾಭ ನಾಯ್ಕ ಯಾನೆ ನಂಗಣ್ಣ, ತಮ್ಮ ಯವ್ವನದ ದಿನಗಳಲ್ಲಿ ಬಹಳಷ್ಟು ಕನಸುಗಳನ್ನು ಕಂಡಿರುವ ಮತ್ತು ಸ್ವ ಉದ್ಯೋಗ ಮಾಡುತ್ತಲೆ ಬಿಡುವಿನ ಸಮಯದಲ್ಲಿ ಶ್ರೀಯುತ ಲಕ್ಷೀ ನಾರಾಯಣ ಭಟ್ ಇವರೊಂದಿಗೆ ಬಹಳಷ್ಟು ಬಾಂಧವ್ಯದಿಂದ ಕೂಡಿ ಬೆಳೆದಿರುವ ಶ್ರೀ ಪದ್ಮನಾಭ ನಾಯ್ಕ ಎಳೆಯ ವಯಸ್ಸಿನಲ್ಲಿ ಹಾಲಿನ  ಡೈರಿಯನ್ನು ಮನೆಯಲ್ಲಿಯೇ ಆರಂಭಿಸಿ ಮಣಿಪಾಲದ ವರೆಗೂ ಸೈಕಲನ್ನು ತುಳಿದುಕೊಂಡು ಹೋಗಿ ಬರುತಿದ್ದ ಆ ಕಾಲ. ಬಹಳಷ್ಟು ಕಾಡು ದಾರಿ ಸರಿಯಾದ ರಸ್ತೆ ಸಂಪರ್ಕ ಗಳು ಇಲ್ಲದೇ ಇದ್ದರೂ ಸುಮಾರು 7 -8 ಹಾಲಿನ ಕ್ಯಾನ್ ತುಂಬಿಸ್ಕೊಂಡು ಮಣಿಪಾಲಕ್ಕೆ ಹಾಲು ಸರಬರಾಜು ಮಾಡುತ್ತಾ ಎಲ್ಲರ ಪ್ರೀತಿ ಪಾತ್ರರಾಗಿದ್ದರು ಮತ್ತು ಬಹಳಷ್ಟು ಹೆಸರುವಾಸಿಯಾಗಿದ್ದರು . ಪದ್ಮನಾಭ ಎಂದರೆ ಎಲ್ಲರಿಗೂ ಪರಿಚಯಸ್ತರಾಗಿ ಹಾಲು ಕೊಟ್ಟು ಹಿಂತಿರುಗಿ ಬರುವಾಗ ಭಟ್ಟರು ಮತ್ತು ಪದ್ಮನಾಭ ಇವರ ಸಂಭಾಷಣೆಯಲ್ಲಿ, ಆಗಲೇ ಪದ್ಮನಾಭರು ಯಕ್ಷಗಾನ ಹಾಡುಗಾರಿಕೆ, ಭಜನಾ ಹಾಡುಗಳನ್ನು ಹಾಡುತ್ತ ತನ್ನನ್ನು ತಾನೇ ಮರೆಯುತ್ತಿದ್ದರು. ಭಜನಾ ಹಾಡಿನಲ್ಲಿ ಬಹಳಷ್...

ಶ್ರೀ ರಾಮಚಂದ್ರ

ಉಳಿಸುವುದು ನೀನೇ  ಅಳಿಸುವುದು ನೀನೇ  ಮೂಳೆ ಮಾಂಸದ ದೇಹಕೆ  ಉಸಿರಾಗಿರುವುದೇ ನೀನೇ  ಹರೇ ಕೃಷ್ಣ ಹರೇ ರಾಮ  ಸಕಲ ಜೀವ ಸಂಕುಲದ  ಪಾಲಕನೇ ನೀನೇ  ಸೋಲಿಸುವುದು ನೀನೇ ಗೆಲುವ ನೀಡುವುದು ನೀನೇ  ಹೊಸ ಕನಸುಗಳ ಕೊಡುತ್ತಾ  ಬೆಳೆಸುವುದು ನೀನೇ  ಓಂ ಶಿವ, ಜಗದೊಡೆಯನೇ  ಪ್ರತೀ ಕ್ಷಣವೂ  ನಿನ್ನ ಭಜಿಸುವೆ ದೇವನೇ  ಸುಖವೂ ನೀನೇ  ದುಃಖವೂ ನೀನೇ  ನನ್ನ ಬದುಕಿನ ತರಗತಿಗೆ  ಗುರುವೇ ನೀನೇ  ಜಯ ಜಯ ಜಯ ಜಯ  ಶ್ರೀ ರಾಮಚಂದ್ರ  ಜಯ ಜಯ ಜಯ ಜಯ  ಶ್ರೀ ಕೃಷ್ಣ ದೇವ    ✍️ಮಾಧವ. ಕೆ ಅಂಜಾರು